X
ಹೋಮ್ ಚಲನಚಿತ್ರಗಳ ಒಳನೋಟ

ಬದುಕಿದ್ದಾಗಲೇ ಸಾವನ್ನಪ್ಪಿದ್ದಾರೆ ಎಂಬ ಸುಳ್ಳು ಸುದ್ದಿಗೆ ಒಳಗಾದ ಸ್ಯಾಂಡಲ್‌ವುಡ್ ನಟ-ನಟಿಯರಿವರು!

Author Sowmya Bairappa | Published: Tuesday, July 23, 2024, 04:03 PM [IST]

ಸೋಶಿಯಲ್ ಮೀಡಿಯಾ ಜಮಾನದಲ್ಲಿ ಎಲ್ಲಾ ಸುದ್ದಿಗಳು ಬಹುಬೇಗ ಎಲ್ಲೆಡೆ ವೈರಲ್ ಆಗಿಬಿಡುತ್ತದೆ. ಅದರಲ್ಲೂ ನೆಗೆಟಿವ್ ವಿಚಾರಗಳಂತೂ ಕಾಡ್ಗಿಚ್ಚಿನಂತೆ ಹಬ್ಬುತ್ತವೆ. ಕೆಲ ಕಿಡಿಗೇಡಿಗಳು ಇದನ್ನೇ ಬಂಡವಾಳ ಮಾಡಿಕೊಂಡು ಸುಳ್ಳು ಸುದ್ದಿಗಳನ್ನು ಹರಡಿಸುತ್ತಾರೆ. ಅದರಲ್ಲೂ ಸಿನಿಮಾ ತಾರೆಯರ ಬಗ್ಗೆ ಹೆಚ್ಚು ಸುಳ್ಳು ಮಾಹಿತಿ ಹಂಚುತ್ತಿರುತ್ತಾರೆ. ಸಿನಿಮಾ ನಟ-ನಟಿಯರು ಬದುಕಿರುವಾಗಲೇ ಅವರ ಸಾವಿನ ಸುದ್ದಿ ಹರಡಿಸಿ, ಸಿನಿಮಾರಂಗ, ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ. ಇಲ್ಲಿ ಮರಣ ಹೊಂದಿದ್ದಾರೆ ಎಂಬ ಸುಳ್ಳು ಸುದ್ದಿಗಳಿಗೆ ಒಳಗಾದ ಕನ್ನಡ ತಾರೆಯರ ಪಟ್ಟಿ ನೀಡಲಾಗಿದೆ.


cover image
ಅವಿನಾಶ್ ಯಳಂದೂರು

2022ರಲ್ಲಿ ಕನ್ನಡದ ಹಿರಿಯ ಫೋಷಕ ನಟ ಅವಿನಾಶ್ ನಿಧನ ಹೊಂದಿದ್ದಾರೆ ಎಂದು ಸುಳ್ಳು ಸುದ್ದಿ ಹರಡಿಸಲಾಗಿತ್ತು. ಇದು ಅವರ ಅಬಿಮಾನಿಗಳ ಆತಂಕಕ್ಕೆ ಕಾರಣವಾಗಿತ್ತು. ಬಳಿಕ ಈ ಕುರಿತು ಪ್ರತಿಕ್ರಿಯಿಸಿದ್ದ ಅವಿನಾಶ್, ನಾನು ಆರಾಮಾಗಿದ್ದೇನೆ. ನನಗೆ ಏನು ಆಗಿಲ್ಲ. ದಯವಿಟ್ಟು ಒಬ್ಬ ಮನುಷ್ಯ ಬದುಕಿರುವಾಗಲೇ ಈ ರೀತಿ ಸುಳ್ಳುಸುದ್ದಿ ಹರಡಿಸುವುದನ್ನು ಬಿಟ್ಟುಬಿಡಿ ಎಂದಿದ್ದರು. ಜೊತೆಗೆ ಕಿಡಿಗೇಡಿಗಳ ವಿರುದ್ಧ ಸೈಬರ್ ಕ್ರೈಂಗೆ ದೂರು ನೀಡಿರುವುದಾಗಿಯೂ ತಿಳಿಸಿದ್ದರು.

ರೇಖಾ ಕೃಷ್ಣಪ್ಪ

2017ರಲ್ಲಿ ಕನ್ನಡ ಸಿನಿಮಾರಂಗ ಹಾಗೂ ಕಿರುತೆರೆ ಮಾತ್ರವಲ್ಲದೇ, ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ರೇಖಾ ಕೃಷ್ಣಪ್ಪ ಕಾರು ಅಪಘಾತದಲ್ಲಿ ಮರಣ ಹೊಂದಿದ್ದಾರೆ ಎಂಬ ಅಂತೆ-ಕಂತೆಗಳು ಹರಿದಾಡಿದ್ದವು. ಈ ಕುರಿತು ರೇಖಾ ಅವರೇ ಫೇಸ್‌ಬುಕ್ ಲೈವ್ ಬಂದು, ನಾನು ಶೃಂಗೇರಿಯ ಶಾರದಾಂಬ ದೇವಸ್ಥಾನದಲ್ಲಿದ್ದೇನೆ ಅಂತ ಹೇಳಿದ್ದರು. ಅಂದು ನಿಜಕ್ಕೂ ಅಪಘಾತದಲ್ಲಿ ಮೃತಪಟ್ಟಿದ್ದು ಕನ್ನಡ ಕಿರುತೆರೆ ನಟಿ ರೇಗಾ ಸಿಂಧು. ಇವರು ಚೈನೈನಿಂದ ಬೆಂಗಳೂರಿಗೆ ಬರುವಾಗ ಕಾರು ಅಪಘಾತದಲ್ಲಿ ಮೃತಪಟ್ಟಿದ್ದರು. ಆದರೆ, ಸೋಶಿಯಲ್ ಮೀಡಿಯಾದಲ್ಲಿ ರೇಖಾ ಕೃಷ್ಣಪ್ಪ ಎಂದು ಸುದ್ದಿ ಹಬ್ಬಿಸಿ, ಗೊಂದಲ ಸೃಷ್ಟಿಸಿದ್ದರು.

ದೊಡ್ಡಣ್ಣ

2021ರಲ್ಲಿ ಸ್ಯಾಂಡಲ್‌ವುಡ್ ಹಿರಿಯ ನಟ, ಕಾಮಿಡಿ ಸ್ಟಾರ್ ದೊಡ್ಡಣ್ಣ  ನಿಧರಾಗಿದ್ದಾರೆ ಅಂತ ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹರಡಲಾಗಿತ್ತು. ಹೀಗೊಂದು ವಿಷಯ ಹರಿದಾಡುತ್ತಿದ್ದಂತೆ ಆತ್ಮೀಯರು, ಸ್ನೇಹಿತರು, ಪತ್ರಕರ್ತರು ದೊಡ್ಡಣ್ಣ ಅವರಿಗೆ ಕರೆ ಮಾಡಿ ವಿಚಾರಿಸತೊಡಗಿದ್ದರು. ಇದರಿಂದ ಬೇಸರಗೊಂಡ ದೊಡ್ಡಣ್ಣ ಸೆಲ್ಫಿ ವಿಡಿಯೋ ಮಾಡಿ, ಯಾರೋ ಕಿಡಿಗೇಡಿಗಳು ನನ್ನ ಫೋಟೋ ಹಾಕಿ ರಿಪ್ ಅಂತ ಹಾಕಿದ್ದಾರೆ. ಹಾಗಾಗಿ ವಿಡಿಯೋ ಮಾಡಿದೆ. ನಾನಿನ್ನು ಆರಾಮಾಗಿದ್ದೇನೆ, ಆರೋಗ್ಯವಾಗಿದ್ದೇನೆ ಅಂತ ಸ್ಪಷ್ಟನೆ ನೀಡಿದ್ದರು.

ದ್ವಾರಕೀಶ್

'ಕನ್ನಡದ ಕುಳ್ಳ' ಅಂತಲೇ ಖ್ಯಾತಿ ಗಳಿಸಿದ್ದ ದ್ವಾರಕೀಶ್ ಅವರ ನಿಧನ ಬಗ್ಗೆಯೂ ಅವರು ಬದುಕಿದ್ದಾಗಲೇ ಸುಳ್ಳುಸುದ್ದಿ ಹರಡಿಸಲಾಗಿತ್ತು. ಇದರಿಂದ ಕೋಪಗೊಂಡ ದ್ವಾರಕೀಶ್ ವಿಡಿಯೋ ಮಾಡಿ, ನಿಮ್ಮ ಆರ್ಶೀವಾದಿಂದ ನಾನು ಚೆನ್ನಾಗಿದ್ದೀನಿ. ನಾಣು ಗಟ್ಟಿಮುಟ್ಟಾಗಿದ್ದೇನೆ. ಯಾವುದೇ ಚಿಂತೆಯಿಲ್ಲದೇ ನಗುನಗುತ್ತಾ ಇದ್ದೇನೆ. ನಿಮ್ಮ ಪ್ರೀತಿ, ವಿಶ್ವಾಸ ಇದೇ ರೀತಿ ಇರಲಿ. ನಿಮ್ಮ ಆರ್ಶೀವಾದ ಇರುವವರೆಗೂ ನನಗೇನು ಆಗಲ್ಲ ಎಂದಿದ್ದರು.

ರಮ್ಯಾ

2023ರಲ್ಲಿ ಸ್ಯಾಂಡಲ್‌ವುಡ್ ಮೋಹಕ ತಾರೆ ರಮ್ಯಾ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂಬ ಸುದ್ದಿ ಹರಡಿಸಲಾಗಿತ್ತು. ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಮರಣದ ಸುದ್ದಿಯನ್ನು ಕಾಲಿವುಡ್ ಮಂದಿ ತಪ್ಪಾಗಿ ತಿಳಿದು, ರಮ್ಯಾ ಫೋಟೋಗೆ ರಿಪ್ ಎಂದು ಟ್ವಿಟರ್‌ನಲ್ಲಿ ಫೋಸ್ಟ್ ಮಾಡಿದ್ದರು. ಇದು ಸಾಕಷ್ಟು ಗೊಂದಲಕ್ಕೆ ಕಾರಣವಾಗಿತ್ತು. ಸಾವಿನ ಸುಳ್ಳುಸುದ್ದಿ ನಂತರ ರಮ್ಯಾ, ಇನ್‌ಸ್ಟಾಗ್ರಾಮ್‌ನಲ್ಲಿ ಕಿಟಕಿ, ಗಿಡ, ಬೆಟ್ಟ, ಸರೋವರಗಳ ಚಿತ್ರ ಹಂಚಿಕೊಂಡು ಮಾತಾಡದೇ ಮೌನದಲ್ಲೇ ಉತ್ತರ ನೀಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+