X
ಹೋಮ್ ಚಲನಚಿತ್ರಗಳ ಒಳನೋಟ

ಬಣ್ಣದ ಲೋಕಕ್ಕೆ ಕಾಲಿಡುವ ಮುನ್ನ ಈ ಕಿರುತೆರೆ ನಟ-ನಟಿಯರ ಕೆಲಸ ಏನಾಗಿತ್ತು ಗೊತ್ತಾ?

Author Sowmya Bairappa | Published: Wednesday, March 20, 2024, 04:45 PM [IST]

ಬಣ್ಣದ ಜಗತ್ತು ಬಹಳ ಬೇಗ ಎಲ್ಲರನ್ನು ಸೆಳೆದು ಬಿಡುತ್ತೆ. ದೂರದ ಬೆಟ್ಟ ನುಣ್ಣಗೆ ಎಂಬ ಗಾದೆ ಮಾತಿದೆ. ನಟನಾ ಕ್ಷೇತ್ರ ನೂರಕ್ಕೆ ನೂರರಷ್ಟು ಆ ಗಾದೆ ಮಾತಿಗೆ ಹತ್ತಿರವಾಗಿದೆ. ಯಾಕೆಂದರೆ ಬಣ್ಣದ ಲೋಕದಲ್ಲಿ ಪ್ರತಿಭೆ ಒಂದಿದ್ದರೆ ಸಾಕು ಎನ್ನುವಂತೆ ಇಲ್ಲ, ಅದೃಷ್ಟ ಇರಲೇಬೇಕು. ಲಕ್ ಕೈ ಕೊಟ್ಟರೆ ಎಷ್ಟೇ ತಿಪ್ಪರಲಾಗ ಹಾಕಿ, ನಟನೆಯ ಕೌಶಲ್ಯ ತೋರಿಸಿದರೂ ಸಕ್ಸಸ್ ಪಡೆಯುವುದು ಬಹಳ ಕಷ್ಟವಾಗುತ್ತದೆ. ಇಲ್ಲಿ ನಟನೆಗೆ ಬರುವ ಮುನ್ನ ಟಾಪ್ ಸೀರಿಯಲ್ ಕಲಾವಿದರು ಏನು ಮಾಡುತ್ತಿದ್ದರು ಎಂಬ ಮಾಹಿತಿ ನೀಡಲಾಗಿದೆ.


cover image
ಮೋಕ್ಷಿತಾ ಪೈ

ಪಾರು ಧಾರಾವಾಹಿ ಮೂಲಕ ಪ್ರೇಕ್ಷಕರ ಮನಗೆದ್ದ ನಟಿ ಮೋಕ್ಷಿತಾ ಪೈ, ಕನ್ನಡ ಕಿರುತೆರೆಗೆ ಎಂಟ್ರಿ ಕೊಡುವ ಮುನ್ನ ಮುನ್ನ ಮಕ್ಕಳಿಗೆ ಟ್ಯೂಷನ್ ಹೇಳಿಕೊಡುತ್ತಿದ್ದರು. ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದ ಇವರು, ಶೇಷಾದ್ರಿಪುರಂ ಕಾಲೇಜಿನಲ್ಲಿ ಬಿ.ಕಾಂ ಮುಗಿಸಿದ್ದರು.  ಇವರು ಸೀರಿಯಲ್‌ಗೆ ಆಯ್ಕೆಯಾಗಿದ್ದು ಫೇಸ್‌ಬುಕ್ ಮೂಲಕ. 

 

ಸುದರ್ಶನ್ ರಂಗಪ್ರಸಾದ್

ಭಾಗ್ಯಲಕ್ಷ್ಮೀ ಸೀರಿಯಲ್‌ನಲ್ಲಿ ತಾಂಡವ್ ಪಾತ್ರದ ಮೂಲಕ ಗಮನ ಸೆಳೆಯುತ್ತಿರುವ ಸುದರ್ಶನ್ ರಂಗಪ್ರಸಾದ್ ಫಾರಿನ್‌ನಲ್ಲಿ ಎಂಬಿಎ ಮಾಡಿದ್ದರು. ಆದರೆ, ಅವರಿಗೆ ನಟನೆಗೆ ಬಗ್ಗೆ ಹೆಚ್ಚು ಒಲವಿತ್ತು. ಹೀಗಾಗಿ ರಂಗಭೂಮಿಯಲ್ಲಿ ತೊಡಗಿಕೊಂಡರು. ಆದರೆ, ಅವರಿಗೆ ರಂಗಭೂಮಿ ಅಂದುಕೊಂಡಷ್ಟು ಯಶಸ್ಸು ಕೊಡಲಿಲ್ಲ. ನಂತರ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟರು. ಅದೂ ಕೂಡ ವರ್ಕ್ ಆಗಲಿಲ್ಲ. ಮುಂದೆ ಸ್ಟ್ಯಾಂಡಪ್ ಕಾಮಿಡಿ ಮಾಡುತ್ತಾ ಇನ್ನೇನು ಸೆಟಲ್ ಆದರೂ ಅನ್ನುವಷ್ಟರಲ್ಲಿ ಕಾಂಟ್ರವರ್ಸಿಯಾಯ್ತು. ಹೀಗೆ ಮಾಡಿದ ಕೆಲಸಗಳೆಲ್ಲವೂ ಯಶಸ್ಸು ಪಡೆಯದಿದ್ದಾಗ ಅಮೆರಿಕಾಗೆ ತೆರಳಿ ಕೆಲಸ ಮಾಡಲು ಆರಂಭಿಸಿದರು. ಇಲ್ಲಿ ಅವರಿಗೆ ಲಕ್ಷಗಟ್ಟಲೇ ಸಂಬಳ ಬರುತ್ತಿತ್ತು. ಆದರೆ, ಹಾಲಿಡೇಗಾಗಿ ಊರಿಗೆ ಬಂದಾಗ ಕೊರೊನಾ ಲಾಕ್‌ಡೌನ್ ಆಯಿತು. ಆಗ ಸಮಸ್ಯೆ ಆರಂಭವಾಯಿತು. ಈ ವೇಳೆ  ಭಾಗ್ಯಲಕ್ಷ್ಮೀ ಸೀರಿಯಲ್‌ಗೆ ಆಡಿಷನ್ ಕೊಟ್ಟ ಸುದರ್ಶನ್, ಧಾರಾವಾಹಿಗೆ ಸೆಲೆಕ್ಟ್ ಆದರು.

ಕೌಸ್ತುಭ ಮಣಿ

ನಟಿ ಕೌಸ್ತುಭ ಮಣಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನನ್ನರಸಿ ರಾಧೆ' ಧಾರಾವಾಹಿ ಮೂಲಕ ಖ್ಯಾತಿ ಗಳಿಸಿದರು. ಇವರು ಕನ್ನಡ ಕಿರುತೆರೆಗೆ ಎಂಟ್ರಿ ಕೊಡುವ ಮುನ್ನ ಬ್ಯಾಂಕ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಸದ್ಯ ಅವರು ಅರ್ಜುನ್ ಜನ್ಯ ನಿರ್ದೇಶನದ ೪೫ ಸಿನಿಮಾದಲ್ಲಿ ರಾಜ್‌ ಬಿ ಶೆಟ್ಟಿ ನಾಯಕಿಯಾಗಿ ನಟಿಸುತ್ತಿದ್ದಾರೆ.

ಕಾವ್ಯ ಶೈವ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕೆಂಡಸಂಪಿಗೆ ಧಾರಾವಾಹಿಯಲ್ಲಿ ಸುಮನಾ ಪಾತ್ರ ಮಾಡುತ್ತಿರುವ ನಟಿ ಕಾವ್ಯಾ ಶೈವ ಅವರಿಗೆ ಸೆಂಟ್ರಲ್ ಗವರ್ನಮೆಂಟ್‌ನಲ್ಲಿ ಕೆಲಸವಾಗಿತ್ತು. ಅವರು ಡಿಪ್ಲೋಮಾ ಮಾಡಿದ್ದರು. ಆದರೆ, ನಟನೆ ಮೇಲಿನ ಒಲವಿನಿಂದ ಸರ್ಕಾರಿ ಕೆಲಸ ಬಿಟ್ಟು ಕಿರುತೆರೆಗೆ ಎಂಟ್ರಿಕೊಟ್ಟರು. ಇದೀಗ ತೆಲುಗು ಧಾರಾವಾಹಿಯಲ್ಲೂ ಅಭಿನಯಿಸುತ್ತಿದ್ದಾರೆ. 

ರಿತ್ವಿಕ್ ಕೃಪಾಕರ್

ರಾಮಾಚಾರಿ ಸೀರಿಯಲ್ ನಾಯಕ ರಿತ್ವಿಕ್ ಕೃಪಾಕರ್ ನಟನೆಗೆ ಎಂಟ್ರಿ ಕೊಡುವ ಮುನ್ನ  ಥಿಯೇಟರ್ ಆರ್ಟಿಸ್ಟ್ ಆಗಿದ್ದರು. ಇವರೆಗೂ ಸುಮಾರು 200ಕ್ಕೂ ಹೆಚ್ಚು ನಾಟಕಗಳಲ್ಲಿ ನಟಿಸಿರುವ ರಿತ್ವಿಕ್, ರಾಯಲ್ ಮಸ್ಟಾಂಗ್ ಪ್ರೊಡಕ್ಷನ್ಸ್‌ನ ಮಾಲೀಕರಾಗಿದ್ದಾರೆ. 

ಗಗನ್ ಚಿನ್ನಪ್ಪ

ಸೀತಾರಾಮ ಧಾರಾವಾಹಿಯಲ್ಲಿ 'ರಾಮ್' ಪಾತ್ರದ ಮೂಲಕ ಗಮನ ಸೆಳೆಯುತ್ತಿರುವ ಗಗನ್ ಚಿನ್ನಪ್ಪ, ಆಟೋಮೊಬೈಲ್ ಇಂಡಸ್ಟ್ರಿಯಲ್ಲಿ ಮಾರ್ಕೆಟಿಂಗ್ ಹೆಡ್ ಆಗಿ ಮೂರು ವರ್ಷ ಜರ್ಮನಿ ಮತ್ತು ಓಮನ್‌ನಲ್ಲಿ ಕೆಲಸ ಮಾಡಿದ್ದರು. ಮುಂದೆ ಭಾರತಕ್ಕೆ ಮರಳಿದ ಗಗನ್, ಐಟಿ ಕಂಪೆನಿಯೊಂದರಲ್ಲಿ ಕೆಲಸ ಗಿಟ್ಟಿಸಿಕೊಂಡರು. ಬಾಲ್ಯದಿಂದಲೂ ನಟನಾಗಬೇಕು, ಬಣ್ಣದ ಲೋಕದಲ್ಲಿ ಮಿಂಚಬೇಕು ಎಂಬ ಕನಸು ಕಂಡಿದ್ದ ಇವರು, ತಮ್ಮ ಅಫೀಸ್ ಕೆಲಸದ ನಡುವೆ ಬಿಡುವು ಸಿಕ್ಕಾಗ ಆಡಿಶಶ್‌ಗಳಿಗೆ ಹೋಗುತ್ತಿದ್ದರು. 'ಮಂಗಳಗೌರಿ ಮದುವೆ' ಧಾರಾವಾಹಿಯ ಆಡಿಶನ್‌ಗೆ ಹೋದ ಗಗನ್ ಚಿನ್ನಪ್ಪ ಆಯ್ಕೆಯೂ ಆದರು. 

 

ಮೌನ ಗುಡ್ಡೆಮನೆ

'ರಾಮಾಚಾರಿ' ಧಾರಾವಾಹಿ ಮೂಲಕ ಕನ್ನಡಿಗರ ಮನಗೆದ್ದಿರುವ ಮೌನ ಗುಡ್ಡೇಮನೆ, 17ನೇ ವಯಸ್ಸಿಗೆ ಮಾಡೆಲಿಂಗ್‌ಗೆ ಕಾಲಿಟ್ಟರು. ಬಳಿಕ 2020ರಲ್ಲಿ ನಡೆದ 'ಮಿಸ್ ಟೀನ್ ತುಳುನಾಡು' ಸ್ಪರ್ಧೆಯಲ್ಲಿ ಎರಡನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು. ಡಿಗ್ರಿ ಓದುತ್ತಿರುವ ಮೌನಗೆ ಧಾರಾವಾಹಿಯಲ್ಲಿ ನಟಿಸುವ ಅವಕಾಶ ದೊರೆತ್ತಿದ್ದು, ನಟನೆ ಹಾಗೂ ಶಿಕ್ಷಣ ಎರಡನ್ನೂ ಬ್ಯಾಲೆನ್ಸ್ ಮಾಡುತ್ತಿದ್ದಾರೆ.  
 

ಭೂಮಿಕಾ ರಮೇಶ್

ಕಲರ್ಸ್ ಕನ್ನಡದ 'ಭಾಗ್ಯಲಕ್ಷ್ಮೀ' ಸೀರಿಯಲ್‌ನಲ್ಲಿ ಲಕ್ಷ್ಮೀ ಪಾತ್ರದ ಮೂಲಕ ಖ್ಯಾತಿ ಗಳಿಸಿರುವ ಭೂಮಿಕಾ ರಮೇಶ್ ನಟನೆಗೆ ಎಂಟ್ರಿ ಕೊಡುವ ಮೊದಲು ವಿದ್ಯಾರ್ಥಿನಿಯಾಗಿದ್ದರು. ಧಾರಾವಾಹಿಯಲ್ಲಿ ವಯಸ್ಸಿಗೂ ಮೀರಿದ ಪಾತ್ರ ಮಾಡುತ್ತಿರುವ ಇವರು, ಈ ಹಿಂದೆ 'ಸೈ ಅಂಟೆ ಸೈ'  ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಳಿಕ 'ಡ್ಯಾನ್ಸಿಂಗ್ ಸ್ಟಾರ್ ಜೂನಿಯರ್ಸ್' ವೇದಿಕೆಯಲ್ಲೂ ಹೆಜ್ಜೆ ಹಾಕಿದ್ದರು. ಭೂಮಿಕಾ 'ದೊರೆಸಾನಿ' ಸೀರಿಯಲ್‌ಗೆ ಆಡಿಷನ್ ಕೊಟ್ಟಿದ್ದರು. ಆದ್ರೆ ಚಿಕ್ಕ ವಯಸ್ಸು ಎಂಬ ಕಾರಣಕ್ಕೆ ರಿಜೆಕ್ಟ್ ಆಗಿದ್ದರು. ಸದ್ಯ ಬಿಸಿಎ ಓದುತ್ತಿರುವ ಈ ನಟಿ 'ಡಿಸೆಂಬರ್ 24' ಎಂಬ ಸಿನಿಮಾದಲ್ಲೂ ಬಣ್ಣ ಹಚ್ಚಿದ್ದಾರೆ. 

 

ದಿಲೀಪ್ ಶೆಟ್ಟಿ

ಕನ್ನಡ ಕಿರುತೆರೆಯ ಬುರ್ಜ್ ಖಲೀಫಾ ಅಂತಲೇ ಖ್ಯಾತಿ ಪಡೆದಿರುವ ದಿಲೀಪ್ ಶೆಟ್ಟಿ, ಸದ್ಯ ನೀನಾದೆ ನಾ ಸೀರಿಯಲ್‌ನಲ್ಲಿ ಅಭಿನಯಿಸುತ್ತಿದ್ದಾರೆ. ಮೂಲತಃ ಮಂಗಳೂರಿನವರಾದ ದಿಲೀಪ್, ಕಾಮರ್ಸ್‌ನಲ್ಲಿ ಸ್ನಾತಕೋತ್ತರ ಮುಗಿಸಿ ದುಬೈನಲ್ಲಿ ಕೆಲಸ ಗಿಟ್ಟಿಸಿಕೊಂಡು ಅಲ್ಲಿಗೆ ಶಿಫ್ಟ್ ಆದರು. ಕೆಲ ವರ್ಷಗಳ ಕಾಲ ಅಲ್ಲೇ ನೆಲಸಿದ್ದ ಅವರು, ಅನೇಕ ಫ್ಯಾಚನ್‌ ಶೋಗಳಲ್ಲಿ ಭಾಗವಹಿಸಿ, ಮಿಸ್ಟರ್ ದುಬೈ ಪಟ್ಟ ಪಡೆದರು. ಕರ್ನಾಟಕ್ಕೆ ಬಂದು ಏನಾದ್ರೂ ಸಾಧನೆ ಮಾಡಬೇಕೆಂಬುದು ಅವರ ಆಸೆಯಾಗಿತ್ತು. ಹೀಗಾಗಿ ದುಬೈನ ಕೆಲಸ ಬಿಟ್ಟು ಬಂದು ವಿದ್ಯಾ ವಿನಾಯಕ ಧಾರಾವಾಹಿಗೆ ಸೆಲೆಕ್ಟ್ ಆದರು. 

 

ಕಾವ್ಯಶ್ರೀ ಗೌಡ

'ಮಂಗಳಗೌರಿ ಮದುವೆ' ಧಾರಾವಾಹಿಯ ಖ್ಯಾತಿ ಕಾವ್ಯಶ್ರೀ ಗೌಡ, ಕನ್ನಡ ಕಿರುತೆರೆ ಎಂಟ್ರಿ ಕೊಡುವ ಮುನ್ನ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದರು. ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದ ಈ ನಟಿ, ಖಾಸಗಿ ವಾಹಿನಿಯಲ್ಲಿ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದರು. ಈ ನಡುವೆ ಧಾರಾವಾಹಿಗಳಿಗೆ ಆಡಿಷನ್ಸ್ ನೀಡುತ್ತಿದ್ದರು. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+