Don't Miss!
- Finance BMRCL: ಇಂದು ನಮ್ಮ ಮೆಟ್ರೋ ಕಾರ್ಯಾಚರಣೆ ಅವಧಿ ವಿಸ್ತರಣೆ, ಸಮಯ ವಿವರ
- News Karnataka LS Election 2024 LIVE: ಇಂದು ಮೊದಲ ಹಂತದ ಮತದಾನಕ್ಕೆ ಸಿದ್ಧವಾದ ರಾಜ್ಯದ 14 ಕ್ಷೇತ್ರಗಳು
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಮಲ್ರ 'ದಶಾವತಾರಂ' ಅಂಥ ಸಿನಿಮಾ ಏನಲ್ಲಾ!
ಪ್ರೇಕ್ಷಕ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಕಮಲಹಾಸನ್ ಅಭಿನಯದ 'ದಶಾವತಾರಂ' ಚಿತ್ರ ಭಾರತ ಸೇರಿದಂತೆ ಜಗತ್ತಿನಾದ್ಯಂತ ಶುಕ್ರವಾರ ತೆರೆ ಕಂಡಿದೆ.ಕಲೆಯನ್ನೇ ಅರೆದು ಕುಡಿದಿರುವ ಕಮಲ್ ಹಾಸನ್ ತಮ್ಮ ಅದ್ಭುತ ನಟನೆಯಿಂದ ವಿಶಿಷ್ಟ ಹಾಗೂ ಶ್ರೇಷ್ಠ ಚಿತ್ರ ನಿರ್ಮಾಣ ಮಾಡಿದ್ದಾರೆ ಎನ್ನುವ ಹೆಗ್ಗಳಿಕೆ ಚಿತ್ರಕ್ಕಿದೆಯಂತೆ. ಕನ್ನಡ ಹೊರತುಪಡಿಸಿ, ಕೋಟ್ಯಂತರ ರೂಗಳನ್ನು ಸುರಿದು, ಬಹುಭಾಷೆಗಳಲ್ಲಿ ನಿರ್ಮಿಸಲಾಗಿರುವ ಈ ಚಿತ್ರದಲ್ಲಿ ಏನಿದೆ, ಅಂಥದ್ದೇನಿದೆ ?
*ಗೋಪಾಲಕೃಷ್ಣ, ಮುಂಬೈ
ಜಗತ್ತಿನಲ್ಲಿ ಬಿಡುಗಡೆಯಾಗಿರುವ ಎಲ್ಲ ಚಿತ್ರ ಮಂದಿರದಲ್ಲಿ ದಶಾವತಾರಂ ತುಂಬಿದ ಮನೆಗಳಲ್ಲಿ ಪ್ರದರ್ಶನ ಕಾಣುತ್ತಿದೆ.ಹುಚ್ಚೆದ್ದ ಕಮಲ್ ಅಭಿಮಾನಿಗಳು ಕಾಳಸಂತೆಯಲ್ಲಿ ಟಿಕೆಟ್ಗಳನ್ನು ಖರೀದಿಸಿ ಚಿತ್ರ ವೀಕ್ಷಿಸಲು ಚಿತ್ರ ಮಂದಿರಕ್ಕೆ ಲಗ್ಗೆಯಿಟ್ಟಿದ್ದಾರೆ. ಅದರ ಬೆನ್ನ ಹಿಂದೆಯೆ ಚಿತ್ರ ವೀಕ್ಷಿಸಿದ ಅಭಿಮಾನಿ ಬಳಗದ ಮುಖದಲ್ಲಿ ಮಂಕು ಕವಿದಿದೆ. ತಮ್ಮ ಆರಾಧ್ಯ ದೈವದ ಬಹುಕೋಟಿ ಚಿತ್ರ ಅಂದು ಕೊಂಡಂತೆ ಬೆಳ್ಳಿ ತೆರೆಗೆ ಬಂದಿಲ್ಲ. ಅವರ ಅಭಿನಯ ಸಾಮರ್ಥ್ಯಕ್ಕೆ ತಕ್ಕಂತೆ ಚಿತ್ರ ನಿರ್ಮಿಸಲು ಕಮಲ್ ಎಡವಿದ್ದಾರೆ. ಚಿತ್ರ ಸುಮಾರಾಗಿದೆ ಎಂದು ಹೇಳುವ ಸುದ್ದಿಗಳು ಕೇಳಿ ಬರತೊಡಗಿವೆ. ಅಭಿಮಾನಿಗಳನ್ನು ತಣಿಸಲು ಕಮಲ್ ವಿಫಲರಾಗಿದ್ದಾರೆ.
ಭಾರತ ಚಿತ್ರರಂಗದ ಇತಿಹಾಸದಲ್ಲಿ ಅಪಾರ ಪ್ರಮಾಣದ ದುಡ್ಡನ್ನು ಸುರಿದು ತಯಾರಾದ ಚಿತ್ರ ಎಂಬ ಹೆಗ್ಗಳಿಕೆಗೆ 'ದಶಾವತಾರಂ' ಪಾತ್ರವಾಗಿದೆ.ಆಸ್ಕರ್ ಫಿಲ್ಮ್ ಸಂಸ್ಥೆಯಡಿಯಲ್ಲಿ ನಿರ್ಮಾಣಗೊಂಡಿದ್ದು, ನಿರ್ಮಾಪಕ ವಿ.ರವಿಚಂದ್ರನ್ ಈ ಚಿತ್ರಕ್ಕೆ 165 ಕೋಟಿ ರು.ಗಳನ್ನು ಸುರಿದಿದ್ದಾರೆ. ಚಿತ್ರದಲ್ಲಿ ಕಮಲ್ ಹಾಸನ್ 10 ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 12 ನೇ ಶತಮಾನದ ಕಥೆಯನ್ನಾಧರಿಸಿ ಈ ಚಿತ್ರಕಥೆ ರೂಪುಗೊಂಡಿದೆ.ಚಿತ್ರಕಥೆ ಕುರಿತು ಹೇಳುವುದಾದರೆ, ಕಮಲ್ 10 ಪಾತ್ರಗಳಲ್ಲಿ ಕಾಣಿಸಿಕೊಂಡಿರುವುದು ಚಿತ್ರದ ನಕಾರಾತ್ಮಕ ಅಂಶ. 10 ವಿಭಿನ್ನ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸಲು ಕಮಲ್ ಸೋತಿದ್ದಾರೆ.
ಚಿತ್ರ ಆರಂಭವಾಗುವುದು 12ನೇ ಶತಮಾನದ ಕಥೆಯಿಂದ. ಚೋಳರ ಆಡಳಿತಾವಧಿಯಲ್ಲಿ ಹಿಂದು ಸಮುದಾಯ ವಿವಿಧ ಕಾರಣಗಳಿಂದ ಶೈವರು ಮತ್ತು ವೈಷ್ಣವರು ಎಂಬ ಎರಡು ಪಂಗಡಗಳಾಗಿ ಇಬ್ಬಾಗವಾಗುತ್ತದೆ.ಮೊದಲನೇ ಅವತಾರದಲ್ಲಿ ರಂಗರಾಜನ್ ನಂಬಿ ಮತ್ತು ನೆಪೋಲಿಯನ್ ದೊರೆ ರಾಜ ಕುಲೋತ್ತುಂಗರ ನಡುವಿನ ಕಥೆ ಆಧರಿಸಿದೆ. ರಾಮಾನುಜನ್ರ ಪರಮ ಭಕ್ತನಾಗಿರುತ್ತಾನೆ ರಂಗರಾಜನ್ ನಂಬಿ. ನೆಪೋಲಿಯನ್ ದೊರೆ ಶಿವನನ್ನು ಆರಾಧಿಸುತ್ತಿರುತ್ತಾನೆ. ನೆಪೋಲಿಯನ್ ದೊರೆ ಶಿವನನ್ನು ಪ್ರೀತಿಸಿ, ಪೂಜಿಸಲು ನಂಬಿಯನ್ನು ಒತ್ತಾಯಿಸಿತ್ತಾನೆ. ಆದರೆ ಇದನ್ನು ನಂಬಿ ಸ್ಪಷ್ಟವಾಗಿ ನಿರಾಕರಿಸುತ್ತಾನೆ. ನಂಬಿ ಮತ್ತು ಆತನ ದೇವರು ರಂಗನಾಥ ಮೂರ್ತಿಯನ್ನು ರಾಜ ನೆಪೋಲಿಯನ್ ಸಮುದ್ರಕ್ಕೆ ಎಸೆಯುತ್ತಾನೆ.
ಅರ್ಥವಿಲ್ಲದ ಕಥೆಯೊಂದು ಅಲ್ಲಿಗೆ ಕೊನೆಗೊಂಡು ನಂತರ ಪ್ರಸ್ತುತ ವಿಜ್ಞಾನ ಲೋಕಕ್ಕೆ ಗೋವಿಂದನ ರೂಪದಲ್ಲಿ ಎರಡನೇ ಅವತಾರಕ್ಕೆ ಚಿತ್ರಕಥೆ ಹೊರಳುತ್ತದೆ. ಅಮೆರಿಕದಲ್ಲಿ ವಿಜ್ಞಾನಿಗಳು ಮಾಡುತ್ತಿರುವ ಅಪಾಯಕಾರಿ ಸಂಶೋಧನೆಯನ್ನು ನಿಲ್ಲಿಸುವ ಕೆಲಸ ಗೋವಿಂದನದು. ಅವರು ಸಂಶೋಧಿಸಿದ ಸ್ಫೋಟಕಗಳನ್ನು ನಾಶಪಡಿಸಬೇಕು ಎಂದು ಒತ್ತಾಯಿಸುವುದು. ಅವರು ಒಪ್ಪದಿದ್ದಾಗ ಮೂರನೇ ಅವತಾರದಲ್ಲಿ ಅಧಿಕಾರಿ ವೇಷದಲ್ಲಿ ಶಸ್ತ್ರಾಸ್ತ್ರಗಳ ನಾಶಕ್ಕೆ ಮುಂದಾಗುತ್ತಾನೆ.
ನಂತರ ಶಸ್ತ್ರಾಸ್ತ್ರಗಳ ಸಂಶೋಧನೆಯ ಮಹತ್ವವಿರುವ ಲಕೋಟೆ ಭಾರತಕ್ಕೆ ರವಾನೆಯಾಗುತ್ತದೆ. ಇಲ್ಲಿಂದ ನಾಲ್ಕನೇ ಅವತಾರ ಶುರು. ಭಾರತಕ್ಕೆ ಬಂದಿರುವ ಲಕೋಟೆ 95ರ ವೃದ್ಧ ಮಹಿಳೆಗೆ ಲಕೋಟೆ ಸಿಗುತ್ತದೆ. ಅದನ್ನು ಅರಸುತ್ತಾ ಗೋವಿಂದ ಭಾರತಕ್ಕೆ ಬರುವುದು. ಅಲ್ಲಿ ವೇಶ್ಯೆ ಪಾತ್ರಧಾರಿ ಮಲ್ಲಿಕಾ ಶರಾವತ್ 4ನೇ ಅವತಾರದ ಗೋವಿಂದನ ಬೆನ್ನಹಿಂದೆ ಬೀಳುವುದು.ಅವರ ಜೊತೆಗಿನ ಕೆಲ ಹಾಡು ಮತ್ತು ಬೊಂಬಾಟ್ ದೃಶ್ಯಗಳು ಪ್ರೇಕ್ಷಕರ ಕೋಪವನ್ನು ತುಸು ಶಮನಗೊಳಿಸುತ್ತವೆ.ತನಗೆ ದೊರೆತಿರುವ ಲಕೋಟೆ ನೀಡಲು ವೃದ್ಧ ಮಹಿಳೆ ಕೊನೆಯವರೆಗೂ ನಿರಾಕರಿಸುತ್ತಾಳೆ. ಆ ಮಹಿಳೆಯ ಸಂಬಂಧಿಕರಾದ ನಾಯಕಿ ಅಸಿನ್ ಲಕೋಟೆ ಮೋಸಗಾರರ ಕೈಗೆ ದೊರೆಯದ ಹಾಗೆ ನೋಡಿಕೊಳ್ಳುವುದು. ಇದೇ ಸಂಗತಿ ಮೇಲೆ ಚಿತ್ರ ಅಂತ್ಯ ಕಾಣುತ್ತದೆ. ಪಂಜಾಬಿ ಮಹಿಳೆಯಾಗಿ, ಉದ್ದನೆಯ ಮುಸ್ಲಿಂ ಮಹಿಳೆಯಾಗಿ, ಕರಾಟೆ ತರಬೇತುದಾರನಾಗಿ, ಅನ್ನಾಚಿ ಪಾತ್ರಧಾರಿಯಾಗಿ ಕಮಲ್ ಚಿತ್ರದಲ್ಲಿ ಕಾಣಿಸುತ್ತಾರೆ.
ಕೊನೆಗೆ ಶಸ್ತ್ರಾಸ್ತ್ರಗಳನ್ನು ನಾಶ ಮಾಡಲು ಸುನಾಮಿ ಅಪ್ಪಳಿಸುವ ದೃಶ್ಯ ಅತ್ಯದ್ಭುತವಾಗಿ ಮೂಡಿಬಂದಿದೆ. ಇಂತಹ ಕಲ್ಪನೆ ಮತ್ತು ಸಾಧನೆ ಕಮಲ್ನಂತಹ ನಟರಿಗೆ ಮಾತ್ರ ಸಾಧ್ಯ. ಪ್ರೇಕ್ಷಕರನ್ನು ವಿಸ್ಮಯಗೊಳಿಸುವ ರೀತಿಯಲ್ಲಿ ಸುನಾಮಿ ದೃಶ್ಯವನ್ನು ತೆರೆಗೆ ತರಲಾಗಿದೆ. ಚಿತ್ರದಲ್ಲಿ ಕಮಲ್ ಏನು ಹೇಳಲಿಕ್ಕೆ ಹೊರಟಿದ್ದಾರೆ ಎನ್ನುವುದು ಗೌಣವಾಗಿ ಉಳಿದಿದೆ. ರಂಗನಾಥ ಈಗಾಗಲೇ ಸಮುದ್ರದಲ್ಲಿ ಲೀನವಾಗಿ ನೂರಾರು ವರ್ಷಗಳು ಕಳೆದಿವೆ. ಮತ್ತೆ ರಂಗನಾಥ ನನ್ನು ಸಮುದ್ರಕ್ಕೆ ಎಸೆಯುವುದು ಎಷ್ಟರ ಮಟ್ಟಿಗೆ ಸರಿ.ಈ ಮೂಲಕ ಬಹು ನಿರೀಕ್ಷಿತ, ತೀವ್ರ ಕುತೂಹಲ ಕೆರಳಿಸಿದ್ದ 'ದಶಾವತಾರಂ' ಚಿತ್ರವನ್ನು ಪರವಾಗಿಲ್ಲ ಎಂದು ಹೇಳಬಹುದು.
ಪ್ರೇಕ್ಷಕರನ್ನು ಸೆಳೆಯುವಲ್ಲಿ ಚಿತ್ರ ಸಂಪೂರ್ಣ ವಿಫಲವಾಗಿದೆ. ಕಮಲ್ ಅಭಿಮಾನಿಗಳಿಗೆ ನಿರಾಸೆ ಹುಟ್ಟಿಸುವದಂತೂ ಖಚಿತ. ಹಾಗೆಯೇ ಚಿತ್ರದ ಕಥೆಯನ್ನು ತೆರೆಗೆ ತರುವಲ್ಲಿ ನಿರ್ದೇಶಕರು ಕೈಚೆಲ್ಲಿದ್ದಾರೆ.ಚಿತ್ರದಲ್ಲಿ ಶ್ರದ್ಧೆಯ ಕೊರತೆ ಎದ್ದು ಕಾಣುತ್ತದೆ.ಕಮಲ್ ಅವರ ಮೇಕಪ್ ವಿಚಿತ್ರವಾಗಿದೆ. ಒಂಥರ ಅನಿಮೇಷನ್ ಚಿತ್ರದ ಹಾಗೆ ಕಾಣಿಸುತ್ತಾರೆ.ಒಂದಂತೂ ನಿಜ, ಕಮಲ್ 10 ಪಾತ್ರಗಳಲ್ಲಿ ನಟಿಸಿರುವುದಷ್ಟೇ ವಿಸ್ಮಯ.ನಟಿ ಅಸಿನ್ ಅವರಿಂದ ಹೇಳಿಕೊಳ್ಳವಂತೆ ನಟನೆ ಹೊರಬಂದಿಲ್ಲ. ಹೀಮೇಶ್ ರಶ್ಮಿಯಾ ಅವರ ಸಂಗೀತ ಪರ್ವಾಗಿಲ್ಲ. ಛಾಯಾಗ್ರಾಹಣ ಅಷ್ಟಕಷ್ಟೆ.ಆದರೆ 'ದಶಾವತಾರಂ' ಚಿತ್ರ ತಾಂತ್ರಿಕವಾಗಿ ಬಹು ಶ್ರೀಮಂತಿಕೆಯನ್ನು ಮೆರೆದಿದೆ. ಬಹಳಷ್ಟು ಕುತೂಹಲ ಮೂಡಿಸಿದ್ದ ದಶಾವತಾರಂ ಕನ್ನಡ ಹೊರತುಪಡಿಸಿ ಬಹಳಷ್ಟು ಭಾಷೆಗಳಲ್ಲಿ ಶುಕ್ರವಾರ ತೆರೆಕಂಡಿದೆ. ಈ ರೀತಿಯ ಚಿತ್ರ ಕನ್ನಡಕ್ಕೆ ಡಬ್ ಆಗದೇ ಇದ್ದದ್ದೇ ಒಳ್ಳೆಯದು ಎನಿಸುತ್ತದೆ. ಕನ್ನಡ ಪ್ರೇಕ್ಷಕ ಬಚಾವ್.