ಚಿತ್ರದುರ್ಗದ ಬಿಚ್ಚುಗತ್ತಿ ಭರಮಣ್ಣ ನಾಯಕನ ಕಥಾವಸ್ತುವನ್ನು ಆಧಾರವಾಗಿಟ್ಟುಕೊಂಡು ಈ ಚಿತ್ರ ತಯಾರಾಗಿದೆ. ಬಿ.ಎಲ್.ವೇಣುರವರ ಕಾದಂಬರಿ ಆಧಾರಿತ ಈ ಚಿತ್ರಕ್ಕೆ ಹರಿ ಸಂತೋಷ್ ಆ್ಯಕ್ಸನ್ ಕಟ್ ಹೇಳಿದ್ದಾರೆ. ಡಿಂಗ್ರಿ ನಾಗರಾಜ್ ರವರ ಪುತ್ರ ರಾಜವರ್ಧನ್ ಭರಮಣ್ಣ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹರಿಪ್ರಿಯಾ ಚಿತ್ರದ ನಾಯಕಿ.
ಈ ಚಿತ್ರ ಎರಡು ಭಾಗಗಳಲ್ಲಿ ಸಿದ್ಧವಾಗುತ್ತಿದ್ದು, ಮೊದಲ ಭಾಗದಲ್ಲಿ ದಳವಾಯಿ ದಂಗೆಗಳ ಕಥೆಯನ್ನು ಹೊಂದಿರಲಿದೆ. ಶ್ರೀ ಕೃಷ್ಣ ಬ್ಯಾನರ್ ಅಡಿ ಓಂ ಸಾಯಿಕೃಷ್ಣ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಚಿತ್ರಕ್ಕೆ ಹಂಸಲೇಖ ಮತ್ತು ನಕುಲ್ ಅಭಯಂಕರ್ ಸಂಗೀತವಿರಲಿದೆ. ಚಿತ್ರದ ಟೀಸರ್ 2020 ಜನೇವರಿ 25 ರಂದು ಹಾಗೂ ಟ್ರೇಲರ್ ಫೆಬ್ರವರಿ 15 ರಂದು ಬಿಡುಗಡೆಯಾಯಿತು.ಚಿತ್ರದ ಹಿಂದಿ ಡಬ್ಬಿಂಗ್ ರೈಟ್ಸ್ 3.20 ಕೋಟಿಗೆ ಮಾರಾಟವಾಗಿದೆ.