ಬಿಗ್ಬಾಸ್ ಕನ್ನಡ ಸೀಸನ್ 11ರ ಮನೆಯಲ್ಲಿ ಗುರುವಾರದ ಸಂಚಿಕೆಯಲ್ಲಿ ಸ್ಪರ್ಧಿಗಳ ನಡುವೆ ದೊಡ್ಡ ಯುದ್ಧವೇ ಆಗಿದೆ. ನಿನ್ನೆ ನಡೆದ ಜಗಳದಲ್ಲಿ ಬಹುತೇಕ ಎಲ್ಲಾ ಸ್ಫರ್ಧಿಗಳು ಭಾಗಿಯಾಗಿದ್ದರು. ಎಲ್ಲಾ ಸ್ಪರ್ಧಿಗಳು ಲಾಯರ್ ಜಗದೀಶ್ ಅವರ ವಿರುದ್ಧ ಕಿಡಿಕಾರುತ್ತಿದ್ದರು. ಮನೆಯ ಸದಸ್ಯರ ನಡುವೆ ದೊಡ್ಡ ಗಲಾಟೆ ನಡೆಯುಯತ್ತಿದ್ದರೂ ಧರ್ಮ ಕೀರ್ತಿರಾಜ್ ಹಾಗೂ ಅನುಷಾ ಕಿಚನ್ನಲ್ಲಿ ತಮ್ಮದೇ ಲೋಕದಲ್ಲಿ ಇದ್ದರು. ಸದ್ಯ ಅವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.