ಬುಧವಾರದ ಎಪಿಸೋಡ್ನಲ್ಲಿ ಬಿಗ್ಬಾಸ್ ಮನೆಯಲ್ಲಿ ನಡೆದ ಕಹಿ ಘಟನೆಗಳನ್ನು ಮರೆತು ಎಲ್ಲರೂ ಪರಸ್ಪರ ಒಂದಾಗಿದ್ದಾರೆ. ಮನೆಯಿಂದ ಹೊರಹೋಗುವ ಕೆಲ ದಿನಗಳ ಮುಂಚೆ ಎಲ್ಲರೂ ಮತ್ತೆ ಸ್ನೇಹಿತರಾಗಿ ಬೆರೆತಿದ್ದಾರೆ. ಕಾರ್ತಿಕ್ ಮತ್ತು ಸಂಗೀತಾ ಭಿನ್ನಾಭಿಪ್ರಾಯಗಳನ್ನು ಮರೆತು ಅಪ್ಪಿಕೊಂಡಿದ್ದಾರೆ. ಇಬ್ಬರೂ ಪರಸ್ಪರ ಉಡುಗೊರೆಯನ್ನೂ ಕೊಟ್ಟುಕೊಂಡಿದ್ದಾರೆ. ವಿನಯ್ ಕೂಡ ಮಂಡಿಯೂರಿ ಕ್ಷಮೆ ಕೇಳಿದ್ದಾರೆ.