X
ಹೋಮ್ ಚಲನಚಿತ್ರಗಳ ಒಳನೋಟ

ಗಾರೆ ಕೆಲಸ, ವಾಟರ್ ಬಿಸಿನೆಸ್, ಹಾಲು ಮಾರಾಟ: ಸಿನಿಮಾಗೆ ಬರುವ ಮುನ್ನ ಯಾವ್ಯಾವ ನಟರು ಏನು ಮಾಡ್ತಿದ್ರು ಎಂಬ ಮಾಹಿತಿ ಇಲ್ಲಿದೆ.

Author Sowmya Bairappa | Published: Wednesday, April 19, 2023, 02:09 PM [IST]

ನಟ-ನಟಿಯರು ಅಂದಾಕ್ಷಣ ವೈಭೋಗದ ಜೀವನ, ಕಾರು, ಬಂಗಲೆ, ಆಳು-ಕಾಳು ಹೀಗೆ ನಾನಾ ವಿಷಯಗಳು ನಮ್ಮ ಕಣ್ಣಮುಂದೆ ಬರುತ್ತವೆ. ನಟರ ಜೀವನ ತುಂಬಾ ಚೆನ್ನಾಗಿರುತ್ತದೆ ಅಂತೆಲ್ಲಾ ಭಾವಿಸುತ್ತೇವೆ. ಆದರೆ, ಸ್ಯಾಂಡಲ್‌ವುಡ್‌ನ ಹಲವು ತಾರೆಯರು ನಟರಾಗುವುದಕ್ಕೂ ಮುನ್ನ ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದಾರೆ. ಇನ್ನೂ ಕೆಲವರು ಹಲವಾರು ಅಡೆತಡೆಗಳನ್ನು ಎದುರಿಸಿ ಈ ಹಂತಕ್ಕೆ ಬಂದು ತಲುಪಿದ್ದಾರೆ. ಬಣ್ಣದ ಜಗತ್ತಿಗೆ ಬರುವ ಕನ್ನಡ ಯಾವ್ಯಾವ ನಟರು ಏನು ಮಾಡುತ್ತಿದ್ದರು ಎಂಬ ಮಾಹಿತಿ ಇಲ್ಲಿದೆ.


cover image
ದರ್ಶನ್
1

ಸ್ಟಾರ್ ಮಕ್ಕಳ ಜೀವನ ತುಂಬಾ ಚೆನ್ನಾಗಿರುತ್ತದೆ ಎಂದು ಊಹಿಸಲಾಗದು. ದರ್ಶನ್ ತಂದೆ ತೂಗುದೀಪ್ ಶ್ರೀನಿವಾಸ್ ಕನ್ನಡ ಚಿತ್ರರಂಗ ಕಂಡ ಅದ್ಭುತ ಖಳನಟರಾದರೂ ಅವರಿಗೆ ತಮ್ಮ ಪುತ್ರ ಚಿತ್ರರಂಗ ಪ್ರವೇಶಿಸುವುದು ಇಷ್ಟ ಇರಲಿಲ್ಲ. ಆದರೂ ಕೂಡ ದರ್ಶನ್ ತಂದೆಗೆ ವಿರುದ್ಧವಾಗಿ ನಟನೆ ಕಲಿಯಲು ನೀನಾಸಂಗೆ ಸೇರಿದ್ದರು. ನೀನಾಸಂನಲ್ಲಿ ನಟನಾ ತರಬೇತಿ ಪಡೆಯುತ್ತಿದ್ದ ದರ್ಶನ್ ಊಟಕ್ಕೂ ಕಷ್ಟಪಡುತ್ತಿದ್ದರು. ಬಳಿಕ ಬಿ.ಸಿ.ಗೌರಿಶಂಕರ್ ಬಳಿ ಅಸಿಸ್ಟಂಟ್ ಕ್ಯಾಮರಾಮ್ಯಾನ್ ಆಗಿ ಕೆಲಸ ಮಾಡಿದರು.  ಸ್ಟಂಟ್ ಮ್ಯಾನ್ ಆಗಿಯೂ ಅವರು ಕೆಲಸ ಮಾಡಿದ್ದರು. ಮೊದಲ ಬಾರಿಗೆ ನಿರ್ದೇಶಕ ಎಸ್.ನಾರಾಯಣ್ ಅವರ ಧಾರಾವಾಹಿಯಲ್ಲಿ ನಟಿಸಿದರು. ಇದಕ್ಕೂ ಮೊದಲು ನಿರೂಪಣೆ  ಮತ್ತು ಹಾಲು ಮಾರಾಟ ಮಾಡುತ್ತಿದ್ದರು. ಒಮ್ಮೆ ದರ್ಶನ್ ಭಾರವಾದ ಲೈಟ್ ಎತ್ತಿಕೊಂಡು ಹೋಗುವ ನೋಡಿದ ಪಾರ್ವತಮ್ಮ ರಾಜ್‌ಕುಮಾರ್ ಸಿನಿಮಾ ತಂಡಕ್ಕೆ ಆ ರೀತಿ ಭಾರದ ಲೈಟ್ ಹೊರಿಸಬೇಡಿ ಎಂದು ಹೇಳಿದ್ದರಂತೆ. ನಂತರ ರಾಜೇಂದ್ರ ಸಿಂಗ್ ಬಾಬು ಅವರ ದೇವರ ಮಗ, ಎಲ್ಲರ ಮನೆ ದೋಸೇನೂ ತೂತೇನೆ, ಭೂತಯ್ಯನ ಮಕ್ಕಳು, ಹರಿಶ್ಚಂದ್ರ ಸೇರಿದಂತೆ ಕೆಲ ಸಿನಿಮಾಗಳಲ್ಲಿ ಪುಟ್ಟ-ಪುಟ್ಟ ಪಾತ್ರಗಳಲ್ಲಿ ನಟಿಸಿದ್ದರು. ಆಗ ಅವರಿಗೆ ಈ ಚಿಕ್ಕ ಪಾತ್ರಗಳು ಸಿಗುವುದೂ ಕಷ್ಟವಾಗಿತ್ತು.  

ಧನಂಜಯ
2

ನಟ ಡಾಲಿ ಧನಂಜಯ್ ಅವರು ತುಂಬಾ ಕಷ್ಟಪಟ್ಟು ಸಿನಿಮಾರಂಗದಲ್ಲಿ ಗುರುತಿಸಿಕೊಂಡವರು. ಐಟಿ ಕೆಲಸ ಬಿಟ್ಟು ಚಿತ್ರರಂಗಕ್ಕೆ ಬಂದರು. ಹಲವು ವರ್ಷಗಳ ಕಾಲ ಯಶಸ್ಸಿಗಾಗಿ ಕಾದರು. ಹಲವು ಅವಮಾನಗಳನ್ನು ಎದುರಿಸಿದರು. ಧನಂಜಯ್ ಶಾಲೆಯಲ್ಲಿರುವಾಗಲೇ ನಾಟಕ, ಏಕಪಾತ್ರಾಭಿನಯ ಸೇರಿದಂತೆ ಇನ್ನಿತರ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಅವರು ಭಾಗವಹಿಸುತ್ತಿದ್ದರು. ವಿಧ್ಯಾಭ್ಯಾಸದಲ್ಲಿ ಚುರುಕಾಗಿದ್ದ ಧನಂಜಯ ಹತ್ತನೇ ತರಗತಿ ಪರೀಕ್ಷೆಯಲ್ಲಿ 90ಕ್ಕೂ ಹೆಚ್ಚು ಪ್ರತಿಶತ ಅಂಕ ಪಡೆದು ಜಿಲ್ಲೆಗೆ ಪ್ರಥಮ ಬಂದಿದ್ದರು. ಮೈಸೂರಿನ ಜಯಚಾಮರಾಜೆಂದ್ರ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮುಗಿಸಿದ ಇವರು, ಇನ್ಫೋಸಿಸ್‌ನಲ್ಲಿ  ಉದ್ಯೋಗ ಗಿಟ್ಟಿಸಿಕೊಂಡಿದ್ದರು. ಸಿನಿಮಾದತ್ತ ಆಸಕ್ತಿ ಬೆಳೆಸಿಕೊಂಡಿದ್ದ ಧನಂಜಯ್, ಇನ್ಫೋಸಿಸ್‌ನಲ್ಲಿ ಉದ್ಯೋಗ ನಿರಾಕರಿಸಿ, ಮೈಸೂರಿನ ರಂಗಾಯಣ ಸೇರಿದರು. ಬಳಿಕ 'ಜಯನಗರ 4th ಬ್ಲಾಕ್'​ ಎಂಬ ಕಿರುಚಿತ್ರದ ಮೂಲಕ ಚಿತ್ರರಂಗದಲ್ಲಿ ವಿಶಿಷ್ಟವಾಗಿ ಛಾಪು ಮೂಡಿಸಿದ ಇವರು, ಇಂದು ಬಹುಭಾಷಾ ನಟರಾಗಿ ಹೊರಹೊಮ್ಮಿದ್ದಾರೆ. 

ರಿ‍ಷಭ್ ಶೆಟ್ಟಿ
3

ರಿಷಬ್ ಶೆಟ್ಟಿ ಆರಂಭದಲ್ಲಿ ಬೆಂಗಳೂರಿನ ಕೋರಮಂಗಲ, ವಿಲ್ಸನ್ ಗಾರ್ಡನ್ ಸುತ್ತ ಮುತ್ತ ಏರಿಯಾದಲ್ಲಿ ಮಿನರಲ್ ವಾಟರ್ ಬಿಸಿನೆಸ್ ಮಾಡುತ್ತಿದ್ದರು. ಇದರ ಜೊತೆಗೆ ಡಿಪ್ಲೋಮಾ ಕೋರ್ಸ್ (ಫಿಲ್ಮ್ ಮೇಕಿಂಗ್) ಮಾಡಿದರು. ಬಳಿಕ ಪರಿಚಯಸ್ಥರ ಮೂಲಕ ಎಎಂಆರ್ ರಮೇಶ್ ಅವರನ್ನು ಭೇಟಿ ಮಾಡಿ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸಕ್ಕೆ ಸೇರಿಕೊಂಡರು. ನಂತರ ಜಾಕ್ ಮಂಜು ಅವರ ಮೂಲಕ ರವಿ ಶ್ರೀವತ್ಸ ಜೊತೆ ಸೇರಿದರು. ರವಿ ಶ್ರೀವತ್ಸ 'ಗಂಡ ಹೆಂಡತಿ' ಸಿನಿಮಾ ಮಾಡ್ತಿದ್ದರು. ಈ ಸೆಟ್‌ನಲ್ಲಿ ಕ್ಲಾಪ್ ಬಾಯ್ ಆಗಿ ಕೂಡ ಕೆಲಸ ಮಾಡಿದ್ದಾರೆ. ಸುಮಾರು ಆರೇಳು ಚಿತ್ರಗಳಲ್ಲಿ ರಿಷಬ್ ನಾಯಕನಾಗಿ ಆಯ್ಕೆಯಾಗಿದ್ದರೂ ಕೂಡ ಒಂದಲ್ಲ ಒಂದು ಕಾರಣಕ್ಕೆ ಅವು ಆರಂಭವಾಗುತ್ತಲೇ ಇರಲಿಲ್ಲವಂತೆ.  ವಾಟರ್ ಬಿಸಿನೆಸ್ ನಿಂತ ಬಳಿಕ ರಿಷಬ್ ಹೋಟೆಲ್ ಬಿಸಿನೆಸ್ ಆರಂಭಿಸಿದರು. ಆದರೆ, ಅದರಿಂದ ಪೂರ್ತಿ ನಷ್ಟ ಅನುಭವಿಸಬೇಕಾಯಿತು. ಇದಾದ ಬಳಿಕ ಬಹಳಷ್ಟು ಟೀಕೆಗಳು, ಮಾತುಗಳನ್ನು ಕೇಳಬೇಕಾಯಿತು. ಸಿನಿಮಾದಲ್ಲಿ ದುಡ್ಡು ಹಾಕಿ ಕಳೆದುಕೊಂಡು ಬಿಟ್ಟ ಅಂತ ಜನರು ಮಾತಾಡಿಕೊಳ್ಳುತ್ತಿದ್ದರಂತೆ.  ರಿಷಬ್  ನಿರ್ಮಾಪಕರ ಬಳಿ ಡ್ರೈವರ್ ಆಗಿ, ಹೋಟಲ್ ಕೆಲಸ, ಹೋಟೆಲ್ ಮಾಲಿಕ, ಸೇಲ್ಸ್‌ಮನ್ ಕೆಲಸನೂ ಮಾಡಿದ್ದಾರೆ. 

 

ಸತೀಶ್ ನೀನಾಸಂ
4

ನೀನಾಸಂ ಸತೀಶ್ ಇಂದು ಕನ್ನಡ ಚಿತ್ರರಂಗದ ಖ್ಯಾತ ನಟರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಚಿಕ್ಕಂದಿನಿಂದಲೇ ಚಿತ್ರರಂಗಕ್ಕೆ ಬರಬೇಕೆಂಬ ಕನಸು ಕಂಡಿದ್ದ ಇವರು, ನಟನಾಗುವುದಕ್ಕೂ ಮುನ್ನ ಬೆಂಗಳೂರಿನ ಗೋಪಾಲ್ ಚಿತ್ರನಂದಿರದಲ್ಲಿ ಟಿಕೆಟ್ ನೀಡುವ ಹಾಗೂ ಟಾರ್ಚ್ ಬಾಯ್ ಆಗಿ ಕೆಲಸ ಮಾಡುತ್ತಿದ್ದರಂತೆ. ಇದರ ಜೊತೆಗೆ ಕಲ್ಯಾಣ ಮಂಟಪದಲ್ಲಿ ಪ್ಲವರ್ ಡೆಕೋರೇಶನ್ ಕೂಡ ಮಾಡುತ್ತಿದ್ದರಂತೆ. 

ಚಿಕ್ಕಣ್ಣ
5

ತಮ್ಮ ವಿಶಿಷ್ಟ ಮ್ಯಾನರಿಸಂ ನಿಂದ ಪ್ರೇಕ್ಷಕರಿಗೆ ಕಚಗುಳಿಯಿಡುವ ಚಿಕ್ಕಣ್ಣ ಪ್ರಸ್ತುತ ಕನ್ನಡದ ಬಹುಬೇಡಿಕೆಯ ಹಾಸ್ಯ ನಟ. ಜೊತೆಗೆ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಚಿಕ್ಕಣ್ಣ ಚಿತ್ರರಂಗಕ್ಕೆ ಬರುವ ಮುನ್ನ ಗಾರೆ ಕೆಲಸ ಮಾಡುತ್ತಿದ್ದರು. ಇದರ ಜೊತೆಗೆ ಹೂವು ಮಾರಾಟ ಮತ್ತು ಬೋಂಡಾ ಮಾಡಿ ಮಾರುರುವುದಾಗಿ ಚಿಕ್ಕಣ್ಣ ಕೆಲ ಸಂದರ್ಶನಗಳಲ್ಲಿ ಹೇಳಿದ್ದಾರೆ. ಚಿಕ್ಕಣ್ಣ ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ತಮ್ಮ ಫಾರ್ಮ್ ಹೌಸ್‌ನಲ್ಲಿ ಗಾರೆ ಕೆಲಸ ಮಾಡುತ್ತಿದ್ದ ವಿಡಿಯೋವೊಂದು ವೈರಲ್ ಆಗಿತ್ತು. 

ರಕ್ಷಿತ್ ಶೆಟ್ಟಿ
6

ತಮ್ಮ ವಿಶಿಷ್ಟ ಮ್ಯಾನರಿಸಂ ನಿಂದ ಪ್ರೇಕ್ಷಕರಿಗೆ ಕಚಗುಳಿಯಿಡುವ ಚಿಕ್ಕಣ್ಣ ಪ್ರಸ್ತುತ ಕನ್ನಡದ ಬಹುಬೇಡಿಕೆಯ ಹಾಸ್ಯ ನಟ. ಜೊತೆಗೆ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಚಿಕ್ಕಣ್ಣ ಚಿತ್ರರಂಗಕ್ಕೆ ಬರುವ ಮುನ್ನ ಗಾರೆ ಕೆಲಸ ಮಾಡುತ್ತಿದ್ದರು. ಇದರ ಜೊತೆಗೆ ಹೂವು ಮಾರಾಟ ಮತ್ತು ಬೋಂಡಾ ಮಾಡಿ ಮಾರುರುವುದಾಗಿ ಚಿಕ್ಕಣ್ಣ ಕೆಲ ಸಂದರ್ಶನಗಳಲ್ಲಿ ಹೇಳಿದ್ದಾರೆ. ಚಿಕ್ಕಣ್ಣ ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ತಮ್ಮ ಫಾರ್ಮ್ ಹೌಸ್‌ನಲ್ಲಿ ಗಾರೆ ಕೆಲಸ ಮಾಡುತ್ತಿದ್ದ ವಿಡಿಯೋವೊಂದು ವೈರಲ್ ಆಗಿತ್ತು. 

ಎಸ್.ಪ್ರೇಮ್ ಕುಮಾರ್
7

ಬಾಲ್ಯದಿಂದಲೂ ಚಿತ್ರರಂಗದ ಬಗ್ಗೆ ಅಪಾರ ಆಸಕ್ತಿಯಿದ್ದ ನಟ ಪ್ರೇಮ್, ವಾರಕ್ಕೆ ಕನಿಷ್ಟ ಏನಿಲ್ಲವೆಂದರೂ ಮೂರು ನಾಲ್ಕು ಚಿತ್ರಗಳನ್ನು ನೋಡಿತ್ತಿದ್ದರಂತೆ.  ಶಿಕ್ಷಣದ ನಂತರ ಇಂಡಿಯನ್ ಟೆಲಿಫೋನ್ ಇಂಡಸ್ಟ್ರಿಸ್ ಲಿಮಿಟೆಡ್ ಕೆಲಸಕ್ಕೆ ಸೇರಿಕೊಂಡಿದ್ದ ಈ ನಟ, ಗೆಳೆಯನ ಸಲಹೆ ಮೇರೆಗೆ ಟಿ.ಎನ್.ಸೀತಾರಾಮ್‌ ಅವರ `ಮನ್ವಂತರ' ಸೀರಿಯಲ್‌ನಲ್ಲಿ ಸಹ ಕಲಾವಿದನಾಗಿ ನಟಿಸಿದರು. ಇದಕ್ಕೂ ಮೊದಲು ಅವರ ತಂದೆ ಪವರ್ ಲೂಮ್ ನೇಕಾರಾಗಿ ಕೆಲಸ ಮಾಡ್ತಿದ್ದರಿಂದ ಪ್ರೇಮ್ ಕೂಡ ಆ ಕೆಲಸ ಮಾಡುತ್ತಿದ್ದರಂತೆ. ಬಳಿಕ ಸೀರಿಯಲ್ ಲೋಕಕ್ಕೆ ಕಾಲಿಟ್ಟ ಅವರು, ನಂತರ ಪ್ರಾಣ ಸಿನಿಮಾ ಮೂಲಕ ಸಿನಿಪ್ರವೇಶ ಮಾಡಿದರು.

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+