X
ಹೋಮ್ ಚಲನಚಿತ್ರಗಳ ಒಳನೋಟ

ತಾನು ಬೆಳೆದು ತನ್ನವರನ್ನು ಬೆಳೆಸುವ ಗುಣ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಬೆಂಬಲಿಸಿದ ಕನ್ನಡ ಚಿತ್ರರಂಗದ ತಂತ್ರಜ್ಞರಿವರು..!

Author Sowmya Bairappa | Updated: Tuesday, August 27, 2024, 09:53 AM [IST]

ತಾನು ಬೆಳೆದು ತನ್ನವರನ್ನು ಬೆಳೆಸುವ ಗುಣ ಎಂಬ ಹಾಡು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಯಜಮಾನ ಸಿನಿಮಾದಲ್ಲಿದೆ. ಕನ್ನಡ ಚಿತ್ರರಂಗದಲ್ಲಿ ನೆಲೆ ನಿಲ್ಲಲು ಸಾಕಷ್ಟು ಟೆಕ್ನಿಷಿಯನ್ಸ್‌ಗೆ ದರ್ಶನ್ ಅವರು ಬೆಂಬಲವಾಗಿ ನಿಂತಿದ್ದಾರೆ. ಇಲ್ಲಿ ದರ್ಶನ್ ಅವರು ಸಪೋರ್ಟ್‌ ಮಾಡಿ, ಅದನ್ನು ಸಮರ್ಪಕವಾಗಿ ಬಳಸಿಕೊಂಡು ಚಂದನವನದಲ್ಲಿ ಬೆಳೆದ ತಂತ್ರಜ್ಞರ ಮಾಹಿತಿ ಇಲ್ಲಿ ನೀಡಲಾಗಿದೆ.


cover image
ವಿ ಹರಿಕೃಷ್ಣ



ವಿ.ಹರಿಕೃಷ್ಣ ಅವರು ಹಂಸಲೇಖ ಹಾಗೂ ರವಿಚಂದ್ರನ್ ಅವರ ಬಳಿ ಸಾಕಷ್ಟು ವರ್ಷ ಮ್ಯೂಜಿಷಿಯನ್ ಆಗಿ ಕೆಲಸ ಮಾಡಿದ್ದರೂ ಕೂಡ ಸ್ವತಂತ್ರ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಕ್ರೇಜಿಸ್ಟಾರ್ ಅವರು ನಿರ್ದೇಶನ ಮಾಡುತ್ತಿದ್ದ ಎಲ್ಲಾ ಸಿನಿಮಾಗಳ ಹಿಂದೆ ಹರಿಕೃಷ್ಣ ಇರುತ್ತಿದ್ದರು. ಹರಿಕೃಷ್ಣ ಅವರಿಗೆ ಸ್ವತಂತ್ರ ನಿರ್ದೇಶರಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದ್ದು ದರ್ಶನ್ ಅವರ ಪ್ರೊಡಕ್ಷನ್‌ನಲ್ಲಿ ಬಂದಂತಹ ಜೊತೆ ಜೊತೆಯಲಿ. ಈ ಚಿತ್ರಕ್ಕೆ ಹರಿಕೃಷ್ಣ ಅವರನ್ನು ದರ್ಶನ್ ಆಯ್ಕೆ ಮಾಡಿದಾಗ ಹಲವರು ನೆಗೆಟಿವ್ ಆಗಿ ಮಾತನಾಡಿದ್ದರಂತೆ. ದಿನಕರ್ ಚೊಚ್ಚಲ ಬಾರಿಗೆ ಆಕ್ಷನ್ ಕಟ್ ಹೇಳಿದ್ದ ಈ ಸಿನಿಮಾದ ಹಾಡುಗಳು ಸೂಪರ್ ಹಿಟ್ ಆಗಿದ್ದವು. ಇದಾದ ಬಳಿಕ 'ಭೂಪತಿ' ಮೂಲಕ ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಹಾಗೂ ದರ್ಶನ್ ಒಂದಾದರು. ಅಂದಿನಿಂದ ದರ್ಶನ್ ಯಾವುದೇ ಸಿನಿಮಾ ಒಪ್ಪಿಕೊಳ್ಳಲಿ, ಆ ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ಇರಲೇಬೇಕು. ಯಜಮಾನ ಸಿನಿಮಾದಿಂದ ನಿರ್ದೇಶಕನಾಗಿಯೂ ಹರಿಕೃಷ್ಣ ಪ್ರಮೋಟ್ ಆಗಿದ್ದಾರೆ.





ದಿನಕರ್ ತೂಗದೀಪ್

ರ್ಶನ್ ಸಹೋದರ ದಿನಕರ್ ಅವರು ಅಪ್ಪ ಹಾಗೂ ಅಣ್ಣನ ಹಾಗೆ ನಟರಾಗದೇ, ನಿರ್ದೇಶನದತ್ತ ಮುಖ ಮಾಡಿದ್ದರು. ಇವರ ಚೊಚ್ಚಲ ನಿರ್ದೇಶನದ 'ಜೊತೆ ಜೊತೆಯಲಿ' ಸಿನಿಮಾ ನಿರ್ಮಾಣ ಮಾಡುವ ಮೂಲಕ ದಾಸ ತಮ್ಮ ಸಹೋದರನನ್ನು ಸ್ಯಾಂಡಲ್‌ವುಡ್‌ಗೆ ಕರೆತಂದರು. ಇದಾದ ಬಳಿಕ ದರ್ಶನ್ ಅವರನ್ನು ನೆಗೆಟಿವ್ ಆಗಿ ತೋರಿಸಿದಂತಹ ನವಗ್ರಹ ಸಿನಿಮಾವನ್ನು ದಿನಕರ್ ಅವರೇ ನಿರ್ದೇಶನ ಮಾಡಿದ್ದರು. ಇದಾದ ನಂತರ ಸಾರಥಿ ಮೂಲಕ ದರ್ಶನ್ ಕರಿಯರ್‌ನಲ್ಲಿ ದೊಡ್ಡ ಹಿಟ್ ಕೊಟ್ಟಿದ್ದು ದಿನಕರ್ ಅವರೇ. ಈ ಚಿತ್ರದ ರಿಲೀಸ್ ಸಂದರ್ಭದಲ್ಲಿ ದರ್ಶನ್ ವೈಯಕ್ತಿಕ ಕಾರಣಗಳಿಂದ ಜೈಲು ಹೋಗಿ ಬಂದಿದ್ದರು. ಆದರೆ, ಸಾರಥಿ ಸಿನಿಮಾ ಬ್ಲಾಕ್‌ಬಸ್ಟರ್ ಆಗಿತ್ತು.








ತರುಣ್ ಸುಧೀರ್

ಕನ್ನಡ ಚಿತ್ರರಂಗಕ್ಕೆ  ನಟರಾಗಿ ಎಂಟ್ರಿಕೊಟ್ಟ ತರುಣ್ ಸುಧೀರ್ ಇಂದು ಸ್ಟಾರ್ ನಟರಾಗಿ ಗುರುತಿಸಿಕೊಂಡಿದ್ದಾರೆ. ನವಗ್ರಹ ಚಿತ್ರದಲ್ಲಿ ದರ್ಶನ್ ಜೊತೆ ಕುಂಬಿಯಾಗಿ ನಟಿಸಿದ್ದ ತರುಣ್,ಇದಾದ ಬಳಿಕ ತಮ್ಮ ಸಹೋದರ ನಂದಕಿಶೋರ್ ನಿರ್ದೇಶಿಸಿದ್ದ ಎಲ್ಲಾ ಸಿನಿಮಾಗಳಿಗೂ ಇವರೇ ಅಸೋಸಿಯೇಟ್. 2017ರಲ್ಲಿ ಚೌಕ ಸಿನಿಮಾ ಮೂಲಕ ನಿರ್ದೇಶನಕ್ಕಿಳಿದರು. ಇದರಲ್ಲಿ ದರ್ಶನ್ ಅತಿಥಿ ಪಾತ್ರ ಮಾಡುವ ಮೂಲಕ ಸಪೋರ್ಟ್ ಮಾಡಿದ್ದರು. ಇದಾದ ಬಳಿಕ ತರುಣ್ ನಿರ್ದೇಶನದಲ್ಲಿ ಬಂದ ರಾಬರ್ಟ್ ಸಿನಿಮಾ ಸೂಪರ್ ಹಿಟ್ ಆಯಿತು. 2023ರಲ್ಲಿ ಬಂದ ಕಾಟೇರ ಕೂಡ ಬ್ಲಾಕ್‌ಬಸ್ಟರ್ ಆಯಿತು. ಸದ್ಯ ದರ್ಶನ್ ಜೊತೆ ಸಿಂಧೂರ ಲಕ್ಷಣ ಸಿನಿಮಾ ಮಾಡ್ತಿದ್ದಾರೆ.  






ಹೇಮಂತ (ಸಂಗೀತ ನಿರ್ದೇಶಕ)

ಗಾಯಕ ಹೇಮಂತ್ ಅವರನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅಂದಿನಿಂದ ಇಂದಿನವರೆಗೂ ಪೋತ್ಸಾಹಿಸುತ್ತಲೇ ಬಂದಿದ್ದಾರೆ. ಇವರ ಇತ್ತೀಚಿನ ಕಾಟೇರ ಸಿನಿಮಾದ ಯಾವ ಜನುಮದ ಗೆಳತಿ ಹಾಡು ಹಾಡಿದ್ದರು. ಅದು ಹಿಟ್ ಆಗಿತ್ತು. ಇದಲ್ಲದೇ ನಿಲ್ಲೇ ನಿಲ್ಲೇ ಕಾವರೇರಿ, ದೋಸ್ತಾ ಕಣೋ ಹೀಗೆ ದರ್ಶನ್ ಅವರಿಗೆ ಹೇಮಂತ್ ಸಾಕಷ್ಟು ಹಾಡುಗಳನ್ನು ಹಾಡಿದ್ದಾರೆ. ದರ್ಶನ್ ಅವರು ಸಿನಿಮಾತಂಡಕ್ಕೆ ಹೇಮಂತ್ ಕೈಯಲ್ಲಿ ಒಂದು ಹಾಡು ಹಾಡಿಸಿ ನನ್ನ ವಾಯ್ಸ್‌ಗೆ ಸೂಟ್ ಆಗುತ್ತೆ ಅಂತ ಹೇಳಿರುವುದು ಉಂಟೆಂತೆ. 


ಚಿಂತನ್

ಚಿಂತನ್ ಎಂಬ ಬರಹಗಾರರನ್ನು ದರ್ಶನ್ ಅವರು ಸಾಕಷ್ಟು ಸಿನಿಮಾಗಳಿಗೆ ಕೆಲಸ ಮಾಡಿಸಿದ್ದರು. ಸಾರಥಿ ಸಿನಿಮಾ ಕಥೆ, ಸಂಭಾಷಣೆ ಬರೆದವರು ಇವರೇ. ಅಂಬರೀಶ, ಜಗ್ಗುದಾದಾ ಸಿನಿಮಾಗಳಿಗೂ ಇವರದ್ದೇ ಬರಹ. ಇದಾದ ಬಳಿಕ 2017ರಲ್ಲಿ ದರ್ಶನ್‌ಗೆ ಚಕ್ರವರ್ತಿ ಚಿತ್ರ ನಿರ್ದೇಶನ ಮಾಡಿದ್ದರು. ಇವರ ಜೊತೆಗೆ ನಟರಾದ ಧನ್ವೀರ್, ಯಶಸ್ ಸೂರ್ಯ, ಅಭಿ‍ಷೇಕ್ ಅಂಬರೀಶ್, ವಿನೋದ್ ಪ್ರಭಾಕರ್, ಝೈದ್ ಖಾನ್ ಸೇರಿದಂತೆ ಹಲವು ಯುವ ನಟರಿಗೆ ಸಫೋರ್ಟ್ ಮಾಡಿಕೊಂಡು ಬಂದಿದ್ದಾರೆ. 



Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+