Don't Miss!
- News Karnataka LS Election 2024 LIVE: ಇಂದು ಮೊದಲ ಹಂತದ ಮತದಾನಕ್ಕೆ ಸಿದ್ಧವಾದ ರಾಜ್ಯದ 14 ಕ್ಷೇತ್ರಗಳು
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬೆಸ್ಟ್ ಆಫ್ 2007 : 'ಮುಂಗಾರು ಮಳೆ' ಜಯಭೇರಿ
ದಟ್ಸ್ಕನ್ನಡ ಅಂತರ್ಜಾಲ ತಾಣ ನಡೆಸಿದ 'ಬೆಸ್ಟ್ ಆಫ್ 2007' ಸ್ಪರ್ಧೆಯಲ್ಲಿ ಅತ್ಯುತ್ತಮ ನಟ, ನಟಿ ಮತ್ತು ಅತ್ಯುತ್ತಮ ಚಿತ್ರ ಮೂರು ವಿಭಾಗದಲ್ಲಿ 'ಮುಂಗಾರು ಮಳೆ' ಮತ್ತೆ ಜಯಭೇರಿ ಬಾರಿಸಿದೆ. ಒಂದು ವರ್ಷ ದಾಟಿದರೂ ಮುಂಗಾರು ಮಳೆ ಜನಪ್ರಿಯತೆ ಕಳೆದುಕೊಂಡಿಲ್ಲದಿರುವುದಕ್ಕೆ ನೆಟ್ ಜಾಲಿಗಳ ಮತಗಳೇ ಸಾಕ್ಷಿ.
ಗೋಲ್ಡನ್ ಸ್ಟಾರ್ ಗಣೇಶ್ ಅತ್ಯುತ್ತಮ ನಟರಾಗಿ ಆಯ್ಕೆಯಾಗಿದ್ದರೆ, ಪೂಜಾ ಗಾಂಧಿ ಅತ್ಯುತ್ತಮ ನಟಿ ಮತ್ತು 'ಮುಂಗಾರು ಮಳೆ' ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿದೆ.
ದಟ್ಸ್ಕನ್ನಡ ನಡೆಸಿದ 'ಬೆಸ್ಟ್ ಆಫ್ 2007' ಸ್ಪರ್ಧೆಗೆ ನೆಟ್ಟಿಗರಿಂದ ಅಭೂತಪೂರ್ವ ಪ್ರತಿಕ್ರಿಯೆ ದೊರೆತಿದೆ. ಅಂತಿಮ ಹಂತದಲ್ಲಿ ಮುಂಗಾರು ಮಳೆಯ ಅಭಿನಯಕ್ಕಾಗಿ ಗಣೇಶ್ ಹೆಚ್ಚಿನ ಮತ ಗಳಿಸಿ ಅತ್ಯುತ್ತಮ ನಟರಾಗಿ ಆಯ್ಕೆಯಾಗಿದ್ದಾರೆ. ಅಂತಿಮ ಕಣದಲ್ಲಿ ಶಿವರಾಜಕುಮಾರ್, ವಿಜಯ್, ವಿಷ್ಣುವರ್ಧನ್, ಗಣೇಶ್ ಮತ್ತು ಪುನೀತ್ ರಾಜಕುಮಾರ್ ಉಳಿದಿದ್ದರು.
ನಟಿಯರ ವಿಭಾಗದಲ್ಲಿಯೂ ಪೂಜಾ ಗಾಂಧಿ, ಜೆನ್ನಿಫರ್ ಕೋತ್ವಾಲ್, ರಮ್ಯಾ, ಪಾರ್ವತಿ ಮೆಲ್ಟನ್ ಮತ್ತು ಡೈಸಿ ಬೋಪಣ್ಣ ಅಂತಿಮ ಹಂತ ತಲುಪಿದ್ದರು. ಎಲ್ಲರನ್ನು ಹಿಂದಿಕ್ಕಿ ಮನೋಜ್ಞ ಅಭಿನಯಕ್ಕಾಗಿ ಪೂಜಾ ಗಾಂಧಿ ಉತ್ತಮ ನಟಿಯಾಗಿ ಮತದಾರರಿಂದ ಆಯ್ಕೆಯಾಗಿದ್ದಾರೆ.
ಅತ್ಯುತ್ತಮ ಚಿತ್ರಕ್ಕಾಗಿಯೂ ತುರುಸಿನ ಸ್ಪರ್ಧೆ ಏರ್ಪಟ್ಟಿತ್ತು. ಕೊನೆಯ ಸುತ್ತಿಗೆ ಯೋಗರಾಜ್ ಭಟ್ ಅವರ 'ಮುಂಗಾರು ಮಳೆ', ಸೂರಿ ನಿರ್ದೇಶನದ 'ದುನಿಯಾ', ನಾಗತಿಹಳ್ಳಿ ನಿರ್ದೇಶನದ 'ಮಾತಾಡ್ ಮಾತಾಡು ಮಲ್ಲಿಗೆ', ಪ್ರಕಾಶ್ ಅವರ 'ಮಿಲನ' ಮತ್ತು 'ಕಲಾ ಸಾಮ್ರಾಟ್' ಎಸ್. ನಾರಾಯಣ್ ನಿರ್ದೇಶನದ 'ಚೆಲುವಿನ ಚಿತ್ತಾರ' ತಲುಪಿದ್ದವು.
ಒಟ್ಟಿನಲ್ಲಿ ಹೇಳುವುದಾದರೆ ಪ್ರೇಕ್ಷಕರು ಮುಂಗಾರು ಮಳೆಯ ಗುಂಗಿನಿಂದ ಇನ್ನೂ ಹೊರಬಂದಿಲ್ಲ ಎನ್ನುವುದು ಈ ಫಲಿತಾಂಶಗಳಿಂದ ಸಾಬೀತಾಗಿದೆ. ನೆಟ್ಟಿಗರು 'ಮುಂಗಾರು ಮಳೆ'ಗೆ ತಮ್ಮ ಓಟುಗಳ ಸುರಿಮಳೆಯನ್ನೇ ಸುರಿಸಿದ್ದಾರೆ!
(ದಟ್ಸ್ಕನ್ನಡ ಸಿನಿವಾರ್ತೆ)