X
ಹೋಮ್ ಚಲನಚಿತ್ರಗಳ ಒಳನೋಟ

ನನ್ನಿಂದ ತನಿಷಾನ ದೂರ ಮಾಡಿದ ಪಾಪಿ: ಕಾರ್ತಿಕ್‌ ಕಡೆ ಕೈ ತೋರಿಸಿದ ವರ್ತೂರು ಸಂತೋಷ್

Author Sowmya Bairappa | Published: Saturday, January 20, 2024, 12:11 PM [IST]

ಬಿಗ್‌ಬಾಸ್‌ ಆರಂಭದಿಂದಲೂ ಸ್ಟ್ರಾಂಗ್ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದ ಕಾರ್ತಿಕ್ ಮಹೇಶ್ ಇತ್ತೀಚೆಗೆ ಮಂಕಾಗಿದ್ದಾರೆ. ಕಳೆದ ಎರಡ್ಮೂರು ವಾರಗಳಿಂದ ತಮ್ಮ ನಿಜವಾದ ಆಟದತ್ತ ಗಮನ ಹರಿಸುವಲ್ಲಿ ವಿಫಲರಾಗಿದ್ದಾರೆ. ಅದಕ್ಕೇ ಕಾರಣ ಇದೆ. ಕಾರ್ತಿಕ್ ಅವರ ಕ್ಲೋಸ್‌ ಸರ್ಕಲ್‌‌ನಲ್ಲಿದ್ದ ಸಂಗೀತಾ ಮೊದಲೇ ದೂರವಾಗಿದ್ದರು, ತನಿಷಾ ಎಲಿಮಿನೇಟ್ ಆದರು. ಇದೀಗ ನಮ್ರತಾ ಕೂಡ ದೂರವಾಗಿದ್ದಾರೆ. ಇಂತಹ ಸಂದರ್ಭದಲ್ಲಿ ತುಕಾಲಿ ಸಂತು ಬಳಿ ಸಂಗೀತಾ ಹೇಳಿರುವ ಮಾತು ಸಿಕ್ಕಾಪಟ್ಟೆ ಚರ್ಚೆಯಾಗ್ತಿದೆ.


cover image
ನಾನಿಲ್ಲದೇ ಕಾರ್ತಿಕ್ ನಿಜಕ್ಕೂ ಜೀರೋ

ಇತ್ತೀಚೆಗೆ ಬಿಗ್‌ಬಾಸ್‌ ಮನೆಗೆ ರೀ ಎಂಟ್ರಿ ಕೊಟ್ಟಿದ್ದ ಎಲಿಮಿನೇಟೆಡ್ ಸ್ಪರ್ಧಿಗಳು, ನಮ್ರತಾ ಹಾಗೂ ಕಾರ್ತಿಕ್ ಫ್ರೆಂಡ್‌ಶಿಪ್ ಹೊರಗಡೆ ಬೇರೆ ಕಡೆ ಕಾಣಿಸುತ್ತಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದು ನಮ್ರತಾ ಹಾಗೂ ಕಾರ್ತಿಕ್‌ಗೆ ಅತಿಯಾಗಿ ಕಾಡಲಾರಂಭಿಸಿದೆ. ಈ ವಿಚಾರ ತುಕಾಲಿ ಸಂತೋಷ್ ಕಿವಿಗೂ ತಲುಪಿದ್ದು, ಅದನ್ನು ಸಂಗೀತಾಗೆ ತಲುಪಿಸುವ ಕೆಲಸ ಮಾಡಿದ್ದಾರೆ. ನಾನು ಕಾರ್ತಿಕ್‌ಗೆ ಮೊದಲೇ ಹೇಳಿದ್ದೆ. ಸರಿಯಾಗಿ ಕಾಣುತ್ತಿಲ್ಲ ಅಂತ ಎಚ್ಚರಿಸಿದ್ದೆ ಅಂತ ಹೇಳಿದ್ದಾರೆ. ಅದಕ್ಕೆ ಸಂಗೀತಾ, ಅವರದ್ದು ಅವರಿಗೆ ಬಿಡಿ. ನಿಮಗೆ ಯಾಕೆ ಅದರ ಆಲೋಚನೆ. ನನಗೂ ಅದು ಅನಿಸಿದೆ. ಆದರೆ, ಹೇಳಿದ್ರೆ ಬೇರೆ ರೀತಿ ಅರ್ಥವಾಗುತ್ತೆ ಅಂತ ನಾನೇ ಸುಮ್ಮನಿದ್ದೆ. ಅದಕ್ಕೆ ತುಕಾಲಿ ಸಂತು, ನಿನ್ನ ಜೊತರಯಿದ್ದಾಗ ಹೀರೋ ಅಂದರು. ಆಗ ಸಂಗೀತಾ ನಾನು ಬಿಟ್ಟ ಮೇಲೆ ಜೀರೋನೆ. ಒಬ್ಬಳು ಹೀರೋಯಿನ್ ಆಗೋಕೆ ಹೀರೋ ಬೇಕು, ನಾನು ಹೀರೋಯಿನ್ ಆಗೋಕೆ ಹೀರೋ ಬೇಕಿಲ್ಲ. ನಾನೇ ನನಗೆ ಹೀರೋಯಿನ್ ಎಂದಿದ್ದಾರೆ. 

ನನ್ನಿಂದ ತನಿಷಾನ ದೂರ ಮಾಡಿದ ಪಾಪಿ

ತನಿಷಾ ಎಲಿಮಿನೇಟ್ ಆಗಿರುವುದು ವರ್ತೂರ್ ಸಂತೋಷ್‌ಗೆ ನೋವಾಗಿದೆ. ಈ ಬಗ್ಗೆ ಕಾರ್ತಿಕ್ ಜೊತೆ ಚರ್ಚೆ ನಡೆಸಿದ್ದಾರೆ. ಕಾರ್ತಿಕ್ ನಾಮಿನೇಟ್ ಮಾಡಿದ್ದರಿಂದಲೇ ತನಿಷಾ ಹೊರಹೋಗಬೇಕಾಯಿತು. ಹಾಗಾಗಿ ಬೆಂಕಿಯನ್ನು ದೂರ ಮಾಡಿದ ಪಾಪಿ ಇವನು ಎಂದು ಕಾರ್ತಿಕ್‌ ಕಡೆ ಕೈ ತೋರಿಸಿದ್ದಾರೆ. ಅದಕ್ಕೆ ತುಕಾಲಿ ಸಂತು, ಜಾಸ್ತಿ ದಿನ ಏನೂ ಇಲ್ಲ, ಮತ್ತೆ ಹೋಗಿ ಸೇರಿಕೊಳ್ಳಬಹುದು ಬಿಡು ಅಂತ ಹೇಳಿದ್ದಾರೆ.

ನನ್ನ ಗೆಳೆತನ ಬಳಸಿಕೊಂಡ್ರಿ

ಮಿಡ್‌ ವೀಕ್ ಎಲಿಮಿನೇಷನ್ ವೇಳೆ ಯಾರು ಹೊರಹೋಗಬೇಕಯ ಅಂತ ಬಿಗ್‌ಬಾಸ್‌ ಮನೆಯವರ ಅಭಿಪ್ರಾಯ ಕೇಳಿದಾಗ ಕಾರ್ತಿಕ್ ಅವರು ನಮ್ರತಾ ಹೆಸರು ಸೂಚಿಸಿದ್ದರು. ಈ ಬಗ್ಗೆ ನಮ್ರತಾ ಕಳೆದ ಸಂಚಿಕೆಯಲ್ಲಿ ಕಾರ್ತಿಕ್ ಜೊತೆ ಚರ್ಚೆ ನಡೆಸಿದ್ದಾರೆ. ನಾನು ಮನೆಯಿಂದ ಹೊರಹೋಗಬೇಕು ಅಂತ ಯಾಕೆ ಭಾವಿಸಿದಿರಿ? ನೀವು ತನಿಷಾ ಹೆಸರನ್ನು ತಾನೇ ನಾಮಿನೇಟ್ ಮಾಡಿದ್ದು? ಅವರ ಹೆಸರನ್ನೇ ತೆಗೆದುಕೊಳ್ಳಬೇಕಿತ್ತು. ನಾಮಿನೇಟ್ ಮಾಡೋದು ತನಿಷಾನಾ,ಯಾರು ಹೊರಹೋಗಲಿ ಅಂದಾಗ ತೆಗೆದುಕೊಳ್ಳುವುದು ನನ್ನ ಹೆಸರನ್ನು ಅಂತ ಸಿಟ್ಟಾದರು. ಅದಕ್ಕೆ ಕಾರ್ತಿಕ್, ಎಲ್ಲರೂ ನಾಮಿನೇಟ್ ಆಗಲಿ ಅಂತ ತನಿಷಾ ಹೆಸರನ್ನು ನಾಮಿನೇಟ್ ಮಾಡಿದ್ದು ಅಂದರು. ಆ ಬಖಿಕ ನಮ್ರತಾ ಕೋಪ ಮತ್ತಷ್ಟು ಹೆಚ್ಚಿತು. ನೀವು ನನ್ನ ಗೆಳೆತನವನ್ನು ಬಳಸಿಕೊಂಡ್ರಿ ಅಂತ ರೇಗಿದರು. ಇದೇ ವಿಚಾರವಾಗಿ ಕೆಲಕಾಲ ವಾಗ್ವಾದ ನಡೆಯಿತು.

 

ಚೆಂಗಲಾಟ ಆಡೋಕೆ ಬರೋದಿಲ್ಲ

ನಮ್ರತಾ ಹಾಗೂ ವಿನಯ್ ಕೂಡ ಕಾರ್ತಿಕ್ ವಿಚಾರವಾಗಿ ಮಾತನಾಡಿಕೊಂಡಿದ್ದಾರೆ. ನಿನ್ನ್ನು ಹೇಗೆ, ಯಾರು ಯೂಸ್ ಮಾಡಿಕೊಳ್ತಿದ್ದಾರೆ ಅಂತ ಅರ್ಥ ಆಗ್ತಿಲ್ವಾ? ಸೈಡ್‌ ಬಿ, 50 ಡೇಸ್ ಅಂದರು. ಅದಕ್ಕೆ ನಮ್ರತಾ, ಗೊತ್ತು ಅದು ನಾನೇ ಮಾಡಿದ್ದ ಸ್ಕ್ರಿಪ್ಟ್. ಇಬ್ಬರಿಗೂ ಫೀಲಿಂಗ್ಸ್, ಉದ್ದೇಶ ಇರಲಿಲ್ಲ ಅಂದರು. ಆಗ ವಿನಯ್, ನಿನ್ನ ಕಡೆಯಿಂದ ಇರಲಿಲ್ಲ. ನಾನು ಬೇಕು ಅಂತಲೇ ಇಷ್ಟುದಿನ ಮಾತನಾಡಿರಲಿಲ್ಲ. ಸಂಗೀತಾ ಈ ವಿಷಯದಲ್ಲಿ ಇಷ್ಟವಾಗ್ತಾಳೆ. ಕಟ್‌..ಕಟ್ ನನಗೆ ಕುಟುಂಬವಿದೆ. ಅದನ್ನು ಬಿಟ್ಟು ನಾನು ಇಲ್ಲಿಗೆ ಬಂದು ಬೇಕಾದ ಹಾಗೆ ಆಟ ಆಡಬಹುದಿತ್ತು. ಆದರೆ, ಈ ಥರ ಚೆಂಗಲಾಟ ಆಡೋಕೆ ಬರೋದಿಲ್ಲ. ನನ್ನ ಹೆಂಡ್ತಿಗೆ  100%  ಲವ್ ಕೊಡ್ತೀನಿ ಎಂದಿದ್ದಾರೆ. 

 

ನೊಂದವರ ಗುಂಪು ಸೇರಿದ ಕಾರ್ತಿಕ್

ಬಿಗ್‌ಬಾಸ್ ಮನೆಯಲ್ಲೀಗ ಕಾರ್ತಿಕ್ ಒಂಟಿಯಾಗಿದ್ದಾರೆ. ಸಂಗೀತಾ ಜೊತೆಗಿನ ಬಾಂಧವ್ಯ ಕೊನೆಯಾಗಿದ್ದು, ತನಿಷಾ ಎಲಿಮಿನೇಟ್ ಆಗಿದ್ದಾರೆ. ಇದೀಗ ನಮ್ರತಾ ಕೂಡ ಕೋಪ ಮಾಡಿಕೊಂಡಿದ್ದಾರೆ. ವಿನಯ್ ಜೊತೆಗಿನ ಗೆಳೆತನ ಕೂಡ ಅಷ್ಟಕಷ್ಟೇ. ಹೀಗಾಗಿ, ನೊಂದವರ ಗುಂಪು ಸೇರಿದ್ದಾರೆ. ಸದ್ಯ ಸಂತು-ಪಂತು ಕಾರ್ತಿಕ್‌ ಬೆಂಬಲ ನಿಂತಿದ್ದಾರೆ. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+