X
ಹೋಮ್ ಚಲನಚಿತ್ರಗಳ ಒಳನೋಟ

ಉತ್ತಮ ಬ್ಯಾಕ್​ಗ್ರೌಂಡ್‌ ಇದ್ದರೂ ಸ್ಯಾಂಡಲ್‌ವುಡ್‌ನಲ್ಲಿ ಕ್ಲಿಕ್ ಆಗದ ಸ್ಟಾರ್ ಮಕ್ಕಳಿವರು!

Author Sowmya Bairappa | Updated: Thursday, March 2, 2023, 02:29 PM [IST]

ನಟನೆ, ಡ್ಯಾನ್ಸ್, ಫೈಟ್ ಹೀಗೆ ಎಲ್ಲಾ ವಿಭಾಗದಲ್ಲೂ ಸೂಕ್ತ ತಯಾರಿ ಮಾಡಿಕೊಂಡರೆ ಸ್ಟಾರ್ ಮಕ್ಕಳು ಸ್ಯಾಂಡಲ್‌ವುಡ್‌ನಲ್ಲಿ ನೆಲೆ ಕಂಡುಕೊಳ್ಳಲು ಸಾಕಷ್ಟು ಅವಕಾಶಗಳು ಇದ್ದೇ ಇವೆ. ಆದರೆ, ಉತ್ತಮ ಸಿನಿಮಾ ಹಾಗೂ ರಾಜಕೀಯ ಹಿನ್ನೆಲೆಯಿದ್ದರೂ ಅನೇಕ ಸ್ಟಾರ್ ಮಕ್ಕಳು ಕನ್ನಡ ಚಿತ್ರರಂಗದಲ್ಲಿ ತಮ್ಮದೇಯಾದ ಸ್ಥಾನ ಸೃಷ್ಟಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ವಿನಯ್ ರಾಜ್‌ಕುಮಾರ್, ನಿಖಿಲ್ ಗೌಡ, ತ್ರಿವಿಕ್ರಮ್ ರವಿಚಂದ್ರನ್, ಪಂಕಜ್ ಸೇರಿದಂತೆ ಅನೇಕ ಸ್ಟಾರ್ ಮಕ್ಕಳು ಚಿತ್ರರಂಗದಲ್ಲಿ ನೆಲೆಯೂರಲು ಸಾಧ್ಯವಾಗುತ್ತಿಲ್ಲ ಅಂತರ ನಟ ಪಟ್ಟಿ ಇಲ್ಲಿದೆ.


cover image
ಗುರುರಾಜ್ ಜಗ್ಗೇಶ್
1

ನವರಸ ನಾಯಕ ಜಗ್ಗೇಶ್ ಹಿರಿಯ ಮಗನಾದ ಗುರುರಾಜ್, ಬಾಲ್ಯನಟನಾಗಿ ತಮ್ಮ ತಂದೆಯವರ `ಬೇಡ ಕೃಷ್ಣ ರಂಗಿನಾಟ' ಚಿತ್ರದಲ್ಲಿ ನಟಿಸಿದ್ದರು. 2002ರಲ್ಲಿ ಜಗ್ಗೇಶ್‌ರ `ಮೇಕಪ್' ಚಿತ್ರದ ಕಥೆ ಕೂಡ ಬರೆದಿದ್ದರು. ನಂತರ 2009ರಲ್ಲಿ ತೆರೆಕಂಡ `ಗಿಲ್ಲಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ನಾಯಕನಾಗಿ ಪ್ರವೇಶಿಸಿದರು. ಈ ಚಿತ್ರದ ಮೂಲಕವೇ ತೆಲುಗಿನ ಖ್ಯಾತ ನಟಿ ರಕುಲ್ ಪ್ರೀತ್ ಸಿನಿಪಯಣ ಆರಂಭಿಸಿದ್ದು. 2012ರಲ್ಲಿ ಜಗ್ಗೇಶ್ ನಿರ್ದೇಶನದ `ಗುರು' ಚಿತ್ರದಲ್ಲಿ ನಾಯಕನಾಗಿ ನಟಿಸಿದರು. ನಂತರ ಸಂಕ್ರಾತಿ, ಪೈಪೋಟಿ ಚಿತ್ರಗಳಲ್ಲಿ ನಟಿಸಿದರು. ಆದರೆ, ಈ ಸಿನಿಮಾಗಳು ಅಷ್ಟೇನು ಸದ್ದು ಮಾಡಲಿಲ್ಲ.  

 

ಪಂಕಜ್
2

ಕನ್ನಡ ಚಿತ್ರರಂಗದ ಜನಪ್ರಿಯ ನಿರ್ದೇಶಕ ಕಲಾಸಾಮ್ರಾಟ್ ಎಸ್‌.ನಾರಾಯಣ್ ಅವರ ಪುತ್,ರ ನಟ ಪಂಕಜ್ ನಾರಾಯಣ್ 16 ವರ್ಷ ಇದ್ದಾಗಲೇ 'ಚೈತ್ರದ ಚಂದ್ರಮ' ಸಿನಿಮಾ ಮೂಲಕ ನಟನಾಗಿ ಎಂಟ್ರಿ ಕೊಟ್ಟರು. ಆ ಬಳಿಕ 'ಚೆಲುವಿನ ಚಿಲಿಪಿಲಿ' ಸಿನಿಮಾದಲ್ಲಿ ನಾಯಕನಾಗಿ ನಟಿಸಿದರು. ನಂತರ 'ದುಷ್ಟ' ಮತ್ತು 'ದಾಂಡಿಗ' ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ನಾಯಕ ನಟನಾಗಿ ಅಭಿನಯಿಸುವುರ ಜೊತೆಗೆ ಕೆಲವು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ ಪಂಕಜ್. ದಕ್ಷ, ಒಡೆಯ ಸಿನಿಮಾದಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ.  ಪಂಕಜ್ ನಾರಾಯಣ್ ಅವರು ಇಲ್ಲಿಯ ತನಕ ಸುಮಾರು 5 ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ಸಿನಿಮಾಗಳಲ್ಲಿ ಪಂಚಜ್ ನಾಯಕನ ಪಾತ್ರದಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. 

ಅನೂಪ್ ಸಾರಾ  ಗೋವಿಂದು
3

ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ, ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಹಾಗೂ ಕನ್ನಡ ಪರ ಹೋರಾಟಗಾರ ಸಾರಾ ಗೋವಿಂದು ಮಗ ಅನೂಪ್ ಸಾರಾ  ಗೋವಿಂದು. ಇವರು 2015ರಲ್ಲಿ ಡವ್ ಚಿತ್ರದ ಮೂಲಕ ಇಂಡಸ್ಟ್ರಿ ಪ್ರವೇಶಿಸಿದರು. ನಂತರ ಸಾಗುವ ದಾರಿಯಲ್ಲಿ ಹಾಗೂ ಮಿಸ್ಟರ್ ಪರ್ಫೆಕ್ಟ್ ಎನ್ನುವ ಚಿತ್ರ ಮಾಡಿದ್ದರು. ಆದರೆ, ಇವರ ಸಿನಿಮಾಗಳು ಅಷ್ಟು ಗುರುತಿಸಿಕೊಳ್ಳಲಿಲ್ಲ.  

 

ಅನೂಪ್ ರೇವಣ್ಣ
4

ಅನೂಪ್ ರೇವಣ್ಣ ಕರ್ನಾಟಕದ ಖ್ಯಾತ ರಾಜಕಾರಣಿ H.M.ರೇವಣ್ಣ ಮತ್ತು ನಿರ್ಮಾಪಕಿ ವತ್ಸಲಾ ರೇವಣ್ಣ ಅವರ ಪುತ್ರ. ಇಬರು ಮೊದಲ ಬಾರಿಗೆ ಆರ್.ಚಂದ್ರು ನಿರ್ದೇಶನದ `ಲಕ್ಮಣ' ಚಿತ್ರದಿಂದ ಸಿನಿ ಪಯಣ ಆರಂಭಿಸಿದರು. ನಂತರ ಎಸ್.ನಾರಾಯಣ ನಿರ್ದೇಶನದ `ಪಂಟ' ಚಿತ್ರದಲ್ಲಿ ನಟಿಸಿದ್ದು, ಇವರ ಸಿನಿಮಾಗಳು ಅಷ್ಟೇನೂ ಗುರುತಿಸಿಕೊಳ್ಳಲಿಲ್ಲ.  

ವಿನಯ್ ರಾಜ್ ಕುಮಾರ್
5

ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದ ವಿನಯ್ ರಾಜ್​ಕುಮಾರ್,  ಒಡ ಹುಟ್ಟಿದವರು, ಆಕಸ್ಮಿಕ, ಅನುರಾಗದ ಅಲೆಗಳು ಮತ್ತು ಓಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿದ್ದಾರ್ಥ್ ಸಿನಿಮಾ ಮೂಲಕ ನಾಯಕನಾಗಿ ಬೆಳ್ಳಿತೆರೆ ಪ್ರವೇಶಿಸಿದರು. ಬಳಿಕ ರನ್ ಆಂಟನಿ, ಅನಂತು ವರ್ಸಸ್ ನುಸ್ರತ್ ಸಿನಿಮಾದಲ್ಲಿ ಅಭಿನಯಿಸಿದ್ದ ವಿನಯ್, ನಂತರ ಸೈಲೆಂಟಾಗಿದ್ದರು. ಅವರ ಯಾವುದೇ ಸಿನಿಮಾ ಕಳೆದ ನಾಲ್ಕು ವರ್ಷಗಳಿಂದ ತೆರೆಕಂಡಿಲ್ಲ. ಅನಂತು ವರ್ಸಸ್ ನುಸ್ರತ್ ಬಳಿಕ ವಿನಯ್ ರಾಜ್‌ಕುಮಾರ್ ಅಭಿನಯದ ಯಾವ ಚಿತ್ರವೂ ತೆರೆಕಂಡಿಲ್ಲ.  ವಿನಯ್ ರಾಜ್‌ಕುಮಾರ್ ಅಭಿನಯದ ಗ್ರಾಮಾಯಣ, ಟೆನ್, ಅಂದೊಂದಿತ್ತು ಕಾಲ ಹಾಗೂ ಪೆಪೆ ಚಿತ್ರಗಳ ಪೋಸ್ಟರ್ ಹಾಗೂ ಟೀಸರ್ ಬಿಡುಗಡೆಯಾಗಿ ಸೌಂಡ್ ಮಾಡಿದ್ರೂ ರಿಲೀಸ್ ಬಗ್ಗೆ ಅಪ್ಡೇಟ್ ಬಂದಿಲ್ಲ. 

 

ಮನೋರಂಜನ್ ರವಿಚಂದ್ರನ್
6

ಕ್ರೇಜಿಸ್ಟಾರ್ ರವಿಚಂದ್ರನ್ ಕನ್ನಡ ಸಿನಿಮಾರಂಗ ಕಂಡ ಅದ್ಭುತ ಕಲಾವಿದ, ನಿರ್ದೇಶಕ, ನಿರ್ಮಾಪಕ. ಕನ್ನಡ ಚಿತ್ರರಂಗವನ್ನು ಉತ್ತುಂಗಕ್ಕೆ ತೆಗೆದುಕೊಂಡು ಹೋಗುವುದರಲ್ಲಿ ರವಿಚಂದ್ರನ್ ಪಾತ್ರ ಕೂಡ ಅತ್ಯಂತ ಪ್ರಮುಖ. ದಶಕಗಳ ಕಾಲ ಸಿನಿಮಾ ರಂಗವನ್ನು ಆಳಿದ ಕ್ರೇಜಿಸ್ಟಾರ್ ರವಿಚಂದ್ರನ್ ಕ್ರೇಜ್ ಇಂದಿಗೂ ಹಾಗೆ ಇದೆ. ಈಗ ರವಿಚಂದ್ರನ್ ಬಳಿಕ ಅವರ ಮಕ್ಕಳು ಸಿನಿಮಾರಂಗದಲ್ಲಿ ತಮ್ಮ ಜರ್ನಿಯನ್ನು ಶುರು ಮಾಡಿದ್ದಾರೆ. ಈಗಾಗಲೇ ರವಿಚಂದ್ರನ್ ಮೊದಲ ಪುತ್ರ ಮನೋರಂಜನ್ ರವಿಚಂದ್ರನ್ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಸಾಹೇಬ' ಚಿತ್ರದ ಮೂಲಕ ಮನೋರಂಜನ್ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು. ಮೊದಲ ಸಿನಿಮಾ ಅಷ್ಟೇನೂ ದೊಡ್ಡ ಮಟ್ಟಿಗೆ ಸದ್ದು ಮಾಡಲಿಲ್ಲ. ನಂತರ 'ಬೃಹಸ್ಪತಿ', 'ಮುಗಿಲ್‌ ಪೇಟೆ', 'ಪ್ರಾರಂಭ' ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಆದರೆ, ಮನೋರಂಜನೆಗೆ ಸೂಪರ್‌ ಹಿಟ್ ಕೊಡುವ ಸಿನಿಮಾ ಇನ್ನೂ ಬಂದಿಲ್ಲ.

 

ನಿಖಿಲ್ ಕುಮಾರಸ್ವಾಮಿ
7

ನಿಖಿಲ್ ಗೌಡ ಅವರು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಪುತ್ರ ಹಾಗೂ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಮೊಮ್ಮಗ. ತಮ್ಮ ಹೋಮ್ ಬ್ಯಾನರ್ ನಲ್ಲಿ ನಿರ್ಮಾಣಗೊಂಡ `ಜಾಗ್ವಾರ್' ಚಿತ್ರದ ಮೂಲಕ ಕನ್ನಡ ಮತ್ತು ತೆಲುಗು ಚಿತ್ರರಂಗಕ್ಕೆ ಅದ್ಧೂರಿಯಾಗಿ ಪದಾರ್ಪಣೆ ಮಾಡಿದರು. ನಂತರ ಹರ್ಷ ನಿರ್ದೇಶನದಲ್ಲಿ ಮೂಡಿಬಂದ ಕೌಟುಂಬಿಕ ಚಿತ್ರ 'ಸೀತಾರಾಮ ಕಲ್ಯಾಣ'ದಲ್ಲಿ ನಟಿಸಿದರು. ಬಳಿಕ ಮುನಿರತ್ನರವರ ನಿರ್ಮಾಣದಲ್ಲಿ ಮೂಡಿಬಂದ ಅದ್ಧೂರಿ ಪೌರಾಣಿಕ ಚಿತ್ರ `ಕುರುಕ್ಷೇತ್ರ'ದಲ್ಲಿ ಅಭಿಮನ್ಯುವಿನ ಪಾತ್ರದಲ್ಲಿ ನಟಿಸಿದ್ದರು. ಆ ಬಳಿಕ ರೈಡರ್ ಸಿನಿಮಾದಲ್ಲಿ ನಟಿಸಿದ್ದರು. ನಿಖಿಲ್ ಗೌಡ ಅವರಿಗೆ ಒಳ್ಳೆಯ ಸಿನಿಮಾ ಹಾಗೂ ರಾಜಕೀಯ ಹಿನ್ನೆಲೆಯಿದ್ದರೂ ಸಿನಿಮಾ ಕ್ಷೇತ್ರದಲ್ಲಿ ಅಷ್ಟೇನು ಹೆಸರು ಮಾಡಲಿಲ್ಲ.  

ಸಚಿನ್
8

ಕರ್ನಾಟಕದ ಮಾಜಿ ಆರೋಗ್ಯ ಸಚಿವ ಚೆಲುವನಾರಾಯಣಸ್ವಾಮಿಯವರ ಪುತ್ರನಾದ ಸಚಿನ್ 2016ರಲ್ಲಿ ತೆರೆಕಂಡ `ಹ್ಯಾಪಿ ಬರ್ತಡೇ' ಚಿತ್ರದಲ್ಲಿ ನಾಯಕನಾಗಿ ನಟಿಸಿದರು. ಆದರೆ, ಈ ಸಿನಿಮಾ ಯಶಸ್ಸು ಕಾಣಲಿಲ್ಲ. ಆನಂತರ ಸಚಿನ್ ಯಾವುದೇ ಸಿನಿಮಾಗಳಲ್ಲಿ ನಟಿಸಲಿಲ್ಲ.  

ತ್ರಿವಿಕ್ರಮ್
9

ರವಿಚಂದ್ರನ್ ದ್ವಿತೀಯ ಪುತ್ರ ವಿಕ್ರಂ ರವಿಚಂದ್ರನ್  'ತ್ರಿವಿಕ್ರಮ' ಚಿತ್ರದ ಮೂಲಕ ಬೆಳ್ಳಿ ಪರದೆಗೆ ಕಾಲಿಟ್ಟರು. ಸಾಕಷ್ಟು ನಿರೀಕ್ಷೆಯ ಜೊತೆಗೆ ಈ ಚಿತ್ರ ರಿಲೀಸ್ ಆಗಿತ್ತು. ಆದರೆ ಅಂದುಕೊಂಡ ಮಟ್ಟಗೆ ಸಿನಿಮಾ ಯಶಸ್ಸು ಕಾಣಲಿಲ್ಲ. ರವಿಚಂದ್ರನ್ ಎರಡನೇ ಮಗ ವಿಕ್ರಮ್ ಕೂಡ ಮೊದಲ ಸಿನಿಮಾದಲ್ಲಿ ಅಪ್ಪನಂತೆ ಮಿಂಚಲು ಸಾಧ್ಯವಾಗಲೇ ಇಲ್ಲ. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+