X
ಹೋಮ್ ಚಲನಚಿತ್ರಗಳ ಒಳನೋಟ

ಮುಹೂರ್ತ ಆಚರಿಸಿಕೊಂಡು ಅರ್ಧಕ್ಕೆ ನಿಂತ ಸ್ಯಾಂಡಲ್‌ವುಡ್ ಸ್ಟಾರ್ ನಟರ ಸಿನಿಮಾಗಳಿವು!

Author Sowmya Bairappa | Updated: Monday, February 3, 2025, 09:54 AM [IST]

ಚಿತ್ರರಂಗದಲ್ಲಿ ಅದ್ಧೂರಿ ಮುಹೂರ್ತ ಆಚರಿಸಿಕೊಂಡ ಅದೆಷ್ಟೋ ಸಿನಿಮಾಗಳು ಅರ್ಧಕ್ಕೆ ನಿಂತುಹೋದ ಉದಾಹರಣೆಗಳಿವೆ. ಕೆಲವು ಶೂಟಿಂಗ್ ಹಂತದಲ್ಲಿ ನಿಂತರೆ, ಮತ್ತೆ ಕೆಲವು ಚಿತ್ರೀಕರಣ ಮುಗಿದರೂ ಪೋಸ್ಟ್ ಪ್ರೊಡಕ್ಷನ್‌ ಹಂತದಲ್ಲಿ ನಿಲ್ಲುತ್ತವೆ. ಇನ್ನೂ ಕೆಲವು ಪೋಸ್ಟ್ ಪ್ರೊಡಕ್ಷನ್ ಮುಗಿದರೂ ಬಿಡುಗಡೆಯ ಭಾಗ್ಯ ಕಾಣುವುದಿಲ್ಲ. ಚೆಂದನವನದ ಹಲವು ಸ್ಟಾರ್ ನಟರ ಸಿನಿಮಾಗಳು ಮುಹೂರ್ತ ಆಚರಿಸಿಕೊಂಡು ಅರ್ಧಕ್ಕೆ ನಿಂತಿವೆ. ಹೆಚ್ಚಿನ ಚಿತ್ರಗಳು ಬಜೆಟ್ ಕಾರಣಕ್ಕೆ ನಿಂತುಹೋದರೆ, ಇನ್ನು ಕೆಲವು ಕಾರಣಾಂತರಗಳಿಂದ ನಿಂತಿವೆ. ಇಲ್ಲಿ ಅಂತಹ ಸಿನಿಮಾಗಳ ಪಟ್ಟಿಯನ್ನು ನಿಡಲಾಗಿದೆ.


cover image
ಡಾ.ರಾಜ್‌ಕುಮಾರ್
1

ಕನ್ನಡದ ಕಣ್ಮಣಿ ವರನಟ ಡಾ.ರಾಜ್‌ಕುಮಾರ್ ಅವರ ಕನಸಿನ ಸಿನಿಮಾ 'ಭಕ್ತ ಅಂಬರೀಷ'. ಈ ಸಿನಿಮಾ ಮಾಡಬೇಕು ಅನ್ನೋದು ಅಣ್ಣಾವ್ರ ಬಹುದೊಡ್ಡ ಆಸೆಯಾಗಿತ್ತು. ಅದರಂತೆ ಈ ಸಿನಿಮಾಗೆ ಸರಳವಾಗಿ ಪೂಜೆ ಮಾಡಿ, ಈ ಚಿತ್ರದ ಹಾಡುಗಳ ರೆಕಾರ್ಡಿಂಗ್ ಕೂಡ ಶುರುವಾಗಿತ್ತು. ರೇಣುಕಾ ಶರ್ಮಾ ಅವರು ಈ ಚಿತ್ರದ ನಿರ್ದೇಶನದ ಹೊಣೆ ಹೊತ್ತಿದ್ದರು. ಆದರೆ, ಇದೇ ಸಂದರ್ಭ ವೀರಪ್ಪನ್‌ನಿಂದ ಅಣ್ಣಾವ್ರು ಕಿಡ್ನಾಪ್ ಆಗಿಬಿಟ್ಟರು. ನಂತರ ಕಾಡಿನಿಂದ ಬಂದ ಬಳಿಕ ಡಾ.ರಾಜ್‌ಕುಮಾರ್ ಕಾಲು ನೋವಿನಿಂದ ಬಳಲುತ್ತಿದ್ದರು.  ಹೀಗಾಗಿ, ಈ ಸಿನಿಮಾ ಕನಸಾಗಿಯೇ ಉಳಿದು ಹೋಗಿತ್ತು ಎಂದು ಪಾರ್ವತಮ್ಮ ಕೆಲ ಸಂದರ್ಶನಗಳಲ್ಲಿ ಹೇಳಿದ್ದರು.  


ವಿಷ್ಣುವರ್ಧನ್
2

1997ರಲ್ಲಿ ಸಾಹಸಿಂಹ ಡಾ.ವಿಷ್ಣುವರ್ಧನ್ ಅವರ ಬಹುಕೋಟಿ ವೆಚ್ಚದ ಸಿನಿಮಾವೊಂದು ಮುಹೂರ್ತದ ಬಳಿಕ ಅರ್ಧಕ್ಕೆ ನಿಂತುಹೋಯಿತು. ಈ ಚಿತ್ರವನ್ನು ಕಮಲ್ ಹಾಸನ್ ನಿರ್ದೇಶಿಸಲು ನಿರ್ಧರಿಸಿದ್ದರು. ಸಿನಿಮಾದ ಹೆಸರು 'ಮುರುಧನಾಯಗಂ '. ಈ ಚಿತ್ರದ ಮುಹೂರ್ತಕ್ಕೆ ಇಂಗ್ಲೆಂಡ್​​​​​​​ ರಾಣಿ ಎಲಿಜಿಬೆತ್ ಬಂದಿದ್ದರು ಎನ್ನುವುದು ಮತ್ತೊಂದು ವಿಶೇಷ. 18ನೇ ಶತಮಾನದ ಯೋಧ ಮಹಮ್ಮದ್ ಯುಸೂಫ್ ಖಾನ್ ಜೀವನವನ್ನು ಆಧಾರವಾಗಿಟ್ಟುಕೊಂಡು ಕಮಲ್ ಈ ಚಿತ್ರ ಮಾಡಲು ಹೊರಟ್ಟಿದ್ದರು. ಚಿತ್ರದಲ್ಲಿ ವಿಷ್ಣುದಾದಾ ವಜೀದ್ ಖಾನ್ ಎಂಬ ಮಹತ್ವದ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಬರೋಬ್ಬರಿ 85 ಕೋಟಿ ರೂಪಾಯಿ ವೆಚ್ಚದಲ್ಲಿ ಕಮಲ್ ಹಾಸನ್ ಈ ಚಿತ್ರವನ್ನು ನಿರ್ಮಾಣ ಮಾಡಲು ಮನಸ್ಸು ಮಾಡಿದ್ದರು. ಬಹುತೇಕ ಡಾ.ವಿಷ್ಣುವರ್ಧನ್ ಭಾಗದ ಶೂಟಿಂಗ್ ಕೂಡ ಮುಗಿದು ಹೋಗಿತ್ತು. ಆದರೆ, ಕಾರಣಾಂತಗಳಿಂದ ಮುರುಧನಾಯಗಂ ಸಿನಿಮಾ ನಿಂತುಹೋಗಿದೆ. 

ಶಿವ ರಾಜ್‌ಕುಮಾರ್
3

ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ ಅವರ ಹಲವು ಸಿನಿಮಾಗಳು ಅರ್ಧಕ್ಕೆ ನಿಂತಿವೆ. ಜಿಲ್ಲಾಧಿಕಾರಿ, ಕಲ್ಕಿ, ಗೆಳೆಯ ಗೆಳೆಯ, ದಂಗೆ ಹೀಗೆ ಸಾಕಷ್ಟು ಸಿನಿಮಾಗಳು ಮುಹೂರ್ತವಾಗಿ ಅರ್ಧಕ್ಕೆ ನಿಂತಿವೆ. ಓಂ ಪ್ರಕಾಶ್ ರಾವ್ ನಿರ್ದೇಶನದಲ್ಲಿ ಮೂಡಿಬರಬೇಕಿದ್ದ 'ಜಿಲ್ಲಾಧಿಕಾರಿ' ಸಿನಿಮಾಗೆ ಕಂಠೀರವ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ಮುಹೂರ್ತ ಮಾಡಲಾಗಿತ್ತು. ಆದರೆ, ಕಾರಣಾಂತರಗಳಿಂದ ಈ ಸಿನಿಮಾ ನಿಂತು ಹೋಯಿತು. ಇದರೊಂದಿಗೆ ನಿರ್ದೇಶಕ ನಾಗಾಭರಣ ಜೊತೆ 'ಗೆಳೆಯ ಗೆಳೆಯ' ಎಂಬ ಸಿನಿಮಾ ಮುಹೂರ್ತ ಮಾಡಲಾಗಿತ್ತು. ಆ ಸಿನಿಮಾ ಕೂಡ ಶೂಟಿಂಗ್ ಮಾಡಿ ಅರ್ಧಕ್ಕೆ ನಿಂತಿದೆ. 


ಪುನೀತ್ ರಾಜ್‌ಕುಮಾರ್
4

ಮಯೂರ ಅಂದಾಕ್ಷಣ ಡಾ.ರಾಜ್‌ಕುಮಾರ್ ಅಭಿನಯದ ಸಿನಿಮಾ ನೆನಪಾಗುತ್ತೆ.  ಆದರೆ, ಇದೇ ಟೈಟಲ್ ಹೆಸರಿನಲ್ಲಿ ಪುನೀತ್ ರಾಜ್​​​​​​​​​​ಕುಮಾರ್ ಸಿನಿಮಾವೊಂದು ಸೆಟ್ಟೇರಿತ್ತು ಅನ್ನೋದು ಅದೆಷ್ಟೋ ಜನರಿಗೆ ಗೊತ್ತಿಲ್ಲ. ತೆಲುಗು ನಿರ್ದೇಶಕ ಶೋಭನ್ ಎಂಬುವರು ಮಯೂರ ಅಂತಾ ಟೈಟಲ್ ಇಟ್ಟು, ಈ ಸಿನಿಮಾದ ಮುಹೂರ್ತವನ್ನು ಇಸ್ಕಾನ್ ದೇವಸ್ಥಾನದಲ್ಲಿ ಮಾಡಿದ್ದರು. ನಿರ್ಮಾಪಕ ಕನಕಪುರ ಶ್ರೀನಿವಾಸ್ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದರು. ಆದರೆ, ಈ ಸಿನಿಮಾ ಪೂಜೆ ಆಗಿ ಒಂದು ವಾರಕ್ಕೆ ನಿರ್ದೇಶಕ ಶೋಭನ್ ಸಾವನ್ನಪ್ಪಿದ ಕಾರಣ ಮಯೂರ ಸಿನಿಮಾ ನಿಂತು ಹೋಯಿತು. ಇದಲ್ಲದೆ 2021ರಲ್ಲಿ ಪುನೀತ್ ಅವರ ಅಕಾಲಿಕ ನಿಧನದಿಂದ ದ್ವಿತ್ವ, ಮಿಷನ್ ಕೊಲಂಬಸ್ ಸೇರಿದಂತೆ ಇನ್ನೂ ಕೆಲ ಸಿನಿಮಾಗಳು ಅರ್ಧಕ್ಕೆ ನಿಂತಿವೆ.  

ರವಿಚಂದ್ರನ್
5

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಕೆಲವೊಂದು ಸಿನಿಮಾಗಳು ಮುಹೂರ್ತ ಹಾಗೂ ಮತ್ತೆ ಕೆಲವು ಸಿನಿಮಾಗಳು ಶೂಟಿಂಗ್ ಆಗಿ ಅರ್ಧಕ್ಕೆ ನಿಂತಿವೆ. ಅದರಲ್ಲಿ 'ಮಂಜಿನ ಹನಿ ' ಕೂಡ ಒಂದು. 2015ರಲ್ಲಿ ಆರಂಭವಾಗಿದ್ದ ಮಂಜಿನ ಹನಿ ರವಿಚಂದ್ರನ್ ಅವರ ಕನಸಿನ ಸಿನಿಮಾವಾಗಿತ್ತು. ಈ ಚಿತ್ರದಲ್ಲಿ ಸುಮಾರು 9 ಶೇಡ್​​​ಗಳಲ್ಲಿ ಕಾಣಿಸಿಕೊಳ್ಳಲು ರೆಡಿಯಾಗಿದ್ದರು. ಚಿತ್ರವನ್ನು 9 ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಿ ಮಾಡಲು ನಿರ್ಧರಿಸಿದ್ದರು. ಆದರೆ, ಬಜೆಟ್ ಕಾರಣ ಚಿತ್ರ ಮುಂದುವರೆಯಲಿಲ್ಲ.  


ಸುದೀಪ್
6

ರೆಬಲ್ ಸ್ಟಾರ್ ಅಂಬರೀಷ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ 'ವೀರ ಪರಂಪರೆ' ಸಿನಿಮಾಗಿಂತಲೂ ಮೊದಲು 'ಬ್ರಹ್ಮ' ಎಂಬ ಸಿನಿಮಾದಲ್ಲಿ ನಟಿಸಬೇಕಿತ್ತು. ಕುಳ್ಳ ಶಾಂತಕುಮಾರ್ ಎಂದೇ ಹೆಸರಾದ ನಿರ್ಮಾಪಕ ಶಾಂತಕುಮಾರ್ ಬಹುಕೋಟಿ ರೂಪಾಯಿ ವೆಚ್ಚದಲ್ಲಿ ಚಿತ್ರವನ್ನು ಮಾಡಲು ಮುಂದಾಗಿದ್ದರು. ಓಂ ಪ್ರಕಾಶ್ ರಾವ್ ಬ್ರಹ್ಮ ಚಿತ್ರದ ನಿರ್ದೇಶನದ ಹೊಣೆ ಹೊತ್ತಿದ್ದರು. ಆದರೆ, ಬಜೆಟ್ ಹೆಚ್ಚಾದ ಕಾರಣ ಸಿನಿಮಾ ಅರ್ಧಕ್ಕೆ ನಿಂತುಹೋಯಿತು.  


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+