X
ಹೋಮ್ ಚಲನಚಿತ್ರಗಳ ಒಳನೋಟ

ದರ್ಶನ್ to ಶಿವರಾಜ್‌ಕುಮಾರ್: ಅಂಧನ ಪಾತ್ರಗಳಿಗೆ ಜೀವ ತುಂಬಿರುವ 7 ಸ್ಯಾಂಡಲ್‌ವುಡ್ ನಟರಿವರು!

Author Sowmya Bairappa | Updated: Thursday, October 10, 2024, 03:46 PM [IST]

ಓರ್ವ ನಟ ಉತ್ತಮ ಕಲಾವಿದ ಅನಿಸಿಕೊಳ್ಳುವುದು ಅವರ ಮಾಡುವ ವಿಭಿನ್ನ ಪಾತ್ರಗಳಿಂದ. ಸಿನಿಮಾ ಕಲಾವಿದರು ಅಂದ ಮೇಲೆ ಎಲ್ಲಾ ರೀತಿಯ ಪಾತ್ರಗಳಿಗೂ ಜೀವ ತುಂಬಬೇಕು. ಒಬ್ಬ ಹೀರೋ ಅದೇ ಹಾಡು, ಡ್ಯಾನ್ಸ್, ಫೈಟು ಮಾಡುತ್ತಿದ್ದರೆ ಸಿನಿರಸಿಕರು ಒಂದು ಕ್ಷಣ ಬೋರ್ ಆಗಿಬಿಡುತ್ತೆ. ಕನ್ನಡದ ಕೆಲ ನಟರು ಈಗಾಗಲೇ ಪ್ರಾಯೋಗಿಕ ಪಾತ್ರಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಇಲ್ಲಿ ಕಮರ್ಶಿಯಲ್ ಸಿನಿಮಾ ಲೆಕ್ಕಾಚಾರದಿಂದ ಹೊರಬಂದು ಕುರುಡರ ಪಾತ್ರಕ್ಕೆ ಜೀವ ತುಂಬಿರುವ ಕನ್ನಡದ ನಟರ ಪಟ್ಟಿಯನ್ನು ನೀಡಲಾಗಿದೆ.


cover image
ದರ್ಶನ್

ನಟ ದರ್ಶನ್ ಲೈಟ್​​ಬಾಯ್ ಆಗಿ ಚಿತ್ರರಂಗದಲ್ಲಿ ಕರಿಯರ್ ಆರಂಭಿಸಿ, ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸುವ ಮೂಲಕ ಇಂದು ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟರಾಗಿ ಹೊರಹೊಮ್ಮಿದ್ದಾರೆ. ಆರಂಭದ ಸಿನಿಮಾಗಳಲ್ಲಿ ರೌಡಿಸಂ ಹಾಗೂ ಲವರ್ ಬಾಯ್ ಪಾತ್ರಗಳಲ್ಲಿ ಮಿಂಚಿದ್ದ ದರ್ಶನ್, ಮೊದಲ ಬಾರಿಗೆ ಅಂಧನಾಗಿ ನಟಿಸಿದ ಚಿತ್ರ 'ನಮ್ಮ ಪ್ರೀತಿಯ ರಾಮು'. ಇದು ಮಲಯಾಳಂ ರಿಮೇಕ್ ಆಗಿತ್ತು. ಸಿನಿಮಾದಲ್ಲಿ ದರ್ಶನ್ ಕುರುಡನಾಗಿ ಬಹಳ ಅದ್ಭುತವಾಗಿ ನಟಿಸಿದ್ದರು. ಈ ಚಿತ್ರ ಬಾಕ್ಸಾಫೀಸ್​​ನಲ್ಲಿ ಸದ್ದು ಮಾಡದಿದ್ರೂ ದರ್ಶನ್ ಅಭಿನಯಕ್ಕೆ ಎಲ್ಲರಿಂದ ಪ್ರಶಂಸೆ ದೊರೆಯಿತು. ದರ್ಶನ್ ಕರಿಯರ್‌ನಲ್ಲೇ ಇದೊಂದು ವಿಭಿನ್ನ ಪಾತ್ರವಾಗಿತ್ತು.  

ಶಿವ ರಾಜ್‌ಕುಮಾರ್

ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಸುಮಾರು ಮೂರು ದಶಕಗಳಿಗೂ ಅಧಿಕ ತಮ್ಮ ಸಿನಿಜೀವನದಲ್ಲಿ 125ಕ್ಕೂ ಹೆಚ್ಚು ಚಿತ್ರಗಳಲ್ಲಿ ವಿವಿಧ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಯುವಪ್ರೇಮಿಯಾಗಿ, ರೌಡಿಯಾಗಿ, ಖಡಕ್ ಪೋಲಿಸ್ ಅಧಿಕಾರಿಯಾಗಿ ಹೀಗೇ ಹತ್ತು ಹಲವು ಪಾತ್ರಗಳನ್ನು ಜೀವಿಸಿದ್ದಾರೆ. ತಮ್ಮ ನಟನೆಗೆ ಹಲವು ಪ್ರಶಸ್ತಿಗಳ ಜೊತೆಗೆ ಗೌರವ ಡಾಕ್ಟರೇಟ್ ಕೂಡ ಪಡೆದಿದ್ದಾರೆ. ಶಿವಣ್ಣ ತಮ್ಮ ವೃತ್ತಿ ಜೀವನದಲ್ಲೇ ಮೊದಲ ಬಾರಿಗೆ 'ಕವಚ' ಚಿತ್ರದಲ್ಲಿ ವಿಶಿಷ್ಟ ಹಾಗೂ ವಿಭಿನ್ನ ಪಾತ್ರದಲ್ಲಿ ನಟಿಸಿದ್ದರು. ಮಲೆಯಾಳಂನ 'ಒಪ್ಪಂ' ಸಿನಿಮಾದ ರಿಮೇಕಾಗಿದ್ದ ಈ ಚಿತ್ರ, ಅಂಧನಾಗಿ ಶಿವಣ್ಣನ ನಟನಾ ಸಾಮರ್ಥ್ಯವನ್ನು ತೋರಿಸಿತ್ತು. ಹ್ಯಾಟ್ರಿಕ್ ಹೀರೋ ಲಾಂಗು, ಮಚ್ಚು, ಲವ್ವು ಎಲ್ಲದರಿಂದ ಹೊರಬಂದು ಈ ಸಿನಿಮಾದಲ್ಲಿ ಕುರುಡನಾಗಿ ಕಾಣಿಸಿಕೊಂಡಿದ್ದರು. 

ಸಂಚಾರಿ ವಿಜಯ್

ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಇಂದು ನಮ್ಮೊಂದಿಗಿಲ್ಲ. ಪ್ರತಿ ಸಿನಿಮಾದಲ್ಲಿ ಬೇರೆ ಬೇರೆ ರೀತಿಯ ಪ್ರಯೋಗಾತ್ಮಕ ಪಾತ್ರಗಳನ್ನು ಮಾಡುವ ಅವರು ತಾನು ಎಂತಹ ಅದ್ಬುತ ನಟ ನಿರೂಪಿಸಿದ್ದಾರೆ. ಸಂಚಾರಿ ವಿಜಯ್ 2018ರಲ್ಲಿ ತೆರೆಕಂಡ 'ಕೃಷ್ಣ ತುಳಸಿ' ಚಿತ್ರದಲ್ಲಿ ಅಂಧನ ಪಾತ್ರ ಮಾಡಿದ್ದರು. ಚಿತ್ರದಲ್ಲಿ ಕಣ್ಣು ಕಾಣದ ಒಬ್ಬ ಹುಡುಗ (ಸಂಚಾರಿ ವಿಜಯ್) ಟ್ರಾವೆಲ್ ಗೈಡ್ ಆಗಿರುತ್ತಾನೆ. ಈ ಹುಡುಗನ ಸುತ್ತ ಸಿನಿಮಾದ ಕಥೆ ಸುತ್ತುತ್ತದೆ.


ದೇವರಾಜ್

ಹೆಚ್ಚಾಗಿ ಪೊಲೀಸ್, ವಿಲನ್ ಹಾಗೂ ಫೋಷಕ ಪಾತ್ರಗಳಲ್ಲಿ ಹೆಚ್ಚು ಅಬ್ಬರಿಸುತ್ತಿದ್ದ ದೇವರಾಜ್ ಅವರು 2018ರಲ್ಲಿ ರಿಲೀಸ್ ಆದ '3 ಗಂಟೆ 30 ದಿನ 30 ಸೆಕೆಂಡ್‌' ಚಿತ್ರದಲ್ಲಿ ಅಂಧರಾಗಿ ಅಭಿನಯಿಸಿದ್ದರು. ಈ ಸಿನಿಮಾದ ಕಥೆ ತುಂಬ ಇಷ್ಟವಾಗಿ ಅಂಧನ ಪಾತ್ರದಲ್ಲಿ ನಟಿಸುವುದಕ್ಕೆ ದೇವರಾಜ್‌ ಒಪ್ಪಿಕೊಂಡಿದ್ದಾರಂತೆ. 

ತಬಲಾ ನಾಣಿ

ಗುರುಪ್ರಸಾದ್ ಮತ್ತು ಜಗ್ಗೇಶ್ ಕಾಂಬಿನೇಷನ್  'ಎದ್ದೇಳು ಮಂಜುನಾಥ' ಸಿನಿಮಾದಲ್ಲಿ ನಟ ತಬಲಾ ನಾಣಿ ಅಂಧನ ಪಾತ್ರ ಮಾಡಿ ಸೈ ಎನಿಸಿಕೊಂಡಿದ್ದರು. ಈ ಸಿನಿಮಾದಲ್ಲಿನ ಅವರು ಅಭಿನಯಕ್ಕೆ ಸಿನಿರಸಿಕರು ಫಿದಾ ಆಗಿದ್ದರು. ವಿಭಿನ್ನ ಟೈಟಲ್ ಮತ್ತು ಅಲೋಚನೆಯೊಂದಿಗೆ ಬಂದ ಈ ಸಿನಿಮಾದಲ್ಲಿ ಜಗ್ಗೇಶ್ ಕೂಡ ವಿಭಿನ್ನ ಪಾತ್ರ ಮಾಡಿದ್ದರು. 

ಚಿರಂಜೀವಿ ಸರ್ಜಾ

2018ರಲ್ಲಿ ತೆರೆಕಂಡ ಸಂಹಾರ ಸಿನಿಮಾದಲ್ಲಿ ಚಿರಂಜೀವಿ ಸರ್ಜಾ ಕುರುಡನ ಪಾತ್ರ ಮಾಡಿದ್ದಾರೆ. ಚಿತ್ರದಲ್ಲಿ ಹರಿಪ್ರಿಯಾ ಹಾಗೂ ಕಾವ್ಯಾ ಶೆಟ್ಟಿ ನಾಯಕಿರಾಗಿ ಕಾಣಿಸಿಕೊಂಡಿದ್ದರು. ನಿರ್ದೇಶಕ ಗುರುದೇಶಪಾಂಡೆ ಚಿತ್ರದಲ್ಲಿ ಕುರುಡನಾದವನು, ಏನೂ ಬೇಕಾದರೂ ಮಾಡಬಹುದು ಎಂಬುದನ್ನು ತೋರಿಸಿದ್ದರು. 

ಮಿತ್ರ

2017ರಲ್ಲಿ ತೆರೆಕಂಡ 'ರಾಗ' ಸಿನಿಮಾದಲ್ಲಿ ಕೂಡ ಅಂಧರ ಜೀವನದ ಕುರಿತು ಕಥೆ ಹೆಣೆಯಲಾಗಿತ್ತು. ನಿರ್ದೇಶಕ ಪಿ.ಶೇಖರ್ ಈ ಚಿತ್ರದಲ್ಲಿ ಇಬ್ಬರು ಅಂಧ ಪ್ರೇಮಿಗಳ ಪ್ರೇಮ ಕಥೆಯನ್ನು  ಸೊಗಸಾಗಿ ತೋರಿಸಿದ್ದರು. ಇಲ್ಲಿ ಹಾಸ್ಯನಟ ಮಿತ್ರ ಮತ್ತು ನಟಿ ಭಾಮಾ ಕುರುಡು ಪ್ರೇಮಿಗಳಾಗಿ ಕಾಣಿಸಿಕೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+