X
ಹೋಮ್ ಚಲನಚಿತ್ರಗಳ ಒಳನೋಟ

ಬೆಳ್ಳಿತೆರೆಯಲ್ಲಿ ಅದೃಷ್ಟ ಪರೀಕ್ಷೆಗಳಿದು ಕಿರುತೆರೆಯಲ್ಲಿ ದೊಡ್ಡ ಸಕ್ಸಸ್ ಕಂಡ ನಟ-ನಟಿಯರಿವರು!

Author Sowmya Bairappa | Published: Thursday, July 20, 2023, 02:45 PM [IST]

ಸಿನಿಮಾ ನಟರಾಗಬೇಕು, ಬೆಳ್ಳಿತೆರೆಯಲ್ಲಿ ಮಿಂಚಬೇಕು ಎಂದು ಹಲವಾರು ಕಲಾವಿದರ ಆಸೆ. ಪ್ರತಿವರ್ಷ ಅದೆಷ್ಟೂ ಕಲಾವಿದರು ನಾಯಕ ನಟರಾಗಬೇಕು, ನಟಿಯಾಗಬೇಕು ಎಂಬ ಕನಸ್ಸು ಹೊತ್ತು ಚಂದನವನ ಪ್ರವೇಶಿಸುತ್ತಾರೆ. ಈ ಪೈಕಿ ಕೆಲವರಷ್ಟೇ ಸಿನಿಮಾಗಳಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ. ಇನ್ನೂ ಕೆಲವರು ಒಂದೆರಡು ಸಿನಿಮಾಗಳಲ್ಲಿ ನಟಿಸಿ, ಸಕ್ಸಸ್ ಸಿಗದೇ ಕಿರುತೆರೆಗೆ ಎಂಟ್ರಿಕೊಟುತ್ತಾರೆ. ಹೀಗೆ ಬೆಳ್ಳಿತೆರೆಯಲ್ಲಿ ಅದೃಷ್ಟ ಪರೀಕ್ಷೆಗಿಳಿದು ಕಿರುತೆರಯಲ್ಲಿ ಅಪಾರ ಜನಪ್ರಿಯತೆ, ಯಶಸ್ಸು ಪಡೆದ ಕನ್ನಡದ ನಟ-ನಟಿಯರ ಪಟ್ಟಿ ಇಲ್ಲಿದೆ.


cover image
ದಿವ್ಯಾ ಸುರೇಶ್

ನಟಿ ದಿವ್ಯಾ ಸುರೇಶ್ ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ತ್ರಿಪುರ ಸುಂದರಿ' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಮಿಸ್ ಇಂಡಿಯಾ ಸೌತ್ ಆಗಿ ಪ್ರಶಸ್ತಿ ಗೆದ್ದಿರುವ ದಿವ್ಯಾ, 2017ರಲ್ಲಿ ತೆರೆಕಂಡಿದ್ದ 'ಹಿಲ್ಟನ್ ಹೌಸ್' ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಡಿಗ್ರಿ ಕಾಲೇಜ್ ಎಂಬ ತೆಲುಗು ಚಿತ್ರ ಸೇರಿದಂತೆ ಕೆಲ ಕನ್ನಡ ಸಿನಿಮಾಗಳಲ್ಲಿ ನಟಿಸಿದರಾದರೂ ಅವು ಗುರುತಿಸಿಕೊಳ್ಳಲಿಲ್ಲ. ಬಳಿಕ ಬಿಗ್‌ ಬಾಸ್ ಕನ್ನಡ ಸೀಸನ್ 8ಕ್ಕೆ ಎಂಟ್ರಿಕೊಟ್ಟರು. ಚಂದನವನದಲ್ಲಿ ಯಶಸ್ಸು ಸಿಗದ ಹಿನ್ನೆಲೆಯಲ್ಲಿ ಕಿರುತೆರೆ ಪ್ರವೇಶಿಸಿದ ಇವರು, ಸದ್ಯ ತ್ರಿಪುರ ಸುಂದರಿ ಸೀರಿಯಲ್ ಮೂಲಕ ಕರ್ನಾಟಕದ ಮನೆಮಾತಾಗಿದ್ದಾರೆ.  

 

ದೀಪಿಕಾ ದಾಸ್

ದೀಪಿಕಾ ದಾಸ್ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನಾಗಿಣಿ ಧಾರಾವಾಹಿ ಮೂಲಕ ಅಪಾರ ಜನಪ್ರಿಯತೆ ಪಡೆದಿದ್ದಾರೆ. ಈ ನಟಿ ಕಿರುತೆರೆಗೆ ಬರುವ ಮುನ್ನ ಬೆಳ್ಳಿತೆರೆಯಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದರು. ದೀಪಿಕಾ 2014ರಲ್ಲಿ ಧೂದ್ ಸಾಗರ್ ಎಂಬ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ ಪ್ರವೇಶಿಸಿದರು. ನಂತರ ತೆಲುಗಿನ 'ಈ ಮನಸೇ' ಚಿತ್ರದಲ್ಲಿ ನಟಿಸಿದರು. ಬಳಿಕ 2016ರಲ್ಲಿ ನಾಗಿಣಿ ಧಾರಾವಾಹಿ ಮೂಲಕ ಕಿರುತೆರೆ ಪಾದರ್ಪಣೆ ಮಾಡಿದರು.  ಈ ಧಾರಾವಾಹಿ ಅವರಿಗೆ ಒಳ್ಳೆಯ ಖ್ಯಾತಿ ತಂದುಕೊಟ್ಟಿತು. ರಾಕಿಂಗ್ ಸ್ಟಾರ್ ಯಶ್ ಸಹೋದರಿಯಾಗಿರುವ ಇವರು, ಬಿಗ್‌ ಬಾಸ್ ಕನ್ನಡ ಸೀಸನ್ 7 ಮತ್ತು 9ರಲ್ಲಿ ಭಾಗವಹಿಸಿದ್ದರು. ಸದ್ಯ ಅವರು ಯಾವುದೇ ಸಿನಿಮಾ ಹಾಗೂ ಸೀರಿಯಲ್‌ನಲ್ಲಿ ನಟಿಸುತ್ತಿಲ್ಲ.  

 

ವೈಷ್ಣವಿ ಗೌಡ

ಕನ್ನಡದ ಪ್ರೇಕ್ಷಕರಿಗೆ ಸನ್ನಿಧಿಯಂತಲೇ ಪರಿಚಯವಿರುವ ವೈಷ್ಣವಿ ಗೌಡ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಅಗ್ನಿಸಾಕ್ಷಿ' ಧಾರಾವಾಹಿ ಮೂಲಕ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿದ್ದಾರೆ. ದೇವಿ ಸೀರಿಯಲ್ ಮೂಲಕ ನಟನೆಗೆ ಎಂಟ್ರಿಕೊಟ್ಟ ಇವರು, ಅಗ್ನಿಸಾಕ್ಷಿ ಸೀರಿಯಲ್ ಮೂಲಕ ಕರ್ನಾಟಕದ ಜನಮನ್ನಣೆ ಪಡೆದರು. ಇವರು ಗಿರಿಗಿಟ್ಲೆ, ಬೆಕ್ಕು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ಈ ಚಿತ್ರಗಳು ಸಕ್ಸಸ್ ಆಗಲಿಲ್ಲ. ನಂತರ ಬಿಗ್‌ ಬಾಸ್ ಸೀಸನ್ 8ರಲ್ಲಿ ಭಾಗವಹಿಸಿದ್ದರು. ಸದ್ಯ ಅವರು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸೀತಾ ರಾಮ' ಧಾರವಾಹಿಯಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. 

ಗೌತಮಿ ಜಾದವ್

ನಟಿ ಗೌತಮಿ ಜಾದವ್ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸತ್ಯ' ಸೀರಿಯಲ್‌ನಲ್ಲಿ ಟಾಮ್ ಬಾಯ್ ಪಾತ್ರದ ಮೂಲಕ ಜನಪ್ರಿಯತೆ ಗಳಿಸಿದ್ದಾರೆ. ಇವರು ಕಿರುತೆರೆ ಪ್ರವೇಶಿಸುವುದಕ್ಕೂ ಮುನ್ನ ಸಿನಿಮಾಗಳಲ್ಲಿ ನಟಿಸಿದ್ದರು. ಗೌತಮಿ 2018ರಲ್ಲಿ ತೆರೆಕಂಡ ಕಿನಾರೆ ಹಾಗೂ ಆದ್ಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಜೊತೆಗೆ ಕೆಲ ತೆಲುಗು ಚಿತ್ರಗಳಲ್ಲೂ ಬಣ್ಣ ಹಚ್ಚಿದ್ದಾರೆ. ಆದರೆ, ಇವರಿಗೆ ಖ್ಯಾತಿ ತಂದುಕೊಟ್ಟಿದ್ದು ಕನ್ನಡದ ಸತ್ಯ ಧಾರವಾಹಿ. 

ರಿತ್ವಿಕ್ ಮಠದ್

ರಿತ್ವಿಕ್ ಎಂಎನ್‌ಸಿ ಕಂಪನಿಯಲ್ಲಿನ ಕೆಲಸ ಬಿಟ್ಟು ನಟನೆಗೆ ಬಂದ ರಿತ್ವಿಕ್ ಮಠದ್ ಕಲರ್ಸ್ ಕನ್ನಡಸ 'ಗಿಣಿರಾಮ' ಧಾರಾವಾಹಿಯಲ್ಲಿ ನಟಿಸುವ ಮೂಲಕ ಶಿವರಾಮ್ ಅಂತಲೇ ಖ್ಯಾತಿ ಗಳಿಸಿದ್ದಾರೆ. ಇವರು ಕಿರುತೆರೆಗೆ ಎಂಟ್ರಿ ಕೊಡುವ ಮೊದಲು ಯುವ ಸಾಮ್ರಾಟ್, ಶಂಭು ಮಹಾದೇವ ಮುಂತಾದ ಚಿತ್ರಗಳಲ್ಲಿ ಸಣ್ಣ-ಪುಟ್ಟ ಪಾತ್ರ ಮಾಡಿದ್ದರು. ಸದ್ಯ ಗಿಣಿರಾಮ ಸೀರಿಯಲ್ ಮುಕ್ತಾಯಗೊಂಡಿದ್ದು, ರಿತ್ವಿಕ್ ಮತ್ತೆ ಸಿನಿಮಾವೊಂದರಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ.  

ಐಶ್ವರ್ಯ ಸಿಂಧೋಗಿ  (ಕನ್ನಡ ನಟಿ)

ಐಶ್ವರ್ಯಾ ಸಿಂಧೋಗಿ ಸೀರಿಯಲ್ ಲೋಕಕ್ಕೆ ಎಂಟ್ರಿಕೊಡುವ ಮುನ್ನವೇ ಸಿಂಹಾದ್ರಿ, ಮಟಾಷ್, ಸಂಯುಕ್ತಾ ಸೇರಿದಂತೆ ಕೆಲ ಚಿತ್ರಗಳಲ್ಲಿ ಅಭಿನಯಿಸಿದ್ದರು. ಆದರೆ, ಆ ಸಿನಿಮಾಗಳು ಅಷ್ಟು ಹಿಟ್ ಆಗಲಿಲ್ಲ. ಬಳಿಕ ಕಿರುತೆರೆಗೆ ಬಂದ ಐಶ್ವರ್ಯಾ, ನಾಗಿಣಿ 2 ಧಾರವಾಹಿಯಲ್ಲಿ ಮಾಯಾಂಗನೆ ಪಾತ್ರದ ಮೂಲಕ ಜನಪ್ರಿಯತೆ ಪಡೆದರು. ಸದ್ಯ ಈ ನಟಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ನಮ್ಮ ಲಚ್ಚಿ' ಸೀರಿಯಲ್‌ನಲ್ಲಿ ದೀಪಿಕಾ ಪಾತ್ರದ ಮೂಲಕ ಮೋಡಿ ಮಾಡುತ್ತಿದ್ದಾರೆ.  

ರಕ್ಷ (ರಕ್ಷಿತ್ ಗೌಡ)

ನಟ ರಕ್ಷ್ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಗಟ್ಟಿಮೇಳ' ಸೀರಿಯಲ್‌ನಲ್ಲಿ ವೇದಾಂತ್ ಪಾತ್ರದ ಮೂಲಕ ಜನಪ್ರಿಯತೆ ಪಡೆದಿದ್ದಾರೆ. ಇವರು ನರಗುಂದ ಬಂಡಾಯ ಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದರು. ಈ ಸಿನಿಮಾ ಕೋವಿಡ್‌ ಸಂದರ್ಭದಲ್ಲಿ ಬಿಡುಗಡೆಯಾಗಿದ್ದು, ಸಕ್ಸಸ್ ಆಗಲಿಲ್ಲ.  ಇವರು ಗಟ್ಟಿಮೇಳ ಧಾರಾವಾಹಿಯ ನಿರ್ಮಾಪಕ ಕೂಡ ಹೌದು. 

ಅಕುಲ್ ಬಾಲಾಜಿ

2007ರಲ್ಲಿ ತೆರೆಕಂಡ ಮಿಲನ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸುವ ಮೂಲಕ ಸಿನಿಪಯಣ ಆರಂಭಿಸಿ ಅಕುಲ್ ಬಾಲಾಜಿ, 2008ರಲ್ಲಿ ಆತ್ಮೀಯ ಸಿನಿಮಾದಲ್ಲಿ ನಾಯಕನಾಗಿ ನಟಿಸಿದರು. ಬಳಿಕ ಕೆಲ ಚಿತ್ರಗಳಲ್ಲಿ ನಾಯಕನಾಗಿ ನಟಿಸಿದರಾದರೂ ಅಷ್ಟೇನು ಯಶಸ್ಸು ನೀಡಲಿಲ್ಲ. ಅಕುಲ್ ಅವರಿಗೆ ಹೆಸರು ತಂದುಕೊಟ್ಟಿದ್ದು `ಪ್ಯಾಟೆ ಹುಡಗೀರ್ ಹಳ್ಳಿ ಲೈಫ್' ರಿಯಾಲಿಟಿ ಶೋ. ಈ ಶೋನ ನಿರೂಪಕರಾಗಿ ಕರ್ನಾಟಕದಾದ್ಯಂತ ಮನೆಮಾತಾದರು. 2014ರಲ್ಲಿ ಕನ್ನಡ ಬಿಗ್‌ಬಾಸ್ ಸೀಸನ್ 2ರಲ್ಲಿ ಭಾಗವಹಿಸಿ, ವಿಜೇತರಾದರು. ಕನ್ನಡ ಎಲ್ಲಾ ಪ್ರಮುಖ ವಾಹಿನಿಗಳಲ್ಲಿ ನಿರೂಪಕರಾಗಿ ಕಾರ್ಯನಿರ್ವಹಿಸಿರುವ ಇವರು, ಪುನರ್ ವಿವಾಹ ಧಾರಾವಾಹಿಯಲ್ಲೂ ನಟಿಸಿದ್ದಾರೆ.   

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+