X
ಹೋಮ್ ಚಲನಚಿತ್ರಗಳ ಒಳನೋಟ

ಚೈತ್ರಾ ಮೇಲೆ Harassment, ಪರ್ಸ್‌ನಲ್ ಅಟ್ಯಾಕ್ ಆಗ್ತಿದೆ ಎನ್ನುತ್ತಲೇ ತಾವೇ ನಾಮಿನೇಟ್ ಮಾಡಿದ ಜಗದೀಶ್

Author Sowmya Bairappa | Published: Tuesday, October 1, 2024, 12:45 PM [IST]

ಈ ಬಾರಿ ಬಿಗ್‌ಬಾಸ್ ಮನೆ ಎರಡು ಭಾಗವಾಗಿದೆ. ಸ್ವರ್ಗವಾಸಿಗಳಾಗಿ 10 ಜನರಿದ್ದರೆ, ನರಕವಾಸಿಗಳಾಗಿ 7 ಮಂದಿಯಿದ್ದಾರೆ. ದೊಡ್ಮನೆಯಲ್ಲಿ ಮೊದಲ ದಿನ ಬಿಗ್‌ಬಾಸ್ ಮನೆಗೆಲಸದ ಜವಾಬ್ದಾರಿ ನರಕನಿವಾಸಿಗಳ ಮೇಲೆ ಹೇರಬೇಕು. ಮನೆ ಶುಚಿಗೊಳಿಸುವುದು, ಪಾತ್ರೆ ತೊಳೆಯುವುದು ಸೇರಿದಂತೆ ಮನೆಗೆಲಸದ ಎಲ್ಲಾ ಭಾರವನ್ನು ನರಕನಿವಾಸಿಗಳು ಹೊರಬೇಕು. ಸ್ವರ್ಗ ನಿವಾಸಿಗಳು ಪ್ರತಿದಿನ ಬೆಳಗ್ಗೆ ಚರ್ಚಿಸಿ, ಆ ದಿನದ ಮನೆಗೆಲಸಕ್ಕೆ ಇಬ್ಬರು ನಿರಕ ನಿವಾಸಿಗಳನ್ನು ಆಯ್ಕೆ ಮಾಡಬೇಕು ಎಂದಿದ್ದರು. ಆದರಂತೆ ಚೈತ್ರಾ ಕುಂದಾಪುರ ಹಾಗೂ ಗೋಲ್ಡ್ ಸುರೇಶ್ ಮನೆಗೆಲಸಕ್ಕೆ ಆಯ್ಕೆಯಾಗಿದ್ದರು. ಈ ವೇಳೆ ನರವಾಸಿಗಳು ಹಾಗೂ ಸ್ವರ್ಗ ನಿವಾಸಿಗಳ ನಡುವೆ ಜಟಾಪಟಿ ನಡೆದಿದ್ದು, ದೊಡ್ಮನೆಯಲ್ಲಿ ಮೊದಲ ದಿನ ಏನೇನ್ ಆಯ್ತು ಎಂಬ ಮಾಹಿತಿ ಇಲ್ಲಿದೆ.


cover image
 ನರಕವಾಸಿಗಳ ಮೈಂಡ್ ಗೇಮ್

ಸ್ವರ್ಗನಿವಾಸಿಗಳು ಮನೆಗೆಲಸಕ್ಕೆ ನರಕವಾಸಿಗಳನ್ನು ಆಯ್ಕೆ ಮಾಡಿಕೊಂಡಾಗ ಮೋಕ್ಷಿತಾ ಪೈ 'ನಾವು ಸರಿಯಾಗಿ ಕೆಲಸ ಮಾಡದಿದ್ದರೆ ಅವರೇ ಹೊಣೆಯಾಗುತ್ತಾರೆ' ಅಂತ ತಮ್ಮ ಟೀಂಗೆ ಹೇಳಿದರು. ಈ ಸಂದರ್ಭ ಚೈತ್ರಾ ಕೂಡ ಅಲ್ಲೇ ಇರುತ್ತಾರೆ. ರಂಜಿತ್ ಕೂಡ ನಾವು ಟೈಮ್ ವೇಸ್ಟ್ ಮಾಡಬೇಕು. ಕೆಲಸ ಕರೆಸ್ಟ್ ಆಗಿ ಮಾಡಬಾರದು. ಇವರೆರಡನ್ನು ಮೈಂಡ್‌ನಲ್ಲಿ ಸರಿಯಾಗಿಟ್ಟುಕೊಂಡರೆ ಸಾಕು ಎಂದರು. ಅದಕ್ಕೆ ಮೋಕ್ಷಿತಾ ಕೆಲಸ ಮಾಡಿ ಎಂದಿದ್ದಾರೆ, ಕೆಲಸ ಸರಿಯಾಗಿ ಮಾಡಬೇಕು ಅಂತ ಇಲ್ವಲ್ಲಾ ಅಂದರು. ಆಗ ರಂಜಿತ್ ಸಿಂಪಥಿ ಗಿಟ್ಟಿಸಿಕೊಳ್ಳಲು ಮೊದಲ ದಿನ ಚೆನ್ನಾಗಿ ಮಾಡಿಬಿಡಬೇಕು ಎಂದರು.

ವಾಗ್ವಾದಕ್ಕಿಳಿದ ಚೈತ್ರಾ-ಯಮುನಾ

ಆಟ ಶುರುವಾಗುತ್ತಿದ್ದಂತೆ ಚೈತ್ರಾ ಮನೆಗೆಲಸಕ್ಕೆಂದು ಅಡುಗೆ ಮನೆಯತ್ತ ಬಂದರು. ಈ ಸಂದರ್ಭ ಲಾಯರ್ ಜಗದೀಶ್ 'ಸ್ವರ್ಗದ ವಾತಾವರಣ ಹಾಳಾಗುತ್ತಿದೆಯಂತೆ. ಎಲ್ಲಾ ಕಿರುಚಾಡುತ್ತಿದ್ದಾರೆ. ಮೆಲ್ಲಗೆ ಮಾತನಾಡಬೇಕು ಅಂತ ಆದೇಶ ಬಂದಿದೆ ಎಂದರು. ಅದಕ್ಕೆ ಚೈತ್ರಾ 'ಆದೇಶದ ಪ್ರತಿ ಎಲ್ಲಿದೆ? ಅಂತ ಪ್ರಶ್ನಿಸಿದರು. ಚೈತ್ರಾ ವಾಯ್ಸ್ ಕಡಿಮೆ ಮಾಡಬೇಕು ಅಂದಾಗ, ಅದು ರೂಲ್ಸ್‌ ಬುಕ್‌ನಲ್ಲಿ ಇಲ್ಲ ಅಂತ ಚೈತ್ರಾ ತಿರುಗೇಟು ಕೊಟ್ಟರು. ಆಗ ಯಮುನಾ ಶ್ರೀನಿಧಿ 'ಟೈಮ್‌ ವೇಸ್ಟ್ ಮಾಡೋ ಹಾಗಿಲ್ಲ, ಬೇಗ ಕೆಲಸ ಮಾಡಿ ಹೋಗಬೇಕು. ನೀವು ಜಾಸ್ತಿ ಮಾತನಾಡ್ತಿದ್ದೀರಾ ಎಂದರು. ಆಗ ಚೈತ್ರಾ  ರೂಲ್ಸ್‌ ಬುಕ್‌ನಲ್ಲಿ ಇದ್ಯಾ? ನಾನು ಮಾತಾಡ್ತೀನಿ. ಎಷ್ಟು ಬೇಕಾದರೂ ಮಾತಾಡ್ತೀನಿ. ನಾನು ಮಾತನಾಡಬಾರದು ಅಂತ ನೀವು ಹೇಳಂಗಿಲ್ಲ. ಬಿಗ್‌ಬಾಸ್ ಹೇಳಿದ್ರೆ ಮಾತ್ರ ಮಾತಾಡಲ್ಲ ಅಂತ ವೈಲೆಂಟ್ ಆದ್ರು.

ಸೀಬೆಹಣ್ಣು ಕಿತ್ತುಕೊಂಡು ತಿಂದು ಎಸೆದ ಚೈತ್ರಾ

ಉಗ್ರಂ ಮಂಜು ಒಂದು ಸೀಬೆಹಣ್ಣು ಎತ್ತಿಕೊಂಡು 'ಇದನ್ನು ಫ್ರೆಶ್ ಅಗಿ ತೊಳೆದು ಕಟ್ ಮಾಡಿಕೊಡಿ' ಅಂತ ಹೇಳುವಷ್ಟರಲ್ಲೇ ಅವರ ಕೈಯಿಂದ ಹಣ್ಣು ಕಿತ್ತುಕೊಂಡು ಓಡಿ, ಸ್ವಲ್ಪ ಕಚ್ಚಿ ತಿಂದು, ಉಳಿದದ್ದನ್ನು ನರಕವಾಸಿಗಳಿಗೆ ಚೈತ್ರಾ ಎಸೆದರು. ಇದು ಸ್ವರ್ಗವಾಸಿಗಳನ್ನು ಕೆರಳಿಸಿತು. ತಕ್ಷಣ ಐಶ್ವರ್ಯ ಸಿಂಧೋಗಿ ನಿಯಮದ ಪ್ರಕಾರ ನೀವು ಅದನ್ನು ತಿನ್ನೋ ಹಾಗಿಲ್ಲ. ಜವಾಬ್ದಾರಿ ನಮ್ಮದೇ ಇರಬಹುದು. ಆದರೆ, ರೂಲ್ಸ್ ಅರ್ಥ ಮಾಡಿಕೊಳ್ಳಿ ಎಂದರು. ಆಗ ಚೈತ್ರಾ ತಿನ್ನೋ ಹಾಗಿಲ್ಲವೆಂದರೆ ಶಿಕ್ಷೆ ಕೊಡ್ತಾರೆ. ನಾನು ಶಿಕ್ಷೆ ಅನುಭವಿಸುತ್ತೇನೆ. ಹಣ್ಣು ತಿನ್ನುತ್ತೇನೆ ಅಂತ ವಾದಿಸಿದರು. ಈ ವೇಳೆ ಎರಡು ಟೀಂಗಳ ನಡುವೆ ವಾದ-ವಿವಾದಗಳು ನಡೆದವು.

'ಸರಿಯಾಗಿ ಕೆಲಸ ಮಾಡಿಲ್ಲ, ಎಂಥ ಹೆಂಗಸವಳು'

ಚೈತ್ರಾ ಕುಂದಾಪುರ ಬಾತ್ರೂಮ್ ಏರಿಯಾ ಕ್ಲೀನ್ ಮಾಡಿದ್ದರು. ಇದನ್ನು ಕಂಡ ಲಾಯರ್ ಜಗದೀಶ್, ಸರಿಯಾಗಿ ಕೆಲಸ ಮಾಡಿಲ್ಲ, ಎಂಥ ಹೆಂಗಸು ಲೆಕ್ಕ ಹಾಕು ಅಂತ ಸಿಡಿಮಿಡಿಗೊಂಡರು. ನೆಟ್ಟಗೆ ಕ್ಲೀನ್ ಮಾಡೋಕು ಬರಲ್ಲ ಅವಳಿಗೆ. ನಾನೇ ಕ್ಲೀನ್ ಮಾಡಿ ತೋರಿಸ್ತೀನಿ ನೋಡು ಅಂತ ಧನರಾಜ್ ಬಳಿ ಹೇಳಿದರು. ಜಗದೀಶ್ ವಾಶ್ ಬೇಸಿನ್ & ಕಮೋಡ್ ಕ್ಲೀನ್ ಮಾಡಲು ಮುಂದಾಗ್ತಿದ್ದಂತೆ ಗೋಲ್ಡ್ ಸುರೇಶ್ ಬಂದು ಕ್ಲೀನ್ ಮಾಡಿದರು. ಈ ಸಂದರ್ಭ ನೀವ್ಯಾಕೆ ಕ್ಲೀನ್ ಮಾಡಿದ್ರಿ ಅಂತ ಸ್ವರ್ಗವಾಸಿಗಳು ಜಗದೀಶ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಚೈತ್ರಾ ಮೇಲೆ Harassment, ಪರ್ಸ್‌ನಲ್ ಅಟ್ಯಾಕ್

ಈ ನಡುವೆ ಲಾಯರ್ ಜಗದೀಶ್ ಹೊಸ ಬಾಂಬ್ ಹಾಕಿದರು. ಚೈತ್ರಾ ಕೈಯಲ್ಲಿ ಮನೆಗೆಲಸ ಮಾಡಿಸುವ ವೇಳೆ  Harassment, ಪರ್ಸ್‌ನಲ್ ಅಟ್ಯಾಕ್ ರೀತಿ ಕಾಣಿಸಿತು. ನನಗೆ ಗೊತ್ತು, ಅವರಿಗೆ ಹೊರಗಡೆ ದೊಡ್ಡ ಫ್ಯಾನ್ ಫಾಲೋಯಿಂಗ್ ಇದೆ ಎಂದರು. ಜಗದೀಶ್ ಹೇಳಿಕೆಯಿಂದ ಗಾಬರಿಗೊಂಡ ಸ್ವರ್ಗನಿವಾಸಿಗಳು ಅವರ ಹೇಳಿಕೆಯನ್ನು ವಿರೋಧಿಸಿದರು. ಇಲ್ಲಿರುವ ಎಲ್ಲರಿಗೂ ಅವರದೇಯಾದ ಫ್ಯಾನ್ ಫಾಲೋಯಿಂಗ್ ಇದೆ. ಈ ಮಾತು ಸರಿಯಿಲ್ಲ ಅಂತ ಗುಡುಗಿದರು.

ಚೈತ್ರಾರನ್ನು ನಾಮಿನೇಟ್ ಮಾಡಿದ ಸ್ವರ್ಗವಾಸಿಗಳು

ಈ ಬಾರಿ ನಾಮಿನೇಟ್ ಮಾಡುವ ಅಧಿಕಾರವನ್ನು ಬಿಗ್‌ಬಾಸ್‌ ಸ್ವರ್ಗ ನಿವಾಸಿಗಳಿಗೆ ಮಾತ್ರ ನೀಡಿದ್ದರು. ನರಕವಾಸಿಗಳು ಈ ಅವಕಾಶದಿಂದ ವಂಚಿತರಾಗಿದ್ದಾರೆ. ನಾಮಿನೇಷನ್ ವೇಳೆ ಬಹುತೇಕ ಸ್ವರ್ಗನಿವಾಸಿಗಳು ಚೈತ್ರಾ ಅವರನ್ನೇ ಟಾರ್ಗೆಟ್ ಮಾಡಿದ್ದಾರೆ. ಹೀಗಾಗಿ ಚೈತ್ರಾ ಮೊದಲ ವಾರ ಮನೆಯಿಂದ ಹೊರಹೋಗಲು ನೇರವಾಗಿ ನಾಮಿನೇಟ್ ಆಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+