X
ಹೋಮ್ ಚಲನಚಿತ್ರಗಳ ಒಳನೋಟ

2023ರ ಫಸ್ಟ್ ಕ್ವಾಟರ್ ರಿಪೋರ್ಟ್: ಪ್ರೇಕ್ಷಕರಿಗೆ ನಿರೀಕ್ಷೆ ಹುಟ್ಟಿಸಿ, ನಿರಾಸೆ ಮೂಡಿಸಿದ 9 ಸಿನಿಮಾಗಳ ಪಟ್ಟಿ!

Author Sowmya Bairappa | Updated: Sunday, April 2, 2023, 08:53 AM [IST]

2023ರ ಆರಂಭದಲ್ಲಿ ಕನ್ನಡದಲ್ಲಿ ಹಲವು ಸಿನಿಮಾಗಳು ಬಿಡುಗಡೆಯಾಗಿವೆ. ಈ ಮೂರು ತಿಂಗಳಿನಲ್ಲಿ ಸಾಲು-ಸಾಲು ಚಿತ್ರಗಳು ತೆರೆಕಂಡರೂ ಕೇವಲ ಬೆರಳೆಣಿಕೆಯಷ್ಟು ಚಿತ್ರಗಳು ಮಾತ್ರ ಬಾಕ್ಷಾಫೀಸ್ ಮತ್ತು ಪ್ರೇಕ್ಷಕರಿಂದ ಮೆಚ್ಚುಗೆ ಪಡೆದದಿವೆ. ಇಲ್ಲಿ ಈ ವರ್ಷದ ಮೊದಲಾರ್ಧದಲ್ಲಿ ಪ್ರೇಕ್ಷಕರಿಗೆ ನಿರೀಕ್ಷೆ ಹುಟ್ಟಿಸಿ, ನಿರಾಸೆ ಮೂಡಿಸಿದ ಚಲನಚಿತ್ರಗಳ ಪಟ್ಟಿಯನ್ನು ನೀಡಲಾಗಿದೆ.


cover image
ಕ್ರಾಂತಿ
1

ವಿ.ಹರಿಕೃಷ್ಣ ನಿರ್ದೇಶನದ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಆಕ್ಷನ್ ಎಂಟರ್ ಟೈನರ್ 'ಕ್ರಾಂತಿ' ಸಿನಿಮಾ ಗಣರಾಜ್ಯೋತ್ಸವದಂದು ಬಿಡುಗಡೆಯಾಗಿತ್ತು. ಕ್ರಾಂತಿ ಚಿತ್ರದಲ್ಲಿ ಅಕ್ಷರ ಕ್ರಾಂತಿ  ಮಾಡಲಾಗಿತ್ತು. ಅಂದರೆ ಕ್ರಾಂತಿ ಸಿನಿಮಾದಲ್ಲಿ ಸರ್ಕಾರಿ ಕನ್ನಡ ಶಾಲೆಗಳ ಸ್ಥಿತಿಗತಿ ಬಗ್ಗೆ ಚರ್ಚೆ ನಡೆಸಲಾಗಿತ್ತು. ಕ್ರಾಂತಿ ಕಮರ್ಷಿಯಲ್ ಅಂಶಗಳ ಜೊತೆಗೆ ಒಂದು ಸಂದೇಶವನ್ನು ಹೊತ್ತು ಬಂದಿತ್ತು. ಹಣಬಲ, ಬಾಹುಬಲವುಳ್ಳ ಎನ್‌ಆರ್‌ಐ ವ್ಯಕ್ತಿಯೊಬ್ಬ ಖಾಸಗಿ ಶಾಲೆಗಳ ಮೇಲೆ ಸಮರ ಸಾರುವ ಹಾಗೂ ಸರ್ಕಾರವನ್ನು ಸರ್ಕಾರಿ ಶಾಲೆಗಳ ಪರವಾಗುವಂತೆ ಮಾಡುವ ಕಥೆಯನ್ನು ಕ್ರಾಂತಿ ಸಿನಿಮಾ ಹೊಂದಿತ್ತು. ವರ್ಷದ ಮೊದಲ ದೊಡ್ಡ ಸಿನಿಮಾವಾಗಿದ್ದ ಕ್ರಾಂತಿ ಸಿನಿಮಾಗೆ ಮೊದಲ ವಾರ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು. ಆದರೆ, ನಂತರದಲ್ಲಿ ಪ್ರೇಕ್ಷಕರಿಂದ ಅಷ್ಟೊಂದು ರೆಸ್ಪಾನ್ಸ್ ಸಿಕ್ಕಿರಲಿಲ್ಲ.  ಕ್ರಾಂತಿ ಚಿತ್ರ ತಿಂಗಳಿಗೂ ಮುನ್ನವೇ ಓಟಿಟಿಗೆ ಬಂದಿದ್ದು,  ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಸಿನಿಮಾ ಅಷ್ಟು ಬೇಗ ಡಿಜಿಟಲ್ ಫ್ಲಾಟ್‌ಫಾರ್ಮ್‌ಗೆ ಬಂದಿದ್ದು, ಅಚ್ಚರಿ ಮೂಡಿಸಿತ್ತು. 

ಲವ್ ಬರ್ಡ್ಸ್
2

ಕನ್ನಡ ಚಿತ್ರರಂಗದ ಪ್ರಣಯ ಪಕ್ಷಿಗಳು ಎಂದೇ ಕರೆಯಲ್ಪಡುವ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ನಟನೆಯ 'ಲವ್ ಬರ್ಡ್ಸ್' ಸಿನಿಮಾ ಫೆಬ್ರವರಿ ೧೭ರಂದು ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ನಟಿ ಸಂಯುಕ್ತ ಹೊರನಾಡು ವಕೀಲೆಯಾಗಿ ಕಾಣಿಸಿಕೊಂಡಿದ್ದರು. ಲವ್ ಮಾಕ್ಟೇಲ್‌ ಸಿನಿಮಾ ಮೂಲಕ ಮೋಡಿ ಮಾಡಿದದ್ದ ಈ ಜೋಡಿ 'ಲವ್ ಬರ್ಡ್ಸ್' ಚಿತ್ರದಲ್ಲಿ ಗಂಡ-ಹೆಂಡತಿಯಾಗಿ ಕಾಣಿಸಿಕೊಂಡಿದ್ದರು. ದೀಪಕ್‌ (ಕೃಷ್ಣ) ಸಾಫ್ಟ್‌ವೇರ್ ಇಂಜಿನಿಯರ್ ಆಗಿ ನಡೆಸುತ್ತಿರುತ್ತಾನೆ. ಪೂಜಾ (ಮಿಲನಾ) ಬೂಟಿಕ್ ನಡೆಸುತ್ತಿರುತ್ತಾಳೆ. ಇವರದ್ದು ಒಂಥರಾ ಲವ್ ಕಮ್ ಅರೆಂಜ್ಡ್ ಮ್ಯಾರೇಜ್. ಆರಂಭದಲ್ಲಿ ಎಲ್ಲವೂ ಚೆನ್ನಾಗಿರುತ್ತದೆ. ಆದರೆ, ಕಥೆ ಸಾಗಿದಂತೆ ಇಬ್ಬರ ನಡುವೆ ಚಿಕ್ಕ-ಚಿಕ್ಕ ವಿಷಯಕ್ಕೂ ಜಗಳ. ಇದು ಕೊನೆಗೆ ಡಿವೋರ್ಸ್‌ವರೆಗೆ ಹೋಗಿ ಮುಟ್ಟುತ್ತದೆ. ಈ ಜೋಡಿಯ ಸಂಸಾರದಲ್ಲಿ ಬಿರುಗಾಳು ಬೀಸುವುದೇಕೆ ಅನ್ನೋದೆ ಸಿನಿಮಾ ಕಥೆ. ಆದರೆ, ಈ ಸಿನಿಮಾ ನಿರೀಕ್ಷಿಸಿದಷ್ಟು ಯಶಸ್ಸು ಗಳಿಸಲಿಲ್ಲ. ಬಾಕ್ಸಾಪೀಸ್‌ನಲ್ಲೂ ಸೋತಿತ್ತು. 

ನಟ ಭಯಂಕರ
3

ಒಳ್ಳೆ ಹುಡುಗ ಪ್ರಥಮ್ ನಿರ್ದೇಶಿಸಿ, ನಾಯಕನಾಗಿ ಅಭಿನಯಿಸಿದ್ದ 'ನಟ ಭಯಂಕರ' ಸಿನಿಮಾದಲ್ಲಿ ರನ್ ಆಂಟನಿ ಖ್ಯಾತಿ ಸುಶ್ಮಿತಾ ಮತ್ತು ನಿಹಾರಿಕಾ ಶೆಣೈ ನಾಯಕಿಯರಾಗಿ ಕಾಣಿಸಿಕೊಂಡಿದ್ದರು. ಆತ (ಪ್ರಥಮ್) ಚಿತ್ರರಂಗದಲ್ಲಿ ಸ್ಟಾರ್‌ ನಟ. ಅವನ ಸಿನಿಮಾಗಳೆಲ್ಲವೂ ಸೂಪರ್ ಹಿಟ್. ಹೀಗಾಗಿ, ನಿರ್ಮಾಪಕರು ಮತ್ತು ನಿರ್ದೇಶಕರು ಈತನ ಜೊತೆ ಸಿನಿಮಾ ಮಾಢಲು ತುದಿಗಾಲಿನಲ್ಲಿ ನಿಂತಿರುತ್ತಾರೆ. ಆದರೆ, ಆತ ತಾನು ಮಾಡಿದ್ದೇ ಸರಿ ಎನ್ನುವ ಸ್ವಭಾವದವನು. ಈತನ ಸ್ವಭಾವವನ್ನು ಸಹಿಸಿಕೊಳ್ಳಲಾಗದೇ ಎಲ್ಲರೂ ಹೈರಾಣಾಗಿರುತ್ತಾರೆ. ಹೀಗೆ ಎಲ್ಲರನ್ನು ಆಟ ಆಡಿಸುವ ಈತ ಓರ್ವ ಕುರುಡಿ ದೆವ್ವದ ಕೈಗೆ ಸಿಕ್ಕಿಹಾಕಿಕೊಂಡರೆ ಎನೆಲ್ಲಾ ಆಗುತ್ತದೆ ಎಂಬುದು ಸಿನಿಮಾದ ಕಥೆ. ಈ ಸಿನಿಮಾ ಕೂಡ ಯಶಸ್ಸು ಗಳಿಸಲಿಲ್ಲ. 

ಮಿ.ಬ್ಯಾಚುಲರ್
4

ನಾಯ್ಡು ಬಂಡಾರ್ ನಿರ್ದೇಶನದ ರೋಮ್ಯಾಂಟಿಕ್ ಎಂಟರ್‌ಟೈನರ್ ಸಿನಿಮಾ ಮಿ.ಬ್ಯಾಚುಲರ್. ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ, ನಿಮಿಕಾ ರತ್ನಾಕರ್ ಮತ್ತು ಮಿಲನಾ ನಾಗರಾಜ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ಅವರು ಸಾಫ್ಟವೇರ್ ಇಂಜಿನಿಯರ್. ಚಿತ್ರದಲ್ಲಿ ನಾಯಕ ಚಿಕ್ಕ ವಯಸ್ಸಿಂದಲೂ ಮದುವೆ ಬಗ್ಗೆ ಸಾಕಷ್ಟು ಕನಸು ಇಟ್ಟುಕೊಂಡಿರುತ್ತಾನೆ. ಆದರೆ, ಹುಡುಗಿ ಮಾತ್ರ ಸಿಗುವುದಿಲ್ಲ. ಈ ಚಡಪಡಿಕೆಯೇ ಸಿನಿಮಾ ಕಥೆ. ಈ ಸಿನಿಮಾದಲ್ಲಿ ಮಿಲನಾ ಅವರದ್ದು ತಿರುವು ಕೊಡುವಂತಹ ಪಾತ್ರ. ಡಾರ್ಲಿಂಗ್ ಕೃಷ್ಣ ಅವರ ಈ ಸಿನಿಮಾ ಕೂಡ ಬಾಕ್ಸಾಪೀಸ್‌ನಲ್ಲಿ ಸದ್ದು ಮಾಡಲಿಲ್ಲ. 

 

ಆರ್ಕೆಸ್ಟ್ರಾ ಮೈಸೂರು
5

ಸುನೀಲ್ ಮೈಸೂರು ನಿರ್ದೇಶನದ 'ಆರ್ಕೆಸ್ಟ್ರಾ ಮೈಸೂರು' ಚಿತ್ರದಲ್ಲಿ ಪೂರ್ಣಚಂದ್ರ ಮೈಸೂರು ಪ್ರಮುಖ ಪಾತ್ರ ನಿರ್ವಹಿಸಿದ್ದರು. ಓರ್ವ ಮುಖ್ಯ ಗಾಯಕನಾಗಬೇಕೆಂದರೆ ಎನೆಲ್ಲಾ ತೊಡಕುಗಳು ಇರುತ್ತವೆ ಎಂಬುದನ್ನು ತೋರಿಸಲಾಗಿತ್ತು. ಹಲ್ಲಿನ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಪೂರ್ಣಚಂದ್ರನಿಗೆ ಆರ್ಕೆಸ್ಟ್ರಾ ಸಿಂಗರ್ ಆಗುವ ಕನಸಿರುತ್ತದೆ. ಮೈಸೂರಿನಲ್ಲಿರುವ ಹಲವಾರು ಆರ್ಕೆಸ್ಟ್ರಾ ಕಂಪನಿಗಳಿಗೆ ತೆರಳಿ ಅವಕಾಶಕ್ಕಾಗಿ ಹುಡುಕಾಡುತ್ತಾನೆ. ಈ ಸಂದರ್ಭ ಮೈಸೂರು ಸುತ್ತಮುತ್ತ ನವೀನ್ ರಾಜ್ (ದಿಲೀಪ್‌ ರಾಜ್) ಆರ್ಕೆಸ್ಟ್ರಾದಲ್ಲಿ ಸ್ಟಾರ್‌ ಸಿಂಗರ್ ಆಗಿರುತ್ತಾರೆ. ಅವರ ಜೊತೆ ಸೇರಿಕೊಳ್ಳುವ ಪೂರ್ಣಚಂದ್ರ ಮುಂದೆ ಗಾಯಕನಾಗುತ್ತಾನೋ ಇಲ್ಲವೋ ಎಂಬುದು ಚಿತ್ರದ ಒನ್‌ಲೈನ್ ಕಥೆ. ಆದರೆ, ಇ ಸಿನಿಮಾ ಕೂಡ ಗೆಲ್ಲಲಿಲ್ಲ.  

 

ಸ್ಫೂಕೀ ಕಾಲೇಜ್
6

ಭರತ್ ಜಿ ನಿರ್ದೇಶನದ 'ಸ್ಫೂಕಿ ಕಾಲೇಜ್' ಸೈಕಲಾಜಿಕಲ್ ಹಾರರ್ ಸಿನಿಮಾ. ಈ ಚಿತ್ರದಲ್ಲಿ  ಖುಷಿ ರವಿ ಮತ್ತು ವಿವೇಕ್ ಸಿಂಹ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಕಾಲೇಜೊಂದರಲ್ಲಿ ಆರಂಭವಾಗುವ ಈ ಸಿನಿಮಾದಲ್ಲಿ ಏಕಾಏಕಿ ಆತ್ಮಗಳ ಆಟ ಶುರುವಾಗುತ್ತದೆ. ಈ ಸಿನಿಮಾದಲ್ಲಿ ಹಾರರ್‌ ಸ್ಟೋರಿ ಜೊತೆಗೆ ಲವ್ ಸ್ಟೋರಿ ಕೂಡ ಇದೆ. ಈ ಎರಡು ಕಥೆಗಳು ಆತ್ಮಕ್ಕೆ ದಾರಿ ತೋರಿಸುತ್ತವೆ. ಕಾಲೆಜಿನಲ್ಲಿ ದೆವ್ವ ಇರೋದು ಸತ್ಯನಾ, ಸುಳ್ಳಾ?ಎಂಬ ಕೂತೂಹಲವನ್ನು ಮೂಡಿಸುತ್ತ ಈ ಸಿನಿಮಾ ಮುಂದುವರೆಯುತ್ತದೆ.ಹಾರರ್ ಕಂಟೆಂಟ್ ಹೊಂದಿದ್ದ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಗಳಿಸಲಿಲ್ಲ. 

 

ದೂರದರ್ಶನ
7

ಸುಕೇಶ್ ಶೆಟ್ಟಿ ನಿರ್ದೇಶನದ ಚೊಚ್ಚಲ ಸಿನಿಮಾ ದೂರದರ್ಶನ. ಈ ಸಿನಿಮಾದಲ್ಲಿ 'ದಿಯಾ' ಹೀರೊ ಪೃಥ್ವಿ ಅಂಬರ್ ನಾಯಕನಾಗಿದ್ದರೆ, ಅಯಾನ ನಾಯಕಿ.  ಹಳ್ಳಿಯೊಂದಕ್ಕೆ ಟಿವಿಯ ಎಂಟ್ರಿ ಕೊಡುತ್ತೆ. ಅಲ್ಲಿಂದ ಆ ಹಳ್ಳಿಯಲ್ಲಿ ಏನೆಲ್ಲಾ ಬದಲಾವಣೆಯಾಗುತ್ತೆ ಅನ್ನೋದೇ ಸಿನಿಮಾದ ಕಥೆ. ಕಥೆಯಲ್ಲಿ ಗಂಭೀರತೆ ಜೊತೆ ಜೊತೆಗೆ ಹಾಸ್ಯ ಕೂಡ ಒಳಗೊಂಡಿದ್ದು, ಉಗ್ರಂ ಮಂಜು, ಸುಂದರ್ ವೀಣಾ, ಹರಿಣಿ, ದೀಪಕ್ ರೈ ಪಾಣಾಜೆ, ರಘು ರಮಣಕೊಪ್ಪ, ಹುಲಿ ಕಾರ್ತಿಕ್, ಸೂರಜ್ ಮಂಗಳೂರು, ಸೂರ್ಯ ಕುಂದಾಪುರ ಈ ಸಿನಿಮಾದಲ್ಲಿ ನಟಿಸಿದ್ದಾರೆ. 

ಕಾಸಿನ ಸರ
8

ಕಾಸಿನ ಸರ ಸಿನಿಮಾವನ್ನು ಎನ್ ಆರ್ ನಂಜುಂಡೇಗೌಡ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ವಿಜಯ್ ರಾಘವೇಂದ್ರ, ಹರ್ಷಿಕಾ ಪೂಣಚ್ಚ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಉಮಾಶ್ರೀ, ನೀನಾಸಂ ಅಶ್ವಥ,  ಮಂಡ್ಯ ರಮೇಶ್ ಮತ್ತು ಸುಧಾ ಬೆಳವಾಡಿ ಪೋಷಕ  ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇದೊಂದು ಕೃಷಿ ಸಂಬಂದಿತ ಸಿನಿಮಾವಾಗಿದ್ದು, ಈ ಸಿನಿಮಾದಲ್ಲಿ ವಿಜಯ್ ರಾಘವೇಂದ್ರ ರೈತ ಹೋರಾಟಗಾರನ ಪಾತ್ರ ಮಾಡಿದ್ದು, ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಗಲಿಲ್ಲ. 

ಖೆಯೊಸ್
9

ಅದಿತಿ ಪ್ರಭುದೇವ ಮತ್ತು ನಟ ಶಶಿಕುಮಾರ್ ಪುತ್ರ ಅಕ್ಷಿತ್ ಶಶಿಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದ ಖೆಯೊಸ್ ಸಿನಿಮಾದಲ್ಲಿವನ್ನು ಮೂಲತಃ ವೈದ್ಯರಾಗಿರುವ ಡಾ.ಜಿ.ವಿಪ್ರಸಾದ್ ನಿರ್ದೇಶನ ಮಾಡಿದ್ದರು. ಈ ಸಿನಿಮಾದಲ್ಲಿ ಅದಿತಿ ಹಾಗೂ ಅಕ್ಷಿತ್ ವೈದ್ಯಕೀಯ ವಿದ್ಯಾಥಿಗಳ ಪಾತ್ರ ನಿರ್ವಹಿಸಿದ್ದರು. ಮೆಡಿಕಲ್ ವಿದ್ಯಾರ್ಥಿಗಳ ಕ್ರೈಂ-ಥ್ರಿಲ್ಲರ್ ಕಥೆ ಒಳಗೊಂಡಿದ್ದ ಈ ಸಿನಿಮಾ ಕೂಡ ಹೆಚ್ಚು ಸದ್ದು ಮಾಡಲಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+