X
ಹೋಮ್ ಚಲನಚಿತ್ರಗಳ ಒಳನೋಟ

ಕನ್ನಡದ ಟಾಪ್ 10 ಸೀರಿಯಲ್ ನಟರ ಪಟ್ಟಿ ಇಲ್ಲಿದೆ.

Author Sowmya Bairappa | Published: Tuesday, June 13, 2023, 01:18 PM [IST]

ಸಾಮಾನ್ಯವಾಗಿ ಧಾರಾವಾಹಿ ಕಥೆಗಳು ಮಹಿಳಾ ಪ್ರಧಾನವಾಗಿದ್ದರೂ ಕೂಡ ಹೀರೋಗಳು ಮಿಂಚುತ್ತಾರೆ. ನಟರು ಕೂಡ ಹೀರೋಯಿನ್ ಅಷ್ಟೇ ಸ್ಕ್ರೀನ್ ಸ್ಪೇಸ್ ತೆಗೆಕೊಳ್ಳುತ್ತಾರೆ. ಇತ್ತೀಚಿನ ಕಾಲಘಟ್ಟದಲ್ಲಿ ಸಿನಿಮಾ ನಟರಿಗಿಂತ ಕಿರುತೆರೆ ನಟರು ಹೆಚ್ಚು ಜನಪ್ರಿಯತೆ ಪಡೆದಿರುತ್ತಾರೆ. ಅವರು ಸೀರಿಯಲ್ ಮೂಲಕ ಚಿಕ್ಕವರಿಂದ ಹಿಡಿದು ದೊಡ್ಡವರೆಗೆ ಪ್ರತಿನಿತ್ಯ ಜನರಿಗೆ ಹತ್ತಿವಾಗುತ್ತಿರುತ್ತಿರುತ್ತಾರೆ. ತಮ್ಮ ನಟನೆಯ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸುತ್ತಾರೆ. ಹಳ್ಳಿಗಳಲ್ಲಂತೂ ಸಿನಿಮಾ ನಟರಿಗಿಂತ ಸೀರಿಯಲ್ ನಟ- ನಟರೇ ಜನರಿಗೆ ಹೆಚ್ಚು ಪರಿಚಿತರಾಗಿರುತ್ತಾರೆ. ಇಲ್ಲಿ ಕನ್ನಡದ ಟಾಪ್ 10 ಸೀರಿಯಲ್ ನಟರ ಪಟ್ಟಿಯನ್ನು ನೀಡಲಾಗಿದೆ.


cover image
ವಿಜಯ ಸೂರ್ಯ

ಅಗ್ನಿಸಾಕ್ಷಿ ಸೀರಿಯಲ್ ಮೂಲಕ ಪ್ರೇಕ್ಷಕರ ಮನಗೆದ್ದಿದ್ದ ನಟ ವಿಜಯ್ ಸೂರ್ಯ, ಸದ್ಯ ಸ್ಟಾರ್ ಸುವರ್ಣ 'ನಮ್ಮ ಲಚ್ಚಿ' ಧಾರಾವಾಹಿ ಮೂಲಕ ಮೋಡಿ ಮಾಡುತ್ತಿದ್ದಾರೆ. ವಿಜಯ್ ಸೂರ್ಯ ಈ ಸೀರಿಯಲ್‌ನಲ್ಲಿ ಸಿಂಗರ್ ಆಗಿ ಕಾಣಿಸಿಕೊಂಡಿದ್ದಾರೆ.  ಪಿಯುಸಿ ನಂತರ ಶಿಕ್ಷಣಕ್ಕೆ ವಿದಾಯ ಹೇಳಿದ ಇವರು, ಮುಂಬೈನ ಸುಭಾಷ್ ಗೈ ಫಿಲಂ ಸ್ಕೂಲ್‌ಗೆ ಸೇರಿದರು. ಅಲ್ಲಿಂದ ಮರಳಿದ ಮೇಲೆ ಸಿಹಿಕಹಿ ಗೀತಾ ಅವರ `ಪಾರ್ವತಿ ಪರಮೇಶ್ವರ' ಸೀರಿಯನಲ್ಲಿ ಒಂದು ಚಿಕ್ಕ ಪಾತ್ರದಲ್ಲಿ ಅಭಿನಯಿಸಿದರು. ನಂತರ ಕವಿತಾ ಲಂಕೇಶ್ ನಿರ್ದೇಶನದ `ಕ್ರೇಜಿ ಲೋಕ' ಚಿತ್ರದಲ್ಲಿ ನಟಿಸಿದರು. ಅಗ್ನಿಸಾಕ್ಷಿ ಸೀರಿಯಲ್ ತಂಡ ತಮ್ಮ ಧಾರಾವಾಹಿಗಾಗಿ ಹೊಸ ಪ್ರತಿಭೆಯ ಶೋಧದಲ್ಲಿದ್ದಾಗ ಇವರ ಸ್ನೇಹಿತೆ ಮಾಜಿ ಮಿಸ್ ಸೌತ್ ಇಂಡಿಯ ವಿಜೇತೆ `ಲಕ್ಷಿ ಆನಂದ' ಇವರ ಪೋಟೋಗಳನ್ನು ಇವರಿಗೆ ತಿಳಿಯದಂತೆ ಕಳಿಸುತ್ತಾರೆ. ಅಲ್ಲಿಂದ ಮುಂದೆ ಇವರು ಸಿದ್ಧಾರ್ಥ ಎಂದೇ ಪ್ರಸಿದ್ಧರಾದರು. ಸದ್ಯ ಅವರಿಗೆ ಅಪಾರ ಅಭಿಮಾನಿ ಬಳಗವಿದೆ. 

ಶರತ್ ಕೆ.ಪಿ

ನಟ ಶರತ್ ಪದ್ಮನಾಭ್ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಘುತ್ತಿರುವ 'ಪಾರು' ಸೀರಿಯಲ್ ಮೂಲಕ ಖ್ಯಾತಿ ಗಳಿಸಿದ್ದಾರೆ. ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದ ಶರತ್, ಫ್ರಿಲಾನ್ಸ್ ಗ್ರಾಫಿಕ್ ಡಿಸೈನರ್ ಆಗಿಯೂ ಕಾರ್ಯನಿರ್ವಹಿಸಿದ್ದರು. ನಟನೆ ಬಗ್ಗೆ ಗಂಧಗಾಳಿ ತಿಳಿಯದ ಇವರು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ದಿಲೀಪ್ ರಾಜ್ ಪ್ರೊಡಕ್ಷನ್ ಹೌಸ್‌ನ  'ಪುಟ್ಟಮಲ್ಲಿ' ಸೀರಿಯಲ್‌ನಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದರು. ಬಳಿಕ ಪಾರು ಸೀರಿಯಲ್‌ನಲ್ಲಿ ನಾಯಕನ ಪಾತ್ರ ನಿರ್ವಹಿಸಿದ ಇವರು, ತಮ್ಮ ನಟನೆಯ ಮೂಲಕವೇ ಇಂದು ಟಾಪ್ ನಟನಾಗಿ ಗುರುತಿಸಿಕೊಂಡಿದ್ದಾರೆ. 2018ರಲ್ಲಿ ತೆರೆಕಂಡ ನೀವು ಕರೆ ಮಾಡಿದ ಚಂದದಾರರು ಸಿನಿಮಾ ಮೂಲಕ ಚಂದನವನ ಪ್ರವೇಶಿಸಿದ ಇವರು, ಸದ್ಯ ಕಿರುತೆರೆ ಹಾಗೂ ಹಿರಿತೆರೆ ಎರಡನ್ನೂ ಬ್ಯಾಲೆನ್ಸ್ ಮಾಡುತ್ತಿದ್ದಾರೆ. 

ರಕ್ಷ (ರಕ್ಷಿತ್ ಗೌಡ)

ನಟ ರಕ್ಷ್ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಗಟ್ಟಿಮೇಳ' ಧಾರಾವಾಹಿ ಮೂಲಕ ಗುರುತಿಸಿಕೊಂಡಿದ್ದಾರೆ. ರಕ್ಷ್ ಈ ಸೀರಿಯಲ್‌ಗೂ ಮುನ್ನ ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ನಟಿಸಿದ್ದರು. ಈ ಧಾರಾವಾಹಿ ಮೂಲಕವೂ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದ ರಕ್ಷ್, ಇದಾದ ಬಳಿಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು. ಸದ್ಯ 'ಗಟ್ಟಿಮೇಳ' ಸೀರಿಯಲ್‌ನಲ್ಲಿ ವೇದಾಂತ್ ಪಾತ್ರದ ಮೂಲಕ ಸಾಕಷ್ಟು ಮೆಚ್ಚುಗೆ ಗಳಿಸಿದ್ದಾರೆ.  

ರಿತ್ವಿಕ್ ಕೃಪಾಕರ್

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ರಾಮಾಚಾರಿ' ಸೀರಿಯಲ್‌ನಲ್ಲಿ ನಾಯಕನಾಗಿ ನಟಿಸುತ್ತಿರುವ ರಿತ್ವಿಕ್ ಕೃಪಾಕರ್, ಈ ಪಾತ್ರದ ಮೂಲಕ ಸಾಕಷ್ಟು ಖ್ಯಾತಿ ಪಡೆದಿದ್ದಾರೆ.  ರಿತ್ವಿಕ್ ಕೃಪಾಕರ್ ಈ ಹಿಂದೆ 128 ಕೆಜಿ ತೂಕ ಹೊಂದಿದ್ದರು. ಇದೀಗ ಆರೋಗ್ಯಕರ ಡಯೆಟ್ ಮೂಲಕ ತೂಕ ಇಳಿಸಿದ್ದಾರೆ. ತೂಕ ಇಳಿಸಲು ತಿಂಗಳುಗಟ್ಟಲೇ ಸಮಯ ತೆಗೆದುಕೊಂಡಿರುವ ರಿತ್ವಿಕ್, ಇದೀಗ ಅದೇ ಮೈಕಟ್ಟು ಉಳಿಸಿಕೊಳ್ಳಲು ವರ್ಕೌಟ್ ಡಯೆಟ್ ಮಾಡ್ತಿದ್ದಾರೆ. ಇವರು ರಾಮಾಚಾರಿ ಧಾರಾವಾಹಿಯಲ್ಲಿ ಸಂಸ್ಕಾರವಂತ ಹುಡುಗ 'ರಾಮಾಚಾರಿ'ಯಾಗಿ ಪ್ರೇಕ್ಷಕರ ಮನಗೆದ್ದಿದ್ದಾರೆ.

ಶಮಂತ್ (ಬ್ರೋ ಗೌಡ)

ಬ್ರೋ ಗೌಡ ಎಂದೇ ಹೆಸರಾಗಿರುವ ಶಮಂತ್, ಸದ್ಯ ಲಕ್ಷ್ಮಿ ಬಾರಮ್ಮ ಸೀರಿಯಲ್ ಮೂಲಕ ಜನರಿಗೆ ಹತ್ತಿರವಾಗಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಈ ಧಾರಾವಾಹಿಯಲ್ಲಿ 'ಸಿಂಗರ್ ವೈಷ್ಣವ್' ಪಾತ್ರದ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ನಿಜ ಜೀವನದಲ್ಲೂ ಗಾಯಕರಾಗಿರುವ ಇವರು, ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ ಕನ್ನಡ ಸೀಸನ್ 8ರ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಇದರ ಜೊತೆಗೆ ಹಲವು ವೆಬ್‌ ಸಿರೀಸ್‌ಗಳ ಮೂಲಕ ಗಮನ ಸೆಳೆದಿದ್ದಾರೆ. 

ಧನುಷ್

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಅಪಾರ ಜನಮನ್ನಣೆ ಗಳಿಸುತ್ತಿದೆ. ಈ ಸೀರಿಯಲ್‌ನಲ್ಲಿ ನಾಯಕನಾಗಿ ನಟಿಸುತ್ತಿರುವ ಧನುಷ್, ಕಂಠಿ ಪಾತ್ರದ ಮೂಲಕ ಸಾಕಷ್ಟು ಮೆಚ್ಚುಗೆ ಗಳಿಸಿದ್ದಾರೆ. ಇವರು ಸಿವಿಲ್ ಇಂಜಿನಿಯರಿಂಗ್ ಪದವಿಧರ. ಶಿಕ್ಷಣ ಮುಗಿದಿದ್ದೇ ತಡ ನೇರವಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಇವರು, ಪುಟ್ಟಕ್ಕನ ಮಕ್ಕಳು ಧಾರಾವಾಹಿಗೂ ಮುನ್ನ ಅನಿರೀಕ್ಷಿತ, ೧೮+೨ ಕಿರುಚಿತ್ರಗಳು ಹಾಗೂ ನನ್ನ ನಗು ಎಂಬ ಆಲ್ಬಂ ಸಾಂಗ್‌ನಲ್ಲೂ ಕಾಣಿಸಿಕೊಂಡಿದ್ದರು. ಮೂಲತಃ ಕೋಲಾರ ಜಿಲ್ಲೆಯ ಸಂತೆಹಳ್ಳಿಯವರಾದ ಇವರು, ಇದೀಗ ತಮ್ಮ ನಟನೆ ಮೂಲಕ ಜನಪ್ರಿಯ ಕಿರುತೆರೆ ನಟನಾಗಿ ಗುರುತಿಸಿಕೊಂಡಿದ್ದಾರೆ. 

ರಿತ್ವಿಕ್ ಮಠದ್

ನಟ ರಿತ್ವಿಕ್ ಮಠದ್ ಕಲರ್ಸ್ ಕನ್ನಡ ವಾಹಿನಿಯ 'ಗಿಣಿರಾಮ' ಸೀರಿಯಲ್ ಮೂಲಕ ಖ್ಯಾತಿ ಗಳಿಸಿದ್ದಾರೆ. ಈ ಧಾರಾವಾಹಿಯಲ್ಲಿ ಉತ್ತರ ಕರ್ನಾಟಕದ ಭಾಷೆಯ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಮೂಲತಃ ದಾವಣಗೆರೆಯವರಾದ ಇವರು, ಬೆಳೆದದ್ದು ಬೆಳಗಾವಿಯಲ್ಲಿ. ರಿತ್ವಿಕ್ ಎಂಎನ್‌ಸಿ ಕಂಪನಿಯಲ್ಲಿನ ಕೆಲಸ ಬಿಟ್ಟು ನಟನೆಗೆ ಬಂದರು. ರಿತ್ವಿಕ್ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಅನುರೂಪ' ಧಾರಾವಾಹಿಯಲ್ಲಿ ಶ್ಯಾಮ್ ಆಗಿ ಕಾಣಿಸಿಕೊಂಡಿದ್ದರು. ಜೊತೆಗೆ ಯುವ ಸಾಮ್ರಾಟ್, ಶಂಭು ಮಹಾದೇವ ಮುಂತಾದ ಸಿನಿಮಾಗಳಲ್ಲಿ ಸಣ್ಣ-ಪುಟ್ಟ ಪಾತ್ರ ಮಾಡಿದ್ದಾರೆ.  

ಧನುಷ್ ಗೌಡ

ನಟ ಧನುಷ್ ಗೌಡ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಗೀತಾ' ಸೀರಿಯಲ್ ಮೂಲಕ ಪ್ರಸಿದ್ಧಿ ಪಡೆದಿದ್ದಾರೆ. ಈ ಧಾರಾವಾಹಿಯಲ್ಲಿ ವಿಜಯ್ ಪಾತ್ರದ ಮೂಲಕ ಸಾಕಷ್ಟು ಖ್ಯಾತಿ ಗಳಿಸಿರುವ ಇವರು, ತಮ್ಮ ನಟನೆ ಮೂಲಕ ಸಾಕಷ್ಟು ಮೆಚ್ಚುಗೆ ಗಳಿಸಿದ್ದಾರೆ.  

 

ಸಾಗರ್ ಬಿಳಿಗೌಡ

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಸತ್ಯ' ಧಾರಾವಾಹಿಯ ಎಲ್ಲಾ ಪಾತ್ರಗಳನ್ನು ಪ್ರೇಕ್ಷಕರ ಮೆಚ್ಚಿಕೊಂಡಿದ್ದಾರೆ. ಅದರಲ್ಲೂ ನಾಯಕನಾಗಿ ನಟಿಸುತ್ತಿರುವ ಸಾಗರ್ ಬಿಳಿಗೌಡ, ಅಮುಲ್ ಬೇಬಿ ಎಂದೇ ಖ್ಯಾತಿ ಪಡೆದಿದ್ದಾರೆ. ಸಾಗರ್ ಅವರಿಗೆ ನಟನೆಯೆಂದರೆ ಬಲು ಇಷ್ಟವಂತೆ. ನಟನಾಗಬೇಕೆಂದು ವಿದೇಶಗಳಲ್ಲೂ ಕೆಲಕಾಲ ತರಬೇತಿ ಪಡೆದಿದ್ದಾರೆ. ಲಂಡನ್‌ನಲ್ಲಿ ಎಂಬಿಎ ಪದವಿ ಪಡೆದಿರುವ ಇವರು, ಭಾರತದಲ್ಲಿ ಮಾಸ್ಟರ್ ಇನ್ ಬಿಸಿನೆಸ್ ಲಾ ಪಡೆದುಕೊಂಡಿದ್ದಾರೆ. ನಟನಾ ತರಬೇತಿ ಬಳಿಕ ಕಿರುತೆರೆಗೆ ಎಂಟ್ರಿಕೊಟ್ಟ ಇವರು, ಮೊದಲು ಕಿನ್ನರಿ ಧಾರಾವಾಹಿಯಲ್ಲಿ ಮನಗೆಲಸದವನ ಪಾತ್ರ ಮಾಡಿದ್ದರು. 

ಜಗನ್

ನಟ ಜಗನ್ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷಣ' ಧಾರಾವಾಹಿ ಮೂಲಕ ಖ್ಯಾತಿ ಗಳಿಸಿದ್ದಾರೆ. ಈ ಹಿಂದೆ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ಇವರಿಗೆ ಸಾಕಷ್ಟು ಅಭಿಮಾನಿ ಬಳಗವಿದೆ. ಸದ್ಯ ಭೂಪತಿ ಫಾತ್ರದ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ. ಜೊತೆಗೆ ಲಕ್ಷಣ ಧಾರಾವಾಹಿಯನ್ನು ಅವರೇ ನಿರ್ಮಿಸುತ್ತಿದ್ದಾರೆ. ಜೊತೆಗೆ ಹಲವು ಸಿನಿಮಾಗಳಲ್ಲೂ ಬಣ್ಣಹಚ್ಚಿದ್ದಾರೆ. 

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+