ಸೀತಾರಾಮ ಕಲ್ಯಾಣ (2019)(U/A)
ಸೀತಾರಾಮ ಕಲ್ಯಾಣ ಕಥೆ
ನಿಖಿಲ್ ಕುಮಾರಸ್ವಾಮಿ ನಾಯಕನಾಗಿರುವ ಈ ಚಿತ್ರವನ್ನು ಭಜರಂಗಿ ಖ್ಯಾತಿಯ ಹರ್ಷ ನಿರ್ದೇಶಿಸುತ್ತಿದ್ದು ಹೆಚ್.ಡಿ.ಕುಮಾರಸ್ವಾಮಿಯವರು ನಿರ್ಮಿಸುತ್ತಿದ್ದಾರೆ. ಡಿಂಪಲ್ ಕ್ವೀನ್ ರಚಿತಾ ರಾಮ್ ಚಿತ್ರದ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.ಶರತಕುಮಾರ್, ನಟಿ ಮಧು, ಪಿ.ರವಿಶಂಕರ್ ಮುಂತಾದವರು ಪೋಷಕ ಪಾತ್ರಗಳಿಗೆ ಜೀವ ತುಂಬಲಿದ್ದಾರೆ.ಚೆನ್ನಾಂಬಿಕ ಫಿಲಂಸ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗಿದೆ.ಈ ಚಿತ್ರದ ವಿತರಣೆ ಹಕ್ಕಣ್ಣು ನಿರ್ಮಾಪಕ ಜಯಣ್ಣ ಖರೀದಿಸಿದ್ದಾರೆ. ತಮ್ಮ `ಜಯಣ್ಣ ಫಿಲಂಸ್' ಮೂಲಕ ವಿತರಿಸಲಿದ್ದಾರೆ. ಚಿತ್ರವು ಜನೇವರಿ 25 ರಂದು ಬಿಡುಗಡೆಯಾಗಲಿದೆ.
ಚಿತ್ರಕಥೆ
ಸಿಟಿ ಹುಡುಗ ಆರ್ಯ (ನಿಖಿಲ್ ಕುಮಾರ್) ತನ್ನ ಸ್ನೇಹಿತನ ಮದುವೆಗೆಂದು ಹಳ್ಳಿಗೆ ಬರುತ್ತಾನೆ. ಅಲ್ಲಿ ನಾಯಕಿ ಗೀತಾ (ರಚಿತಾ ರಾಮ್) ಮೇಲೆ ಪ್ರೇಮ ಉದಯಿಸುತ್ತದೆ. ಆದರೆ ಗೀತಾ ಮಾತ್ರ ತಾನು ತಂದೆ ತೋರಿಸಿದ ಹುಡಗನನ್ನೇ ಮದುವೆಯಾಗುದಾಗಿ ಹೇಳಿ ಸ್ನೇಹಿತರಾಗಿ ಇರೋಣ ಎನ್ನುತ್ತಾಳೆ. ಹೀಗೆ ನಡೆಯುವಾಗ ನಾಯಕ ಮತ್ತು ನಾಯಕಿಯ ಕುಟುಂಬಗಳ ಮಧ್ಯೆ ಹಳೆಯ ವೈರತ್ವ ಇರುವ ವಿಷಯ ಬೆಳಕಿಗೆ ಬರುತ್ತೆ. ಇವೆಲ್ಲದರ ಮಧ್ಯೆ ನಾಯಕ ಹೇಗೆ ತನ್ನ ಪ್ರೀತಿ ಮತ್ತು ಕುಟುಂಬವನ್ನು ನಿಭಾಯಿಸುತ್ತಾನೆ ಎನ್ನುವುದು ಚಿತ್ರದ ಮೂಲ ಕಥೆಯಾಗಿದೆ.