X
ಹೋಮ್ ಚಲನಚಿತ್ರಗಳ ಒಳನೋಟ

ಚಿಗುರಿದ ಕನಸಿನಿಂದ ಹಿಡಿದು ಪರಮಾತ್ಮ ಸಿನಿಮಾದವರೆಗೆ ಬಾಕ್ಸಾಫೀಸ್‌ನಲ್ಲಿ ಸೋತ ಕನ್ನಡದ ಅದ್ಭುತ ಸಿನಿಮಾಗಳಿವು!

Author Sowmya Bairappa | Updated: Friday, August 16, 2024, 01:13 PM [IST]

ಬಾಕ್ಸಾಫೀಸ್‌ನಲ್ಲಿ ವಿಫಲವಾದ ಅದ್ಭುತ ಕಥೆಯುಳ್ಳ ಚಿತ್ರಗಳನ್ನು 'ಮೋಸ್ಟ್ ಅಂಡರ್‌ರೇಟೆಡ್' ಸಿನಿಮಾ ಎನ್ನಲಾಗುತ್ತದೆ. ಇವುಗಳನ್ನು ಯೂಟ್ಯೂಬ್ ಅಥವಾ ಒಟಿಟಿಯಲ್ಲಿ ನೋಡಿದವರಿಗೆ ಇಷ್ಟು ಚೆನ್ನಾಗಿರುವ ಸಿನಿಮಾ ಸೋತಿದ್ಯಲ್ಲ ಎಂಬ ಭಾವನೆ ಮೂಡುತ್ತೆ. ಇಲ್ಲಿ ಶಿವಣ್ಣನ ಚಿಗುರಿದ ಕನಸಿನಿಂದ ಹಿಡಿದು ಪವರ್‌ಸ್ಟಾರ್ ಪುನೀತ್‌ ರಾಜ್‌ಕುಮಾರ್ ಅವರ ಪರಮಾತ್ಮ ಸಿನಿಮಾದವರೆಗೆ ಬಾಕ್ಸಾಫೀಸ್‌ನಲ್ಲಿ ಸೋತ ಕನ್ನಡದ ಅದ್ಭುತ ಸಿನಿಮಾಗಳ ಪಟ್ಟಿ ಇಲ್ಲಿದೆ..


cover image
ಭೂಮಿತಾಯಿಯ ಚೊಚ್ಚಲಮಗ

1998ರಲ್ಲಿ ಬಿಡುಗಡೆಯಾಗಿದ್ದ  'ಭೂಮಿ ತಾಯಿಯ ಚೊಚ್ಚಲ ಮಗ' ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಹಾಗೂ ರಮೇಶ್ ಅರವಿಂದ್  ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದರು. ದ.ರಾ ಬೇಂದ್ರೆಯವರ ಕಣ್ತೆರೆದೊಮ್ಮೆ ನೋಡಿಹಿರೇನು? ಎಂಬ ಸಾಹಿತ್ಯಾಧಾರಿತ ಈ ಚಿತ್ರವನ್ನು ರಾಜೇಂದ್ರ ಸಿಂಗ್ ಬಾಬು ನಿರ್ದೇಶನ ಮಾಡಿದ್ದರು. ರಾಜಕೀಯದಲ್ಲಿ ಬಡವ, ರೈತರಿಗೆ ಮಾಡುವ ಅನ್ಯಾಯ ಹಾಗೂ ವರ್ಷದ ಹಿಂದೆ ತನ್ನ ಹೆಂಡತಿಗೆ ನೆನಪಿಗೆಂದು ಗುಡ್ಡ ಕಡಿದು ರಸ್ತೆ ಮಾಡಿದಂತಹ ದಶರಥ ಮಾಂಝಿ ನೈಜ ಕಥೆಯಾಧಾರಿತ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗಹಿಟ್ ಆಗದಿದ್ದರೂ ಅದ್ಭುತ ಕಥೆ ಹೊಂದಿತ್ತು. ಈ ಸಿನಿಮಾಗೆ ಸ್ಟೇಟ್ ಅವಾರ್ಡ್ ಕೂಡ ಬಂದಿದ್ದು, ಇಂದಿಗೂ ಈ ಸಿನಿಮಾವನ್ನು ನೋಡಿದ ಹಲವರು ಈ ಚಿತ್ರ ಸೋಲ್ತಾ? ಎಂಬ ಆಶ್ಚರ್ಯ ವ್ಯಕ್ತಪಡಿಸುತ್ತಾರೆ.

ಏಕಾಂಗಿ

2002ರಲ್ಲಿ ವಿ. ರವಿಚಂದ್ರನ್ 'ಏಕಾಂಗಿ' ಎಂಬ ಸಿನಿಮಾವನ್ನು ಬರೆದು, ನಿರ್ದೇಶಿಸಿ ನಿರ್ಮಿಸಿದ್ದರು. ಜೊತೆಗೆ ಈ ಚಿತ್ರಕ್ಕೆ ಅವರೇ ಸಂಗೀತ ನೀಡಿದ್ದರು. ಆದರೆ, ಕ್ರೇಜಿ ಸ್ಟಾರ್ ಅವರ ಮಹತ್ವಾಕಾಂಕ್ಷೆಯ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ದಯನೀಯ ಸೋಲನ್ನು ಕಂಡಿತ್ತು. ರವಿಚಂದ್ರನ್ ಸಾಕಷ್ಟು ಹಣವನ್ನು ಕೂಡ ಈ ಚಿತ್ರದ ಮೂಲಕ ಕಳೆದುಕೊಂಡಿದ್ದರು. ತುಂಬಾ ಒಳ್ಳೆಯ ಮೆಸೇಜ್ ಹೊಂದಿದ್ದ ಈ ಸಿನಿಮಾ ಆಗಿನ ಕಾಲಕ್ಕಿಂತ ಈಗಿನ ಕಾಲಕ್ಕೆ ಇನ್ನೂ ಹೆಚ್ಚು ಪ್ರಸ್ತುತ ಆಗಿದೆಯೆಂದರೆ ತಪ್ಪಾಗಲಾರದು. ಯಾಕೆಂದರೆ, ಪ್ರೀತಿ ಎಂಬ ಅಸ್ತ್ರದ ಆಘಾತಕ್ಕೆ ಒಳಗಾಗಿ ಮೋಸ ಹೋಗುವವರ ಸಂಖ್ಯೆ ಈಗ ತುಂಬಾನೇ ಜಾಸ್ತಿಯಾಗಿದೆ. ಹಾಗೆಯೇ ಏಕಾಂಗಿತನ ಸಹಿಸಲಾಗದೆ ಖಿನ್ನತೆಗೆ ಜಾರಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆಯೂ ಏರುತ್ತಿದೆ. ಏಕಾಂಗಿಯಾಗಿದ್ದಾಗ ನಮ್ಮನ್ನು ನಾವು ಪ್ರೀತಿಸುವುದನ್ನು ಕಲಿತು ನಮ್ಮದೆಯಾದ ಒಂದು ಪುಟ್ಟ ಪ್ರಪಂಚವನ್ನು ಮಾಡಿಕೊಂಡು ಅದರ ಪರಿಧಿಯೊಳಗೆ ಬದುಕಿ ಸುಖ ಸಂತೋಷವನ್ನು ಕಾಣುವ ಕಲೆಯನ್ನು ಕಲಿಯಬೇಕಾದ ಅನಿವಾರ್ಯತೆ ತಲೆದೂರುತ್ತಿದೆ. ಹೀಗಾಗಿ, ಏಕಾಂಗಿ 2002ರ ಬದಲಿಗೆ 202೪ರಲ್ಲಿ ಬಿಡುಗಡೆ ಆಗಿದ್ದರೆ, ಇನ್ನೂ ಹೆಚ್ಚು ಜನರನ್ನು ಕನೆಕ್ಟ್ ಆಗುತ್ತಿತ್ತು.

ಉಳಿದವರು ಕಂಡಂತೆ

2014ರಲ್ಲಿ ತೆರೆಕಂಡ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಿರ್ದೇಶಿಸಿ ನಟಿಸಿದ್ದ `ಉಳಿದವರು ಕಂಡಂತೆ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆಲ್ಲಲಿಲ್ಲ. ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಹಲವು ಕೋನಗಳಲ್ಲಿ ಒಂದು ವ್ಯಕ್ತಿಯ ಕಥೆಯನ್ನು ಹೇಳುವ ಅದ್ಭುತ ಪ್ರಯತ್ನ ಮಾಡಿದ್ದರು. ಆದರೆ, ಈಗ ಈ ಸಿನಿಮಾ ನೋಡಿದವರು ಇದು ಫೇಲ್ ಆಗುವಂತಹ ಚಿತ್ರವಲ್ಲ, ಪಕ್ಕಾ ಕ್ಲಾಸ್ ಸಿನಿಮಾ ಆಂತಾರೆ.

ಚಿಗುರಿದ ಕನಸು

2003ರಲ್ಲಿ ಟಿ.ಎಸ್.ನಾಗಾಭರಣ ನಿರ್ದೇಶನದಲ್ಲಿ ಮೂಡಿಬಂದ 'ಚಿಗುರಿದ ಕನಸು' ಎಲ್ಲರೂ ನೋಡಲೇಬೇಕಾದಂತಹ ಒಂದು ಒಳ್ಳೇ ಸಿನಿಮಾ. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದ ಈ ಚಿತ್ರ ಶಿವರಾಮ ಕಾರಂತರ ಇದೇ ಹೆಸರಿನ ಕಾದಂಬರಿ ಆಧಾರಿತವಾಗಿತ್ತು. ಈ ಚಿತ್ರಕ್ಕೆ ಜಯಂತ್ ಕಾಯ್ಕಿಣಿ ಗೀತೆಗಳನ್ನು ಬರೆದಿದ್ದರು. ವ್ಯಕ್ತಿಯೊಬ್ಬ ತನ್ನ ಮೂಲವನ್ನು ಹುಡುಕುವ ಅದ್ಭುತ ಪಯಣವನ್ನು ಈ ಚಿತ್ರ ಕಟ್ಟಿ ಕೊಟ್ಟಿತು. ಈ ಸಿನಿಮಾದ ಸ್ಫೂರ್ತಿಯಿಂದ ಶಾರುಖ್ ಖಾನ್ ಅವರು ಸ್ವದೇಶ್ ಆಗಿ ಈ ಸಿನಿಮಾ ಮಾಡಿದ್ದರು.'  

ಜಸ್ಟ್ ಮಾತ್ ಮಾತಲ್ಲಿ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಿರ್ದೇಶಿಸಿ, ನಟಿಸಿರುವ 'ಜಸ್ಟ್ ಮಾತ್ ಮಾತಲ್ಲಿ' ಸಿನಿಮಾ ಹಲವರಿಗೆ ಇಷ್ಟವಾಗಿರಲಿಲ್ಲ. ಆದರೆ, ಈ ಚಿತ್ರದಲ್ಲಿ ಕೆಲ ಒಳ್ಳೆಯ ಅಂಶಗಳು ಇದ್ದವು. ಸಿನಿಮಾದಲ್ಲಿ ರಘು ದೀಕ್ಷಿತ್ ಅವರ ಧ್ವನಿಯಲ್ಲಿ ಮೂಡಿಬಂದ ಸಾಂಗ್‌ಗಳು ಮಾತ್ರ ಸೂಪರ್ ಹಿಟ್ ಆಗಿದ್ದವು. ಪ್ರೇಮ ಕಥೆಯುಳ್ಳ ಈ ಚಿತ್ರದಲ್ಲಿ ರಮ್ಯಾ ನಾಯಕಿಯಾಗಿ ಕಾಣಿಸಿಕೊಂಡಿದ್ದರು.

ಪರಮಾತ್ಮ

ಪರಮಾತ್ಮ ಸಿನಿಮಾ ಕೂಡ 'ಜಸ್ಟ್ ಮಾತ್ ಮಾತಲ್ಲಿ' ಸಿನಿಮಾ ಸಾಲಿಗೆ ಸೇರುತ್ತದೆ.  ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಾಯಕರಾಗಿ ಅಭಿನಯಿದ್ದ ಈ ಸಿನಿಮಾ ಬಿಡುಗಡೆಯಾದ ಸಮಯದಲ್ಲಿ ಪ್ರೇಕ್ಷಕರಿಗೆ ಹಿಡಿಸಿರಲಿಲ್ಲ. ಚಿತ್ರದಲ್ಲಿ ಕೆಲವೊಂದು ಬೇಕಿರದ ಕ್ಯಾರೆಕ್ಟರ್‌ಗಳು ಹಾಗೂ ಸೀನ್‌ಗಳಿದ್ದರಿಂದ ಅನೇಕರಿಗೆ ಕನೆಕ್ಟ್ ಆಗಿರಲಿಲ್ಲ. ಆದ್ರೀಗ, ಪರಮಾತ್ಮ ಅಂದರೆ ಏನು ಅಂತ ಒಳ್ಳೆಯ ಅರ್ಥ ಹೇಳುವ ಈ ಸಿನಿಮಾ ಹಲವರ ಫೆವರಿಟ್. ಅಂದ್ಹಾಗೆ ಪರಮಾತ್ಮ ಸಿನಿಮಾದ ಪ್ರತಿಯೊಂದು ಹಾಡುಗಳು ಕೂಡ ಸಖತ್ ಹಿಟ್ ಆಗಿದ್ದವು.  

ಜಟ್ಟ

ಕಿಶೋರ್ ಅವರಂತಹ ಅಪ್ಪಟ ಕಲಾವಿದ ಹಾಗೂ ಗಿರಿರಾಜ್ ಅವರಂತಹ ಪ್ರಯೋಗಶೀಲ ನಿರ್ದೇಶಕರ ಕಾಂಬಿನೇಷನ್‌ನಲ್ಲಿ ಮೂಡಿಬಂದ 'ಜಟ್ಟ'  ಒಂದು ಅದ್ಭುತ ಸಿನಿಮಾ. ಚಿತ್ರದಲ್ಲಿ  ಕಿಶೋರ್ ಫಾರೆಸ್ಟ್ ಗಾರ್ಡ್ 'ಜಟ್ಟ' ಪಾತ್ರದಲ್ಲಿ ತಮ್ಮದೇ ಆದಂತಹ ಮುದ್ರೆಯನ್ನು ಒತ್ತಿದ್ದರು. ಇದೊಂದು ಕಾಡುವಂತ ಸಿನಿಮಾವಾಗಿದ್ದು, ಇಲ್ಲಿ ಭಾವನೆಗಳ ಸಂಘರ್ಷ, ಕಾಡಿನ ಸೌಂದರ್ಯ, ಹೆಣ್ಣಿನ ಕೂಗು, ಗಂಡಿನ ಮೌನ, ಗಂಡು-ಹೆಣ್ಣಿನ ಬದುಕಿನ ವೈರುದ್ಯಗಳ ಜಟಾಪಟಿಯನ್ನು ಅದ್ಭುತವಾಗಿ ಕಟ್ಟಿಕೊಡಲಾಗಿತ್ತು.

ರಾಮಾ ರಾಮಾ ರೇ...

ಸತ್ಯ ಪ್ರಕಾಶ್ ನಿರ್ದೇಶನದ ಒಂದಲ್ಲಾ ಎರಡಲ್ಲಾ ಹಾಗೂ ರಾಮಾ ರಾಮಾ ರೇ ಸಿನಿಮಾಗಳು ಸೋತಿರುವುದು ಬೇಸರ ಸಂಗತಿ. ಯಾವುದೇ ಮಸಲಾ, ಡಬ್ಬಲ್ ಮೀನಿಂಗ್ ಇಲ್ಲದೇ ಮನಮುಟ್ಟುವ ಸಿನಿಮಾಗಳನ್ನು ನೀಡುತ್ತಾ ಬಂದಿರುವವರು ಸತ್ಯ ಪ್ರಕಾಶ್.  ರಾಮಾ ರಾಮಾ ರೇ ನೇಣು ಶಿಕ್ಷೆಗೆ ಒಳಗಾಗಿರುವ ಓರ್ವ ಖೈದಿ ಹಾಗೂ ನೇಣು ಹಾಕುವ ಕೆಲಸ ಮಾಡುವ ಓರ್ವ ವೃದ್ಧನ ಜರ್ನಿಯಾದರೆ, ಒಂದಲ್ಲಾ ಎರಡಲ್ಲಾ ಏಳು ವರ್ಷದ ಮುಸ್ಲಿಂ ಹುಡುಗ ಸಮೀರಾ ಮತ್ತು ಆತನ ಭಾನು ಹೆಸರಿನ ಮುದ್ದಾದ ಹಸುವಿನ ನಡುವೆ ನಡೆಯುವ ಕಥೆ. ಸಮಾಜದಲ್ಲಿನ ಭಾವೈಕ್ಯತೆ ಸಂದೇಶ ಹೊಂದಿದ್ದ ಈ ಸಿನಿಮಾ ಥಿಯೇಟರ್‌ಗಳ ಗೊಂದಲದಿಂದ ಬಂದು ಹೋಗಿದ್ದೇ ಜನರಿಗೆ ಗೊತ್ತಾಗಲಿಲ್ಲ. ಈ ಚಿತ್ರಕ್ಕೆ ನ್ಯಾಷನಲ್ ಅವಾರ್ಡ್ ಕೂಡ ಬಂದಿದೆ.

ಗೊಂಬೆಗಳ ಲವ್

ಗೊಂಬೆಗಳ ಲವ್ ಸಿನಿಮಾದ ನೋಡಿದ ಹಲವರು ನಿರ್ದೇಶಕ ಸಂತೋಷ್ ಕೆ ನಾಯರ್ ಅವರಿಗೆ ನಿನ್ನ ಟ್ಯಾಲೆಂಟ್ ಹಾಳುಮಾಡಿಕೊಳ್ಳಬೇಡ, ತಮಿಳು ಇಂಡಸ್ತ್ರಿಗೆ ಹೋಗು ಅಂದಿದ್ದರಂತೆ. ಯಾಕೆಂದರೆ, ಈ ಸಿನಿಮಾ ಸೋತಿದ್ದರಿಂದ ಬೇಜಾರಾಗಿ ಈ ಮಾತನ್ನು ಹೇಳಿದ್ದರಂತೆ.  ಅರುಣ್ ನಾಯಕನಾಗಿ ಹಾಗೂ ಪವನಾ ನಾಯಕನಾಗಿ ನಟಿಸಿದ್ದ ಈ ಚಿತ್ರ ಅದ್ಭುತ ಕಥೆ ಹೊಂದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+