X
ಹೋಮ್ ಚಲನಚಿತ್ರಗಳ ಒಳನೋಟ

ಯುವಕರ ಮನಗೆದ್ದು ಟ್ರೆಂಡ್ ಆಗ್ತಿವೆ ಗೋಲ್ಡನ್ ಸ್ಟಾರ್ ಗಣೇಶ್ ಅವರ ಈ ಡೈಲಾಗ್‌ಗಳು!

Author Sowmya Bairappa | Published: Tuesday, July 2, 2024, 12:05 PM [IST]

ಯಾವುದೇ ಚಿತ್ರರಂಗದ ಹಿನ್ನೆಯಿಲ್ಲದೆ, ಚಿತ್ರರಂಗಕ್ಕೆ ಕಾಲಿಟ್ಟ ನಟ ಗಣೇಶ್ ಇಂದು ಸ್ಯಾಂಡಲ್‌ವುಡ್‌ನ ಪ್ರಮುಖ ನಾಯಕನಟನಾಗಿ ಗುರುತಿಸಿಕೊಂಡಿದ್ದಾರೆ. ಗೋಲ್ಡನ್ ಸ್ಟಾರ್ ಸಿನಿಮಾ ಅಂದರೆ ಸಾಕು ಅಲ್ಲಿ ನಗುವಿಗೆ ಹಾಗೂ ಡೈಲಾಗ್‌ಗಳಿಗೆ ಬರವಿಲ್ಲ. ಗಣೇಶ್ ಸಿನಿಮಾದಲ್ಲಿ ಹೇಳುವ ಡೈಲಾಗ್‌ಗಳಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಇಲ್ಲಿ ಗಣೇಶ್ ಅವರ ಬೆಸ್ಟ್ ಡೈಲಾಗ್‌ಗಳ ಪಟ್ಟಿಯನ್ನು ನೀಡಲಾಗಿದೆ.


cover image
ಈ ದಿಲ್, ಹೃದಯ

2006ರಲ್ಲಿ ಬಿಡುಗಡೆಯಾದ ಯೋಗರಾಜ್ ಭಟ್ ನಿರ್ದೇಶನದ 'ಮುಂಗಾರು ಮಳೆ' ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿತ್ತು. ಈ ಸಿನಿಮಾದ ರೀ ಮನುಷ್ಯಂಗೆ ಕೆಟ್ಟ ಸಮಯ ಶುರು ಆದರೆ, ತಲೆ ಕೆರೆದುಕೊಂಡು, ತಲೆಲಿ ಗಾಯ ಆಗಿ, ಅದು ಕ್ಯಾನ್ಸರ್ ಆಗಿ, ಡಾಕ್ಟರ್ ತಲೆ ತೆಗಿಬೇಕು ಅಂತಾರೆ. ಅಂತಹದರಲ್ಲಿ ನಾನು ಈ ದಿಲ್, ಹೃದಯ... ಅದೇ ಹಾರ್ಟ್ ಅಂತರಲ್ಲ ಅದಕ್ಕೆ ಕೈ ಹಾಕಿ 'ಪರ ಪರ ' ಅಂತ ಕೆರಕ್ಕೋಬಿಟ್ಟಿದ್ದೀನಿ ಕಣ್ರೀ. ಗಣೇಶ್ ಮಳೆಯಲ್ಲಿ ನೆನೆಯುತ್ತಾ ಹೇಳುವ ಈ ಡೈಲಾಗ್ ಸಿಕ್ಕಾಪಟ್ಟೆ ಫೇಮಸ್.

ನನಗೆ ಸಿಗ್ತಾರೆ ಅನ್ನೋದು ಕಲ್ಪನೆ

ಗಣೇಶ್ 25ನೇ ಸಿನಿಮಾ ಬುಗಾರಿ. ಇದರಲ್ಲಿ ನನಗೆ ಸಿಗ್ತಾರೆ ಅನ್ನೋದು ಕಲ್ಪನೆ. ನನಗೆ ಸಿಗ್ಬೇಕು ಅನ್ನೋದು ಸ್ವಾರ್ಥ, ನನಗೆ ಸಿಗಲಿಲ್ಲ ಅನ್ನೋದು ದುಃಖ. ಆದರೆ, ನನಗೆ ಸಿಗಲಿಲ್ಲ ಅಂದ್ರೂ ಅವಳು ಎಲ್ಲೇ ಇದ್ರೂ ಚೆನ್ನಾಗಿರ್ಲಿ ಅನ್ನೋದು ಪ್ರೀತಿ ಅಂತ ಗಣೇಶ್ ಸಾಧುಕೋಕಿಲ ಬಳಿ ಹೇಳುವ ಡೈಲಾಗ್ ಕೂಡ ಅನೇಕ ಹುಡುಗರ ಮನಗೆದ್ದಿತ್ತು.

ನಗುನಗುತ್ತಾ ಎಲ್ಲರನ್ನು ನಗಿಸುತ್ತಿದ್ದ ನನ್ನ ನೋಡಿ

ನಗುನಗುತ್ತಾ ಎಲ್ಲರನ್ನು ನಗಿಸುತ್ತಿದ್ದ ನನ್ನ ನೋಡಿ ಪ್ರಪಂಚದಲ್ಲಿ ಇವನಷ್ಟು ಸುಖ ಪುರುಷ ಯಾರಿಲ್ಲ ಅನ್ಕೊಂಡಿದ್ದಾರೆ. ಆದರೆ, ಈ ಹೃದಯ ಹಗಲು ರಾತ್ರಿ ಬಿಕ್ಕಿ ಬಿಕ್ಕಿ ಅಳೋದು ಯಾರಿಗೂ ಕೇಳಸಲ್ಲ. ಆದರೆ, ಕಣ್ಣೀರು ಯಾರಿಗೂ ಕಾಣಿಸಲ್ಲ. ಅದಕ್ಕೇ ಕಾರಣ ಪ್ರೀತಿ ಎಂಬ ಕೃಷ್ಣ ಸಿನಿಮಾದ ಡೈಲಾಗ್ ಕೂಡ ಹಲವರಿಗೆ ಕಣ್ಣೀರು ತರಿಸಿತ್ತು.

ನಿಮ್ಮ ನಗು, ನಿಮ್ ಬ್ಯೂಟಿ

ನಿಮ್ಮ  ನಗು, ನಿಮ್ ಬ್ಯೂಟಿ, ನಿಮ್ಮ  ವಾಯ್ಸ್, ನಿಮ್ಮ ಕೂದಲು, ನಿಮ್ಮ ನೋಟ, ಈ ಬಿಕನಾಸಿ ಮಳೆ, ನಿಮ್ಮ ಗೆಜ್ಜೆ ಸದ್ದು, ಆ ವಾಚು, ಆ ರಾಸ್ಕಲ್ ದೇವದಾಸ್ ಗಂಟೆ ಸದ್ದು ಎಲ್ಲಾ ಮಿಕ್ಸ್ ಆಗಿ ನನ್ನ ಲೈಪ್‌ನಲ್ಲಿ ರಿಪೇರಿ ಮಾಡೋಕೆ ಆಗದೇ ಇರುವಷ್ಟು ಗಾಯ ಮಾಡಿದೆ ಕಣ್ರೀ ಈ ಡೈಲಾಗ್ ಅಂತೂ ಹುಡುಗರ ಫೇವರಿಟ್  ಅಂದರೆ ತಪ್ಪಾಗಲ್ಲ. ಇದು ಮುಂಗಾರು ಮಳೆ ಸಿನಿಮಾದ ಡೈಲಾಗ್.

ನೀವು ಹುಟ್ಟಿರೋದೇ ನನಗೋಸ್ಕರ

ನೀವು ಹುಟ್ಟಿರೋದೇ ನನಗೋಸ್ಕರ...ನಾನ್ ಹುಟ್ಟಿರೋದೆ ನಿಮಗೋಸ್ಕರ...ನೀವ್ ಹುಡ್ಕತ್ತಿರೋದೇ ನನ್ನನ್ನೇ ಅಂಥ ನಿಮ್ ಕಣ್ ಹೇಳ್ತಾ ಇದೆ. ನಿಜ ಹೇಳಿ ನಿಮ್ ಕಣ್ಣಲ್ಲಿ ಏನ್ ಇಟ್ಟಿದ್ದೀರಾ ಎಂಬ ಮಳೆಯಲಿ ಜೊತೆಯಲಿ ಸಿನಿಮಾದ ಹಾಡು ಕೂಡ ಸಿಕ್ಕಪಾಟ್ಟೆ ಜನಪ್ರಿಯತೆ ಪಡೆದುಕೊಂಡಿದೆ.

ಬಿಟ್ಟುಕೊಟ್ಟು ಬಿಟ್ಟೆ ಕಣ್ರೀ

ನನಗೆ ಗೊತ್ತಾಗೋಯ್ತು ಕಣ್ರೀ... ನೀವು ನನಗೆ ಸಿಗೋದಿಲ್ಲ ಅಂತ. ಬಿಟ್ಟುಕೊಟ್ಟು ಬಿಟ್ಟೆ ಕಣ್ರೀ. ನಿಮ್ಮನ್ನ ಪಟಾಯಿಸಿ ಲೋಫರ್ ಅನ್ನಿಸಿಕೊಳ್ಳುವುದಕ್ಕಿಂತ ಒಬ್ಬ ಡಿಸೆಂಟ್ ಹುಡುಗನಾಗಿ ಇದ್ದು ಬಿಟ್ಟರೆ ಸಾಕು ಅನಿಸಿಬಿಟ್ಟಿದೆ ಕಣ್ರೀ ಎಂಬ ಗಣೇಶ್ ಪೂಜಾಗಾಂಧಿಗೆ ಹೇಳುವ ಈ ಡೈಲಾಗ್ ಕೂಡ ಸಖತ್ ಹಿಟ್.

ಪರ್ಸ್‌ನಲ್ಲಿರೋ ಮನಿ ನೋಡಿ ಯಾವತ್ತು ಪ್ರೀತಿಸಬಾರದು

ಪರ್ಸ್‌ನಲ್ಲಿರೋ ಮನಿ ನೋಡಿ ಯಾವತ್ತು ಪ್ರೀತಿಸಬಾರದು..ಒಳ್ಳೆ ಮನಸ್ಸು ನೋಡಿ ಪ್ರೀತಿಸಬೇಕು. ಕಳೆದು ಹೋಗಿರುವ ಪರ್ಸು್ ಒಂದೊಂದು ಸಲ ಸಿಕ್ಕಿಬಿಡುತ್ತೆ.. ಆದ್ರೆ...ಕಳೆದು ಹೋಗಿರುವ ಮನಸ್ಸು ಯಾವತ್ತು ಸಿಗಲ್ಲ...ನೆನಪಿಟ್ಟುಕೊಳ್ಳಿ ಎಂಬ ಕೂಲ್ ಸಿನಿಮಾದ ಡೈಲಾಗ್ ಕೂಡ ಹಿಟ್.

ಪ್ರೀತಿ ಅಂದರೆ ಒಂದೇ ಉಸಿರಲ್ಲಿ ಓದಿ ಆಮೇಲೆ ಮೂಲೆಗೆಸೆಯೋ

ಪ್ರೀತಿ ಅಂದರೆ ಒಂದೇ ಉಸಿರಲ್ಲಿ ಓದಿ ಆಮೇಲೆ ಮೂಲೆಗೆಸೆಯೋ ನ್ಯೂಸ್ ಪೇಪರ್ ಅಲ್ಲ...ಕಾಲೇಜ್‌ನಲ್ಲಿ ಓದಬೇಕಾದರೆ ಸೈನ್ಸ್ ಇಲ್ಲ ಅಂದರೆ ಕಾಮರ್ಸ್, ಕಾಮರ್ಸ್ ಇಲ್ಲಂದ್ರೆ ಆರ್ಟ್ ಅಂತ ಆಪ್ಷನ್ಸ್ ಇರುತ್ತೆ. ಆದ್ರೆ, ಪ್ರೀತಿ ವಿಷಯದಲ್ಲಿ ಇವನಿಲ್ಲ ಅಂದ್ರೆ ಇನ್ನೊಬ್ಬ ಅಂತ ಆಪ್ಷನ್ಸ್ ಇಟ್ಕೋಬಾರದು. ನನ್ ಗಂಡ ಇವನೇ ಆಗೋನು ಅಂತ ಡಿಸೈಡ್ ಮಾಡ್ಕೊಂಡೇ ಲವ್ ಮಾಡ್ಬೇಕು ಎಂಬ ಕೃಷ್ಣ ಸಿನಿಮಾದ ಡೈಲಾಗ್ ಯುವಕರ ಫೇವರಿಟ್ ಆಗಿತ್ತು.

ಹಾರಾಡೋ ಗಾಳಿಪಟ ನೋಡ್ತಿದ್ರೆ

ಗಾಳಿಪಟ ಸಿನಿಮಾದ ಹಾರಾಡೋ ಗಾಳಿಪಟ ನೋಡ್ತಿದ್ರೆ, ನಾನು ಚಿಕ್ಕೋನು, ತುಂಬಾ ಒಳ್ಳೆಯವನು ಅನ್ಸುತ್ತೆ. ನಾನ್ ಪ್ರಕಾರ ಮನುಷ್ಯರು ಯಾವಾಗ್ಲೂ ಚಿಕ್ಕ ಮಕ್ಕಳು ತರಹ ಇರಬೇಕು. ನಾವ್ ದೊಡ್ಡಾರಾಗ್ತಾ ಆಗ್ತಾ ಕಳ್ಳನಾನ್ಮಕ್ಕಳು ಆಗಿಬಿಡ್ತೀವಿ ತಪ್ಪಲ್ವಾ..? ಅದಕಕ್ಎ ನಾನ್ ಯಾವಾಗ್ಲೂ ಗಾಳಿಪಟ ಹಾರುಸ್ತಾ ಚಿಕ್ಕೋನು ಆಗೋಕೆ ಟ್ರೈ ಮಾಡ್ತೀನಿ ಎಂಬ ಡೈಲಾಗ್ ಕೂಡ ಹಿಟ್.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+