Don't Miss!
- Lifestyle ರುಚಿ ರುಚಿಯ ಸ್ಪೆಷಲ್ ಅಂಬೂರ್ ಬಿರಿಯಾನಿ ಮಾಡಿ ನೋಡಿ..! ಇಲ್ಲಿದೆ ರೆಸಿಪಿ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡದ 'ಕುರುಕ್ಷೇತ್ರ'ದ ಬಗ್ಗೆ ಬಾಲಿವುಡ್ ನಿಂದ ಬಂದ ಹೊಸ ಸುದ್ದಿ!
ಶಾಸಕ ಮುನಿರತ್ನ 'ಕುರುಕ್ಷೇತ್ರ' ಎಂಬ ಹೆಸರಿನಲ್ಲಿ ಸಿನಿಮಾ ಮಾಡ್ತೀನಿ. ಈ ಚಿತ್ರದಲ್ಲಿ ಕನ್ನಡದ ಸ್ಟಾರ್ ನಟರು ಅಭಿನಯಿಸ್ತಾರೆ ಅಂತ ಯಾವಾಗ ಹೇಳಿದ್ರೋ, ಆಗಿಂದನೂ ಈ ಚಿತ್ರದ ಮೇಲೆ ಎಲ್ಲರ ಕಣ್ಣು ಬಿದ್ದಿದೆ.
'ಕುರುಕ್ಷೇತ್ರ'ದ ಬಗ್ಗೆ ದಿನಕ್ಕೊಂದು ಸುದ್ದಿಗಳು ಹರಿದಾಡುತ್ತಾನೆ ಇದೆ. ಬರಿ ಕನ್ನಡದ ನಟರು ಮಾತ್ರ ಈ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎಂದಿದ್ದ ಚಿತ್ರತಂಡ, ಈಗ ಪರಭಾಷಾ ನಟರಿಗೆ ಗಾಳ ಹಾಕ್ತಿದೆ ಎಂಬ ವಿಚಾರಗಳು ಕೂಡ ಗಾಂಧಿನಗರದಲ್ಲಿ ಜೋರಾಗಿ ಕೇಳಿ ಬರುತ್ತಿದೆ.[ದರ್ಶನ್ 'ಕುರುಕ್ಷೇತ್ರ'ದ ಬಗ್ಗೆ ಬಿಸಿ ಬಿಸಿ ಸುದ್ದಿ: ಅಪ್ಪಿ-ತಪ್ಪಿ ಸತ್ಯ ಆಗ್ಬಿಟ್ರೆ.?]
ಹೀಗಿರುವಾಗ, ಬಾಲಿವುಡ್ ನಿಂದ 'ಕುರುಕ್ಷೇತ್ರ'ದ ಬಗ್ಗೆ ಒಂದು ತಾಜಾ ಸುದ್ದಿ ಬಂದಿದೆ. ಮುಂದೆ ಓದಿ...
'ಕುರುಕ್ಷೇತ್ರ'ದಲ್ಲಿ ವಿವೇಕ್ ಒಬೆರಾಯ್!
ಮುನಿರತ್ನ ನಿರ್ಮಾಣದಲ್ಲಿ ಮೂಡಿ ಬರಲಿರುವ 'ಕುರುಕ್ಷೇತ್ರ'ದಲ್ಲಿ ಬಾಲಿವುಡ್ ನಟ ವಿವೇಕ್ ಒಬೆರಾಯ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆಯಂತೆ.['ಕುರುಕ್ಷೇತ್ರ'ದಲ್ಲಿ ಜಗ್ಗೇಶ್ 'ಶಕುನಿ': ನವರಸ ನಾಯಕನಿಂದ ಡೌಟ್ ಕ್ಲಿಯರ್]
ಯಾವ ಪಾತ್ರಕ್ಕೆ!
ಈಗಾಗಲೇ ಚಿತ್ರತಂಡ ವಿವೇಕ್ ಒಬೆರಾಯ್ ಅವರನ್ನ ಸಂಪರ್ಕ ಮಾಡಲಾಗಿದ್ದು, ಕೃಷ್ಣನ ಪಾತ್ರಕ್ಕಾಗಿ ಅಪ್ರೋಚ್ ಮಾಡಲಾಗಿದೆಯಂತೆ.[ದರ್ಶನ್ 'ಕುರುಕ್ಷೇತ್ರ'ದಲ್ಲಿ ಶ್ರೀ ಕೃಷ್ಣನ ಪಾತ್ರ ಸೇಲ್ ಆಗೋಯ್ತು!]
ರವಿಚಂದ್ರನ್ ಅಂತಿಮ!
ಮತ್ತೊಂದೆಡೆ ಚಿತ್ರದ ನಿರ್ದೇಶಕ ನಾಗಣ್ಣ ಅವರ ಹೇಳಿರುವ ಪ್ರಕಾರ ಕೃಷ್ಣನ ಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಅಂತಿಮವಾಗಿದ್ದರಂತೆ.['ಕುರುಕ್ಷೇತ್ರ'ಕ್ಕೆ ಎಂಟ್ರಿ ಕೊಟ್ರು ಕನ್ನಡದ ಮತ್ತೊಬ್ಬ 'ಬಿಗ್' ಸ್ಟಾರ್!]
ದರ್ಶನ್ ದುರ್ಯೋಧನ!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು 'ದುರ್ಯೋಧನ' ಪಾತ್ರವನ್ನ ಮಾಡುತ್ತಿದ್ದಾರೆ ಎನ್ನುವುದು ಬಿಟ್ಟರೇ, ಮತ್ಯಾವ ಪಾತ್ರಗಳು ಅಧಿಕೃತವಾಗಿಲ್ಲ. ಆದ್ರೆ, ಮೂಲಗಳ ಪ್ರಕಾರ, ಉಳಿದ ಪಾತ್ರಗಳ ಆಯ್ಕೆಯಲ್ಲಿ ತೊಡಗಿಕೊಂಡಿರುವ ಚಿತ್ರತಂಡ ಪರಭಾಷೆ ನಟರನ್ನ ಕೂಡ ಸಂಪರ್ಕ ಮಾಡುತ್ತಿದೆಯಂತೆ.['ಕುರುಕ್ಷೇತ್ರ'ದ ಬಗ್ಗೆ ಮಹತ್ವದ ರಹಸ್ಯ ಬಿಚ್ಚಿಟ್ಟ ನಿರ್ದೇಶಕ ನಾಗಣ್ಣ]
ನಾಗಣ್ಣ ನಿರ್ದೇಶನ, ಮುನಿರತ್ನ ನಿರ್ಮಾಣ!
'ಸಂಗೊಳ್ಳಿ ರಾಯಣ್ಣ' ಖ್ಯಾತಿಯ ನಾಗಣ್ಣ 'ಕುರುಕ್ಷೇತ್ರ'ವನ್ನ ನಿರ್ದೇಶನ ಮಾಡಲಿದ್ದಾರಂತೆ. ಶಾಸಕ ಮುನಿರತ್ನ ಅವರು ಬಂಡವಾಳ ಹಾಕಲಿದ್ದಾರೆ. ಈಗಾಗಲೇ ಪ್ರಿ-ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಜುಲೈ 23 ರಂದು ಸೆಟ್ಟೇರಲಿದೆಯಂತೆ.[ಕನ್ನಡದ 'ಕುರುಕ್ಷೇತ್ರ'ಕ್ಕೆ ಮುಹೂರ್ತ ಫಿಕ್ಸ್!]