X
ಹೋಮ್ ಚಲನಚಿತ್ರಗಳ ಒಳನೋಟ

2023ರ ಫಸ್ಟ್ ಕ್ವಾಟರ್ ರಿಪೋರ್ಟ್: ವರ್ಷದ ಆರಂಭದಲ್ಲಿ ಬಿಡುಗಡೆಯಾದ ಕನ್ನಡದ ಬೆಸ್ಟ್‌ ಸಿನಿಮಾಗಳ ಪಟ್ಟಿ ಇಲ್ಲಿದೆ.

Author Sowmya Bairappa | Published: Saturday, April 1, 2023, 05:13 PM [IST]

ಇತ್ತೀಚೆಗೆ ಕನ್ನಡ ಚಿತ್ರಗಳು ಉತ್ತಮ, ಗಟ್ಟಿತನದ ಕಥೆ, ಅದ್ಧೂರಿ ಮೇಕಿಂಗ್ ಜೊತೆಗೆ ಜಗತ್ತಿನಾದ್ಯಂತ ಸದ್ದು ಮಾಡುತ್ತಿವೆ. ಕನ್ನಡದ ಹಲವಾರು ಪ್ಯಾನ್​ ಇಂಡಿಯಾ ಸಿನಿಮಾಗಳು ಕನ್ನಡ ಸಿನಿಮಾರಂಗ ಹೆಮ್ಮೆಪಡುವ ರೀತಿ ಬಾಕ್ಸ್​ ಆಫೀಸ್​ನಲ್ಲಿ ಕಲಕ್ಷನ್ ಮಾಡಿವೆ. ಕೆಜಿಎಫ್​ ಸಿನಿಮಾದಿಂದ ಎಲ್ಲ ಸಿನಿಮಾಗಳು ಅದ್ಭುತ ಪ್ರತಿಕ್ರಿಯೆ ಪಡೆದಿವೆ. ಕನ್ನಡ ಚಿತ್ರರಂಗಕ್ಕೆ ೨೦೨೨ ಗೋಲ್ಡನ್ ಇಯರ್. ಕಳೆದ ವರ್ಷ ಕೆಜಿಎಫ್ ಚಾಪ್ಟರ್ 2, ಜೇಮ್ಸ್‌, ವಿಕ್ರಾಂತ್ ರೋಣ, 777 ಚಾರ್ಲಿ ಹಾಗೂ ಕಾಂತಾರ ಚಿತ್ರಗಳು ನೂರು ಕೋಟಿಗೂ ಅಧಿಕ ಗಳಿಸಿಸುವ ಮೂಲಕ ಭರ್ಜರಿ ಯಶಸ್ಸು ಸಾಧಿಸಿದ್ದವು. ಇದೀಗ ೨೦೨೩ರ ಮೊದಲ ಮೂರು ತಿಂಗಳು ಕಳೆದಿದ್ದು, ಹಲವಾರು ಸಿನಿಮಾಗಳು ಬಿದುಗಡೆಯಾಗಿವೆ. 2023ರ ಫಸ್ಟ್ ಕ್ವಾಟರ್‌ನಲ್ಲಿ ಬಿಡುಗಡೆಯಾದ ಬೆಸ್ಟ್‌ ಸಿನಿಮಾಗಳ ಪಟ್ಟಿ ಇಲ್ಲಿದೆ.


cover image
ಕಬ್ಜ
1

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಮಾರ್ಚ್ 17ರಂದು ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಆರ್ ಚಂದ್ರು ಕಾಂಬಿನೇಶನ್‌ನ ಕಬ್ಜ ಸಿನಿಮಾವನ್ನು ಬಿಡುಗಡೆ ಮಾಡಲಾಗಿತ್ತು. ಸಿನಿಮಾದಲ್ಲಿ ನಿರ್ದೇಶಕ ಆರ್.ಚಂದ್ರು ಅವರ ವಿಷನ್, ಮೇಕಿಂಗ್, ದೊಡ್ಡ ಸೆಟ್, ರವಿ ಬಸ್ರೂರು ಅವರ ಹಂಟಿಂಗ್ ಬಿಜಿಎಂ, ಉಪ್ಪಿ, ಶಿವಣ್ಣ ಹಾಗೂ ಕಿಚ್ಚನ ಆರ್ಭಟ ಸಿನಿರಸಿಕರಿಗೆ ಸಖತ್ ಕಿಕ್ ಕೊಟ್ಟಿತ್ತು. ಕಬ್ಜ ಸಿನಿಮಾ 4 ಸಾವಿರ ಸ್ಕ್ರೀನ್ ಗಳಲ್ಲಿ ರಿಲೀಸ್ ಆಗಿದ್ದು, ಗಲ್ಲಾಪೆಟ್ಟಿಗೆಯಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿತ್ತು. ಉಪೇಂದ್ರ, ಸುದೀಪ್ ಮತ್ತು ಶಿವರಾಜ್‌ಕುಮಾರ್ ಒಟ್ಟಿಗೆ ಕಾಣಿಸಿಕೊಂಡಿದ್ದ ಕಬ್ಜ ಸಿನಿಮಾದಲ್ಲಿ 1945ರ ಸ್ವಾತಂತ್ರ್ಯ ಪೂರ್ವಕ್ಕೂ ಮುನ್ನ ಅರ್ಕೇಶ್ವರನ ಚರಿತ್ರೆಗೆ ನಾಂದಿ ಹಾಡಲಾಗಿತ್ತು. ಅರ್ಕೇಶ್ವರನ ಪಾತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ  ಮಿಂಚಿದ್ದು, ಮೊದಲ ಬಾರಿಗೆ ರೆಟ್ರೋ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು.  ಪೊಲೀಸ್ ಅಧಿಕಾರಿಯಾಗಿ ಸುದೀಪ್  ಸ್ಟೈಲಿಶ್ ಎಂಟ್ರಿ, ಬೇಸ್ ವಾಯ್ಸ್‌ನಲ್ಲಿ ಕಿಚ್ಚನ ನಿರೂಪಣೆ ಸೂಪರ್ ಆಗಿತ್ತು.  ಸಿನಿಮಾ ಕ್ಲೈಮ್ಯಾಕ್ಸ್‌ನಲ್ಲಿ ಶಿವಣ್ಣನ ಎಂಟ್ರಿ ಚಿಂದಿಯಾಗಿತ್ತು. ಕಬ್ಜ ಸಿನಿಮಾವನ್ನು 120 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು.  ಕಬ್ಜ ಸಿನಿಮಾ ಏಪ್ರಿಲ್‌ 14ರಿಂದ ಅಮೆಜಾನ್ ಪ್ರೈಮ್‌ ವಿಡಿಯೋದಲ್ಲಿ ಪ್ರಸಾರವಾಗಲಿದೆ. 

ಗುರುದೇವ್ ಹೊಯ್ಸಳ
2

ಡಾಲಿ ಧನಂಜಯ್ ಅಭಿನಯದ 125ನೇ ಸಿನಿಮಾ 'ಗುರುದೇವ್ ಹೊಯ್ಸಳ' ಸಿನಿಮಾಗೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ಗುರುದೇವ್ ಹೊಯ್ಸಳ' ಸಿನಿಮಾದಲ್ಲಿ ನಟರಾಕ್ಷಸ ಡಾಲಿ ಧನಂಜಯ್ ರಫ್ ಅಂಡ್ ಟಫ್ ಆಗಿ ಕಾಣಿಸಿಕೊಂಡಿದ್ದು, ಇಂತಹ ಒಬ್ಬ ಪೊಲೀಸ್‌ ಅಧಿಕಾರಿ ಇರಬೇಕು ಅಂತ ಅನಿಸುವಷ್ಟು ಸಹಜವಾಗಿ ನಟಿಸಿದ್ದರು. 'ಗುಳ್ಟು' ಸಿನಿಮಾ ಖ್ಯಾತಿಯ ನಟ ನವೀನ್ ಶಂಕರ್ 'ಗುರುದೇವ್ ಹೊಯ್ಸಳ'ದಲ್ಲಿ ಖಳನಾಯಕನಾಗಿ ನಟಿಸುವ ಅದ್ಭುತ ನಟನೆ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ. ಸಿನಿಮಾದಲ್ಲಿ ನವೀನ್ ಬಾಲಿ ಎಂಬ ಪಾತ್ರ ನಿರ್ವಹಿಸಿದ್ದು, ಸಖತ್ ರಗಡ್ ಆಗಿದೆ. ಹೀರೋಗೆ ಇಲ್ಲದ ಎಂಟ್ರಿ, ಆಕ್ಷನ್ ಚಿತ್ರದಲ್ಲಿ ಇವರಿಗಿದೆ.  ಈ ಸಿನಿಮಾದ ಮೂಲ ಮರ್ಯಾದಾ ಹತ್ಯೆ. ಬೆಳಗಾವಿಯಲ್ಲಿ ಪೊಲೀಸ್ ಅಧಿಕಾರಿ ಭಾರ್ಗವ್ ಕಾಣೆಯಾಗಿರುತ್ತಾರೆ. ಭಾರ್ಗವನನ್ನು ಹುಡುಕೋಕೆ ಹೋದ ಗುರುದೇವ್ ಹೊಯ್ಸಳ ಮರ್ಯಾದಾ ಹತ್ಯೆ ಕೇಸ್‌ನಲ್ಲಿ ಸಿಕ್ಕಿಕೊಳ್ಳುತ್ತಾನೆ. ಕೊನೆಗೆ ಅದನ್ನು ಧೈರ್ಯದಿಂದ ಚಾಣಾಕ್ಷ್ಯ ತನದಿಂದ ಹೇಗೆ ಮೆಟ್ಟಿ ನಿಲ್ಲುತ್ತಾನೆ ಅನ್ನೋದು ಚಿತ್ರದ ಕಥೆ.  ಸಿನಿಮಾದಲ್ಲಿ  ವಿಜಯ್ ಎನ್ ಡೈರೆಕ್ಷನ್ ಸೂಪರ್ ಆಗಿದ್ದು, ಪ್ರೇಕ್ಷಕರಲ್ಲಿ ಮಾಸ್ ಫೀಲ್ ತುಂಬುವಲ್ಲಿ ಯಶಸ್ವಿಯಾಗಿದ್ದಾರೆ. 

 

19.20.21
3

ಸೋಶಿಯಲ್ ಥ್ರಿಲ್ಲರ್ ಕಥಾಹಂದರ ಒಳಗೊಂಡಿದ್ದ 19.20.21 ಸಿನಿಮಾವನ್ನು ರಾಷ್ಟ್ರಪ್ರಶಸ್ತಿ ವಿಜೇತ ಮಂಸೋರೆ ನಿರ್ದೇಶನ ಮಾಡಿದ್ದರು. ಇದೊಂದು ನೈಜ ಘಟನೆಯಾಧಾರಿತ ಸಿನಿಮಾವಾಗಿದ್ದು, 2012ರ ಮಾರ್ಚ್‌ 3ರಂದು ನಕ್ಸಲ್ ನಿಗ್ರಹ ಪಡೆಯಿಂದ ಬಂಧಿತರಾದ ವಿಠ್ಠಲ್ ಮಲೆಕುಡಿಯ ಹಾಗೂ ಆತನ ತಂದೆ ಲಿಂಗಣ್ಣ ಮಲೆಕುಡಿಯ ಅವರ ಕಾನೂನು ಹೋರಾಟದ ಕಥೆ. ವಿಠಲ್‌ ಮಲೆಕುಡಿಯ ಪಾತ್ರವೇ ಈ ಸಿನಿಮಾದಲ್ಲಿ ಮಂಜು ಕೂಡುಮಲೆ ಆಗಿ ಬದಲಾಯಿಸಲಾಗಿತ್ತು. ಈ ಸಿನಿಮಾದಲ್ಲಿ ಪ್ರಭಾವಿಗಳ ಒತ್ತಡಕ್ಕೆ ಮಣಿದಾಗ ಪೊಲೀಸ್‌ ವ್ಯವಸ್ಥೆ , ಅರಣ್ಯ ಇಲಾಖೆ ಯಾವ ರೀತಿ ವರ್ತಿಸಬೇಕಾಗುತ್ತದೆ ಎಂಬ ಕರಾಳ ವಿಚಾರವನ್ನೂ ತೋರಿಸಲಾಗಿತ್ತು, ರಂಗಭೂಮಿ ಕಲಾವಿದರಾದ ಶೃಂಗ ಬಿ ವಿ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. 

ಹೊಂದಿಸಿ ಬರೆಯಿರಿ
4

ರಾಮೇನಹಳ್ಳಿ ಜಗನ್ನಾಥ್ ನಿರ್ದೇಶನದ 'ಹೊಂದಿಸಿ ಬರೆಯಿರಿ' ಸಿನಿಮಾದಲ್ಲಿ ಪ್ರವೀಣ್ ತೇಜ್, ಐಶಾನಿ ಶೆಟ್ಟಿ, ಸಂಯುಕ್ತ ಹೊರನಾಡು, ಶ್ರೀ ಮಹದೇವ್, ಭಾವನಾ ರಾವ್, ನವೀನ್ ಶಂಕರ್, ಅರ್ಚನಾ ಜೋಯಿಸ್ ಮುಖ್ಯಪಾತ್ರದಲ್ಲಿ ನಟಿಸಿದ್ದರು.  ಪರಿಸ್ಥಿತಿಗಳೊಂದಿಗೆ ಹೊಂದಿಕೊಂಡು ಸಾಗುವ ಬದುಕಿನ ಪಯಣವೇ ಜೀವನ ಎನ್ನುವ ಎಳೆಯನ್ನು ಮೂಲವಾಗಿಟ್ಟುಕೊಂಡು ಅದರ ಸುತ್ತ 'ಹೊಂದಿಸಿ ಬರೆಯಿರಿ' ಕಥೆಯನ್ನು ಹೆಣೆಯಲಾಗಿದೆ. ಪ್ರತಿಯೊಬ್ಬರ ಬದುಕಿನಲ್ಲೂ ಕಾಲೇಜು ಹಂತ ಒಂದು ಬಹುಮುಖ್ಯವಾದ ಭಾಗವಾಗಿರುತ್ತದೆ. ಕಾಲೇಜಿನಲ್ಲಿ ಒಂದಷ್ಟು ಹೊಸ ವ್ಯಕ್ತಿಗಳು, ಹೊಸ ಗುರಿ, ಉದ್ದೇಶ, ಕನಸು ಎಲ್ಲವೂ ಇರುತ್ತದೆ. ಈ ಸಂದರ್ಭ ಒಂದಷ್ಟು ಕಳೆದುಕೊಳ್ಳುವುದು, ಪಡೆದುಕೊಳ್ಳುವುದು ಎಲ್ಲವೂ ಇರುತ್ತದೆ. ಕಾಲೇಜು ಮತ್ತು ಅದರ ನಂತರದ ಬದುಕಿನ ಕಥೆಯೇ ಈ ಸಿನಿಮಾ ಪ್ರಮುಖ ತಿರುಳು. ಚಿತ್ರದಲ್ಲಿ ಐದು ಜನ ಸ್ನೇಹಿತರ ಬದುಕಿನ ಒಂದೊಂದು ಕಥೆಯಿದ್ದು, ಭಾವನಾತ್ಮಕ ಜರ್ನಿಯೂ ಇದೆ.  ದಾವಣಗೆರೆಯ ಇಂಜಿನಿಯರಿಂಗ್ ಕಾಲೇಜೊಂದರ 2008ರ ಬ್ಯಾಚ್ ವಿದ್ಯಾರ್ಥಿಗಳ ಕಥೆಯನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಈ ಸಿನಿಮಾ ಏಪ್ರಿಲ್ 1ರಿಂದ  ಒಟಿಟಿಯಲ್ಲಿ ಪ್ರಸಾರವಾಗುತ್ತಿದ್ದು, ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ನೀವು ವೀಕ್ಷಿಸಬಹುದು. 

 

ಗೌಳಿ
5

ಸೂರ ನಿರ್ದೇಶನದ 'ಗೌಳಿ' ಸಿನಿಮಾದ ಮೂಲಕ ನಟ ಶ್ರೀನಗರ ಕಿಟ್ಟಿ ಆರು ವರ್ಷಗಳ ಬಳಿಕ ತೆರೆಮೇಲೆ ಕಾಣಿಸಿಕೊಂಡಿದ್ದರು. ಗೌಳಿ ಸಿನಿಮಾಗಾಗಿ ಕಿಟ್ಟಿ ಉದ್ದನೆಯ ಗಡ್ಡ ಹಾಗೂ ಕೂದಲುಬಿಟ್ಟು ಹಿಂದೆಂದೂ ಕಾಣಿಸಿಕೊಳ್ಳದ ಪಾತ್ರದಲ್ಲಿ ಅಭಿನಯಿಸಿದ್ದರು. ಚಿತ್ರದಲ್ಲಿ  ಪಾವನಾ ಗೌಡ ನಾಯಕಿಯಾಗಿ ನಟಿಸಿದ್ದು, ರಂಗಾಯಣ ರಘು, ಶರತ್ ಲೋಹಿತಾಶ್ವ, ಕಾಕ್ರೋಚ್ ಸುಧಿ, ಯಶ್ ಶೆಟ್ಟಿ, ಗೋಪಾಲ ದೇಶಪಾಂಡೆ ಪ್ರಮುಖ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದರು. ಗೌಳಿ ಜನನಾಂಗದ ಕಷ್ಟ, ಆ ಜನಾಂಗಕ್ಕೆ ಕಂಟಕವಾಗುವ ಮಾಫಿಯಾ ಎಲ್ಲವನ್ನು ಈ ಚಿತ್ರದಲ್ಲಿ ಹೇಳಲಾಗಿದ್ದು, ನಾಯಕನಷ್ಟೇ ಎದುರಾಳಿ ಪಾತ್ರಗಳನ್ನು ಕಟ್ಟಿಕೊಡಲಾಗಿದೆ. ನೆಗೆಟಿವ್ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಶರತ್‌ ಲೋಹಿತಾಶ್ವ, ಕಾಕ್ರೋಚ್ ಸುಧಿ ಸಖತ್ ಆಗಿ ಅಭಿನಯಿಸಿದ್ದಾರೆ.  ಕಾಡಿನ ಮಧ್ಯೆ ಇರುವ ಹಳ್ಳಿಯೊಂದರಲ್ಲಿ ವಾಸಿಸುವ ಜನರ ಮೇಲೆ ಹಾಗೂ ಅವರ ಸ್ಥಳದ ಮೇಲೆ ಖಳನಾಯಕರ ಕಣ್ಣು ಬೀಳುವುದು ಹಾಗೂ ಆ ಖಳನಾಯಕರಿಗೆ ಅಲ್ಲಿನ ಪೊಲೀಸರೇ ಬೆಂಬಲ ನೀಡುವುದು, ಇದರ ವಿರುದ್ಧ ಆ ಹಳ್ಳಿಯವರು ಹೋರಾಡುವ ಕಥೆ ಇರುವ ಹಲವು ಚಿತ್ರಗಳು ಈಗಾಗಲೇ ಕನ್ನಡದಲ್ಲಿ ಬಂದಿವೆ. ತುಸು ಇದೇ ಮಾದರಿಯ ಕಥೆಯನ್ನು ಹೊಂದಿರುವ ಗೌಳಿ ವೈಯಕ್ತಿಕ ಕಾರಣದಿಂದ ನಾಯಕನ ಕುಟುಂಬವನ್ನು ಟಾರ್ಗೆಟ್ ಮಾಡ್ತಾರೆ ಎಂಬ ಅಂಶದಿಂದ ವಿಭಿನ್ನ ಎನಿಸಲಿದೆ. ಸತತ ಸೋಲಿನಿಂದ ಕಂಗೆಟ್ಟಿದ್ದ ಶ್ರೀನಗರ ಕಿಟ್ಟಿಗೆ 'ಗೌಳಿ' ಸಿನಿಮಾ ತಕ್ಕಮಟ್ಟಿಗೆ ಯಶಸ್ಸು ನೀಡಿದೆ. 

ಮಂಡಲ
6

'ಮಂಡಲ' ಸಿನಿಮಾಗೆ ಅಮೆರಿಕದಲ್ಲಿರುವ ಕನ್ನಡಿಗ ಅಜಯ್ ಸರ್ಪೆಷ್ಕರ್ ಆಕ್ಷನ್ ಕಟ್ ಹೇಳಿದ್ದರು.  ಈ ಸಿನಿಮಾಗೆ ಮೊದಲು ಮೈಸೂರು ಮಸಾಲಾ ಎಂಬ ಟೈಟಲ್ ಇಡಲಾಗಿತ್ತು. ನಂತರ ಬದಲಾವಣೆ ಮಾಡಲಾಗಿದೆ. ಚಿತ್ರದಲ್ಲಿ ಹಿರಿಯ ನಟರಾದ ಅನಂತ್ ನಾಗ್, ಪ್ರಕಾಶ್ ಬೆಳವಾಡಿ, ಕಿರಣ್ ಶ್ರೀನಿವಾಸ್, ಶರ್ಮಿಳಾ ಮಾಂಡ್ರೆ, ಸಂಯುಕ್ತ ಹೊರನಾಡು ಮೊದಲಾದವರು ನಟಿಸಿದ್ದು, ಇದು ಹಾರುವ ತಟ್ಟೆಗಳ ಆಧರಿಸಿದ ಸಿನಿಮಾವಾಗಿದೆ. ಇಡೀ ಸಿನಿಮಾ ಬಾಹ್ಯಾಕಾಶ, ಎಲಿಯೆನ್ಸ್, ಮುಗ್ಧ ಜನಾರ ನಂಬಿಕೆ, ಅದರ ಲೆಕ್ಕಾಚಾರದ ಸುತ್ತ ಸುತ್ತಲಿದ್ದು, ಇದೊಂದು ವಿಭಿನ್ನ ಕಥೆ. ತಲೆಯೆತ್ತಿ ಬಾಹ್ಯಾಕಾಶ ನೋಡು ಮತ್ತು ತಲೆ ಬಗ್ಗಿಸಿ ನಮ್ಮ ಮೂಲ ಸಂಸ್ಕೃತಿಯ ಹಿನ್ನೆಲೆಯ ಬಗ್ಗೆ ತಿಳಿದುಕೋ ಎಂಬ ಅಂಶಗಳನ್ನು ಸಿನಿಮಾದಲ್ಲಿ ಕಟ್ಟಿಕೊಡಲಾಗಿತ್ತು. 

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+