X
ಹೋಮ್ ಚಲನಚಿತ್ರಗಳ ಒಳನೋಟ

ಸ್ಯಾಂಡಲ್‌ವುಡ್ ನಟರ ಮರಣದ ನಂತರ ಬಿಡುಗಡೆಯಾದ ಈ ಸಿನಿಮಾಗಳ ಬಗ್ಗೆ ನಿಮಗೆ ಗೊತ್ತಾ?

Author Sowmya Bairappa | Published: Friday, July 19, 2024, 06:58 PM [IST]

ತಾವು ತುಂಬಾ ಪ್ರೀತಿಸುವ ನಟರ ನಿಧನ ಅಭಿಮಾನಿಗಳಲ್ಲಿ ಇನ್ನಿಲ್ಲದ ದುಃಖ ತರಿಸುತ್ತದೆ. ಕನ್ನಡ ಚಿತ್ರರಂಗದ ಕೆಲ ನಟರು ತಮ್ಮ ಮುಂಬರುವ ಸಿನಿಮಾ ಶೂಟಿಂಗ್ ಮುಗಿಸಿ, ಇನ್ನೇನು ಬಿಡುಗಡೆಯಾಗಬೇಕು ಅನ್ನೋವಷ್ಟರಲ್ಲಿ ನಮ್ಮನ್ನಗಲಿದ್ದಾರೆ. ಇಲ್ಲಿ ಚಂದನವನದ ನಟರ ನಿಧನದ ನಂತರ ಬಿಡುಗಡೆಯಾದ ಸಿನಿಮಾಗಳ ಪಟ್ಟಿಯನ್ನು ನೀಡಲಾಗಿದೆ.


cover image
ವಿಷ್ಣುವರ್ಧನ್

ಸಾಹಸಸಿಂಹ ಡಾ.ವಿಷ್ಣುವರ್ಧನ್ ಕನ್ನಡದ ದಿಗ್ಗಜ ನಟರಲ್ಲೊಬ್ಬರು. ಕನ್ನಡ ಮಾತ್ರವಲ್ಲದೇ ದಕ್ಷಿಣ ಭಾರತದ ಭಾಷೆಗಳಾದ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ವಿಷ್ಣುದಾದಾ ೨೦೦೯ರ ಡಿಸೆಂಬರ್ ೩೦ರಂದು ಹೃದಯಘಾತದಿಂದ ನಿಧನರಾದರು. ಇವರ ಮರಣ ನಂತರ 2010ರ ಜನವರಿ 22ರಂದು 'ಸ್ಕೂಲ್ ಮಾಸ್ಟರ್' ಹಾಗೂ ಫೆಬ್ರವರಿ ೧೯ರಂದು ಆಪ್ತರಕ್ಷಕ ಸಿನಿಮಾಗಳು ಬಿಡುಗಡೆಯಾಗಿದ್ದವು. ಆಪ್ತರಕ್ಷಕ ವಿಷ್ಣು ಅವರ 200ನೇ ಚಿತ್ರವಾಗಿದೆ.

ಅಂಬರೀಶ್

ರೆಬಲ್ ಸ್ಟಾರ್ ಅಂಬರೀಶ್‌ 'ಮಂಡ್ಯದ ಗಂಡು' ಎಂದೇ ನಾಡಿಗೆ ಚಿರಪರಿಚಿತ. ಸುಮಾರು ೨೦೦ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಅಂಬಿ, 2018 ನವೆಂಬರ್ 24ರಂದು ನಿಧನರಾದರು. ಇವರ ಮರಣದ ನಂತರ 2019ರಲ್ಲಿ ಮುನಿರತ್ನ ನಿರ್ದೇಶನದಲ್ಲಿ ಮೂಡಿಬಂದ 'ಕುರುಕ್ಷೇತ್ರ' ಚಿತ್ರ ಬಿಡುಗಡೆಯಾಗಿತ್ತು. ಇದರಲ್ಲಿ ಅಂಬಿ ಭೀಷ್ಮನಾಗಿ ಕಾಣಿಸಿಕೊಂಡಿದ್ದರು.


ಶಂಕರ್ ನಾಗ್

ಶಂಕರ್‌ ನಾಗ್ ಕನ್ನಡ ಚಿತ್ರರಂಗದ ಅಪರೂಪದ ಪ್ರತಿಭೆ. ಅವರು ಕೇವಲ ನಟನಾಗಿ ಮಾತ್ರವಲ್ಲದೇ, ನಿರ್ದೇಶಕನಾಗಿ ಕೂಡ ತಮ್ಮದೇಯಾದ ಛಾಪು ಮೂಡಿಸಿದ್ದಾರೆ. 90ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಕರಾಟೆ ಕಿಂಗ್, 1990ರ ಸೆಪ್ಟಂಬರ್ 30ರಂದು ಕಾರು ಅಪಘಾತದಲ್ಲಿ ನಿಧನರಾದರು. ಆಗ ಅವರಿಗೆ ಕೇವಲ 35 ವರ್ಷ ವಯಸ್ಸು. ಇವರ ಮರಣದ ನಂತರ ನಿಗೂಢ ರಹಸ್ಯ, ಆಟ ಬೊಂಬಾಟ, ಪ್ರಾಣಸ್ನೇಹಿತ, ನಾಗಿಣಿ, ಸುಂದರಕಾಂಡ ಸಿನಿಮಾಗಳು ಬಿಡುಗಡೆಯಾಗಿದ್ದವು. 


ಕಾಶೀನಾಥ್

ಸುಮಾರು 36ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದ ಕಾಶಿನಾಥ್, ಕನ್ನಡ ಭಾಷೆಯಲ್ಲಿ 11, ಹಿಂದಿ, ತೆಲುಗಿನಲ್ಲಿ ತಲಾ 1 ಚಿತ್ರ ನಿರ್ದೇಶನ ಮಾಡಿದ್ದರು. ಜೊತೆಗೆ ಉಪೇಂದ್ರ, ಮನೋಹರ್, ಸುನೀಲ್‌ ಕುಮಾರ್ ದೇಸಾಯಿ ಮುಂತಾದ ಹೆಸರಾಂತ ನಿರ್ದೇಶಕರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ.  ಹಾಸ್ಯ ಸೇರಿದಂತೆ ವಿವಿಧ ಪಾತ್ರಗಳಲ್ಲಿ ನಟಿಸಿ ಜನಮನಗೆದ್ದಿದ್ದ ಕಾಶಿನಾಥ್, 2018ರ ಜನವರಿ 18ರಂದು ಹೃದಯಾಘಾತದಿಂದ ನಿಧನರಾದರು. ಇವರ ನಟನೆಯ ಒಳ್ ಮುನ್ಸಾಮಿ ಚಿತ್ರ 2018ರ ಮೇ 25ರಂದು ಬಿಡುಗಡೆಯಾಗಿತ್ತು. 


ಸೌಂದರ್ಯ

ತಮ್ಮ ಸ್ನಿಗ್ಧ ಸೌಂದರ್ಯ ಮತ್ತು ಪ್ರಬುದ್ಧ ನಟನೆಯಿಂದ ಛಾಪು ಮೂಡಿಸಿದ್ದ ಸೌಂದರ್ಯ, ತಮ್ಮ 27ನೇ ವಯಸ್ಸಿನಲ್ಲಿ ಅಂದರೆ 2004 ಏಪ್ರಿಲ್ 17ರಂದು ವಿಮಾನ ದುರಂತದಲ್ಲಿ ನಿಧನರಾದರು. ಇವರ ಮರಣದ ನಂತರ 2010ರ ಫೆಬ್ರವರಿ 19ರಂದು ಆಪ್ತಮಿತ್ರ ಸಿನಿಮಾ ಬಿಡುಗಡೆಯಾಗಿ ದೊಡ್ಡ ಯಶಸ್ಸು ಕಂಡಿತ್ತು. ಚಿತ್ರಮಂದಿರಗಳಲ್ಲಿ ಒಂದು ವರ್ಷ ಪ್ರದರ್ಶನ ಕಂಡಿದ್ದ ಈ ಚಿತ್ರ ಐದು ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಪಡೆದಿದೆ.  

ಚಿರಂಜೀವಿ ಸರ್ಜಾ

ತಮ್ಮ ಸ್ನೇಹ ಸ್ವಭಾವದಿಂದ ಚಿತ್ರರಂಗ ಮತ್ತು ಅದರಾಚೆ ಹಲವು ಸ್ನೇಹಿತ ಮತ್ತು ಅಭಿಮಾನಿ ವರ್ಗವನ್ನು ಸಂಪಾದಿಸಿದ್ದ ಯುವಸಾಮ್ರಾಟ್ ಚಿರಂಜೀವಿ ಸರ್ಜಾ, 2020ರ ಜೂನ್ 7ರಂದು ಹೃದಯಾಘಾತದಿಂದ ತಮ್ಮ 39ನೇ ವಯಸ್ಸಿನಲ್ಲಿ ವಿಧಿವಶರಾದರು. ಇವರ ಮರಣ ನಂತರ ರಣಂ ಹಾಗೂ ರಾಜಮಾರ್ತಾಂಡ ಸಿನಿಮಾಗಳು ಬಿಡುಗಡೆಯಾದವು. ಈ ಪೈಕಿ ರಾಜಮಾರ್ತಾಂಡ ಚಿತ್ರದ ಡಬ್ಬಿಂಗ್ ಮುಂಚೆಯೇ ಚಿರು ನಿಧನರಾಗಿದ್ದರಿಂದ ಚಿರು ಪಾತ್ರಕ್ಕೆ ಧ್ರುವ ಸರ್ಜಾ ಧ್ವನಿ ನೀಡಿದ್ದರು. 

ಸಂಚಾರಿ ವಿಜಯ್

ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ನಟಿಸಿದ ಎಲ್ಲಾ ಪಾತ್ರಗಳು ಒಂದಕ್ಕಿಂತ ಒಂದು ಭಿನ್ನ. ಚಿತ್ರರಂಗದಲ್ಲಿ ಮಾತ್ರವಲ್ಲದೆ, ಹಲವು ಸಾಮಾಜಿಕ ಕಾರ್ಯಗಳ ಮೂಲಕ ಪ್ರಸಿದ್ಧಿ ಪಡೆದಿದ್ದರು. ದುರದೃಷ್ಟವಶಾತ್, ಜೂನ್ 2021ರ 14ರಂದು ಬೈಕ್ ಅಪಘಾತದಿಂದ ಕೊನೆಯುಸಿರೆಳೆದರು. ಇವರ ನಿಧನದ ಬಳಿಕ ಅವರ ನಟನೆಯ ಲಂಕೆ, ಪುಕ್ಸಟ್ಟೆ ಲೈಫು, ತಲೆದಂಡ, ಮೇಲೊಬ್ಬ ಮಾಯಾವಿ ಸಿನಿಮಾಗಳು ಬಿಡುಗಡೆಯಾಗಿದ್ದವು. 

ಪುನೀತ್ ರಾಜ್‌ಕುಮಾರ್

ಬಾಲ ಕಲಾವಿದರಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್, ಸುಮಾರು 29ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದರು. ಯಾವುದೇ ಪ್ರಚಾರ ಬಯಸದೇ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡು ಎಲ್ಲರಿಗೂ ಮಾದರಿಯಾಗಿದ್ದ ಅಪ್ಪು  2021ರ ಅಕ್ಟೋಬರ್ 29ರಂದು ನಿಧನರಾದರು. ಇವರ ನಿಧನದ ಬಳಿಕ 2022 ಮಾರ್ಚ್ 17ರಂದು ಜೇಮ್ಸ್ ಸಿನಿಮಾ ಬಿಡುಗಡೆ ಮಾಡಲಾಗಿತ್ತು. ಇದಾದ ಬಳಿಕ ಅಕ್ಟೋಬರ್ 28ರಂದು ಅಪ್ಪು ಅವರ ಕನಸಿನ ಡಾಕ್ಯುಮೆಂಟರಿ 'ಗಂಧದಗುಡಿ' ಬಿಡುಗಡೆಯಾಗಿತ್ತು. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+