ಅನೂಪ್ ಭಂಡಾರಿ ನಿರ್ದೇಶನದಲ್ಲಿ ಮೂಡಿ ಬಂದಿರುವ ವಿಕ್ರಾಂತ ರೋಣ ಚಿತ್ರದಲ್ಲಿ ಕಿಚ್ಚ ಸುದೀಪ್ ನಾಯಕನಾಗಿ ನಟಿಸಿದ್ದಾರೆ. ಜಾಕ್ ಮಂಜು ಅಲಿಯಾಸ್ ಮಂಜುನಾಥ್ ಗೌಡ ಮತ್ತು ಅವರ ಪತ್ನಿ ಶಾಲಿನಿಯವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈ ಚಿತ್ರದಲ್ಲಿ ನಿರೂಪ್ ಭಂಡಾರಿ, ಸಂಜೀವ ಗಂಭೀರ್ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ನೀತಾ ಅಶೋಕ್, ಚಿತ್ಕಲಾ ಬಿರಾದಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಜಾಕಲಿನ್ ಫರ್ನಾಂಡೀಸ್ ಚಿತ್ರದ 'ರಾ ರಾ ರಕ್ಕಮ' ಗೀತೆಯಲ್ಲಿ ಭರ್ಜರಿ ಹೆಜ್ಜೆ ಹಾಕಿದ್ದಾರೆ. ಬಿ ಅಜನೀಶ್ ಹಿನ್ನಲೆ ಸಂಗೀತ ಅದ್ಭುತವಾಗಿ ಮೂಡಿಬಂದಿದೆ. ಚಿತ್ರಕ್ಕೆ ಆಶಿಕ್ ಕುಸುಗೊಳ್ಳಿ ಸಂಕಲನ ಮತ್ತು ವಿಲಿಯಮ್ ಡೇವಿಡ್ ಛಾಯಾಗ್ರಹಣವಿದೆ.
ಕಥೆ
ಈ ಚಿತ್ರದಲ್ಲಿ ಸುದೀಪ್ ಪೋಲಿಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಕಥೆ ಸುಮಾರು ಅರ್ಧ ಶತಕದ ಹಿಂದೆ ನೆಡೆಯುತ್ತದೆ. ಒಂದು ದಟ್ಟ ಕಾಡಿನ ಮಧ್ಯದ ಗ್ರಾಮ ಕಮರೊಟ್ಟುವಿನಲ್ಲಿ ಫೋಲಿಸ್ ಅಧಿಕಾರಿ ಕೊಲೆಯಾಗುತ್ತದೆ. ಹಾಗೇ ಸಾಲು ಸಾಲು ಮಕ್ಕಳ ಸರಣಿ ಕೊಲೆ ಅರಂಭವಾಗುತ್ತದೆ. ಈ ಸಾಕಷ್ಟು ಅನಿರೀಕ್ಷಿತ ಘಟನೆಗಳು ನಡುವೆ ಅಲ್ಲಿಗೆ ಪೋಲಿಸ್ ಅಧಿಕಾರಿ ವಿಕ್ರಾಂತ್ ರೋಣನ ಆಗಮನವಾಗುತ್ತದೆ. ಈ ಮಿಸ್ಟಿರಿಯನ್ನು ಸುದೀಪ್ ಹೇಗೆ ಭೇಧಿಸುತ್ತಾರೆ ಎಂಬುದು ಚಿತ್ರದ ಕಥೆ. ಇಲ್ಲಿ ನೆಡೆಯುವ ರೋಚಕ ಘಟನೆಗಳ ಹಿಂದಿರುವ ಕಾರಣವೇನು, ಹಾಗೂ ಇದರ ಅಂತ್ಯವೇನು ಎಂಬುದು ಮುಂದಿನ ಕಥೆ.
ಬೆಳವಣಿಗೆ
2020 ಮಾರ್ಚ್ 2 ರಂದು ಅನೂಪ್ ಭಂಡಾರಿ ಜನ್ಮದಿನದಂದು ಹೈದರಾಬಾದಿನಲ್ಲಿ ಚಿತ್ರದ ಶೂಟಿಂಗ್ ಆರಂಭವಾಯಿತು. ಚಿತ್ರಕ್ಕೆ ಮೊದಲು ಫ್ಯಾಂಟಮ್ ಎಂದು ಹೆಸರಿಡಲಾಗಿತ್ತು. ನಂತರ ಸುದೀಪ್ ರ 25 ವರ್ಷಗಳ ಸಿನಿ ಜೀವನವನ್ನು ಸಂಭ್ರವಿಸುವ ಸಂದರ್ಭದಲ್ಲಿ ದುಬೈನ ಬುರ್ಜ್ ಖಲೀಫಾದ ಮೇಲೆ ಚಿತ್ರದ ಹೊಸ ಟೈಟಲ್ ಆದ 'ವಿಕ್ರಾಂತ ರೋಣ'ವನ್ನು ಅನಾವರಣ ಮಾಡಲಾಯಿತು.