X
ಹೋಮ್ ಚಲನಚಿತ್ರಗಳ ಒಳನೋಟ

ಒಳ್ಳೇ ಕಥೆಯ ಮೂಲಕ ಪ್ರೇಕ್ಷಕರ ಮನಗೆದ್ದು ಬಾಕ್ಸಾಫೀಸ್‌ನಲ್ಲಿ ಸೋತ ಕನ್ನಡ ಸಿನಿಮಾಗಳಿವು!

Author Sowmya Bairappa | Published: Saturday, November 9, 2024, 11:02 AM [IST]

ಸದ್ಯ ಸಿನಿಮಾರಂಗ ವ್ಯಾಪಾರೀಕರಣವಾಗಿ ಬದಲಾಗುತ್ತಿದೆ. ಒಂದು ಸಿನಿಮಾ ಯಶಸ್ವಿಯಾಗಬೇಕಾದರೆ ಒಳ್ಳೆಯ ಕಥೆ, ಉತ್ತಮ ಸಂಭಾಷಣೆ, ಹಾಡು ಎಲ್ಲವೂ ಮುಖ್ಯವಾಗಿರುತ್ತದೆ. ಸಿನಿಮಾದಲ್ಲಿ ಉತ್ತಮ ಕಥೆಯಿದ್ದರೆ ಪ್ರೇಕ್ಷಕರೇ ಆ ಸಿನಿಮಾದ ಕೈಹಿಡಿಯುತ್ತಾರೆ. ಆದರೆ, ಕೆಲವೊಮ್ಮೆ ಸಿನಿಮಾದ ಕಥೆ ಉತ್ತಮವಾಗಿದ್ದರೂ ಕೂಡ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುವುದಿಲ್ಲ. ಅದಕ್ಕೆ ಪ್ರಮುಖ ಕಾರಣ ಥೀಯೇಟರ್ ಮತ್ತು ಪ್ರಮೋಷನ್ ಕೊರತೆ. ಒಳ್ಳೆಯ ಕಥೆಯ ಮೂಲಕ ಪ್ರೇಕ್ಷಕರ ಮನಗೆದ್ದು ಬಾಕ್ಸಾಫೀಸ್‌ನಲ್ಲಿ ಸೋತ ಕನ್ನಡ ಸಿನಿಮಾಗಳ ಪಟ್ಟಿಯನ್ನು ನೀಡಲಾಗಿದೆ.


cover image
ಪರಮಾತ್ಮ

ಯೋಗರಾಜ್ ಭಟ್ ಅವರ ನಿರ್ದೇಶನದ ಮತ್ತು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಾಯಕನಾಗಿ ನಟಿಸಿದ್ದ 'ಪರಮಾತ್ಮ' ಸಿನಿಮಾ ಇಂದಿಗೂ ಅನೇಕರ ಫೇವರಿಟ್ ಸಿನಿಮಾ ಅಂದರೆ ತಪ್ಪಾಗಲ್ಲ. ಪರಮಾತ್ಮ ಇದು ಕೇವಲ ಒಂದು ಚಿತ್ರವಲ್ಲ ಎಮೋಷನ್ ಎಂದು ಹೇಳುವವರೇ ಹೆಚ್ಚಿದ್ದಾರೆ. ಈ ಸಿನಿಮಾದ ಒಂದೊಂದು ಹಾಡುಗಳು ಕೂಡ ಅದ್ಭುತವಾಗಿದ್ದು, ಜನರ ಮನಸಲ್ಲಿ ಅಚ್ಚಳಿಯದೇ ಉಳಿದಿವೆ. ಚಿತ್ರದ ಡೈಲಾಗ್‌ಗಳು, ಸಂಭಾಷಣೆ, ಅನಿರೀಕ್ಷಿತ ಕ್ಲೈಮ್ಯಾಕ್ಸ್ ಎಲ್ಲವೂ ಸಖತ್ ಆಗಿದ್ದವು. ಆದರೆ, ಈ ಸಿನಿಮಾ ಥಿಯೇಟರ್‌ಗಳಲ್ಲಿ ಓಡಲಿಲ್ಲ. ಚಿತ್ರ ಬಿಡುಗಡೆಯಾದಾಗ ಅದಕ್ಕೆ ಸಿಗಬೇಕಿದ್ದ ಪ್ರಶಂಸೆ ಮತ್ತು ಯಶಸ್ಸು ಸಿಗದೇ ನಂತರದ ದಿನಗಳಲ್ಲಿ ಆ ಚಿತ್ರದ ಬೆಲೆ ಜನರಿಗೆ ಅರ್ಥವಾಗಿ ಇದೊಂದು 'ಮೋಸ್ಟ್ ಅಂಡರ್‌ರೇಟೆಡ್ ಸಿನಿಮಾ ಗುರು ಜನ ನೋಡಲಿಲ್ಲ ಅಷ್ಟೇ' ಎನಿಸಿಕೊಳ್ಳುವ ಚಿತ್ರಗಳಿವೆ. ಅದೇ ಸಾಲಿಗೆ ಸೇರುತ್ತೆ ಅಪ್ಪು ಹಾಗೂ ಯೋಗರಾಜ್ ಭಟ್ ಕಾಂಬಿನೇಶನ್‌ನ ಪರಮಾತ್ಮ.

ಉಳಿದವರು ಕಂಡಂತೆ

2014ರಲ್ಲಿ ತೆರೆಕಂಡ  'ಉಳಿದವರು ಕಂಡಂತೆ' ಚಿತ್ರ ಒಂದು ವಿನೂತನ ಪ್ರಯತ್ನವಾಗಿತ್ತು. ಹಲವು ಕೋನಗಳಲ್ಲಿ ಒಂದು ವ್ಯಕ್ತಿಯ ಕಥೆಯನ್ನು ಹೇಳುವ ಪರಿ ಪ್ರಶಂಸೆ ಪಡೆದಿತ್ತು. ಈ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ನಾಯಕನಾಗಿ ನಟಿಸುವುದಲ್ಲದೇ, ನಿರ್ದೇಶನ ಮಾಡಿದ್ದರು. ಆದರೆ, ಉತ್ತಮ ಕಥೆ ಹೊಂದಿದ್ದರೂ ಕೂಡ ಈ ಸಿನಿಮಾ ಬಾಕ್ಸಾಫಿಸ್‌ನಲ್ಲಿ ಯಶಸ್ವಿಯಾಗಲಿಲ್ಲ.  ಆದರೆ, ನಂತರದ ದಿನಗಳಲ್ಲಿ ಇದೊಂದು ಕನ್ನಡದ ಕಲ್ಟ್ ಚಿತ್ರವಾಗಿ ಬದಲಾಯಿತು. ತಮಿಳು ಭಾಷೆಯಲ್ಲೂ ರಿಮೇಕ್ ಆಯಿತು. ಚಿತ್ರದ ನಿರ್ದೇಶನಕ್ಕಾಗಿ ರಕ್ಷಿತ್ ಫಿಲ್ಮಫೇರ್ ಮತ್ತು ಕರ್ನಾಟಕ ರಾಜ್ಯ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದರು.

ಶಾಖಾಹಾರಿ

ರಂಗಾಯಣ ರಘು ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದ 'ಶಾಖಾಹಾರಿ' ಸಿನಿಮಾಗೆ ಪ್ರೇಕ್ಷಕರಿಂದ ಅದ್ಭುತ ರೆಸ್ಪಾನ್ಸ್ ಪಡೆದುಕೊಂಡಿತ್ತು. ಸಂದೀಪ್ ಸುಂಕದ್ ನಿರ್ದೇಶನದ ಚೊಚ್ಚಲ ಚಿತ್ರ ಇದಾಗಿದ್ದು, ಶಿವಮೊಗ್ಗದ ತೀರ್ಥಹಳ್ಳಿಯ ಹಳ್ಳಿಯೊಂದರಲ್ಲಿ ನಡೆಯುವ ರೋಚಕ ಕಥೆಯೇ ಶಾಖಾಹಾರಿ. ಸಿನಿಮಾದಲ್ಲಿ ಮಾಸ್ತಿಕಟ್ಟೆ ಸುಬ್ರಮಣ್ಯ ಅಲಿಯಾಸ್ ಸುಬ್ಬಣ್ಣ (ರಂಗಾಯಣ ರಘು)ಗೆ ಹಿಂದೆ-ಮುಂದೆ ಯಾರೂ ಇರುವುದಿಲ್ಲ. ಹೋಟೆಲ್ ಮಾಲೀಕನಾಗಿರುವ ಸುಬ್ಬಣ್ಣ, ಬಾಣಸಿಗನಾಗಿಯೂ ಕೆಲಸ ಮಾಡಿಕೊಂಡಿರುತ್ತಾರೆ. ಇವರದ್ದು ಶುದ್ಧ ಶಾಖಾಹಾರಿ ಹೋಟೆಲ್. ಹೀಗಿರುವಾಗ, ಅಲ್ಲಿ ನಡೆಯುವ ಕೆಲ ಘಟನೆಗಳಿಂದ ಸುಬ್ಬಣ್ಣನ ಹೋಟೆಲ್ ಶಾಖಾಹಾರಿಯಾಗಿ ಬದಲಾಗುತ್ತದೆ. ಅದು ಹೇಗೆ? ಶುದ್ಧ ಸಸ್ಯಹಾರಿಯಾದ ಸುಬ್ಬಣ್ಣ ಕೊಲೆಗಾರನಾಗುವುದು ಯಾಕೆ? ಎಂಬುದೇ ಸಿನಿಮಾ ಕಥೆ.  ಶಾಖಾಹಾರಿಯಲ್ಲಿ  ರಂಗಾಯಣ ರಘು ಅವರ ಅಭಿನಯ ಕಂಡು ಚಿತ್ರತಂಡ ಅವರಿಗೆ 'ಅಭಿನಯಾಸುರ' ಅಂತ ಬಿರುದು ಕೊಟ್ಟಿದೆ.

ಬ್ಲಿಂಕ್

ಶ್ರೀನಿಧಿ ಬೆಂಗಳೂರು ನಿರ್ದೇಶನದ ಟೈಮ್ ಟ್ರಾವೆಲ್ ಸಿನಿಮಾ 'ಬ್ಲಿಂಕ್'. ಚಿತ್ರದಲ್ಲಿ ದೀಕ್ಷಿತ್ ಶೆಟ್ಟಿ, ಚೈತ್ರಾ ಆಚರ್, ಮಂದಾರ ಬಟ್ಟಲಹಳ್ಳಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ಆಧುನಿಕ ದಿನದ ಬೆಂಗಳೂರಿನ ಹಿನ್ನೆಲೆಯ ವಿರುದ್ಧವಾಗಿ, ಬ್ಲಿಂಕ್ ನಮಗೆ 24 ವರ್ಷದ ರಂಗಭೂಮಿ ಕಲಾವಿದ ಅಪೂರ್ವ (ದೀಕ್ಷಿತ್ ಶೆಟ್ಟಿ) ಅವರನ್ನು ಪರಿಚಯಿಸುತ್ತದೆ. ಒಬ್ಬ ಸಾಮಾನ್ಯ ಹುಡುಗ, ಆತನಿಗೆ ಆತನದ್ದೇ ಒಂದು ಕನಸಿನ ಲೋಕ. ಆ ಲೋಕದಲ್ಲಿ ಆತ ಸುಖೀ..ಹೀಗಿರುವಾಗಲೇ ಟೈಮ್ ಟ್ರಾವೆಲಿಂಗ್ ಎಂಬ ವಿಚಿತ್ರ ಜಗತ್ತು ತೆರೆದುಕೊಳ್ಳುತ್ತದೆ. ಅಲ್ಲಿಂದ ಎಲ್ಲವೂ ಬದಲಾಗಿ ಹೋಗುತ್ತದೆ. ಸಿನಿಮಾಗೆ ಕನ್ನಡ ಮಾತ್ರವಲ್ಲದೇ, ಪರಭಾಷಾ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡಿತ್ತು. ವಿದೇಶದಲ್ಲೂ ಬಿಡುಗಡೆಯಾಗಿ ಮೆಚ್ಚುಗೆ ಗಳಿಸಿತ್ತು. ಆದರೆ, ಬಾಕ್ಸಾಪೀಸ್‌ನಲ್ಲಿ ಗೆಲ್ಲಲಿಲ್ಲ.

ಜಸ್ಟ್ ಮಾತ್ ಮಾತಲ್ಲಿ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಿರ್ದೇಶಿಸಿ, ನಟಿಸಿರುವ ಜಸ್ಟ್ ಮಾತ್ ಮಾತಲ್ಲಿ ಸಿನಿಮಾ ಕೂಡ ಪರಮಾತ್ಮ ಚಿತ್ರದಂತೆ ಸೊಗಸಾದ ಹಾಡುಗಳನ್ನು ಹೊಂದಿತ್ತು. ಇದೊಂದು ಪ್ರೇಮಕಥೆಯುಳ್ಳ ಸಿನಿಮಾವಾಗಿದ್ದು, ಮೋಹಕತಾರೆ ರಮ್ಯಾ ನಾಯಕಿಯಾಗಿ ಅಭಿನಯಿಸಿದ್ದರು. ಆದರೆ, ಈ ಚಿತ್ರ ಥಿಯೇಟರ್‌ಗಳಲ್ಲಿ ಓಡಲಿಲ್ಲ. ಆದರೆ, ಈ ಸಿನಿಮಾ ಒಂದು ಉತ್ತಮ ಕಥೆ ಹೊಂದಿತ್ತು.

ಆ ಕರಾಳ ರಾತ್ರಿ

ಜಯ ಶ್ರೀನಿವಾಸನ್  ನಿರ್ದೇಶನದ 'ಆ ಕರಾಳ ರಾತ್ರಿ' ಚಿತ್ರದಲ್ಲಿ ಜಯರಾಮ್ ಕಾರ್ತಿಕ್, ಅನುಪಮಾ ಗೌಡ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ಇದೊಂದು ಕಾದಂಬರಿ ಆಧಾರಿತ ಸಿನಿಮಾ. ಇದೊಂದು ಸ್ಯಾಂಡಲ್‌ವುಡ್‌ನ ಬೆಸ್ಟ್ ಥ್ರಿಲ್ಲರ್ ಚಿತ್ರ ಎಂದರೆ ತಪ್ಪಾಗಲ್ಲ. ಆದರೆ, ಚಿತ್ರಮಂದಿರಗಳ ಕೊರತೆ ಹಾಗೂ ಮಾರ್ಕೆಟಿಂಗ್ ವಿಷಯಗಳಿಂದ ಈ ಸಿನಿಮಾ ಗೆಲ್ಲಲಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+