X
ಹೋಮ್ ಚಲನಚಿತ್ರಗಳ ಒಳನೋಟ

ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ಚಿತ್ರರಂಗಕ್ಕೆ ಗುಡ್‌ಬೈ ಹೇಳಿದ ನಟಿಯರಿವರು: ಕಾರಣ ಏನು ಗೊತ್ತಾ?

Author Sowmya Bairappa | Updated: Tuesday, August 27, 2024, 04:09 PM [IST]

ಒಂದು ಕಾಲದಲ್ಲಿ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಮಿಂಚಿ ಮರೆಯಾದವರು ಹಲವರಿದ್ದಾರೆ. ಇನ್ನೂ ಕೆಲವರು ಬಾಲ ಕಲಾವಿದರಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟು, ನಂತರದಲ್ಲಿ ಲೀಡ್‌ ರೋಲ್‌ನಲ್ಲಿ ನಟಿಸಿ, ಈಗಲೂ ಫೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇನ್ನು ಕೆಲವರು ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ಬಣ್ಣದ ಲೋಕಕ್ಕೆ ವಿದಾಯ ಹೇಳಿದ್ದಾರೆ. ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ಚಿತ್ರರಂಗಕ್ಕೆ ಗುಡ್‌ಬೈ ಸೌತ್‌ ಸಿನಿಮಾರಂಗದ ಸ್ಟಾರ್ ನಟಿಯರ ಪಟ್ಟಿಯನ್ನು ನೀಡಲಾಗಿದೆ..


cover image
 ಅನು ಮೆಹ್ತಾ

ಅಲ್ಲು ಅರ್ಜುನ್ ನಟನೆಯ ಆರ್ಯ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ಅನು ಮೆಹ್ತಾ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿದ್ದರು. ಇದಾದ ಬಳಿಕ ಪುನೀತ್ ರಾಜ್‌ಕುಮಾರ್ ಅಭಿನಯದ ಅಜಯ್ ಸೇರಿದಂತೆ ಕೆಲ ಹಿಟ್ ಸಿನಿಮಾಗಳಲ್ಲಿ ಅಬಿನಯಿಸಿದ್ದರು. ೨೦೦೮ರಲ್ಲಿ ಹೊಂಗನಸು ಎಂಬ ಚಿತ್ರದಲ್ಲಿ ಬಣ್ಣಹಚ್ಚಿದ್ದ ಈ ನಟಿ, ಆನಂತರ ಸ್ನೇಹಿತರ ಜೊತೆ ಚೈನೈ ರೆಸಾರ್ಟ್‌ನಲ್ಲಿ ಕುಡಿದು ಅಲ್ಲಿನವರ ಜೊತೆ ಜಗಳವಾಡಿದ್ದರು. ರೆಸಾರ್ಟ್‌ ಮ್ಯಾನೇಜರ್ ಇವರ ವಿರುದ್ಧ ದೂರು ದಾಖಲಿಸಿದ್ದರು. ಈ ಘಟನೆ ಬಳಿಕ ಅನು ಮೆಹ್ತಾ ಎಲ್ಲಿಯೂ ಕಾಣಿಸಿಕೊಳ್ಳಲೇ ಇಲ್ಲ. ತಮ್ಮ ಜೀವನದ ಬಗ್ಗೆ ಸ್ವಲ್ಪವೂ ಮಾಹಿತಿ ಸಿಗದಷ್ಟು ನಿಗೂಢವಾಗಿಬಿಟ್ಟಿದ್ದಾರೆ. 

ಚಾರುಲತಾ

ಪಂಜಾಬ್ ಮೂಲದ ನಟಿ ಚಾರುಲತಾ ಕನ್ನಡದ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಜೊತೆಗೆ ತಮಿಳು, ತೆಲುಗು, ಮಲಯಾಳಂ, ಓರಿಯಾ ಭಾಷೆಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದರು. 2017ರಲ್ಲಿ ಚಕ್ರವರ್ತಿ ಚಿತ್ರದಲ್ಲಿ ಅಭಿನಯಿಸಿದ್ದ ಅವರು ಆನಂತರ ಚಿತ್ರರಂಗದದಿಂದ ದೂರವಾಗಿದ್ದಾರೆ. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಆಕ್ಟಿವ್ ಆಗಿದ್ದಾರೆ. 

ಗೌರಿ ಮಂಜಾಲ್

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಜೊತೆ ನಮ್ಮ ಬಸವ, ಗಂಡನ ಮನೆ, ಜಾಜಿ ಮಲ್ಲಿಗೆ, ಮಸ್ತ್ ಮಜಾ ಮಾಡಿ, ಗೋಪಿ ಸಿನಿಮಾಗಳಲ್ಲಿ ಅಭಿನಯಿಸಿದ್ದ ಗೌರಿ ಮಂಜಾಲ್ ಅವರು, 2011ರಲ್ಲಿ ವಿನೋದ್ ಪ್ರಭಾಕರ್ ಜೊತೆ ಹೋರಿ ಚಿತ್ರದಲ್ಲಿ ನಟಿಸಿದ್ದರು. ಆದರೆ, ಈ ಚಿತ್ರ ಬಿಡುಗಡೆಯಾಗಲಿಲ್ಲ. ಆನಂತರ ಯಾವ ಚಿತ್ರದಲ್ಲೂ ಅಭಿನಯಿಸಲಿಲ್ಲ. ಆರು ವರ್ಷಗಳ ಹಿಂದೆ ಪ್ರಶಸ್ತಿ ಸಮಾರಂಭವೊಂದರಲ್ಲಿ ಕಾಣಿಸಿಕೊಂಡಿದ್ದರು. ಒಮ್ಮೆ ಗೌರಿ ತುಂಬಾ ದಪ್ಪವಾಗಿದ್ದಾರೆ ಅಂತ ಟ್ರೋಲ್ ಆಗಿತ್ತು. ಈ ನಟಿ ಯಾಕೆ ಸಿನಿಮಾಗಳಿಂದ ದೂರವಾಗಿದ್ದಾರೆ ಎಂಬುದಕ್ಕೆ ಕಾರಣ ತಿಳಿದಿಲ್ಲ. 

ಸಾಕ್ಷಿ ಶಿವಾನಂದ

ಮುಂಬೈ ಮೂಲದ ಸಾಕ್ಷಿ ಶಿವಾನಂದ್ ಕನ್ನಡದ ಹಲವು ಸಿನಿಮಾಗಳಲ್ಲಿ ಬಣ್ಣಹಚ್ಚಿದ್ದಾರೆ. ಸದ್ಯ ಅವರು ಪತಿ ಮತ್ತು ಮಕ್ಕಳೊಂದಿಗೆ ವಿದೇಶದಲ್ಲಿ ನೆಲೆಸಿದ್ದಾರೆ ಎನ್ನಲಾಗಿದೆ. 2014ರಲ್ಲಿ ಅವರು ಕೊನೆಯದಾಗಿ ಪರಮಶಿವ ಸಿನಿಮಾದಲ್ಲಿ ಅಭಿನಯಿಸಿದ್ದರು. 


ಜೆನ್ನಿಫರ್ ಕೊತ್ವಾಲ್

2005ರಲ್ಲಿ ಶಿವರಾಜ್‌ಕುಮಾರ್ ಅಭಿನಯದ ಜೋಗಿ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟ ಜೆನ್ನಿಫರ್ ಕೊತ್ವಾಲ್, ಮುಂದೆ ಲವಕುಶ, ಮಸ್ತಿ, ಈ ಬಂಧನ, ಟಾಟಾ ಬಿರ್ಲಾ, ಯುಗಾದಿ, ಎರಡನೇ ಮದುವೆ, ಪ್ರಿನ್ಸ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದ ಈ ನಟಿ ೨೦೧೧ರ ಬಳಿಕ ಸಿನಿಮಾರಂಗದಿಂದ ದೂರವಾಗಿದ್ದಾರೆ. ಈಗ ಜೆನ್ನಿಫರ್ ಸೋಶಿಯಲ್ ಮೀಡಿಯಾದಿಂದಲೂ ದೂರವಾಗಿದ್ದಾರೆ. 

ಸಿಂಧು ಮೆನನ್

ಸಾಹಸಸಿಂಹ ಡಾ.ವಿಷ್ಣುವರ್ಧನ್ ಜೊತೆಗೆ ಜ್ಯೇಷ್ಠ, ಕಿಚ್ಚ ಸುದೀಪ್ ಅಭಿನಯದ ನಂದಿ,  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಧರ್ಮ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ್ದ ನಟಿ ಸಿಂಧು ಮೆನನ್, ಪರಭಾಷಾ ಚಿತ್ರಗಳಲ್ಲಿಯೂ ನಟಿಸಿ ಸೈ ಎನಸಿಕೊಂಡಿದ್ದರು. ಸ್ವಲ್ಪಕಾಲ ಕಿರುತೆರೆಯ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡ ಸಿಂಧು, ಕೆಲ ಧಾರಾವಾಹಿಗಳಲ್ಲಿಯೂ ಅಭಿನಯಿಸಿದ್ದಾರೆ. 2010ರಲ್ಲಿ ಯುಕೆ ಮೂಲದ ಪ್ರಭು ಅವರನ್ನು ಕೈಹಿಡಿದರು. ಅವರಿಗೆ ಓರ್ವ ಮಗ ಹಾಗೂ ಓರ್ವ ಮಗಳಿದ್ದು, ಸದ್ಯ ಲಂಡನ್‌ನಲ್ಲಿ ಅಮೆರಿಕಾದಲ್ಲಿ ಸೆಟಲ್ ಆಗಿದ್ದಾರೆ ಎನ್ನಲಾಗಿದೆ. ಸಿಂಧು ಮೆನನ್ ವಿರುದ್ಧ 2018ರಲ್ಲಿ ಬ್ಯಾಂಕ್‌ಗೆ ನಕಲಿ ದಾಖಲೆಗಳನ್ನು ಸಲ್ಲಿಸಿ, ಸಾಲ ಪಡೆದ ಆರೋಪ ಕೇಳಿಬಂದಿತ್ತು. ಜೊತೆಗೆ ಎಫ್ಐಆರ್ ಕೂಡ ದಾಖಲಾಗಿತ್ತು. ಇದಾದ ಬಳಿಕ ಇವರ ಬಗ್ಗೆ ಮಾಹಿತಿ ಇಲ್ಲ.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+