X
ಹೋಮ್ ಚಲನಚಿತ್ರಗಳ ಒಳನೋಟ

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸುತ್ತಿರುವ ಸಿಂಧೂರ ಲಕ್ಷ್ಮಣ' ಯಾರು ಗೊತ್ತಾ? ಇಲ್ಲಿದೆ ಮಾಹಿತಿ

Author Sowmya Bairappa | Published: Saturday, February 17, 2024, 10:51 AM [IST]

ರಾಬರ್ಟ್ ಸಿನಿಮಾ ಯಶಸ್ಸಿನ ಬೆನ್ನಲ್ಲೇ ತರುಣ್ ಸುಧೀರ್ ಹಾಗೂ ದರ್ಶನ್ ಕಾಂಬಿನೇಷನ್‌ನಲ್ಲಿ ಬರಬೇಕಿದ್ದ ಚಿತ್ರ 'ಸಿಂಧೂರ ಲಕ್ಷ್ಮಣ'. ಸ್ವಾತಂತ್ರ್ಯ ಹೋರಾಟಗಾರರಾದ ಸಿಂಧೂರ ಲಕ್ಷ್ಮಣ ಅವರ ಜೀವನನ್ನಾಧರಿಸಿ ಸಿನಿಮಾ ಮಾಡಲು ನಿರ್ಧರಿಸಿ, ತರುಣ್ ಕಥೆಗಾಗಿ ಸಾಕಷ್ಟು ರೀಸರ್ಚ್ ಕೂಡ ಮಾಡಿದ್ದರು. ಚಾಲೆಂಜಿಂಗ್ ಸ್ಟಾರ್ ಕೂಡ ಈ ಸಿನಿಮಾದಲ್ಲಿ ನಟಿಸಲು ಉತ್ಸುಕರಾಗಿದ್ರು. ಆದರೆ, ಕಾರಣಾಂತರಗಳಿಂದ ಇದು ಮುಂದುವರೆದಿರಲಿಲ್ಲ. ಆದ್ರೀಗ ಈ ಸಿನಿಮಾ ಮಾಡುವುದಾಗಿ ತರುಣ್ ಸುಧೀರ್ ಘೋಷಿಸಿದ್ದಾರೆ. ಇಲ್ಲಿ ಸಿಂಧೂರ ಲಕ್ಷ್ಮಣನ ಕುರಿತು ಸಿನಿಮಾಗೆ ಗೊತ್ತಿರದ ವಿಷಯಗಳ ಪಟ್ಟಿ ಮಾಡಲಾಗಿದೆ.


cover image
ಸಿಂಧೂರ ಲಕ್ಷ್ಮಣ ಯಾರು?

ಸಿಂಧೂರ ಲಕ್ಷ್ಮಣ ಮೂಲತಃ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ತ ತಾಲೂಕಿನ ಸಿಂಧೂರ ಗ್ರಾಮದವರು. ಇವರು ೧೮೯೮ರಲ್ಲಿ ಸಾಬಣ್ಣ ಹಾಗೂ ನರಸ್ವ ಎಂಬ ದಂಪತಿಗೆ ಜನಿಸಿದರು. ಬಾಲ್ಯದಿಂದಲೇ ಶೌರ್ಯಕ್ಕೆ ಹೆಸರಾಗಿದ್ದ ಸಿಂಧೂರ ಲಕ್ಷ್ಮಣ, ಸ್ವಾತಂತ್ರ್ಯ ಹೋರಾಟದಲ್ಲು ತೊಡಗಿಕೊಂಡಿದ್ದ ಆತನ ಸೋದರ ಮಾವಂದಿರಿಬ್ಬರು ಒಮ್ಮ ಬ್ರಿಟಿಷರಿಂದ ತಪ್ಪಿಸಿಕೊಂಡು ಆಶ್ರಯ ಕೇಳಲು ಆತನ ಮನೆಗೆ ಬಂದಿದ್ದರು. ಈ ವಿಚಾರ ತಿಳಿದ ಆಂಗ್ಲರು ಲಕ್ಷ್ಮಣನ ಮನೆಗೆ ಮುತ್ತಿಗೆ ಹಾಕಿ, ಇಬ್ಬರು ಮಾವಂದಿರ ಜೊತೆಗೆ ಯಾವ ತಪ್ಪೂ ಮಾಡದ ಲಕ್ಷ್ಣನನ್ನು ಬಂಧಿಸಿ, ಜೈಲಿಗೆ ಹಾಕಿದರು. ಇದು ಆತನನ್ನು ಕೆರಳಿಸಿತ್ತು.   

ಬಡವರ ಬಂಧು

ಇದೇ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿ ಅವರು ಅಸಹಕಾರ ಚಳುವಳಿಗೆ ಕರೆ ಕೊಟ್ಟಿದ್ದರು. ಈ ವೇಳೆ ಕರ್ನಾಟಕದ ಜಮಖಂಡಿ ಹಾಗೂ ಬೀಳಗಿಯ ಗುಡ್ಡಗಳನ್ನೇ ತನ್ನ ಅಡಗು ತಾಣಗಳನ್ನು ಮಾಡಿಕೊಂಡಿದ್ದ ಲಕ್ಷ್ನಣ, ಬ್ರಿಟಿಷರ ವಿರುದ್ಧ ಸಮರ ಸಾರಿ ಅವರು ತೆರಿಗೆ ಸಂಗ್ರಹಿಸಿಟ್ಟಿದ್ದ ಖಜಾನೆಗಳು, ಗೋದಾಮು, ಆಂಗ್ಲರಿಗೆ ಸಹಕಾರ ನೀಡ್ತಿದ್ದ ಶ್ರೀಮಂತರ ಮನೆಗಳನ್ನ ಲೂಟಿ ಮಾಡಿ ಆ ಹಣವನ್ನೆಲ್ಲಾ ಮಹಾರಾಷ್ಟ್ರದ ಸಾಂಗಲಿ, ಅಂದಿನ ವಿಜಯಪುರ ಜಿಲ್ಲೆಯ ಬೀಳಗಿ, ಜಮಖಂಡಿ ತಾಳೂಕಿನಲ್ಲಿದ್ದ ಬಡವರಿಗೆ ನೀಡುತ್ತಿದ್ದರು. 

ಮೋಸದಿಂದ ಕೊಂದ ಬ್ರಿಟಿಷರು

ಸಿಂಧೂರ ಲಕ್ಷ್ಮಣ ಏಳಡಿ ಎತ್ತರದ ಅಜಾನುಬಾಹುವಾಗಿದ್ದರು. ಹೀಗಾಗಿ, ೧೦ ಅಡಿ ಎತ್ತರವಿರುವ ಗೋಡೆಗಳನ್ನು ಲೀಲಾಜಾಲವಾಗಿ ಹಾರಿಬಿಡುವ ಸಾಮರ್ಥ್ಯ ಹೊಂದಿದ್ರು. ಬ್ರಿಟಿಷ್ ಅಧಿಕಾರಿಯೊಬ್ಬ ಈತನ ಗುಂಡು ಹಾರಿಸಲು ಬಂದಾಗ, ಅವನನ್ನು ಅನಾಮತ್ತಾಗಿ ಎತ್ತಿ ಗೋಡೆಗೆ ಬಿಸಾಕಿ ಕೊಂದಿದ್ದರು. ಜೊತೆಗೆ ತಮ್ಮೊಡನೆ ಹತ್ತಾರು ಚಿಕ್ಕ ಬೆಂಬಲಿಗರ ಪಡೆಯನ್ನು ಕಟ್ಟಿಕೊಂಡಿದ್ರು. ಹೀಗಾಗಿ ಅವರನ್ನು ನೇರವಾಗಿ ಎದುರಿಸುವುದು ಅಸಾಧ್ಯ ಅಂತ ತಿಳಿದ ಬ್ರಿಟಿಷರು, ಸಿಂಧೂರ ಲಕ್ಷ್ಮಣನ ನಿಕಟವರ್ತಿಯಾಗಿದ್ದ ಬೀಳಗಿಯ ವೆಂಕಪ್ಪಗೌಡನನ್ನು ಬಂಧಿಸಿ, ಚಿತ್ರಹಿಂಸೆ ನೀಡಿ ಆತನಿಂದ ಮಾಹಿತಿ ಪಡೆದರು. ನಂತರ ಸಂಚು ರೂಪಿಸಿ, ಬೀಳಗಿ ತಾಲ್ಲೂಕಿನ ಕಪ್ಪರ ದೇವಾಲಯದಲ್ಲಿ ನಡೆದ ಕಾಳಗದಲ್ಲಿ ಮರೆಯಲ್ಲಿ ನಿಂತು ಮೋಸದಿಂದ ಗುಂಡಿಟ್ಟು ಕೊಂದರು. ಆಗಿನ್ನು ಸಿಂಧೂರ ಲಕ್ಷ್ಮಣನಿಗೆ ಕೇವಲ ೨೪ನೇ ವಯಸ್ಸಾಗಿತ್ತು.

'ಸಿಂಧೂರ ಲಕ್ಷ್ಮಣ' ಹೋರಾಟ ನೆನೆದು ರೋಮಾಂಚನ

ಮುಂಬೈ ಕರ್ನಾಟಕ ಹಾಗೂ ಉತ್ತರ ಕನಾಟಕ ಭಾಗಗಳಲ್ಲಿ 'ಸಿಂಧೂರ ಲಕ್ಷ್ಮಣ' ಹೋರಾಟ ನೆನೆದು ರೋಮಾಂಚನಗೊಳುತ್ತಾರೆ. ಸ್ವಾತಂತ್ರ್ಯಕ್ಕಾಗಿ ತಮ್ಮ ರೀತಿಯಲ್ಲಿ ಹೋರಾಟ ಮಾಡಿದ್ದ ವೀರರಲ್ಲಿ ಸಿಂಧೂರು ಲಕ್ಷ್ಮಣ ಕೂಡ ಓರ್ವರು. ಮಹಾತ್ಮ ಗಾಂಧೀಜಿಯ ಅಸಹಕಾರ ಚಳುವಳಿ ಕರೆಗೆ ಓಗೊಟ್ಟು ಬ್ರಿಟಿಷರ ವಿರುದ್ಧ ತಿರುಗಿ ಬಿದ್ದಿದ್ದ ಅಪ್ರತಿಮ ವೀರ. ಹೀಗಾಗಿ, ಉತ್ತರ ಕರ್ನಾಟಕದ ಜನರ ಪಾಲಿಗೆ 'ಸಿಂಧೂರ ಲಕ್ಷ್ಮಣ' ದೇವರ ಸಮಾನ. ಈತನ ಚರಿತ್ರೆಯೇ ಈಗ ಸಿನಿಮಾ ರೂಪ ಪಡೆಯಲು ಮುಂದಾಗಿದೆ.

ಕನ್ನಡ ಮಾತನಾಡುವ  ಲಕ್ಷ್ಮಣನ ಮನೆತನದವರು

ಕರ್ನಾಟಕ ಏಕೀಕರಣಕ್ಕೂ ಮುನ್ನ ಸಿಂಧೂರ ಕರ್ನಾಟಕದಲ್ಲೇ ಇತ್ತು. ಆದ್ರೀಗ ಅದು ಮಹಾರಾಷ್ಟ್ರದ ಪಾಲಾಗಿದೆ. ಆದರೆ, ಸಿಂಧೂರ ಲಕ್ಷ್ಮನ ಮನೆತನದವರು ಇನ್ನೂ ಇದೇ ಊರಿನಲ್ಲಿಯೇ ಇದ್ದಾರೆ. ಅವರೆಲ್ಲರೂ ಕೂಡ ಕನ್ನಡದಲ್ಲೇ ಮಾತನಾಡ್ತಾರೆ ಅಂತ ವರದಿಯಿದೆ. ಆದರೆ, ಈ ಬಗ್ಗೆ ಖಚಿತ ಮಾಹಿತಿ ಇಲ್ಲ.  

ಸಿನಿಮಾವಾಗಲಿದೆ ಸಿಂಧೂರ ಲಕ್ಷ್ಮಣನ ಸಾಹಸಗಾಥೆ

ಚಾಲೆಂಜಿಂಗ್ ಸಸ್ಟಾರ್ ದರ್ಶನ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸಿನಿಮಾವೊಂದು ಅನೌನ್ಸ್ ಆಗಿದೆ. ಸ್ವಾತಂತ್ರ್ಯ ಹೋರಾಟಗಾರರಾದ ವೀರ ಸಿಂಧೂರ ಲಕ್ಷ್ಮಣ ಅವರ ಜೀವನನ್ನಾಧರಿಸಿ ಸಿನಿಮಾ ಇದಾಗಿದೆ. ಚಿತ್ರದಲ್ಲಿ  ಚಾಲೆಂಜಿಂಗ್ ಸ್ಟಾರ್ ದರ್ಶನ್ ಕ್ರಾಂತಿ ಪುರುಷ ವೀರ ಸಿಂಧೂರ ಲಕ್ಷ್ಮಣನಾಗಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾವ್ನು ತರುಣ್ ಸುಧೀರ್ ನಿರ್ದೇಶನ ಮಾಡುತ್ತಿದ್ದು, ಯಜಮಾನ ಮತ್ತು ಕ್ರಾಂತಿಯಂತಹ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಶೈಲಜಾ ನಾಗ್ ಮತ್ತು ಬಿ. ಸುರೇಶ್ ಇದೇ ಮೊದಲ ಬಾರಿಗೆ ಐತಿಹಾಸಿಕ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ನಿರ್ದೇಶನ ಇರಲಿದೆ. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+