`ನಿತ್ಯ ಜೊತೆ ಸತ್ಯ' ಚಿತ್ರ ನಿರ್ದೇಶನ ಮಾಡಿ ತೆಲಗು ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಶ್ರೀ ನಾಗ್ `ಒಮ್ಮೆ ನಿಶ್ಯಬ್ದ ಒಮ್ಮೆ ಯುದ್ಧ' ಚಿತ್ರದ ಮೂಲಕ ಮತ್ತೊಮ್ಮೆ ಕನ್ನಡ ಚಿತ್ರರಂಗಕ್ಕೆ ಬಂದಿದ್ದಾರೆ. ಚಿತ್ರದಲ್ಲಿ ಸಂಯುಕ್ತಾ ಹೆಗಡೆ ಮತ್ತು ಪ್ರಭು ಮುಂಡೂಕರ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಸಂಯುಕ್ತಾ ಮೂಲಕ ಮಾತು ಬಾರದ ಹಾಗೂ ಕಿವಿ ಕೇಳದ ಅನಾಥೆಯ ಪಾತ್ರದಲ್ಲಿ ಮಿಂಚಿದ್ದಾರೆ. ಕಿಚ್ಚ ಸುದೀಪ್ ಚಿತ್ರದ ಟ್ರೇಲರ್ ನ್ನು ಬಿಡುಗಡೆ ಮಾಡಿದ್ದಾರೆ.
ಶ್ರೀಮಂತರ ಮನೆಯಲ್ಲಿ ಜನಿಸಿದರೂ ಎಲ್ಲಾ ವರ್ಗದ ಜನರೊಂದಿಗೆ ಬೆರೆಯುವ ನಾಯಕ ಒಬ್ಬ ಕಿವುಡಿ ಮತ್ತು ಮೂಗಿಯಾದ ನಾಯಕಿಯ ಪ್ರೀತಿಯಲ್ಲಿ ಬೀಳುತ್ತಾನೆ.. ನಾಯಕಿ ಕೂಡ ಅನಾಥ ಮಕ್ಕಳಿಗೆ ಸಹಾಯ ಮಾಡುತ್ತಿರಯತ್ತಾಳೆ, ತನ್ನ ಪ್ರತಿಷ್ಠೆಗೆ ಆಡ್ಡವೆಂದು ಈ ಸಂಬಂಧವನ್ನು ನಾಯಕನ ತಂದೆ ವಿರೋಧಿಸುತ್ತಾನೆ. ಆದರೆ ತನ್ನ ಪ್ರೀತಿಯ ದಾರಿಯಲ್ಲಿ ನಾಯಕ ಮುಂದುವರೆಯುತ್ತಾನೆ.
ಮದುವೆಯ ನಂತರ ತಮ್ಮ ಫಾರ್ಮ ಹೌಸ್ ನಲ್ಲಿ ಸಂಸಾರ ನೆಡೆಸುವ ಈ ಜೋಡಿಯ ಬಾಳಲ್ಲಿ ನಾಯಕಿಯ ಹಿಂದಿನ ಭಯಾನಕ ಕಥೆ ತೆರೆದುಕೊಳ್ಳುತ್ತದೆ. ಇದು ಹೇಗೆ ನಾಯಕಿಯ ಜೀವಕ್ಕೆ ಅಪಾಯವನ್ನು ತಂದೊಡ್ಡುತ್ತದೆ ಎಂಬುದು ಚಿತ್ರದ ಸಸ್ಪೆನ್ಸ್. ಇಲ್ಲಿಂದ ಯುದ್ಧ ಆರಂಭ. ನಾಯಕ ಹೇಗೆ ತನ್ನ ಪ್ರೀತಿಯನ್ನು ಕಾಪಾಡಿ ಕೊಳ್ಳುತ್ತಾನೆ ಎಂಬುದು ಚಿತ್ರದ ಕಥೆ.