X
ಹೋಮ್ ಚಲನಚಿತ್ರಗಳ ಒಳನೋಟ

ಸ್ಯಾಂಡಲ್‌ವುಡ್ ಸ್ಟಾರ್ ನಟರ ಜೊತೆಗೆ ಮಿಂಚಿದ್ದ ಈ ನಟಿಯರೀಗ ಸಿನಿಮಾರಂಗದಿಂದ ದೂರ-ದೂರ!

Author Sowmya Bairappa | Published: Monday, May 20, 2024, 04:01 PM [IST]

ಬಣ್ಣದ ಲೋಕದಲ್ಲಿ ಅವಕಾಶಗಳು ಯಾವಾಗಲೂ ಒಂದೇ ರೀತಿ ಇರುತ್ತವೆ ಎಂದು ಊಹಿಸಲು ಸಾಧ್ಯವಿಲ್ಲ. ಎಲ್ಲರ ಬೇಡಿಕೆಯೂ ಒಂದಲ್ಲ ಒಂದು ದಿನ ಕುಸಿದೇ ಕುಸಿಯುತ್ತದೆ. ಕೆಲವೊಮ್ಮೆ ಅವಕಾಶಗಳ ಕೊರತೆಯೂ ಎದುರಾಗುತ್ತದೆ. ಹೀಗಾಗಿ, ಬಣ್ಣದ ಲೋಕದಲ್ಲಿ ಬಾನೆತ್ತರಕ್ಕೆ ಬೆಳೆಯಬೇಕಾದ ಹಲವರು ಕಾಲಕ್ರಮೇಣ ಕಣ್ಮರೆಯಾಗುತ್ತಾರೆ. ಇಲ್ಲಿ ಸುದೀಪ್, ಉಪೇಂದ್ರ, ಗಣೇಶ್, ದರ್ಶನ್ ಸೇರಿದಂತೆ ಸ್ಟಾರ್ ನಟರ ಜೊತೆಗೆ ಅಭಿನಯಿಸಿದ್ದ ನಟಿಯರು ಈಗೇನ್ಮಾಡ್ತಿದ್ದಾರೆ ಎಂಬ ವಿವರವನ್ನು ನೀಡಲಾಗಿದೆ.


cover image
ಡೈಸಿ ಬೋಪಣ್ಣ

ನಟಿ ಡೈಸಿ ಬೋಪಣ್ಣ ಅವರು ಗಾಳಿಪಟ, ರಾಮ ಶ್ಯಾಮ ಭಾಮ, ಭಗವಾನ್, ತವರಿನ ಸಿರಿ, ಐಶ್ವರ್ಯ, ಸತ್ಯವಾನ್ ಸೇರಿದಂತೆ ಅನೇಕ ಸಿನಿಮಾಗಳ ಮೂಲಕ ಕನ್ನಡಿಗರ ಮನಗೆದ್ದಿದ್ದರು. ಕೇವಲ ಕನ್ನಡ ಮಾತ್ರವಲ್ಲದೇ, ಆ ಕಾಲದಲ್ಲಿಯೇ ಹಿಂದಿಯಲ್ಲಿ ಕೂಡ ಅದೃಷ್ಟ ಪರೀಕ್ಷೆ ಮಾಡಿಕೊಂಡು, ಅಕ್ಷಯ್ ಕುಮಾರ್ ಜೊತೆ ಗರಂ ಮಸಾಲಾ ಸಿನಿಮಾದಲ್ಲಿ ನಟಿಸಿದ್ದರು. ಆಗತಾನೇ ಸಿನಿಮಾದಲ್ಲಿ ಯಶಸ್ಸು ಗಳಿಸುತ್ತಿದ್ದ ಡೈಸಿ ಬೋಪಣ್ಣ, 2011ರಲ್ಲಿ  ಅಮಿತ್ ಜಯು ಜೊತೆ ಸಪ್ತಪದಿ ತುಳಿದರು. ಆ ನಂತರ ಚಂದನವನದಿಂದ ದೂರವಾದರು. ಆದರೆ, ಇಂದಿಗೂ ಅವರ ಗ್ಲ್ಯಾಮರ್ ಕಡಿಮೆಯಾಗಿಲ್ಲ. ಆಗಾಗ ವಿಭಿನ್ನ ಫೋಟೋಶೂಟ್ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಾರೆ.

ರೇಖಾ ವ್ಯಾದವ್ಯಾಸ್

ಮಾಡೆಲಿಂಗ್ ಕ್ಷೇತ್ರದಿಂದ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ರೇಖಾ ವೇದವ್ಯಾಸ್, ಹುಚ್ಚ, ಚಿತ್ರ, ತುಂಟಾಟ, ಮೋನಾಲಿಸಾ, ಬಾಸ್, ಹುಡುಗಾಟ, ಚೆಲ್ಲಾಟ, ಪರಿಚಯ ಹೀಗೆ ಹಲವು ಸಿನಿಮಾಗಳ ಮೂಲಕ ಕನ್ನಡಿಗರ ಹೃದಯ ಗೆದ್ದಿದ್ದರು.  ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿಯೂ ಖ್ಯಾತಿ ಗಳಿಸಿದ್ದ ಇವರು, 2014ರಿಂದ ಚಿತ್ರರಂಗದಿಂದ ಅಂತರ ಕಾಯ್ದುಕೊಂಡರು. ಕಳೆದ ವರ್ಷ ತೆಲುಗು ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದ ಅವರು, ತಮಗೆ ಆರೋಗ್ಯ ಸಮಸ್ಯೆ ಇರುವುದಾಗಿ ಹೇಳಿಕೊಂಡಿದ್ದರು.  

ಮಾನ್ಯ

ಸಾಹಸಸಿಂಹ ಡಾ.ವಿಷ್ಣುವರ್ಧನ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ರೋರಿಂಗ್ ಸ್ಟಾರ್ ಶ್ರೀಮುರಳಿ ಜೊತೆ ತೆರೆಹಂಚಿಕೊಂಡಿದ್ದ ನಟಿ ಮಾನ್ಯ, ಅತ್ಯಲ್ಪ ಅವಧಿಯಲ್ಲಿಯೇ ಖ್ಯಾತಿಯ ಶಿಖರವನ್ನೇರಿದ್ದರು. ಕನ್ನಡ ಮಾತ್ರವಲ್ಲದೇ, ಪರಭಾಷಾ ಸಿನಿಮಾಗಳಲ್ಲಿ ಗುರುತಿಸಿಕೊಂಡಿದ್ದ ಈ ನಟಿ, ಕನ್ನಡ ಚಿತ್ರರಂಗದಲ್ಲಿ ನೆಲೆಯೂರುವ ಸಮಯದಲ್ಲಿ 2008ರಲ್ಲಿ ಸತ್ಯ ಅವರನ್ನು ಮದುವೆಯಾಗಿ ಚಿತ್ರರಂಗದಿಂದ ದೂರವಾದರು. ಆದರೆ, 2013ರಲ್ಲಿ ಸತ್ಯ ಅವರಿಂದ ದೂರವಾದ ಮಾನ್ಯ, ಅದೇ ವರ್ಷ ವಿಕಾಸ್ ಬಾಜಪೈ ಅವರ ಜೊತೆ ಸಪ್ತಪದಿ ತುಳಿದರು. ಹೀಗಿರುವಾಗ, ದುರಾದೃಷ್ಟವಶಾತ್ 2021ರಲ್ಲಿ ಪಾರ್ಶ್ವವಾಯುಗೆ ಗುರಿಯಾದರು. ಸದ್ಯ ನ್ಯೂಯಾರ್ಕ್‌ನಲ್ಲಿರುವ ಇವರು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದಾರೆ.

ಚಾಂದಿನಿ

ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ, ನಟಿಸಿದ್ದ ಕಲ್ಟ ಸಿನಿಮಾ 'ಎ' ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದ ನಟಿ ಚಾಂದಿನಿ, ಈ ಸಿನಿಮಾ ಮೂಲಕ ಸಿಕ್ಕಾಪಟ್ಟೆ ಜನಪ್ರಿಯತೆ ಗಳಿಸಿದರು. ಎ ಚಿತ್ರದ ನಂತರ ಶಿವ ರಾಜ್ ಕುಮಾರ್ ನಟನೆಯ ಎಕೆ 47 ಚಿತ್ರದಲ್ಲಿಯೂ ನಟಿಸಿದ ಚಾಂದಿನಿ ಕರುನಾಡೆನೆಲ್ಲೆಡೆ ಮನೆ ಮಾತಾದರು. ಬಳಿಕ  ಸಾಹಸಸಿಂಹ ಡಾ.ವಿಷ್ಣುವರ್ಧನ್ ಅಭಿನಯದ 'ದೀಪಾವಳಿ' ಚಿತ್ರದಲ್ಲೂ ನಟಿಸಿದ್ದರು. ಆನಂತರ ಬಣ್ಣದ ಲೋಕಕ್ಕಿಂತ ಶಿಕ್ಷಣ ಮುಖ್ಯವೆಂದು ನ್ಯೂಯಾರ್ಕ್‌ಗೆ ಮರಳಿದ ಚಾಂದಿನಿ, ಆಹಾರ ಹಾಗೂ ಕೃಷಿ ಮಾರ್ಕೆಟಿಂಗ್ ವಿಷಯಲ್ಲಿ ಮಾಸ್ಟರ್ ಡಿಗ್ರಿ ಹಾಗೂ ಪಿಎಚ್‌ಡಿ ಪದವಿ ಪಡೆದರು. ಮತ್ತೆ ಸ್ಯಾಂಡಲ್‌ವುಡ್‌ಗೆ ಮರಳಲೇ ಇಲ್ಲ. 

ದಾಮಿನಿ

ರಿಯಲ್ ಸ್ಟಾರ್ ನಟನೆಯ 'ಉಪೇಂದ್ರ' ಸಿನಿಮಾ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದ ನಟಿ ದಾಮಿನಿ, ಮೊದಲ ಸಿನಿಮಾದಲ್ಲಿಯೇ ಅಭೂತಪೂರ್ವ ಯಶಸ್ಸು ಗಳಿಸಿದರು. ಆನಂತರ ಸುರ, ಸ್ವತಂತ್ರ ಪಾಳ್ಯ ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಟಿಸಿದರಾದರೂ ಅವು ಅಷ್ಟಾಗಿ ಜನಪ್ರಿಯತೆ ತಂದುಕೊಡಲಿಲ್ಲ. ಕಾಲಕ್ರಮೇಣ ಅವರು ಅವಕಾಶಗಳಿಂದ ವಂಚಿತರಾದರು. 

ನಿಖಿತಾ ತುಕ್ರಲ್

ಒಂದು ಕಾಲದಲ್ಲಿ ದಕ್ಷಿಣ ಭಾರತದ ಟಾಪ್ ನಟಿ ಎನಿಸಿಕೊಂಡಿದ್ದ ನಿಖಿತಾ ತುಕ್ರಾಲ್, ಕನ್ನಡದಲ್ಲಿ ಮಹಾರಾಜ, ಯೋಧ, ವಂಶಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಮುಕುಂದ ಮುರಾರಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸುವ ಮೂಲಕ ಸೈ ಎನಿಸಿಕೊಂಡಿದ್ದರು. 2017ರಲ್ಲಿ ಮುಂಬೈ ಮೂಲದ ವ್ಯಕ್ತಿ ಜೊತೆ ವಿವಾಹ ಬಂಧನಕ್ಕೊಳಗಾದ ನಿಖಿತಾ, ನಂತರ ಸಿನಿಮಾದಿಂದ ದೂರ ಸರಿದರು.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+