ಬಿಗ್ಬಾಸ್ ಸೀಸನ್ 10 ಆರಂಭವಾದ ಒಂದು ತಿಂಗಳಲ್ಲೇ ಕುರುಕ್ಷೇತ್ರವಾಗಿ ಮಾರ್ಪಟ್ಟಿದೆ. ದೊಡ್ಮನೆಯೊಳಗೆ ದಿನೇ-ದಿನೇ ಅತಿರೇಕದ ಜಗಳಗಳು ಹೆಚ್ಚಾಗುತ್ತಿವೆ. ಕಳೆದ ಸಂಚಿಕೆಯಲ್ಲಿ ವಿನಯ್ ಗೌಡ ಅವರು 'ಬಳೇಗಳ ರಾಜ' ಅಂತ ಪದೇ ಪದೇ ಕಾರ್ತಿಕ್ ಮಹೇಶ್ಗೆ ಹಂಗಿಸುತ್ತಿದ್ದಾರೆ. ಇದೀಗ ಕಾರ್ತಿಕ್ ಬಗ್ಗೆ ವಿನಯ್ ಮಾತನಾಡಿರುವ ಮತ್ತೊಂದು ಬಳೆ ಡೈಲಾಗ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.