X
ಹೋಮ್ ಚಲನಚಿತ್ರಗಳ ಒಳನೋಟ

Yuva Movie: ಯುವ ಸಿನಿಮಾ ಕಥೆ, ಕಲಾವಿದರ ಅಭಿನಯ, ರೇಟಿಂಗ್ಸ್ ಸೇರಿದಂತೆ ಇತರ ಮಾಹಿತಿ ಇಲ್ಲಿದೆ.

Author Sowmya Bairappa | Updated: Saturday, March 30, 2024, 10:48 AM [IST]

ಅಣ್ಣಾವ್ರ ಮೊಮ್ಮಗ ಯುವ ರಾಜ್‌ಕುಮಾರ್ ತಮ್ಮ ಚೊಚ್ಚಲ ಸಿನಿಮಾ 'ಯುವ' ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಉತ್ತರಾಧಿಕಾರಿ ಅಂತಲೇ ಬಿಂಬಿತವಾಗಿರುವ ಯುವ ರಾಜ್‌ಕುಮಾರ್‌ ಅವರಿಗೆ ಅಪ್ಪು ಅಭಿಮಾನಿಗಳು ದೊಡ್ಡ ಮಟ್ಟದ ಬೆಂಬಲ ನೀಡುತ್ತಿದ್ದಾರೆ. ಯುವ ಸಿನಿಮಾ ಮೂಲಕ ಪುನೀತ್ ಅಗಲಿಕೆ ಬಳಿಕ ಯುವ ಅವರನ್ನು ಅವರ ಸ್ಥಾನದಲ್ಲಿ ನೋಡಬೇಕೆಂಬುದು ಅಭಿಮಾನಿಗಳ ಬಯಕೆ ಈಡೇರಿದೆ. ಇಲ್ಲಿ ಯುವ ಸಿನಿಮಾ ಕಥೆ, ಕಲಾವಿದರ ಅಭಿನಯ, ರೇಟಿಂಗ್ಸ್, ನಿರ್ದೇಶನ ಸೇರಿದಂತೆ ಇತರ ಮಾಹಿತಿ ನೀಡಲಾಗಿದೆ.


cover image

ಮಂಗಳೂರಿನ ಕಾಲೇಜೊಂದರಲ್ಲಿ ಲೋಕಲ್ ಹುಡುಗರು ತಾವೇ ಮೇಲು ಎಂಬ ಭಾವನೆಯಲ್ಲಿ ಮೆರೆಯುತ್ತಿರುತ್ತಾರೆ. ಉಳಿದ ಹಾಸ್ಟೆಲ್ ಹುಡುಗರಿಗೆ ತಾವು ಹೊರಗಿನವರು ಎಂಬ ಅಳುಕಿರುತ್ತದೆ. ಈ ಕಾರಣಕ್ಕರ ಲೋಕಲ್ ಸಹವಾಸವೇ ಬೇಡ ಎಂಬಂತಿರುತ್ತಾರೆ. ಆದರೆ, ಯುವ ಹಾಗಲ್ಲ. ಆತನ ಬೈಕ್ ಟಚ್ ಮಾಡಿದ ಲೋಕಲ್ ಹುಡುಗರ ಕೈ-ಕಾಲು ಮುರಿಯುತ್ತಾನೆ. ಇದು ನಂತರ ಗ್ಯಾಂಗ್ ವಾರ್ ಆಗಿ ಬದಲಾಗುತ್ತದೆ. ಇದರ ನಡುವೆ ಮೊದಲ ಪ್ರೇಮದ ಅನುರಾಗ ಇದೆ. ಹುಸಿ ಮುನಿಸು ಹಾಗೂ ಕೋಪವೂ ಇದೆ. ಸಿನಿಮಾದ ಮೊದಲಾರ್ಧ ಬಡೆದಾಟದಲ್ಲಿಯೇ ಮುಗಿದು ಹೋಗುತ್ತೆ. ಆದರೆ, ಚಿತ್ರದ 'ಮಧ್ಯಂತರ'ದ ಸಮಯದಲ್ಲಿ ಸಂತೋಷ್ ಆನಂದ್ ರಾಮ್ ಎಲ್ಲ ಲೆಕ್ಕಾಚಾರ ತಲೆ ಕೆಳಗಾಗಿಸುತ್ತಾರೆ. ಭಾವನಾತ್ಮಕವಾದ ಮೆರವಣಿಗೆಗೆ ಸಿದ್ಧವಾಗಿ ಕುಳಿತುಕೊಳ್ಳುವಂತೆ ಸೂಚನೆಯನ್ನ ಕೊಡ್ತಾರೆ. ಮೊದಲ ಭಾಗದಲ್ಲಿ ಮಾತು ಮಾತಿಗೂ ಸಿಡುಕುವ ಯುವ ನಂತರ ಏಕೆ ಬದಲಾಗುತ್ತಾನೆ? ಶಿಕ್ಷಣ ಮುಗಿಸಿ ಮನೆಗೆ ಬರುವ ಅವನಿಗೆ ಕಾದಿರುವ ಶಾಕ್ ಏನು?  ದ್ವಿತಿಯಾರ್ಧದಲ್ಲಿ ಆತನ ಬದುಕು ಹೇಗೆ ಬದಲಾಗುತ್ತದೆ ಎಂಬುದೇ ಸಿನಿಮಾ ಕಥೆ.

ಯುವ ರಾಜ್‌ಕುಮಾರ್ ಸಿನಿಮಾದಲ್ಲಿ ನಟಿಸುವುದು ಅಂತ ನಿರ್ಧಾರವಾಗುತ್ತಿದ್ದಂತೆ, ನಟನೆ, ಡ್ಯಾನ್ಸ್, ಸಾಹಸ ಸೇರಿದಂತೆ ಪ್ರತಿಯೊಂದು ವಿಭಾಗದಲ್ಲೂ ತರಬೇತಿ ಪಡೆದಿದ್ದರು. ಶ್ರದ್ಧೆ ಹಾಗೂ ಭಕ್ತಿ ಎರಡು ತೆರೆಯ ಮೇಲೆ ಎದ್ದು ಕಾಣುತ್ತೆ. ಸಿನಿಮಾದ ಮೊದಲ ಭಾಗದಲ್ಲಿ ರಗಡ್ ಆಗಿ ಕಾಣಿಸಿಕೊಳ್ಳುವ ಯುವ, ದ್ವಿತೀಯಾರ್ಧದಲ್ಲಿ ಓರ್ವ ತಂದೆಯ ಮಗನಾಗಿ, ಮಧ್ಯಮವರ್ಗದ ಹುಡುಗನಾಗಿ ಗಮನ ಸೆಳೆಯುತ್ತಾರೆ. ಡೆಲಿವರಿ ಬಾಯ್, ಕಾಲೇಜು ಹುಡುಗನ ಶೇಡ್‌ಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಹಾಡುಗಳಲ್ಲೂ ಸಖತ್ ಸ್ಟೆಪ್ ಹಾಕುವುದರ ಮೂಲಕ ಭರವಸೆಯ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ.

ಸಂತೋಷ್ ಆನಂದ್ ರಾಮ್ ಯಾವಾಗಲೂ ಫ್ಯಾಮಿಲಿ ಆಡಿಯೆನ್ಸ್ ಗಮನದಲ್ಲಿಟ್ಟುಕೊಂಡು ಸಿನಿಮಾ ಮಾಡ್ತಾರೆ. ಯುವ ಚಿತ್ರದಲ್ಲೂ ತಂದೆ-ಮಗನ ಸೆಂಟಿಮೆಂಟ್ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ ಇದು ಯುವರಾಜ್ ಕುಮಾರ್ ಅವರ ಚೊಚ್ಚಲ ಸಿನಿಮಾ. ಈ ಕಾರಣಕ್ಕೆ ಅಲ್ಲಲ್ಲಿ ಅಪ್ಪು ನೆರಳಿನಡಿ ಯುವ ಬದುಕಿನ ಹೋರಾಟದ ಕಥೆಯನ್ನ ಕಟ್ಟಿ ಕೊಟ್ಟಿದ್ದಾರೆ. ಉದಾಹರಣೆಗೆ 'ಪಟಾಕಿ ಯಾರದೇ ಆಗಿರಲಿ, ಹಚ್ಚೋರು ನಾವಾಗಿರಬೇಕು' ಎಂಬ ಸಂಭಾಷಣೆ.

ಯುವ ಸಿನಿಮಾ ಇನ್ನೊಂದು ಪ್ರಮುಖ ಆಧಾರ ಸ್ತಂಭ ಅಚ್ಯುತ್ ಕುಮಾರ್. ಚಿತ್ರದಲ್ಲಿ ಯುವ ತಂದೆಯಾಗಿ ಪ್ರಬುದ್ಧವಾಗಿ ನಟಿಸಿದ್ದಾರೆ. ಇನ್ನೂ ಸಿಕ್ಕ ಅವಕಾಶವನ್ನ ಸಪ್ತಮಿ ಗೌಡ ಸದ್ಭಳಕೆ ಮಾಡಿಕೊಂಡಿದ್ದಾರೆ. ಕಾಲೇಜಿನ ಪ್ರಾಂಶುಪಾಲರಾಗಿ ಗೋಪಾಲಕೃಷ್ಣ ದೇಶಪಾಂಡೆ ಇಷ್ಟವಾಗ್ತಾರೆ. ಯುವ ಬದುಕಿನಲ್ಲಿ ಬರುವ ಬಹುಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚಿರುವ ಕಿಶೋರ್ ಕೂಡ ಉತ್ತರ ಕರ್ನಾಟಕದ ಭಾಷೆಯಲ್ಲಿ ಹೃದಯ ಗೆಲ್ತಾರೆ. ಸುಧಾರಾಣಿ ಹಾಗೂ ಹಿತಾ ಚಂದ್ರಶೇಖರ್ ತಮ್ಮ ಪಾತ್ರಗಳಿಗೆ ಸಂಪೂರ್ಣವಾದ ನ್ಯಾಯ ಸಲ್ಲಿಸಿದ್ದಾರೆ.

ಅಜನೀಶ್ ಲೋಕನಾಥ್ ಸಂಗೀತ, ಶ್ರೀಶಾ ಕುಡುವಳ್ಳಿ ಛಾಯಾಗ್ರಹಣ ಯುವ ಚಿತ್ರದ ತೂಕವನ್ನ ಹೆಚ್ಚಿಸಿವೆ. ಸ್ಟಂಟ್ ಮಾಸ್ಟರ್‌ಗೆ ವಿಶೇಷವಾದ ಕ್ರೆಡಿಟ್ ಕೊಡಬೇಕು. ಇನ್ನೂ ನಿರ್ಮಾಣದ ವಿಚಾರದಲ್ಲಿ ಹೊಂಬಾಳೆ ಸಂಸ್ಥೆ ಎಲ್ಲಿಯೂ ರಾಜಿ ಮಾಡಿಕೊಂಡಿಲ್ಲ. ಚಿತ್ರದೂದ್ದಕ್ಕೂ ಅದ್ದೂರಿತನ ಹಾಸು ಹೊಕ್ಕಿದೆ. ಸಿನಿಮಾದಲ್ಲಿ ತಂದೆ ಹಾಗೂ ಮಗನ ನಡುವಿನ ಸನ್ನಿವೇಶಗಳು ಪರಿಣಾಮಕಾರಿಯಾಗಿ ಮೂಡಿಬಂದಿವೆ. ಇನ್ನೂ ಸಂತೋಷ್ ಆನಂದ್ ರಾಮ್ ಈ ಚಿತ್ರದ ಮೂಲಕ ಫುಡ್ ಡೆಲಿವರಿ ಕೊಡುವ ಹುಡುಗ-ಹುಡುಗಿಯರ ಬದುಕು ಹಾಗೂ ಬವಣೆಯ ಕಥೆಯನ್ನೂ ಹೇಳುವ ಚಿಕ್ಕ ಪ್ರಯತ್ನವನ್ನ ಚೊಕ್ಕದಾಗಿ ಮಾಡಿದ್ದಾರೆ. ಇನ್ನು ಮೈನಸ್ ಹೇಳುವುದಾದರೆ, ಯುವ ಹಾಗೂ ಸಿರಿಯ ಪ್ರೇಮಕಥೆ ಕೂಡ ಅಪೂರ್ಣವೆನಿಸುತ್ತದೆ. ಇದು ಯುವರಾಜ್ ಕುಮಾರ್ ಚೊಚ್ಚಲ ಚಿತ್ರವಾದ ಕಾರಣಕ್ಕೆ ಕೆಲ ಚಿಕ್ಕ-ಪುಟ್ಟ ಲೋಪದೋಷಗಳನ್ನ ಕಡೆಗಣಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+