ಕೇವಲ ಏಳು ವರ್ಷದ ಬಾಲಕನಾಗಿದ್ದಾಗಲೇ ಗುರುಗಳ ಮಡಿಲಿಗೆ ಬಂದ ಇವರು ನಂತರ ಸುಮಾರು 15-20 ವರ್ಷಗಳ ಕಾಲ ಗುರುವಿನ ಸೇವೆಯಲ್ಲಿರುತ್ತಾರೆ. ನಂತರ ಅಕ್ಕಿ ಮಠದ ಅಧಿಪತ್ಯ ವಹಿಸುತ್ತಾರೆ.
ಸಾಮಾಜಿಕ ಸೇವೆಗಳು-
* ಅಗಡಿಯಲ್ಲಿನ ಸುಮಾರು 2300 ಮನೆಗಳಿಗೆ ಹೋಗಿ ದುಷ್ಚಟಗಳ ಭಿಕ್ಷೆಯನ್ನು ಬೇಡುತ್ತಾರೆ. ಅಲ್ಲಿ ಇವರಿಗೆ ತಮ್ಮ ದುಷ್ಟ ಚಟವನ್ನು ಇವರಿಗೆ ದಾನವಾಗಿ ನೀಡಿದರೆ, ಮುಂದೆಂದೂ ಅವರು ಆ ಚಟಗಳನ್ನು ಮಾಡುವ ಹಾಗೆ ಇಲ್ಲ. ಇದಕ್ಕೆ ಸಂಸ್ಕಾರ ಶ್ರಾವಣ ಎಂದು ಹೆಸರು. ಈ ಕಾರ್ಯಕ್ರಮದಿಂದ ಸುಮಾರು ಇನ್ನೂರು ಮುನ್ನೂರು ಜನರು ಮದ್ಯಪಾನ ತೊರೆದಿದ್ದುಂಟು.
* ಶೌಚಾಲಯ ಇಲ್ಲದ ಮನೆಗಳಿಗೆ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿಯವರ ಗಮನಕ್ಕೆ ತಂದು ಶೌಚಾಲಯ ನಿರ್ಮಿಸಲು ನೆರವಾಗುತ್ತಿದ್ದಾರೆ.
* 2017 ,ಜುಲೈ 9 ರಂದು ಸಾಲು ಮರದ ತಿಮಕ್ಕನವರನ್ನು ಮುಂದಾಳತ್ವದಲ್ಲಿ ಅಕ್ಕಿ ಮಠದ ಕಾರ್ಯಕ್ರಮ ಆಯೋಜಿಸಿ ಎರಡು ನಿಮಿಷದಲ್ಲಿ 12000 ಗಿಡಗಳನ್ನು ನೆಟ್ಟಿದ್ದು ದಾಖಲೆ.