X
ಹೋಮ್ ಚಲನಚಿತ್ರಗಳ ಒಳನೋಟ

ಹಾಡುಗಳ ಸಾಲೇ ಟೈಟಲ್‌: ಜನಪ್ರಿಯ ಹಾಡುಗಳ ಸಾಲನ್ನೇ ಟೈಟಲ್ ಮಾಡಿಕೊಂಡ ಸಿನಿಮಾಗಳ ಪಟ್ಟಿ!

Author Sowmya Bairappa | Published: Tuesday, May 7, 2024, 11:36 AM [IST]

ಒಂದು ಸಿನಿಮಾಗೆ ಟೈಟಲ್ ಅನ್ನೋದು ಬಹಳ ಮುಖ್ಯ. ಯಾಕೆಂದರೆ, ಪ್ರೇಕ್ಷಕರಿಗೆ ಮೊದಲು ಕನೆಕ್ಟ್ ಆಗೋದೇ ಸಿನಿಮಾ ಶೀರ್ಷಿಕೆ. ಚಿತ್ರದ ಟೈಟಲ್ ಎಷ್ಟೂ ಆಕರ್ಷಕವಾಗಿರತ್ತೋ, ಅಷ್ಟು ಜನರನ್ನು ಸೆಳೆಯುತ್ತದೆ. ಸ್ಯಾಂಡಲ್‌ವುಡ್‌ನಲ್ಲಿ ಹಾಡುಗಳ ಸಾಲನ್ನೇ ಟೈಟಲ್ ಮಾಡಿಕೊಳ್ಳುವ ಟ್ರೆಂಡ್ ಇದೆ. ಇತ್ತೀಚೆಗಂತೂ ಆ ಟ್ರೆಂಡ್ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಇಲ್ಲಿ ಇತ್ತೀಚಗೆ ಹಾಡುಗಳ ಸಾಲನ್ನೇ ಟೈಟಲ್ ಮಾಡಿಕೊಂಡ ಸಿನಿಮಾಗಳ ಪಟ್ಟಿಯನ್ನು ನೀಡಲಾಗಿದೆ.


cover image
ಸ್ವಾತಿ ಮುತ್ತಿನ ಮಳೆ ಹನಿಯೇ

ಸ್ಯಾಂಡಲ್​ವುಡ್ ಕ್ವೀನ್ ರಮ್ಯಾ ಆಪಲ್ ಬಾಕ್ಸ್ ಪ್ರೊಡಕ್ಷನ್‌ನಲ್ಲಿ ನಿರ್ಮಾಣವಾಗಿರುವ ಮೊದಲ ಸಿನಿಮಾ 'ಸ್ವಾತಿ ಮುತ್ತಿನ ಮಳೆ ಹನಿಯೇ'. ರಾಜ್​ ಶೆಟ್ಟಿ ನಿರ್ದೇಶಿಸಿ, ನಟಿಸಿದ್ದ ಈ ಸಿನಿಮಾಗೆ ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ ಬಣ್ಣದಹೆಜ್ಜೆ ಸಿನಿಮಾದ ಹಾಡಿನ ಸಾಲನ್ನು ಟೈಟಲ್ ಮಾಡಲಾಗಿದೆ. ಹಂಸಲೇಖ ಬರೆದಿದ್ದ 'ಸ್ವಾತಿ ಮುತ್ತಿನ ಮಳೆ ಹನಿಯೇ' ಹಾಡು ಅಂದಿನಿಂದ ಇಂದಿನವರೆಗೂ ಸಿಕ್ಕಾಪಟ್ಟೆ ಫೇಮಸ್. ಅಂದ್ಹಾಗೆ ಈ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ 2023ರ ನವೆಂಬರ್ ತಿಂಗಳಲ್ಲಿ ಬಿಡುಗಡೆಯಾಗಿತ್ತು.

ಇಬ್ಬನಿ ತಬ್ಬಿದ ಇಳೆಯಲಿ

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಿರ್ಮಾಣದಲ್ಲಿ ಸೆಟ್ಟೇರಿರುವ ಹೊಸ ಸಿನಿಮಾ 'ಇಬ್ಬನಿ ತಬ್ಬಿದ ಇಳೆಯಲಿ'. ಈ ಸಿನಿಮಾದಲ್ಲಿ ನಮ್ಮನೆ ಯುವರಾಣಿ ಖ್ಯಾತಿಯ ಅಂಕಿತಾ ಅಮರ್ ಹಾಗೂ ನಿಹಾನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಂದ್ರಜಿತ್ ಬೆಳ್ಳಿಯಪ್ಪ ಈ ಸಿನಿಮಾದ ಡೈರೆಕ್ಟರ್. ಅಂದ್ಹಾಗೆ 'ಇಬ್ಬನಿ ತಬ್ಬಿದ ಇಳೆಯಲಿ' ಅನ್ನೋದು ರಶ್ಮಿ ಸಿನಿಮಾದ ಜನಪ್ರಿಯ ಹಾಡು. ಬಿ.ಆರ್ ಛಾಯಾ ಹಾಡಿರುವ ಈ ಹಾಡಿನಲ್ಲಿ ಶ್ರುತಿ ನಟಿಸಿದ್ದಾರೆ. 

ಸಪ್ತ ಸಾಗರದಾಚೆ ಎಲ್ಲೋ

2023ರ ಸೆಪ್ಟಂಬರ್ ತಿಂಗಳಲ್ಲಿ ತೆರೆಕಂಡ ರಕ್ಷಿತ್ ಶೆಟ್ಟಿ ಅಭಿನಯದ ಸಿನಿಮಾಗೆ ಸಪ್ತ ಸಾಗರದಾಚೆ ಎಲ್ಲೋ ಅಂತ ಟೈಟಲ್ ಇಡಲಾಗಿತ್ತು. ಗೋಪಾಲಕೃಷ್ಣ ಅಡಿಗ ಅವರು ಬರೆದ 'ಯಾವ ಮೋಹನ ಮುರಳಿ ಕರೆಯಿತೋ' ಹಾಡು ಸಿಕ್ಕಾಪಪಟ್ಟೆ ಜನಪ್ರಿಯ. ಈ ಹಾಡನ್ನು ರಮೇಶ್ ಅಭಿನಯದ 'ಅಮೆರಿಕಾ ಅಮೆರಿಕಾ' ಸಿನಿಮಾದಲ್ಲೂ ಬಳಸಕೊಳ್ಳಲಾಗಿತ್ತು. ವಿಶೇಸವೆಂದರೆ, ಈ ಹಾಡಿನಲ್ಲಿ ಬರುವ 'ಸಪ್ತ ಸಾಗರದಾಚೆ ಎಲ್ಲೋ' ಸಾಲನ್ನೇ ರಕ್ಷಿತ್ ಶೆಟ್ಟಿ ಸಿನಿಮಾಗೆ ಟೈಟಲ್ ಆಗಿ ಇಡಲಾಗಿತ್ತು. ಹೇಮಂತ್ ರಾವ್ ಈ ಚಿತ್ರದ ನಿರ್ದೇಶಕರು.  

ಎಲ್ಲಿಗೆ ಪಯಣ ಯಾವುದೋ ದಾರಿ

ಕಾಶಿನಾಥ್ ಪುತ್ರ ಅಭಿಮನ್ಯು ನಟಿಸಿರುವ ಹೊಸ ಸಿನಿಮಾಗೆ 'ಎಲ್ಲಿಗೆ ಪಯಣ ಯಾವುದೋ ದಾರಿ' ಎಂಬ ಟೈಟಲ್ ಇಡಲಾಗಿದೆ. ಇದು ವರನಟ ಡಾ.ರಾಜ್‌ಕುಮಾರ್ ಅಭಿನಯದ  ಸೂಪರ್ ಹಿಟ್ 'ಸಿಪಾಯಿ ರಾಮು' ಚಿತ್ರದ ಜನಪ್ರಿಯ ಗೀತೆಯ ಮೊದಲ ಸಾಲು. ಈ ಸಾಂಗ್ ಬರೆದವರು ಆರ್.ಎನ್ ಜಯಗೋಪಾಲ್. 


ಧರಣಿ ಮಂಡಲ ಮಧ್ಯದೊಳಗೆ

'ಧರಣಿ ಮಂಡಲ ಮಧ್ಯದೊಳಗೆ' ಎಂಬ ಗೋವಿನ ಹಾಡು ಯಾರಿಗೆ ಗೊತ್ತಿಲ್ಲ ಹೇಳಿ. ನಿರ್ದೇಶಕ ಶ್ರೀಧರ್ ಷಣ್ಮುಖ ೨೦೨೨ರಲ್ಲಿ ತೆರೆಕಂಡ ತಮ್ಮ ಸಿನಿಮಾಗೆ ಪ್ರಸಿದ್ಧ ಜಾನಪದ ಗೀತೆಯಾದ ಪುಣ್ಯಕೋಟಿ ಗೀತೆಯ ಸಾಲಿನಿಂದ ಆಯ್ಡುಕೊಂಡು 'ಧರಣಿ ಮಂಡಲ ಮಧ್ಯದೊಳಗೆ' ಅಂತಲೇ ಟೈಟಲ್ ಇಟ್ಟಿದ್ದರು. ಚಿತ್ರದಲ್ಲಿ ನವೀನ್ ಶಂಕರ್ ಮತ್ತು ಐಶಾನಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ಇನ್ನೊಂದು ವಿಶೇಷವೆಂದರೆ, 1983ರಲ್ಲಿ ಪುಟ್ಟಣ್ಣ ಕಣಗಾಲ್ ಅವರು ಈ ಶೀರ್ಷಿಕೆಯಲ್ಲಿ ಸಿನಿಮಾ ಮಾಡಿದ್ದರು. 

ಎಲ್ಲೋ ಜೋಗಪ್ಪ ನಿನ್ನರಮನೆ

ಶಿವರಾಜ್‌ಕುಮಾರ್ ಹಾಗೂ ಜೆನಿಫರ್ ಕೋತ್ವಾಲ್ ಅಭಿನಯದ 'ಜೋಗಿ' ಸಿನಿಮಾದ ಎಲ್ಲೋ ಜೋಗಪ್ಪ ನಿನ್ನರಮನೆ ಹಾಡನ್ನು ಬಹುತೇಕ ಎಲ್ಲರೂ ಕೇಳಿರುತ್ತದೆ. ಇದೇ ಹಾಡಿನ ಸಾಲನ್ನು ಇಟ್ಟುಕೊಂಡು ಶುಭಮಂಗಳ, ನಾಗಿಣಿ, ಕಮಲಿ, ಅಗ್ನಿಸಾಕ್ಷಿ, ಮಧುಬಾಲ ಸೇರಿದಂತೆ ಹಲವು ಸೂಪರ್ ಹಿಟ್ ಧಾರವಾಹಿಗಳನ್ನು ನಿರ್ದೇಶಿಸಿರುವ ಹಯವದನ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಕಂಬ್ಳಿಹುಳ ಖ್ಯಾತಿಯ ಅಂಜನ್ ನಾಗೇಂದ್ರ ನಾಯಕನಾಗಿ ಹಾಗೂ ಯುವನಟಿ ವೆನ್ಯ  ರೈ ನಾಯಕಿಯಾಗಿ ಅಭಿನಯಿಸಿದ್ದಾರೆ. 



Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+