2011ರಲ್ಲಿ 'ಕೋಟೆ' ಸಿನಿಮಾದ ಮೂಲಕ ಕನ್ನಡಕ್ಕೆ ಕಾಲಿಟ್ಟ ರವಿಶಂಕರ್ ಎರಡನೇ ಚಿತ್ರವಾದ 'ಕೆಂಪೇಗೌಡ' ಮೂಲಕ ದೊಡ್ಡ ಜನಪ್ರಿಯತೆ ಪಡೆದರು. ಆದಾದ ಬಳಿಕ ಇಂದಿನವರೆಗೆ ರವಿಶಂಕರ್ ಹಿಂದೆ ತಿರುಗಿ ನೋಡೆ ಇಲ್ಲ. ಕನ್ನಡ ಚಿತ್ರರಂಗದಲ್ಲಿ ಸಕಲಕಲಾವಲ್ಲಭ ಎಂದೇ ಗುರುತಿಸಿಕೊಂಡಿದ್ದಾರೆ. ರವಿಶಂಕರ್ ಅವರ ನಟನೆಗೆ ಕನ್ನಡಿಗರು ಮನಸೋತಿದ್ದಾರೆ. ಖಡಕ್ ವಾಯ್ಸ್, ಬೆಚ್ಚಿಬೀಳಿಸುವ ನಟನೆಯಿಂದ ಬೇಡಿಕೆ ಹೊಂದಿರುವ ರವಿಶಂಕರ್ ಸದ್ಯ ಕನ್ನಡ ಚಿತ್ರರಂಗದಲ್ಲಿ ತುಂಬಾನೇ ಬ್ಯುಸಿ. ಪುನೀತ್ ರಾಜ್ಕುಮಾರ್, ಯಶ್, ದರ್ಶನ್, ಶರಣ್ ಹೀಗೆ ಬಹುತೇಕ ಕನ್ನಡ ನಟರ ಚಿತ್ರಗಳಲ್ಲಿ ಆಲ್ ಟೈಮ್ ವಿಲನ್ ಆಗಿ ಅಬ್ಬರಿಸಿದ್ದಾರೆ. ರವಿಶಂಕರ್ ಅವರ ಬೆಸ್ಟ್ ಡೈಲಾಗ್ಗಳ ಪಟ್ಟಿ ಇಲ್ಲಿದೆ.