X
ಹೋಮ್ ಚಲನಚಿತ್ರಗಳ ಒಳನೋಟ

ಅತ್ತ ಸ್ಪರ್ಧಿಗಳ ನಡುವೆ ಮಾರಾಮಾರಿ: ಇತ್ತ ಗೆಳೆಯನಿಗೆ ಪ್ರೀತಿಯಿಂದ ಚಪಾತಿ ತಿನ್ನಿಸಿದ ಅನುಷಾ ರೈ

Author Sowmya Bairappa | Published: Friday, October 18, 2024, 12:58 PM [IST]

ಬಿಗ್‌ಬಾಸ್ ಕನ್ನಡ ಸೀಸನ್ 11ರ ಮನೆಯಲ್ಲಿ ಗುರುವಾರದ ಸಂಚಿಕೆಯಲ್ಲಿ ಸ್ಪರ್ಧಿಗಳ ನಡುವೆ ದೊಡ್ಡ ಯುದ್ಧವೇ ಆಗಿದೆ. ನಿನ್ನೆ ನಡೆದ ಜಗಳದಲ್ಲಿ ಬಹುತೇಕ ಎಲ್ಲಾ ಸ್ಫರ್ಧಿಗಳು ಭಾಗಿಯಾಗಿದ್ದರು. ಎಲ್ಲಾ ಸ್ಪರ್ಧಿಗಳು ಲಾಯರ್ ಜಗದೀಶ್ ಅವರ ವಿರುದ್ಧ ಕಿಡಿಕಾರುತ್ತಿದ್ದರು. ಮನೆಯ ಸದಸ್ಯರ ನಡುವೆ ದೊಡ್ಡ ಗಲಾಟೆ ನಡೆಯುಯತ್ತಿದ್ದರೂ ಧರ್ಮ ಕೀರ್ತಿರಾಜ್ ಹಾಗೂ ಅನುಷಾ ಕಿಚನ್‌ನಲ್ಲಿ ತಮ್ಮದೇ ಲೋಕದಲ್ಲಿ ಇದ್ದರು. ಸದ್ಯ ಅವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.


cover image
ಕಿತ್ತಾಟದ ನಡುವೆ ಕೈತುತ್ತು

ಬಿಗ್‌ಬಾಸ್ ಮನೆಗೆ ಕಾಲಿಡುವ ಮುನ್ನವೇ ಧರ್ಮ ಹಾಗೂ ಅನುಷಾ ಆತ್ಮೀಯ ಸ್ನೇಹಿತರು. ಇವರಿಬ್ಬರು ಒಟ್ಟಿಗೆ ಮೂರ್ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೇ ಕಾರಣಕ್ಕೆ ಇಬ್ಬರ ನಡುವೆ ಒಳ್ಳೆಯ ಬಾಂಧವ್ಯವಿದೆ. ಆದರೆ, ಅದು ಸ್ನೇಹಕ್ಕೂ ಮೀರಿದ ಬಾಂಧವ್ಯನಾ? ಗೊತ್ತಿಲ್ಲ. ಆದರೆ, ಅನುಮಾನ ಎಲ್ಲರಲ್ಲಿ ಇದ್ದೇ ಇದೆ. ಕಳೆದ ಸಂಚಿಕೆಯಲ್ಲಿ ಲಾಯರ್ ಜಗದೀಶ್ ಹಾಗೂ ಉಳಿದ ಸ್ಪರ್ಧಿಗಳು ದೊಡ್ಡದಾಗಿ ಜಗಳವಾಡಿಕೊಂಡಿದ್ದಾರೆ. ಈ ಸಂದರ್ಭ ಅನುಷಾ ಹಾಗೂ ಧರ್ಮ ಕಿಚನ್‌ನಲ್ಲಿ ಚಪಾತಿ ಮಾಡುತ್ತಿದ್ದರು. ಇವರಿಬ್ಬರು ಗಲಾಟೆ ನಡೆಯುವಾಗ ಅಲ್ಲಿಗೆ ತೆರಳಿಲ್ಲ. ಬದಲಾಗಿ ಅಲ್ಲಿಯೇ ನಿಂತು ಎಲ್ಲವನ್ನು ನೋಡುತ್ತಿದ್ದರು. ಕಿತ್ತಾಟ ನಡೆಯುವಾಗ ಅನುಷಾ ಪ್ರೀತಿಯಿಂದ ಧರ್ಮ ಅವರಿಗೆ ಚಪಾತಿ ತಿನ್ನಿಸಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. 


ತೀರಾ ಒಳ್ಳೆಯವನು ಧರ್ಮ

ಈ ಹಿಂದೆ ಧರ್ಮ ಅವರ ಬಗ್ಗೆ ಮಾನಸ ಜೊತೆ ಮಾತನಾಡಿದ್ದ ಅನುಷಾ, ಅವನು ತೀರಾ ಒಳ್ಳೆಯವನು. ತೀರಾ ಕೆಟ್ಟವರು ಜಗದೀಶ್. ನನಗೆ ಅವರಿಬ್ಬರ ರೀತಿಯೂ ಇರೋಕೆ ಆಗಲ್ಲ. ಧರ್ಮ ಯಾರ ಬಗ್ಗೆಯೂ ಹಿಂದೆಯಿಂದ ಮಾತನಾಡಲ್ಲ. ಹೊರಗಡೆಯೂ ಅವನು ಹಾಗೆಯೇ. ಆಕ್ಚುಲಿ ಗಾಸಿಪ್ ಮಾಡಬಾರದು ಅಂತ ನಾನು ಕಲಿತ್ತಿದ್ದೇ ಧರ್ಮನಿಂದ. ನಾನೇ ಯಾರಾದರೂ ಹಾಗೇ ಮಾಡಿದ್ರು, ಹೀಗೆ ಮಾಡಿದ್ರು ಅಂತ ಅಳುತ್ತಾ ಹೇಳಿದ್ರೆ, ಹೋಗಲಿ ಬಿಡು ಅಂತ ಸಮಾಧಾನ ಮಾಡುತ್ತಿದ್ರು. ಅವರ ಒಳ್ಳೆಯ ಗುಣ ನೋಡಿ ನೋಡಿ, ನನಗೂ ಅದೇ ಬಂದಿದೆ ಎಂದಿದ್ದರು. 

ಧರ್ಮ ಜೊತೆ ಬ್ರೇಕಪ್ ಆಯ್ತು

ಎರಡನೇ ವಾರ ಟ್ರೂತ್ ಆರ್ ಡೇರ್ ಗೇಮ್‌ನಲ್ಲಿ ಅನುಷಾ ರೈ ತಮ್ಮ ಲವ್ ಬ್ರೇಕಪ್ ಬಗ್ಗೆ ಬಾಯ್ಬಿಟ್ಟಿದ್ದಾರೆ. ಧರ್ಮ ಜೊತೆ ಬ್ರೇಕಪ್ ಆಯ್ತು ಅಂತಲೂ ಹೇಳಿದ್ದರು. ಇದು ಎಷ್ಟರಮಟ್ಟಿಗೆ ನಿಜ ಅಂತ ಅವರಿಬ್ಬರೇ ಸ್ಪಷ್ಟಪಡಿಸಬೇಕು. ಇನ್ನು ಧರ್ಮ ಅವರ ವ್ಯಕ್ತಿತ್ವದಲ್ಲಿ ಸಖತ್ ಸಾಫ್ಟ್. ಯಾರ ವಿರುದ್ಧವೂ ಪಿತೂರಿ ಮಾಡಿದವರಲ್ಲ. ಸಖತ್ ಕೂಲ್ ಆಗಿರುತ್ತಾರೆ. ಯಾವಾಗಲೂ ಪಾಸಿಟಿವ್ ಆಗಿ ಯೋಚನೆ ಮಾಡುತ್ತಾರೆ. ದೊಡ್ಮನೆಯಲ್ಲಿ ಧರ್ಮ ಹಾಗೂ ಅನುಷಾ ಕ್ಲೋಸ್ ಆಗುತ್ತಿದ್ದು, ಲವ್ ಸ್ಟೋರಿ ಹುಟ್ಟಿಕೊಳ್ಳೋ ಸಾಧ್ಯತೆಯಿದೆ. 


ತ್ರಿಕೋನ ಪ್ರೇಮಕಥೆ

ಕಳೆದ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಅನುಷಾ ರೈ, ಧರ್ಮ ಮತ್ತು ಐಶ್ವರ್ಯ ಅವರ ತ್ರಿಕೋನ ಪ್ರೇಮಕಥೆಯ ಕುರಿತು ಸುದೀಪ್ ಚರ್ಚೆ ಮಾಡಿದ್ದರು. ಧರ್ಮ ಕೀರ್ತಿರಾಜ್ ಅನುಷಾ ಅವರ ಜೊತೆ ಮಾತನಾಡಿದರೆ, ಐಶ್ವರ್ಯ ಅವರ ಮುಖ ಸಣ್ಣದಾಗುತ್ತಾ ಎಂದು ಪ್ರಶ್ನೆ ಕೇಳಿದ್ದರು. ಇದಕ್ಕೆ ಮನೆಯ ಸದಸ್ಯರೆಲ್ಲ ಹೌದು ಹೌದು ಎಂದಿದ್ದರು. ಅನುಷಾ ಜೊತೆ ಧರ್ಮ ಓಡಾಡುತ್ತಿದ್ದರೆ, ಐಶ್ವರ್ಯ ಮುಖ ಚಿಕ್ಕದಾಗುತ್ತೆ ಎಂದಿದ್ದರು. ಆದರೆ, ಐಶ್ವರ್ಯ ಈ ವಿಚಾರವನ್ನು ತಳ್ಳಿ ಹಾಕಿದ್ದರು. ನಾನು ಧರ್ಮ ಜೊತೆ ಮಾತನಾಡಿದರೆ, ಅನುಷಾ ಬೇಸರ ಮಾಡಿಕೊಳ್ಳುತ್ತಾರೆ ಎಂದು ಹೇಳಿದ್ದರು. ಇನ್ನೂ ಇದರ ನಡುವೆ ಅನುಷಾ ಮತ್ತು ಧರ್ಮ ನಡುವೆ ಈ ಹಿಂದೆಯೇ ಲವ್ ಸ್ಟೋರಿ ಶುರುವಾಗಿತ್ತು ಎನ್ನುವ ಸುದ್ದಿ ಕೇಳಿದಾಗ ಐಶ್ವರ್ಯ ಬೇಸರಗೊಂಡಿದ್ದರು.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+