X
ಹೋಮ್ ಚಲನಚಿತ್ರಗಳ ಒಳನೋಟ

ತುಕಾಲಿ ಸಂತೋಷ್ ನಂಬಿಕೆಗೆ ಯೋಗ್ಯರಲ್ಲ ಎಂದ ಮನೆಮಂದಿ: ಇತ್ತ ಮಧ್ಯರಾತ್ರಿ ಸ್ವಿಮ್ಮಿಂಗ್ ಪೂಲ್‌ಗೆ ಹಾರಿದ ಸಂಗೀತಾ

Author Sowmya Bairappa | Published: Monday, November 20, 2023, 02:37 PM [IST]

ಬಿಗ್‌ಬಾಸ್ ಮನೆಯ ಸದಸ್ಯರಿಂದ ತುಕಾಲಿ ಸಂತೋಷ್ 'ಫೇಕ್' ಎಂಬ ಹಣೆಪಟ್ಟಿ ಪಡೆದಿದ್ದಾರೆ. ಸದ್ಯ ಅವರು ಕಾಮಿಡಿ ಮಾಢಿದರೂ ಕಷ್ಟ, ಸುಮ್ಮನಿದ್ದರೂ ಕಷ್ಟ ಎಂಬಂತಾಗಿದೆ. ದೊಡ್ಮನೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ. ಸೂಪರ್ ಸಂಡೇ ವಿತ್ ಸುದೀಪ್ ಎಪಿಸೋಡ್‌ನಲ್ಲೂ ಕಿಚ್ಚ ಈ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇತ್ತ ಸಂಗೀತಾ ಶೃಂಗೇರಿ ಮಧ್ಯರಾತ್ರಿ 1.40ರ ಸುಮಾರಿಗೆ ಸ್ವಿಮ್ಮಿಂಗ್ ಪೂಲ್‌ಗೆ ಹಾರಿದ್ದಾರೆ.


cover image
'ಬೆನ್ನ ಹಿಂದೆ ಮಾತಡ್ತಾರೆ'

ತುಕಾಲಿ ಸಂತೋಷ್ ಈ ಮನೆಯಲ್ಲಿ ನಂಬಿಕೆಗೆ ಅರ್ಹರಲ್ಲ. ಹೌದೋ, ಅಲ್ಲವೋ ಎಂಬ ಪ್ರಶ್ನೆಗೆ ಉತ್ತರಿಸಿದ ಸಂಗೀತಾ, ಹೌದು ಎಂದಿದ್ದಾರೆ. ತುಕಾಲಿ ಸಂತು ನನ್ನ ಜೊತೆ ಚೆನ್ನಾಗಿಯೇ ಇರುತ್ತಾರೆ. ಆಮೇಲೆ ಹೋಗಿ ಬೆನ್ನ ಹಿಂದೆ ಮಾತನಾಡುತ್ತಾರೆ. ಅದನ್ನು ನಾನು ನೇರವಾಗಿ ಕೇಳಿಸಿಕೊಂಡಿದ್ದೇನೆ. ಆಮೇಲೆ ನನಗೆ ಎಲ್ಲವೂ ಅರ್ಥವಾಯಿತು ಅಂತ ಉತ್ತರಿಸಿದ್ದಾರೆ. 

 

'ಎಲ್ಲರಿಗೂ ಬತ್ತಿ ಇಟ್ಟಿದ್ದಾರೆ'

ತಮ್ಮ ತಂಡದವರಿಗೆನೇ ತುಕಾಲಿ ಸಂತೋಷ್ ಬತ್ತಿ ಇಟ್ಟಿದ್ದಾರೆ. ಪ್ರತಾಪ್, ವರ್ತೂರು ಸಂತೋಷ್, ನೀತುಗೆ ಆ ರೀತಿ ಮಾಡಿದ್ದಾರೆ. ಮಾತ್ರವಲ್ಲದೇ ನಮ್ಮ ಟೀಮ್‌ನಲ್ಲಿದ್ದಾಗಲೂ ಅವರಿಂದ ನಂಬಿಕೆ ದ್ರೋಹವಾಯಿತು. ಭಾಗ್ಯಶ್ರೀ ಮತ್ತು ಸಿರಿಯವರನ್ನೂ ಬಿಟ್ಟಿಲ್ಲ. ಎಲ್ಲರ ಬಗ್ಗೆಯೂ ತುಕಾಲಿ ಸಂತೋಷ್ ಬತ್ತಿ ಇಟ್ಟಿದ್ದಾರೆ. ಹಾಗಾಗಿ ಅವರು ನಂಬಿಕೆಗೆ ಯೋಗ್ಯರಲ್ಲ ಅಂತ ನಮ್ರತಾ ಆರೋಪಿಸಿದ್ದಾರೆ. ಮನೆಯವರ ಮಾತಿನಿಂದ ಬೇಸರಗೊಂಡ ತುಕಾಳಿ ಸಂತೋಷ್‌, ರಾತ್ರಿ ವರ್ತೂರು ಸಂತೋಷ್‌ ಬಳಿ ಬಗ್ಗೆ ಚರ್ಚಿಸಿದ್ದಾರೆ. 

 

ತುಕಾಲಿ ಪರ ನಿಂತ ಸದಸ್ಯರು

ಬಿಗ್‌ಬಾಸ್ ಮನೆಯಲ್ಲಿ ಕೆಲ ಸದಸ್ಯರು ಮಾತ್ರ ತುಕಾಲಿ ಸಂತು ಪರ ಮಾತನಾಡಿದ್ದಾರೆ. ಅವರು ನಂಬಿಕೆಗೆ ಅರ್ಹರು ಅಂತ ವರ್ತೂರು ಸಂತೋಷ್, ಡ್ರೋನ್ ಪ್ರತಾಪ್, ನೀತು, ತನಿಷಾ, ಸಿರಿ ಹಾಗೂ ಭಾಗ್ಯಶ್ರೀ ಹೇಳಿದ್ದಾರೆ. ಅದರ ಅವರ ಆಟ. ನನಗೆ ಸಂತೋಷ್ ಫೇಕ್ ಅನಿಸಿಲ್ಲ ಅಂತ ವರ್ತೂರು ಹೇಳಿದ್ದಾರೆ.   

ಸ್ವಿಮ್ಮಿಂಗ್ ಪೂಲ್‌ಗೆ ಹಾರಿದ ಸಂಗೀತಾ

ಆರನೇ ವಾರ ಬಿಗ್‌ಬಾಸ್ ಮನೆಯಿಂದ ಇಶಾನಿ ಹಾಗೂ ಭಾಗ್ಯಶ್ರೀ ಎಲಿಮಿನೇಟ್ ಆಗಿದ್ದಾರೆ. ಇಶಾನಿ ಹೊರಹೋಗುವಾಗ ಎಂದೂ ಕಣ್ಣೀರು ಹಾಕದ ಮೈಕಲ್ ಅತ್ತರು. ಸಂಗೀತಾ ಕೂಡ ಇಶಾನಿ ಜೊತೆ ಉತ್ತಮ ಸ್ನೇಹ ಹೊಂದಿದ್ದರು. ಒಂದು ಟಾಸ್ಕನಲ್ಲಿ ಇಶಾನಿ ಮಾತಿನಿಂದ ಬೇಸರಗೊಂಡಿದ್ದ ಸಂಗೀತಾ, ತಮ್ಮ ಸ್ನೇಹಕ್ಕೆ ಬ್ರೇಕ್ ಹಾಕುವಂತೆ ಮಾತನಾಡಿದ್ರು. ನಂತರದಲ್ಲಿ ಇಶಾನಿ ಎಷ್ಟೇ ಕ್ಷೇಮೆ ಕೇಳಿದ್ರೂ ಕ್ಯಾರೇ ಎಂದಿರಲಿಲ್ಲ. ಇದೀಗ ಇಶಾನಿ ಹೊರಹೋದಮೇಲೆ ನಿದ್ದೆ ಬರದೇ ಮಧ್ಯರತ್ರಿ ಎದ್ದು ಕಣ್ಣೀರು ಹಾಕಿದ್ದಾರೆ. ಈ ವೇಳೆ ವಾಶ್‌ ರೂಂಗೆ ಬಂದ ವಿನಯ್ ಮತ್ತು ಸ್ನೇಹಿತ್ ಅವರು ಅಳುತ್ತಿರುವುದನ್ನು ಕಂಡು ಏನಾಯ್ತು ಕೇಳಿದ್ದಾರೆ. ಆಗ ಇಶಾನಿಯವರನ್ನು ಮಿಸ್ ಮಡಿಕೊಳ್ಳುವುದಾಗಿ ಅತ್ತಿದ್ದಾರೆ. ನಂತರ ವಿನಯ್ ಸಂಗೀರಾರನ್ನು ಸಮಾಧಾನ ಮಾಡಿದ್ದಾರೆ. ಆದರೂ ದುಃಖ ತಡೆದುಕೊಳ್ಳದ ಸಂತೀಗಾ ಮಧ್ಯರಾತ್ರಿ 1.40ರ ಸುಮಾರಿಗೆ ಸ್ವಿಮ್ಮಿಂಗ್ ಪೂಲ್‌ಗೆ ಹಾರಿದ್ದಾರೆ.

ಸ್ನೇಹಿತ್‌ಗೆ ಕಿಚ್ಚನ ಪ್ರಶ್ನೆ

ಮನೆಯವರಿಂದ ಬಂದ ಲೆಟರ್ ಪಡೆಯುವ ಟಾಸ್ಕ್‌ ವೇಳೆ  ವಿನಯ್ ಗೌಡ, ನಮ್ರತಾ ಗೌಡ ಹಾಗೂ ನೀತು ಮನೆಯವರಿಂದ ಬಂದ ಲೆಟರ್ ಪಡೆಯುವ ರೇಸ್‌ನಲ್ಲಿದ್ದರು. ಬಿಗ್‌ಬಾಸ್ ಮೂವರು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವಂತೆ ಸೂಚಿಸಿದ್ದರು. ಇದೇ ವಿಚಾರಕ್ಕೆ ಮೂವರ ನಡುವೆ ಮಾತುಕತೆ ನಡೆಯಿತು. ಸ್ನೇಹಿತ್‌ ಅವರು ನೀತು ಬಳಿಬಂದು ಕಣ್ಣೀರಿಡುತ್ತಾ ಇದೊಂದು ಬಾರಿ ನಮ್ರತಾಗಾಗಿ ತ್ಯಾಗ ಮಾಡುವಂತೆ ಮನವಿ ಮಾಡಿದ್ದರು. ಅದಕ್ಕಾಗಿ ನೀವು ಹೇಳಿದ ಕೆಲಸ ಮಾಡ್ತೀನಿ. ಪ್ರಾಮಾಣಿಕವಾಗಿ ಇರುತ್ತೇನೆ. ದಯವಿಟ್ಟು ನಮ್ರತಾಗೆ ಪತ್ರ ಕೊಡಿ ಅಂತ ಬೇಡಿಕೊಂಡಿದ್ದರು. ಈ ಬಗ್ಗೆ ಭಾನುವಾರ ಪ್ರಸ್ತಾಪಿಸಿದ ಸುದೀಪ್, ನೀತು ಬದಲು ನೀವು ಎಲಿಮಿನೇಟ್ ಆಗ್ತೀರಾ ಅಂತ ಪ್ರಶ್ನಿಸಿದರು. ಆಗ ಸ್ನೇಹಿತ್ ನಾನು ಹೋಗಲ್ಲ, ಆ ರೀತಿ ಹೇಳಿರಲಿಲ್ಲ ಎಂದು ಉಲ್ಟಾ ಹೊಡೆದರು. ನಂತರ ನೀತುಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಅಂತ ಸುದೀಪ್ ಗಂಭೀರವಾಗಿ ಹೇಳಿದಾಗ ಸ್ನೇಹಿತ್ ಅವರು ನೀತು ಜಾಗಕ್ಕೆ ಬಂದರು. ನಂತರ ಅದೃಷ್ಟವಶಾತ್ ಸ್ನೇಹಿತ್ ದೊಡ್ಮನೆಯಲ್ಲಿ ಉಳಿದುಕೊಂಡಿದ್ದು, ಭಾಗ್ಯಶ್ರೀ ಹೊರಹೋದರು. 

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+