X
ಹೋಮ್ ಚಲನಚಿತ್ರಗಳ ಒಳನೋಟ

ಚೈತ್ರಾ ಧ್ಯಾನದ ಬಗ್ಗೆ ತುಕಾಲಿ ಮಾನಸಾಗೆ ಅನುಮಾನ: ನರಕಕ್ಕೆ ಕಿಚ್ಚು ಹಚ್ಚಿದ 'ಡೌಟ್'

Author Sowmya Bairappa | Published: Tuesday, October 1, 2024, 05:54 PM [IST]

ಬಿಗ್‌ಬಾಸ್‌ ಕನ್ನಡ ಸೀನಸ್ 11 ಆರಂಭವಾಗಿ ಎರಡು ದಿನ ಕಳೆದಿದೆ. ಮೊದಲ ದಿನವೇ ಸ್ಪರ್ಧಿಗಳ ನಡುವೆ ವಾಗ್ವಾದಗಳು ಜೋರಾಗಿದ್ದು, ದೊಡ್ಮನೆಗೆ ಹೋದವರೆಲ್ಲಾ ಆಟ ಆಡಬೇಕು ಎಂಬ ಮನಸ್ಥಿತಿಯಲ್ಲಷ್ಟೇ ಹೋಗಿದ್ದಾರೆ ಅನ್ನೋದು ಅವರ ಏರು ಧ್ವನಿ,‌ ಮಾತಿಗೆ ಮುಂಚೆ ಜಗಳದಿಂದಾನೇ ತಿಳಿಯುತ್ತಿದೆ. ಮೊದಲ ಟಾಸ್ಕ್‌ನಲ್ಲಿ ಸ್ವರ್ಗವಾಸಿಗಳ ನಡುವೆ ಹೊಂದಾಣಿಕೆ ಸರಿಯಾಗಿರಲಿಲ್ಲ. ಆದರೆ, ನರಕ ನಿವಾಸಿಗಳು ಒಗ್ಗಟ್ಟಾಗಿದ್ದರು. ಎರಡನೇ ದಿನ ನರಕದಲ್ಲೂ ಕಿಚ್ಚು ಹೆಚ್ಚಾಗಿದೆ.


cover image
ಚೈತ್ರಾ ಧ್ಯಾನದ ಬಗ್ಗೆ ಮಾನಸಾಗೆ ಅನುಮಾನ

ನರಕ ನಿವಾಸಿಯಾಗಿರುವ ಚೈತ್ರಾ ಕುಂದಾಪುರ ಮರದ ಬಳಿ ಒಬ್ಬರೇ ಕುಳಿತುಕೊಂಡು ಧ್ಯಾನ ಮಾಡುತ್ತಿರುತ್ತಾರೆ. ಇದನ್ನು ನೋಡಿದ ಮಾನಸಾ, ನನಗೆ ಈ ಧ್ಯಾನ ಮಾಡುತ್ತಿರುತ್ತರಲ್ಲಾ ಅವರ ಮೇಲೆ ನಿದ್ದೆ ಮಾಡುತ್ತಿದ್ದಾರಾ? ಅಂತ ಸ್ವಲ್ಪ ಡೌಟ್ ಎಂದರು. ಇದರಿಂದ ಕೆರಳಿದ ಚೈತ್ರಾ, ನಿಮ್ಮದು ಎಷ್ಟಿದೆ ನೀವು ನೋಡಿಕೊಳ್ಳಿ. ಅನುಮಾನ ಇದ್ದರೆ ಜಡ್ಜ್‌ಮೆಂಟ್ ಮಾಡಬೇಡಿ ಅಂತ ಗುಡುಗಿದ್ದಾರೆ. ಅದಕ್ಕೆ ತುಕಾಲಿ ಮಾನಸ, ನನ್ನಿಷ್ಟ,  ನಿಮಗೇನು ಬೇಕು ಅದನ್ನು ಹೇಳೋಕೆ ಆಗಲ್ಲ ಅಂತ ಉತ್ತರಿಸಿದ್ದಾರೆ. 

ನಾನು ಅಲ್ಪಜ್ಞಾನಿ ಎಂದ ಮಾನಸ

ಆಗ ಚೈತ್ರಾ ಅದರ ಬಗ್ಗೆ ಮಾತನಾಡಲು ಒಂದು ಲೆವೆಲ್ ಬೇಕು. ನಾನೇನು ಮಾಡಿದ್ರು ಅದು ತಪ್ಪು. ಇವರ್ಯಾರು ಅದನ್ನು ಹೇಳೋಕೆ ಅಂತ ವೈಲೆಂಟ್ ಆಗಿದ್ದಾರೆ. ಬಳಿಕ ಇಬ್ಬರ ನಡುವೆ ವಾಗ್ವಾದ ನಡೆದು ಮಾನಸ ಅಲ್ಪಜ್ಞಾನಿ ನಾನು ಅಂತ ಹೇಳಿದ್ದಾರೆ. ಅದಕ್ಕೆ ಚೈತ್ರಾ ಜ್ಞಾನ ಇಲ್ಲ ಅಂದರೆ ಮಾತನಾಡಬಾರದು ಎಂದಿದ್ದಾರೆ. 


ಎರಡನೇ ದಿನ ಗೌತಮಿ ಟಾರ್ಗೆಟ್

ಮೊದಲ ದಿನ ದೊಡ್ಮನೆಯಲ್ಲಿ ಚೈತ್ರಾ ಟಾರ್ಗೆಟ್‌ ಆಗಿದ್ದರು, ಎರಡನೇ ದಿನ ಗೌತಮಿ ಟಾರ್ಗೆಟ್ ಆಗಿದ್ದಾರೆ. ಸ್ವರ್ಗವಾಸಿಗಳ ಯಮುನಾ ಹಾಗೂ ಭವ್ಯಾ, ನಾಮಿನೇಷನ್‌ನಲ್ಲಿ ಗೌತಮಿ ಹೆಸರನ್ನು ಸೂಚಿಸಿದ್ದಾರೆ. ಗೌತಮಿ ಅವರಿಗೆ ನರಕವಾಸಿಗಳ ಮೇಲೆ ಸಾಫ್ಟ್ ಕಾರ್ನರ್ ಇದೆ. ನಮಗಿಂತ ಹೆಚ್ಚಾಗಿ ಅವರ ಜೊತೆಯೇ ಕಾಲ ಕಳೆಯುತ್ತಾರೆ ಅಂತ ಕಾರಣ ನೀಡಿದ್ದಾರೆ. ಇದರಿಂದ ಗೌತಮಿ ಬೇಸರವಾಗಿದ್ದು, ಸುಮ್ಮನೆ ನೋಡಿಕೊಂಡು ನಿಂತಿದ್ದಾರೆ. ಇತ್ತ ಭವ್ಯಾ ಅವರಿಗೆ ಡಾಮಿನೇಟ್ ಎಂಬ ಪಟ್ಟ ಕೇಳಿಬಂದಿದೆ. 

ಯಮುನಾ ವಿರುದ್ಧ ಶಶಿರ್ ಕಿಡಿ

ಗೌತಮಿ ನರಕವಾಸಿಗಳ ಜೊತೆಗೆ ಹೆಚ್ಚು ಸಮಯ ಕಳೆಯುತ್ತಾರೆ ಎಂದು ಯಮುನಾ ಹೇಳಿರುವುದು ಶಿಶಿರ್‌ಗೆ ಕೋಪ ತರಿಸಿದ್ದು, ಅವರು ನಮ್ಮ ಜೊತೆಗೆ ಮಾತನಾಡಿದರೆ ಏನು ತಪ್ಪು ಅಂತ ಪ್ರಶ್ನೆ ಮಾಡಿದ್ದಾರೆ. ಆಗಲು ಯಮುನಾ ಜೋರಾಗಿಯೇ ಉತ್ತರಿಸಿದ್ದಾರೆ. ಪ್ರೋಮೋ ನೋಡಿದ ವೀಕ್ಷಕರು ಯಮುನಾ ಮೇಲೆ ಕೋಪಗೊಂಡಿದ್ದಾರೆ. ಈ ಯಮುನಾ ಮಾತಿಗೆ ಮುಂಚೆ ಜಗಳಕ್ಕೆ ಬರುತ್ತಾರೆ ಎಂದು ಕಮೆಂಟ್ ಹಾಕಿದ್ದಾರೆ.


ನೇರ ನಾಮಿನೇಟ್ ಆಗಿರುವ ಚೈತ್ರಾ

ಮೊದಲ ದಿನ ನಾಮಿನೇಟ್ ಮಾಡುವ ಅಧಿಕಾರವನ್ನು ಬಿಗ್‌ಬಾಸ್‌, ಸ್ವರ್ಗ ನಿವಾಸಿಗಳಿಗೆ ಮಾತ್ರ ನೀಡಿದ್ದರು. ನಾಮಿನೇಷನ್ ವೇಳೆ ಬಹುತೇಕ ಸ್ವರ್ಗವಾಸಿಗಳು ಚೈತ್ರಾ ಕುಂದಾಪುರ ಅವರನ್ನೇ ಟಾರ್ಗೆಟ್ ಮಾಡಿದ್ದರು. ಹೀಗಾಗಿ ಚೈತ್ರಾ ಮೊದಲ ವಾರ ಮನೆಯಿಂದ ಹೊರಹೋಗಲು ನೇರವಾಗಿ ನಾಮಿನೇಟ್ ಆಗಿದ್ದಾರೆ. ಎರಡನೇ ದಿನ ಗೌತಮಿ ನಾಮಿನೇಟ್ ಆಗಿದ್ದಾರೆ. 




Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+