X
ಹೋಮ್ ಚಲನಚಿತ್ರಗಳ ಒಳನೋಟ

ಬೆಂಗಳೂರು ಭೂಗತ ಜಗತ್ತನ್ನು ಆಧರಿಸಿರುವ ಟಾಪ್ 5 ಸೂಪರ್ ಹಿಟ್ ಕನ್ನಡ ಸಿನಿಮಾಗಳಿವು!

Author Sowmya Bairappa | Updated: Friday, April 4, 2025, 10:20 AM [IST]

ಸ್ಯಾಂಡಲ್​ವುಡ್​ನಲ್ಲಿ ಟ್ರೆಂಡ್ ಸೆಟರ್ ರೌಡಿಸಂ ಸಿನಿಮಾ ಅಂದರೆ ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ 'ಓಂ' ಸಿನಿಮಾ. ಈ ಸಿನಿಮಾ ನಂತರ ಸ್ಯಾಂಡಲ್​​​​​​​​​​ವುಡ್​​​​ನಲ್ಲಿ ರೌಡಿಸಂ ಸಿನಿಮಾಗಳು ತಯಾರಾಗಲು ಪ್ರಾರಂಭವಾದವು. ಕನ್ನಡದ ನಿರ್ದೇಶಕರು ಅನೇಕ ನಿಜಜೀವನದ ಕಥೆಗಳನ್ನೇ ಆಧಾರವಾಗಿಟ್ಟುಕೊಂಡು ಸಿನಿಮಾ ಮಾಡಿ ಯಶಸ್ವಿಯಾದರು. ಅದರಲ್ಲೂ ಭೂಗತಲೋಕ ಆಧಾರಿತ ಸಿನಿಮಾಗಳು ಸ್ಯಾಂಡಲ್​ವುಡ್​ ಇಂಡಸ್ಟ್ರಿಯನ್ನು ಆಳಿವೆ. ಇಲ್ಲಿ ಬೆಂಗಳೂರು ಭೂಗತ ಜಗತ್ತನ್ನು ಆಧರಿಸಿರುವ ಟಾಪ್ 5 ಕನ್ನಡ ಸಿನಿಮಾಗಳನ್ನು ನೀಡಲಾಗಿದೆ.


cover image
ಓಂ

ರೌಡಿಸಂ ಮತ್ತು ಪ್ರೇಮ ಕಥೆಯ ಸಂಘರ್ಷವನ್ನು ಹೀಗೂ ಹೇಳಬಹುದು ಎಂದು 'ಓಂ' ಸಿನಿಮೂ ಮೂಲಕ ತೋರಿಸಿಕೊಟ್ಟವರು ರಿಯಲ್ ಸ್ಟಾರ್ ಉಪೇಂದ್ರ. ಕೆಲ ಪತ್ರಿಕೆಗಳಲ್ಲಿ ಬಂದ ನೈಜ ಘಟನೆಗಳ ಜೊತೆಗೆ ನಿಜವಾದ ರೌಡಿಗಳ ಕಥೆಯನ್ನು ಬೆಳ್ಳಿತೆರೆ ಮೇಲೆ ತೋರಿಸುವ ಮೂಲಕ ರೌಡಿಸಂ, ಶಾಶ್ವತ ಅಲ್ಲ ಎಂಬ ಜಾಗೃತಿಯನ್ನು ಮೂಡಿಸಿದ್ದರು. ಈ ಸಿನಿಮಾದಲ್ಲಿ ಜೇಡರಹಳ್ಳಿ ಕೃಷ್ಣ, ಬೆಕ್ಕಿನ ಕಣ್ಣು ರಾಜೇಂದ್ರ, ಕೊರಂಗು ಕೃಷ್ಣ, ತನ್ವೀರ್ ಮುಂತಾದ ನಿಜ ಜೀವನದ ರೌಡಿಗಳು ನಟಿಸಿದ್ದರು. ಇಂತಹ ಪ್ರಯೋಗ ಮಾಡಿದ ಮೊದಲ ಸಿನಿಮಾ ಇದು.

ಆ ದಿನಗಳು

ಓಂ ನಂತರ ಕನ್ನಡ ಚಿತ್ರರಂಗದಲ್ಲಿ ಬಂದ ನೈಜ ಘಟನೆಯ ರೌಡಿಸಂ ಸಿನಿಮಾ ಆ ದಿನಗಳು. ಇದು 1986ರಲ್ಲಿ ಬೆಂಗಳೂರಿನಲ್ಲಿ ನಡೆದ ಭೂಗತ ಜಗತ್ತಿನ ರಿಯಲ್ ಸ್ಟೋರಿ ಚಿತ್ರ. ಅಂದಿನ ರೌಡಿಸಂ ದಿನಗಳಲ್ಲಿ ಗುರುತಿಸಿಕೊಂಡಿದ್ದ, ಬರಹಗಾರ ಅಗ್ನಿ ಶ್ರೀಧರ್ ಬರೆದಿರುವ ನೈಜ ಕಥೆಯನ್ನು ನಿರ್ದೇಶಕ ಕೆ.ಎಂ. ಚೈತನ್ಯ ನಿರ್ದೇಶನ ಮಾಡಿದ್ದರು. ಆ ಕಾಲದಲ್ಲಿ ಭೂಗತ ಜಗತ್ತಿನಲ್ಲಿ ಹಿಡಿತ ಸಾಧಿಸಿದ್ದ ಕೊತ್ವಾಲ್​​​ ರಾಮಚಂದ್ರ ಎಂಬ ರೌಡಿಯ ಕಥೆಯನ್ನು 'ಆ ದಿನಗಳು' ಸಿನಿಮಾ ಒಳಗೊಂಡಿತ್ತು. 2007ರಲ್ಲಿ ತೆರೆಕಂಡ ಈ ಸಿನಿಮಾ ನೈಜ ಕಥೆ ಆಧರಿಸಿದ್ದ ಕಾರಣಕ್ಕೆ ಸಕ್ಸಸ್ ಕಂಡು ನಟ ಚೇತನ್​​​ಗೆ ಒಳ್ಳೆ ಹೆಸರು ತಂದು ಕೊಟ್ಟಿತ್ತು.

ಡೆಡ್ಲಿ ಸೋಮ

ಆ ದಿನಗಳು ಸಿನಿಮಾ ನಂತರ ಕನ್ನಡದಲ್ಲಿ ಬಂದ ಮತ್ತೊಂದು ರೌಡಿಸಂ ಸಿನಿಮಾ ಅಂದರೆ ಡೆಡ್ಲಿ ಸೋಮ. 2005ರಲ್ಲಿ ತೆರೆಕಂಡ 'ಡೆಡ್ಲಿ ಸೋಮ' ಸಿನಿಮಾ ಉತ್ತಮ ಯಶಸ್ಸು ಕಂಡಿತ್ತು. ಬರಹಗಾರ ರವಿ ಬೆಳಗೆರೆ ಈ ಕಥೆಯನ್ನು ಬರೆದರೆ, ರವಿ ಶ್ರೀವತ್ಸ ಚಿತ್ರಕ್ಕೆ ಸಾರಥಿಯಾಗಿ ಕೆಲಸ ಮಾಡಿದ್ದರು. ಈ ಸಿನಿಮಾದಲ್ಲಿ ನಟ ಆದಿತ್ಯ  ಡೆಡ್ಲಿ ಸೋಮನ ಪಾತ್ರ ನಿರ್ವಹಿಸಿದ್ದರು. ಈ ಸಿನಿಮಾ ಸಕ್ಸಸ್ ಆದ ಕಾರಣ  ನಿರ್ದೇಶಕ ರವಿ ಶ್ರೀವತ್ಸ 'ಡೆಡ್ಲಿ ಸೋಮ ಭಾಗ 2' ಕೂಡ ಮಾಡಿದ್ದರು.   

ದಂಡುಪಾಳ್ಯ

ದಂಡುಪಾಳ್ಯ ಸಿನಿಮಾದಲ್ಲಿ ಮಳೆ ಹುಡುಗಿ ಪೂಜಾ ಗಾಂಧಿ ಮುಖ್ಯಪಾತ್ರದಲ್ಲಿ ನಟಿಸಿದ್ದರು. ದಂಡುಪಾಳ್ಯದಿಂದ ಕೂಲಿ ಕೆಲಸಕ್ಕಾಗಿ ಬೆಂಗಳೂರಿಗೆ ಬಂದ ಒಂದು ಗ್ಯಾಂಗ್ ದರೋಡೆ, ಸುಲಿಗೆಗೆ ಇಳಿಯುವ ನೈಜ ಘಟನೆಯನ್ನು ಆಧಾರಿಸಿ ಸಿನಿಮಾ ಮಾಡಲಾಗಿತ್ತು. ಬೆಂಗಳೂರಿನ ಸುತ್ತಮುತ್ತ 75ಕ್ಕೂ ಅಧಿಕ ಕೊಲೆ, ದರೋಡೆ ಪ್ರಕರಣಗಳನ್ನು ಮಾಡುವ ಮೂಲಕ ದಂಡುಪಾಳ್ಯ ಗ್ಯಾಂಗ್ ಹೇಗೆ ಖ್ಯಾತಿ ಪಡೆಯಿತು ಎಂಬುದನ್ನು ತೋರಿಸಲಾಗಿತ್ತು. ಈ ಸಿನಿಮಾದಲ್ಲಿನ ನಟನೆಗಾಗಿ ಪೂಜಾ ಗಾಂಧಿಗೆ ಅತ್ಯುತ್ತಮ ನಟಿ ಫಿಲ್ಮ್‌ಫೇರ್ ಪ್ರಶಸ್ತಿ ಮತ್ತು ಸುವರ್ಣ ಫಿಲ್ಮ್‌ಫೇರ್ ಪ್ರಶಸ್ತಿ ಲಭಿಸಿತ್ತು. ದಂಡುಪಾಳ್ಯ ಸಿನಿಮಾವನ್ನು ಶ್ರೀನಿವಾಸ್ ರಾಜು ನಿರ್ದೇಶನ ಮಾಡಿದ್ದರು.  

ಮೈನಾ

ಮೈನಾ ಚಿತ್ರದಲ್ಲಿ ಚೇತನ್ ನಾಯಕನಾಗಿ ಮತ್ತು ನಿತ್ಯ ಮೆನನ್ ನಾಯಕಿಯಾಗಿ ಅಭಿನಯಿಸಿದ್ದರು. ಮೈನಾ ಸಿನಿಮಾ ೩೪ ಜನರನ್ನು ಕೊಂದ 'ಸತ್ಯ' ಎಂಬುವವರ ನಿಜ ಜೀವನದ ಕಥೆಯಾಗಿದ್ದು, ಇದನ್ನು ನಾಗಶೇಖರ್ ನಿರ್ದೇಶಿಸಿದ್ದರು. ಚಿತ್ರದ ನಾಯಕ ಸತ್ಯ (ಚೇತನ್) ಮತ್ತು ಮೈನಾ (ನಿತ್ಯಾ ಮೆನನ್)ನೊಂದಿಗೆ ಪ್ರೀತಿಯಲ್ಲಿ ಬೀಳುತ್ತಾನೆ. ಮೈನಾ ಅಂಗವಿಕಲೆ ಆಗಿರುತ್ತಾಳೆ. ಹೀಗಿದ್ದರೂ ಸತ್ಯ ಆಕೆಯನ್ನು ಮದುವೆಯಾಗುತ್ತಾನೆ. ಬಳಿಕ ಆಕೆಗೆ ಚಿಕಿತ್ಸೆ ಕೊಡಿಸಲು ವೈದ್ಯರ ಬಳಿ ಕರೆದೊಯ್ಯದಾಗ ಆ ವೈದ್ಯ ಆಕೆಯ ಮೇಲೆ ದೈಹಿಕವಾಗಿ ಹಲ್ಲೆ ಮಾಡುತ್ತಾನೆ. ಇದನ್ನು ತಿಳಿದ ಸತ್ಯ ಆತನನ್ನ ಕೊಲ್ಲುತ್ತಾನೆ. ರಾಜಕಾರಣಿ ಸಹೋದರನನ್ನು ಹತ್ಯೆ ಮಾಡಿದ್ದಕ್ಕಾಗಿ ಸಿನಿಮಾದ ಕೊನೆಯಲ್ಲಿ ಸತ್ಯ ಹಾಗೂ ಮೈನಾ ಇಬ್ಬರು ಸಾವನ್ನಪ್ಪುತ್ತಾರೆ.



Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+