X
ಹೋಮ್ ಚಲನಚಿತ್ರಗಳ ಒಳನೋಟ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೈ ಹಿಡಿದ ಚಂದನವನದ ತಾರೆಯರಿವರು!

Author Sowmya Bairappa | Updated: Monday, September 2, 2024, 09:12 AM [IST]

ಸ್ಟಾರ್ ನಟರು ತಾವು ಬೆಳೆಯುವುದರ ಜೊತೆಗೆ ಉಳಿದ ಕಲಾವಿದರಿಗೆ, ತಂತ್ರಜ್ಞರಿಗೆ ಬೆಂಬಲವಾಗಿ ನಿಂತರೆ ಚಿತ್ರರಂಗಕ್ಕೆ ತುಂಬಾನೇ ಒಳ್ಳೆಯದು. ಹಾಗೆಯೇ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೂಡ ಒಂದಷ್ಟು ಆರ್ಟಿಸ್ಟ್‌ಗಳನ್ನು ಹಾಗೂ ಟೆಕ್ನಿಷಿಯನ್ಸ್‌ನ ಸಫೋರ್ಟ್ ಮಾಡಿಕೊಂಡು ಬಂದಿದ್ದಾರೆ. ಇಲ್ಲಿ ಸುದೀಪ್ ಯಾರಿಗೆಲ್ಲಾ ಬೆಂಬಲವಾಗಿ ನಿಂತಿದ್ದಾರೆ ಎಂಬ ಮಾಹಿತಿಯನ್ನು ನೀಡಲಾಗಿದೆ.


cover image
ಹರ್ಷ ಎ

ಸ್ಟೇಜ್ ಡ್ಯಾನ್ಸರ್ ಆಗಿದ್ದ ಎ.ಹರ್ಷ ಅವರ ಟ್ಯಾಲೆಂಟ್ ಗುರುತಿಸಿ, ಅವರಿಗೆ ಡ್ಯಾನ್ಸ್ ಕೊರಿಯೋಗ್ರಾಫರ್ ಆಗಿ ಬಡ್ತಿ ಕೊಡಿಸಿದ್ದು ಕಿಚ್ಚ. ಸುದೀಪ್ ಅಭಿನಯದ ರಂಗ ಎಸ್ಸೆಸ್ಸೆಲ್ಸಿ ಸಿನಿಮಾಗೆ ಕೊರಿಯೋಗ್ರಫಿ ಮಾಡುವ ಮೂಲಕ ಹರ್ಷ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟರು. ಇದಾದ ಬಳಿಕ ಮುಂಗಾರು ಮಳೆ, ವಿಷ್ಣುವರ್ಧನ, ಭರ್ಜರಿ ಮುಂತಾದ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಜೊತೆಗೆ ಕಾಶಿ ಫ್ರಮ್ ವಿಲೇಜ್ ಸಿನಿಮಾದಲ್ಲಿ ಸುದೀಪ್ ಅವರ ತಮ್ಮನ ಪಾತ್ರದಲ್ಲಿ ನಟಿಸಿದ್ದಾರೆ. ಜಾಕ್‌ಪಾಟ್ ಎಂಬ ಸಿನಿಮಾದಲ್ಲಿ ಲೀಡ್‌ ಆಗಿ ನಟಿಸಿದ್ದರು. ಇದರಲ್ಲಿ ಸುದೀಪ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ರು. ನಂತರ ಗೆಳೆಯ ಸಿನಿಮಾ ಮೂಲಕ ನಿರ್ದೇಶಕರಾಗಿ ಪ್ರಮೋಟ್ ಆದ ಎ ಹರ್ಷ, ಭಜರಂಗಿ, ಚಿಂಗಾರಿ, ವಜ್ರಕಾಯ, ಅಂಜನಿಪುತ್ರ, ವೇದ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ.

ಅರ್ಜುನ್ ಜನ್ಯ

ಸದ್ಯ ಕನ್ನಡ ಚಿತ್ರರಂಗದ ಜನಪ್ರಿಯ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಅರ್ಜುನ್ಯ ಜನ್ಯ ಅವರು ಮೊದಲ ಬಾರಿಗೆ ಸಂಗೀತ ನೀಡಿದ್ದ ಚಿತ್ರ ಆಟೋಗ್ರಾಫ್ ಪ್ಲೀಸ್. ಇದಾದ ಬಳಿಕ ಇವರು ಕೆಲ ಸಿನಿಮಾಗಳಿಗೆ ಮ್ಯೂಸಿಕ್ ನೀಡಿದ್ದರೂ ಕೂಡ ಯಶಸ್ಸು ಗಳಿಸಿರಲಿಲ್ಲ. 2009ರಲ್ಲಿ ಅವರು ಸಂಗೀತ ನಿರ್ದೇಶಿಸಿದ್ದ ಬಿರುಗಾಳಿ ಚಿತ್ರ ದೊಡ್ಡ ಹಿಟ್ ಆಗಿತ್ತು. ಆದರೆ, ಅರ್ಜುನ್ಯ ಜನ್ಯ ಅವರಿಗೆ ಬಿಗ್‌ ಬ್ರೇಕ್ ಸಿಕ್ಕಿದ್ದು ಕೆಂಪೇಗೌಡ ಸಿನಿಮಾ ಮೂಲಕ. ಇದಕ್ಕೂ ಮುನ್ನ ಅಜುನ್ ಹೆಸರಿನ ಮುಂದೆ ಜನ್ಯಬ ಇರಲಿಲ್ಲ. ಈ ಚಿತ್ರದ ಬಳಿಕ ಅವರ ಹೆಸರು ಅರ್ಜುನ್ಯ ಜನ್ಯ ಆಯ್ತು. ಇದಾದ ಬಳಿಕ ಸುದೀಪ್ ಅವರ ಸಾಕಷ್ಟು ಸಿನಿಮಾಗಳಿಗೆ ಇವರದ್ದೇ ಮ್ಯೂಸಿಕ್. ಸದ್ಯ ಉಪ್ಪಿ, ಶಿವಣ್ಣ, ರಾಜ್‌ ಬಿ ಶೆಟ್ಟಿ ಅವರೊಂದಿಗೆ 45 ಸಿನಿಮಾ ನಿರ್ದೇಶನ ಮಾಡ್ತಿದ್ದಾರೆ.

ನಂದ ಕಿಶೋರ್

ಕನ್ನಡ ಚಿತ್ರರಂಗದ ಖ್ಯಾತ ಖಳನಟ ಸುಧೀರ್ ಅವರ ಮಗನಾದ ನಂದಕಿಶೋರ್ ಮೊದಲು ಹಾಸ್ಯನಟನಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು. ಆನಂತರ ಸುದೀಪ್ ಅವರ ಕೆಂಪೇಗೌಡ ಸಿನಿಮಾದ ಡೈರೆಕ್ಷನ್ ವಿಭಾಗದಲ್ಲಿ ಕೆಲಸ ಮಾಡಿದ್ರು. ಇದಾದ ಬಳಿಕ ಶರಣ್ ಅವರಿಗೆ ಅಧ್ಯಕ್ಷ ಹಾಗೂ ವಿಕ್ಟರಿ ಸಿನಿಮಾಗಳನ್ನ ಮಾಡಿ ಯಶಸ್ಸು ಕಂಡರು. ನಂತರ ಸುದೀಪ್ ಅವರೊಂದಿಗೆ ರನ್ನ ಚಿತ್ರ ಮಾಡಿದ್ರು. ಈ ಸಿನಿಮಾ ಕೂಡ ಸೂಪರ್ ಹಿಟ್ ಆಯ್ತು. ಆನಂತರ ಸುದೀಪ್ ಹಾಗೂ ಉಪೇಂದ್ರ ಅವರೊಂದಿಗೆ ಮುಕುಂದ ಮುರಾರಿ ಸಿನಿಮಾ ಮಾಡಿದ್ದರು.

ಅರುಣ್ ಸಾಗರ್

ಚಂದನವನ ಕಂಡಂತಹ ಓರ್ವ ಅದ್ಭುತ ಕಲಾವಿದ ಅರುಣ್ ಸಾಗರ್. ನಟನಾಗಿ ಕಿಚ್ಚನ ಜೊತೆ ಚಂದು, ಜಸ್ಟ್ ಮಾತ್ ಮಾತಲ್ಲಿ, ವಿಷ್ಣುವರ್ಧನ, ವೀರ ಮದಕರಿ ಸೇರಿದಂತೆ ಹಲವು ಸಿನಿಮಾಗಳಲ್ಲಿ  ಅರಣ್ ಸಾಗರ್ ನಟಿಸಿದ್ದಾರೆ. ಆರ್ಟ್ ಡೈರೆಕ್ಟರ್ ಆಗಿ ಕೂಡ ಸುದೀಪ್ ಜೊತೆ ಸಾಕಷ್ಟು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅಮೃತಧಾರೆ, ದಿ ವಿಲನ್, ಧಮ್ ಸಿನಿಮಾಗಳಿಗೆ ಕಲಾ ನಿರ್ದೇಶನ ಕೂಡ ಮಾಡಿದ್ದಾರೆ.

ರವಿಶಂಕರ್ ಪಿ

2011ರಲ್ಲಿ 'ಕೋಟೆ' ಸಿನಿಮಾದ ಮೂಲಕ ಕನ್ನಡಕ್ಕೆ ಕಾಲಿಟ್ಟ ರವಿಶಂಕರ್, ಎರಡನೇ ಚಿತ್ರವಾದ 'ಕೆಂಪೇಗೌಡ' ಮೂಲಕ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದರು. ಸುದೀಪ್ ಅಭಿನಯದ ಈ ಚಿತ್ರದಲ್ಲಿ 'ಆರ್ಮುಗಂ' ಎಂಬ ವಿಲನ್ ಪಾತ್ರದಲ್ಲಿ ನಟಿಸಿದ್ದು, ರವಿಶಂಕರ್ ಅವರ ಖಡಕ್ ವಾಯ್ಸ್, ಬೆಚ್ಚಿಬೀಳಿಸುವ ನಟನೆಗೆ ಕನ್ನಡ ಸಿನಿಪ್ರೇಕ್ಷಕರು ಫಿದಾ ಆಗಿದ್ದರು. ಈ ಸಿನಿಮಾ ಸೂಪರ್ ಹಿಟ್ ಆಗವುದರ ಜೊತೆಗೆ ರವಿಶಂಕರ್ ನಟನೆಗೆ ಅಪಾರ ಮೆಚ್ಚುಗೆ ವ್ಯಕ್ತವಾದವು. ಆದಾದ ಬಳಿಕ ಇಂದಿನವರೆಗೆ ರವಿಶಂಕರ್ ಹಿಂದೆ ತಿರುಗಿ ನೋಡೆ ಇಲ್ಲ. ಹೀಗಾಗಿ, ರವಿಶಂಕರ್ ಅವರು ತಾವು ಎಲ್ಲೇ ಹೋದರೂ ತಮ್ಮ ಸಿನಿ ಜರ್ನಿಗೆ ಬ್ರೇಕ್ ಕೊಟ್ಟ ಸುದೀಪ್ ಅವರಿಗೆ ಥ್ಯಾಂಕ್ಸ್ ಹೇಳೋದು ಮರೆಯಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+