ಬಿಗ್ಬಾಸ್ ಆರಂಭದಿಂದಲೂ ಸ್ಟ್ರಾಂಗ್ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದ ಕಾರ್ತಿಕ್ ಮಹೇಶ್ ಇತ್ತೀಚೆಗೆ ಮಂಕಾಗಿದ್ದಾರೆ. ಕಳೆದ ಎರಡ್ಮೂರು ವಾರಗಳಿಂದ ತಮ್ಮ ನಿಜವಾದ ಆಟದತ್ತ ಗಮನ ಹರಿಸುವಲ್ಲಿ ವಿಫಲರಾಗಿದ್ದಾರೆ. ಅದಕ್ಕೇ ಕಾರಣ ಇದೆ. ಕಾರ್ತಿಕ್ ಅವರ ಕ್ಲೋಸ್ ಸರ್ಕಲ್ನಲ್ಲಿದ್ದ ಸಂಗೀತಾ ಮೊದಲೇ ದೂರವಾಗಿದ್ದರು, ತನಿಷಾ ಎಲಿಮಿನೇಟ್ ಆದರು. ಇದೀಗ ನಮ್ರತಾ ಕೂಡ ದೂರವಾಗಿದ್ದಾರೆ. ಇಂತಹ ಸಂದರ್ಭದಲ್ಲಿ ತುಕಾಲಿ ಸಂತು ಬಳಿ ಸಂಗೀತಾ ಹೇಳಿರುವ ಮಾತು ಸಿಕ್ಕಾಪಟ್ಟೆ ಚರ್ಚೆಯಾಗ್ತಿದೆ.