X
ಹೋಮ್ ಚಲನಚಿತ್ರಗಳ ಒಳನೋಟ

ಭಾರ್ಗವಿ LLB ಸೀರಿಯಲ್ ನಾಯಕನ ಕುರಿತ ಇಂಟರೆಸ್ಟಿಂಗ್ ವಿಷಯಗಳಿವು!

Author Sowmya Bairappa | Updated: Tuesday, April 1, 2025, 09:49 AM [IST]

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಭಾರ್ಗವಿ LLB' ಧಾರಾವಾಹಿ ಕಿರುತೆರೆ ವೀಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಸಾಮಾಜಿಕ ಸಂಘರ್ಷ ಮತ್ತು ಕೌಟುಂಬಿಕ ಕಥನ ಹೊಂದಿರುವ ಅತ್ಯಂಯತ ಶಕ್ತಿಶಾಲಿಯಾಗಿ ನಿರೂಪಿತವಾಗಿರುವ ಎಲ್ಲರೂ ನೋಡಲೇಬೇಕಾದ ಸೀರಿಯಲ್‌ ಇದು. ತನ್ನ ತಂದೆಯ ಘನತೆಯನ್ನು ಮರಳಿ ಗಳಿಸಲು ಕಾನೂನಿನ ಪ್ರಪಂಚದಲ್ಲಿ ಎಲ್ಲಾ ಅಡೆತಡೆಗಳನ್ನು ಮೀರಿ ಬಲಿಷ್ಠ ಪ್ರಭಾವಶಾಲಿಗಳ ವಿರುದ್ಧ ಹೋರಾಡುವ ಧೀರ ಯುವತಿಯ ಕಥೆ ಹೊಂದಿರುವ ಈ ಧಾರಾವಾಹಿ ನಾಯಕನ ಕುರಿತ ಇಂಟರೆಸ್ಟಿಂಗ್ ವಿಷಯಗಳು ಇಲ್ಲಿವೆ.


cover image
ಹೀರೋ ಯಾರು?
1

ಭಾರ್ಗವಿ LLB ಸೀರಿಯಲ್‌ನಲ್ಲಿ ನಾಯಕನಾಗಿ ಕಾಣಿಸಿಕೊಂಡಿರುವ ನಟನ ಹೆಸರು ಮನೋಜ್ ಕುಮಾರ್. ಮೂಲತಃ ಮಂಗಳೂರಿನವರಾದ ಮನೋಜ್, ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಮಲ್ಲಮ್ಮ ಟಾಕ್ಸ್ ಎಂಬ ಇನ್‌ಸ್ಟಾಗ್ರಾಮ್ ಪೇಜ್ ಮೂಲಕ ಹೆಚ್ಚು ಜನಪ್ರಿಯತೆ ಗಳಿಸಿದ್ದಾರೆ.

ಮೊದಲ ವೃತ್ತಿ
2

ಮನೋಜ್ ಕುಮಾರ್ ಫಾರ್ಮಟಿಕಲ್ ಸೈನ್ಸ್ ಮಾಡಿದ್ದು, ಆ ಕೆಲಸಕ್ಕೆ ಸ್ಟೈಲ್ ಮಾಡಿಕೊಂಡು ಹೋಗೋಕೆ ಆಗುತ್ತಿರಲಿಲ್ಲವಂತೆ. ಮನೋಜ್ ಸ್ಟೈಲ್ ನೋಡಿ ಇವನೇನು ಹೀಗೆ ಬರ್ತಾನೆ ಎಂದೆಲ್ಲಾ ಹಲವರು ಕಾಮೆಂಟ್ ಮಾಡುತ್ತಿದ್ದರಂತೆ. ಹೀಗಾಗಿಯೇ ಆ ಕೆಲಸ ತೊರೆದು ನಟನೆಯುತ್ತ ಮನೋಜ್ ಮುಖ ಮಾಡಿದ್ದರಂತೆ.

ತೆಲುಗು ಧಾರಾವಾಹಿ
3

ತೆಲುಗಿನ ಕಾರ್ತಿಕ ದೀಪಂ ಮತ್ತು ಮೌನ ಪೋರಾಟಂ ಧಾರಾವಾಹಿಗಳಲ್ಲಿ ಅಭಿನಯಿಸಿ ತೆಲುಗು ಪ್ರೇಕ್ಷಕರಿಗೆ ಹತ್ತಿರುವಾಗಿರುವ ಮನೋಜ್ ಕುಮಾರ್, ಸೋಶಿಯಲ್ ಮೀಡಿಯಾದಲ್ಲೂ ರೀಲ್‌ಗಳ ಮೂಲಕ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಈ ಮೊದಲು ಕನ್ನಡದಲ್ಲಿ ಯಾಕೆ ನಟಿಸಿಲ್ಲ,  ಜೊತೆಗೆ ರೀಲ್ ಮತ್ತು ರಿಯಲ್ ಲೈಫ್‌ಗಳ ಲವ್‌ಸ್ಟೋರಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

ಮೊದಲ ಕನ್ನಡ ಸೀರಿಯಲ್
4

ಮನೋಜ್ ಕುಮಾರ್ ಅವರಿಗೆ 'ಭಾರ್ಗವಿ LLB' ಮೊದಲ ಕನ್ನಡ ಸೀರಿಯಲ್. ಇದರಲ್ಲಿ ತನ್ನ ತಂದೆಯ ಶತ್ರು ತನಗೂ ಶತ್ರು ಎಂದು ಭಾವಿಸಿರುವ ನಾಯಕ  ಅರ್ಜುನ್ ಪಾಟೀಲ್, ಅರಿವಿಲ್ಲದೇ ತನ್ನ ತಂದೆಯ ವಿರುದ್ಧ ಕೋರ್ಟ್‌ನಲ್ಲಿ ವಾದ ಮಾಡಲು ಮುಂದಾಗಿರುವ ನಾಯಕಿ ಭಾರ್ಗವಿಯ ಪ್ರೀತಿಯಲ್ಲಿ ಬಿದ್ದಿದ್ದಾನೆ. ಹೀಗಿರುವ ಇವರಿಬ್ಬರ ಕಥೆಯಲ್ಲಿ ಏನೆಲ್ಲಾ ಬದಲಾವಣೆ ಹಾಗೂ ಟ್ವಿಸ್ಟ್‌ಗಳು ಎದುರಾಗಲಿವೆ ಎಂಬುದು ಕಾದುನೋಡಬೇಕಿದೆ.

ಬ್ರೇಕಪ್
5

ಸದ್ಯ ಧಾರಾವಾಹಿಯಲ್ಲಿ ಭಾರ್ಗವಿಗೆ ಪ್ರೀತಿಯ ಕಾಟ ಕೊಡಲು ಹೊರಟಿರುವ ಮನೋಜ್‌ಗೆ ರಿಯಲ್‌ ಲೈಫ್‌ನಲ್ಲಿ ಬ್ರೇಕಪ್ ಆಗಿದೆ ಅಂತೆ. ಸದ್ಯ ಸಿಂಗಲ್ ಆಗಿರುವ ನಟ ಮನೋಜ್, ತಮ್ಮ ಕರಿಯರ್ ಬಿಲ್ಡ್ ಮಾಡುವ ಆಲೋಚನೆಯಲ್ಲಿದ್ದಾರೆ.  ಭಾರ್ಗವಿ LLB ಧಾರಾವಾಹಿಯಲ್ಲಿ ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿ ಪಾತ್ರದ ಮೂಲಕ ಗಮನ ಸೆಳೆದಿದ್ದ ರಾಧಾ ಭಗವತಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ನಾಯಕಿಯ ತಾಯಿಯಾಗಿ ಹಿರಿಯ ನಟಿ ಅರುಣ ಬಾಲರಾಜ್ ಹಾಗೂ ತಂದೆಯಾಗಿ ಹನುಮಂತೇ ಗೌಡ ಕಾಣಿಸಿಕೊಂಡಿದ್ದಾರೆ. ಲಕ್ಷಣ ಸೀರಿಯಲ್‌ನಲ್ಲಿ ಚಂದ್ರಶೇಖರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟ ಕೀರ್ತಿ ಭಾನು ಇದರಲ್ಲಿ ಹಿರಿಯ ವಕೀಲರಾಗಿ ಕಾಣಸಿಕೊಂಡಿದ್ದಾರೆ.




Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+