X
ಹೋಮ್ ಚಲನಚಿತ್ರಗಳ ಒಳನೋಟ

ಸ್ಯಾಂಡಲ್‌ವುಡ್‌ಗೆ 'ಕನ್ನಡದ ಕುಳ್ಳ' ದ್ವಾರಕೀಶ್ ಪರಿಚಯಿಸಿದ 7 ನಟ-ನಟಿಯರಿವರು!

Author Sowmya Bairappa | Published: Friday, April 19, 2024, 11:28 AM [IST]

'ಕನ್ನಡದ ಕುಳ್ಳ' ಅಂತಲೇ ಖ್ಯಾತಿ ಗಳಿಸಿದ್ದ ದ್ವಾರಕೀಶ್ ಇಂದು ನಮ್ಮೊಂದಿಗಿಲ್ಲ. ಆದರೆ, ಚಂದನವನಕ್ಕೆ ಅವರ ಕೊಡುಗೆ ಅಪಾರ. ಕನ್ನಡ ಚಿತ್ರರಂಗಕ್ಕೆ ಹಲವು ಹಿಟ್ ಸಿನಿಮಾಗಳನ್ನು ನೀಡಿರುವ ಅವರು, ಹಲವು ಪ್ರಯೋಗಳನ್ನು ಮಾಡಿದ್ದರು. ಜೊತೆಗೆ ಸ್ಯಾಂಡಲ್‌ವುಡ್‌ಗೆ ಹಲವು ಕಲಾವಿದರನ್ನು ಪರಿಚಯಿಸಿ, ಬ್ರೇಕ್ ಕೊಟ್ಟಿದ್ದಾರೆ. ಇಲ್ಲಿ ಆ ನಟ-ನಟಿಯರು ಯಾರು ಎಂಬ ಮಾಹಿತಿಯನ್ನು ನೀಡಲಾಗಿದೆ.


cover image
ವಿನೋದ ರಾಜ್

ಡ್ಯಾನ್ಸ್ ರಾಜ ಡ್ಯಾನ್ಸ್ ಸಿನಿಮಾ ಮೂಲಕ ಲೀಲಾವತಿ ಪುತ್ರ ವಿನೋದ್ ರಾಜ್ ಅವರನ್ನು  ಸ್ಯಾಂಡಲ್‌ವುಡ್‌ಗೆ ಪರಿಚಯಿಸಿದ್ದು ದ್ವಾರಕೀಶ್. ನಂತರ ತಮ್ಮ ಡ್ಯಾನ್ಸಿಂಗ್ ಸ್ಟೈಲ್‌ನಿಂದ ಸ್ಟಾರ್ ಪಟ್ಟಕ್ಕೇರಿದ ವಿನೋದ್, ನಂತರ ಕೃಷ್ಣ ನೀ ಕುಣಿದಾಗ, ನಂಜುಂಡ, ಸ್ನೇಹಲೋಕ, ಮಹಾಭಾರತ, ವಂದೇ ಮಾತರಂ, ಓಂ ಶಕ್ತಿ, ಗಿಳಿ ಬೇಟೆ, ಕನ್ನಡದ ಕಂದ ಹೀಗೆ 26ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ಕನ್ನಡಿಗರ ಮನಗೆದ್ದಿದ್ದರು. ಸದ್ಯ ಅವರು ಸಿನಿಮಾರಂಗದಿಂದ ಬಹಳ ದೂರ ಉಳಿದಿದ್ದಾರೆ. 


ಶೃತಿ

ನಟಿ ಶ್ರುತಿ ಅವರನ್ನು ಬಣ್ಣದ ಲೋಕಕ್ಕೆ ಪರಿಚಯಿಸಿದ್ದು ದ್ವಾರಕೀಶ್. ಅವರ ಮೂಲಕ ಹೆಸರು ಗಿರಿಜಾ ಆಗಿತ್ತು. ದ್ವಾರಕೀಶ್ ಅವರಿಗೆ 'ಶ್ರುತಿ' ಅಂತ ಹೆಸರಿಟ್ಟು 'ಶೃತಿ' ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು. ಇತ್ತೀಚೆಗೆ ದ್ವಾರಕೀಶ್ ಬಗ್ಗೆ ಮಾತನಾಡಿದ್ದ ಶ್ರುತಿ, ಸಿನಿಮಾ ಹೆಸರೊಂದು, ನಿನ್ನ ಹೆಸರೊಂದು ಇದ್ದರೆ ಚೆನ್ನಾಗಿರಲ್ಲ ಮರಿ' ಅಂತ ಹೇಳಿ ಸಿನಿಮಾ ಟೈಟಲ್ ಹೆಸರನ್ನೇ ನನಗೆ ನಾಮಕರಣ ಮಾಡಿದರು. ಹೀಗೆ ಗಿರಿಜಾ ಹೆಸರಿನಲ್ಲಿ ಚಿತ್ರರಂಗಕ್ಕೆ ಬಂದು ಶ್ರುತಿ ಅಂತ ಮನೆಮಾತಾಗಲು ದ್ವಾರಕೀಶ್ ಕಾರಣರಾದ್ರು. ಅವರ ಗರಡಿಯಲ್ಲಿ ಪಳಗುವ ಅವಕಾಶ ಸಿಕ್ಕಿದ್ದು ನನಗೆ ದೇವರು ಕೊಟ್ಟ ವರ. ನಾನು ಅವರನ್ನು ಅಣ್ಣ ಅಂತ ಕರೀತಿದ್ದೆ ಎಂದಿದ್ದರು. 

ಸುನೀಲ್

ಕನ್ನಡ ಚಿತ್ರರಂಗ ಕಂಡ ಸ್ಪುರದ್ರೂಪಿ ನಟ ಸುನೀಲ್. 90ರ ದಶಕದಲ್ಲಿ ಅವರು ಚಾಕೋಲೇಟ್ ಹೀರೋ ಎಂದೇ ಖ್ಯಾತಿ ಪಡೆದಿದ್ದರು. 'ಶ್ರುತಿ' ಸಿನಿಮಾ ಮೂಲಕ ಸುನೀಲ್‌ಗೆ ಬ್ರೇಕ್ ಕೊಟ್ಟಿದ್ದು ದ್ವಾರಕೀಶ್ ಅವರು. ತಮ್ಮ ಚುರುಕು ಅಭಿನಯದಿಂದ ಕನ್ನಡದಲ್ಲಿ ಸಂಚಲನ ಮೂಡಿಸಿದ್ದ ಸುನೀಲ್, 1994 ಜುಲೈ 24ರಂದು ನಿರ್ಮಾಪಕ ಸಚಿನ್ ಮಲ್ಯ ಮತ್ತು ನಟಿ ಮಾಲಾಶ್ರೀಯವರೊಂದಿಗೆ ಬಾಗಲಕೋಟೆಯಿಂದ ಬೆಂಗಳೂರಿಗೆ ಕಾರಿನಲ್ಲಿ ಬರುವಾಗ ಅಪಘಾತದಲ್ಲಿ ನಿಧನರಾದರು. ಮಾಲಾಶ್ರೀ ಪವಾಡ ಸದೃಶವಾಗಿ ಬದುಕುಳಿದಿದ್ದರು.

ಸಿದ್ದಲಿಂಗಯ್ಯ

ಬಂಗಾರದ ಮನುಷ್ಯ, ಭೂತಯ್ಯನ ಮಗ ಅಯ್ಯ, ನ್ಯಾಯವೇ ದೇವರು ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿದ್ದ ಸಿದ್ದಲಿಂಗಯ್ಯ ಅವರಿಗೆ ಸ್ವತಂತ್ರ ನಿರ್ದೇಶಕರಾಗಲು ಅವಕಾಶ್ ನೀಡಿದ್ದು ದ್ವಾರಕೀಶ್ ಅವರು. ಅದು ಡಾ.ರಾಜ್‌ಕುಮಾರ್ ಅಭಿನಯದ ಮೇಯರ್ ಮುತ್ತಣ್ಣ ಸಿನಿಮಾ ಮೂಲಕ. 


ಹರ್ಷವರ್ಧನ್ & ಚರಣ್ ರಾಜ್

ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಜೊತೆಗೆ ಮನಸ್ತಾಪ ಮೂಡಿದಾಗ 'ಗೌರಿ ಕಲ್ಯಾಣ' ಸಿನಿಮಾ ಮೂಲಕ ನಟ ಹರ್ಷವರ್ಧನ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದವರು ನಟ ದ್ವಾರಕೀಶ್. ಜೊತೆಗೆ ಭಾಗ್ಯವಂತ ಸಿನಿಮಾಗೆ ಭಾರ್ಗವ ಅವರು ನಿರ್ದೇಶನ ಮಾಡಲು ಕಾರಣ ದ್ವಾರಕೀಶ್. ಚರಣ್ ರಾಜ್ ಅವರ ವೃತ್ತಿ ಬದುಕಿಗೂ ಬಿಗ್‌ ಬೂಸ್ಟ್ ಕೊಟ್ಟವರು ದ್ವಾರಕೀಶ್. 


ಭವ್ಯ

80ರ ದಶಕದಲ್ಲಿ ತಮ್ಮ ಅದ್ಭುತ ಅಭಿನಯದ ಮೂಲಕ ಸಿನಿಮಾರಂಗದಲ್ಲಿ ವಿಶೇಷ ಛಾಪು ಮೂಡಿಸಿದ ನಟಿಯರ ಪೈಕಿ ಭವ್ಯ ಕೂಡ ಒಬ್ಬರು. ವಿಷ್ಣುವರ್ಧನ್, ಶಂಕರ್‌ ನಾಗ್, ಅಂಬರೀಶ್, ಅನಂತ್‌ ನಾಗ್ ಹೀಗೆ ದೊಡ್ಡ ದೊಡ್ಡ ನಟರೊಂದಿಗೆ ತೆರೆ ಹಂಚಿಕೊಂಡಿರುವ ಈ ನಟಿಯ ವೃತ್ತಿ ಜೀವನಕ್ಕೆ 'ನೀ ಬರೆದ ಕಾದಂಬರಿ' ಸಿನಿಮಾ ಮೂಲಕ ಬ್ರೇಕ್ ಕೊಟ್ಟವರು ದ್ವಾರಕೀಶ್ ಅವರು. 


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+