X
ಹೋಮ್ ಚಲನಚಿತ್ರಗಳ ಒಳನೋಟ

ಕಷ್ಟದಿಂದ ಹೊರಬರಲು ಆಸ್ತಿ- ಮನೆ ಮಾರಿಕೊಂಡ ಸ್ಯಾಂಡಲ್‌ವುಡ್ ನಟರಿವರು..!

Author Sowmya Bairappa | Updated: Tuesday, September 3, 2024, 10:04 AM [IST]

ಸಿನಿಮಾ ಕಲಾವಿದರು ಯಾವಾಗಲೂ ಸ್ಟಾರ್‌ಗಳಾಗಿರುವುದಿಲ್ಲ, ಎಲ್ಲರ ಬೇಡಿಕೆಯೂ ಒಂದಲ್ಲ ಒಂದು ದಿನ ಕುಸಿದೇ ಕುಸಿಯುತ್ತದೆ. ಕೆಲವೊಮ್ಮೆ ಅವಕಾಶ ಕೊರತೆಯೂ ಎದುರಾಗುತ್ತದೆ, ಮತ್ತೊಮ್ಮೆ ಸಿನಿಮಾ ನಿರ್ಮಾಣದಿಂದ ಸಾಕಷ್ಟು ನಷ್ಟ ಕೂಡ ಉಂಟಾಗುತ್ತದೆ. ಹೀಗೆ ಕಷ್ಟದಿಂದ ಹೊರಬರಲು ಮನೆ, ಆಸ್ತಿ ಮಾರಿಕೊಂಡ ಕನ್ನಡದ ನಟರ ಪಟ್ಟಿ ಇಲ್ಲಿ ನೀಡಲಾಗಿದೆ..


cover image
ಶ್ರೀನಿವಾಸ ಮೂರ್ತಿ

ಕನ್ನಡ ಚಿತ್ರರಂಗದ ಹಿರಿಯ ನಟ ಶ್ರೀನಿವಾಸ ಮೂರ್ತಿ ಎರಡು ಜೊತೆ ಬಟ್ಟೆ ಹಾಗೂ ಒಂದು ಸೂಟ್‌ಕೇಸ್ ಹಿಡಿದು ಚಿಕ್ಕಬಳ್ಳಾಪುರದಿಂದ ಬೆಂಗಳೂರಿಗೆ ಬಂದರು. ಮೊದಲು ಸರ್ವೇ ಇಲಾಖೆಯಲ್ಲಿ ಕೆಲಸ ಮಾಡ್ತಿದ್ದ ಇವರು, ನಂತರ ನಾಟಕದ ಗೀಳು ಅಂಟಿಸಿಕೊಂಡರು. ನಂತರ ಕನ್ನಡ ಸಿನಿಮಾರಂಗದಲ್ಲಿ ಸಕ್ರಿಯರಾದ ಇವರು, ನಟ, ನಿರ್ಮಾಪಕ ಹಾಗೂ ದಿ ನಿರ್ದೇಶಕರಾಗಿ ಗುರುತಿಸಿಕೊಂಡರು. ತಮಿಳಿನ 'ಕಾಲತ್ತಿಲ್' ಎಂಬ ಚಿತ್ರದಲ್ಲಿ ನಾಯಕನಾಗಿಯೂ ನಟಿಸಿದ್ದರು. ಸಿನಿಮಾದಿಂದ ಬಂದ ಹಣದಲ್ಲಿ ಅವರು ಕತ್ರಿಗುಪ್ಪೆಯಲ್ಲಿ 50 ದೊಡ್ಡ ಮನಡ ಕಟ್ಟಿಸಿದ್ದರು. ನಂತರ ವಿವಿಧೆಡೆ 7 ಸೈಟ್ ಕೂಡ ತೆಗೆದುಕೊಂಡಿದ್ದರು. 8 ಸಿನಿಮಾ ನಿರ್ಮಾಣ ಮಾಡಿ ಮನೆ, ಆಸ್ತಿ ಎಲ್ಲವನ್ನೂ ಕಳೆದುಕೊಂಡರು. ಸದ್ಯ ಅವರು ಮಗ, ಸೊಸೆ, ಮಕ್ಕಳ ಜೊತೆಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಆದರೆ, ಇದಕ್ಕೆಲ್ಲಾ ಅವರಿಗೆ ಕೊಂಚವೂ ಬೇಸರವಿಲ್ಲವಂತೆ. ಈಗ ಅವರು ಜೀ ಕನ್ನಡದ ಸತ್ಯ ಧಾರಾವಾಹಿ ಜೊತೆ ಕೆಲ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. 

ದ್ವಾರಕೀಶ್

ಇತ್ತೀಚೆಗೆ ನಿಧನರಾದ ಕನ್ನಡ ಚಿತ್ರರಂಗದ ಹಿರಿಯ ನಟ ದ್ವಾರಕೀಶ್ ನಿರ್ಮಾಪಕರಾಗಿ ದೊಡ್ಡ ಹೆಸರು ಗಳಿಸಿದರು. 27ನೇ ವಯಸ್ಸಿನಲ್ಲಿಯೇ ನಿರ್ಮಾಪಕರಾಗಿದ್ದ ಅವರು ಎಷ್ಟು ಹಿಟ್ ಕಂಡರೋ ಅಷ್ಟೇ ಸೋಲು ಕೂಡ ಕಂಡರು. ಆ ಸೋಲು ದ್ವಾರಕೀಶ್ ಅವರನ್ನು ಏಳಲು ಬಿಡಲೇ ಇಲ್ಲ. 6-7 ಬಂಗಲೆಗಳನ್ನು ಕಟ್ಟಿಸಿದ್ದ ದ್ವಾರಕೀಶ್ ಅವುಗಳನ್ನು ಮಾರಿಕೊಂಡರು. ಸಿನಿಮಾ ನಷ್ಟದಿಂದಾಗಿ ಅವರ ಬಳಿಯಿದ್ದ ದುಬಾರಿ ಕಾರು ಹೋಯಿತು. 


ಚಿದಾನಂದ್

ನಟ ಚಿದಾನಂದ್ 'ಪಾಪ ಪಾಂಡು' ಧಾರಾವಾಹಿ ಮೂಲಕ ಸಿಕ್ಕಾಪಟ್ಟೆ ಜನಪ್ರಿಯತೆ ಗಳಿಸಿದವರು. ಸದ್ಯ ಅವರು ಮನೆ ಮಾರಿಕೊಂಡು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅವಕಾಶಗಳ ಕೊರತೆ ಅವರನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿತ್ತು. ಹೀಗಾಗಿ, ಅವರು ಸ್ವಂತ ಮನೆ ಮಾಡಿಕೊಂಡು ಬಾಡಿಗೆ ಮನೆಯಲ್ಲಿ ಇರಬೇಕಾದ ಪರಿಸ್ಥಿತಿ ಬಂತು. ಈ ಬಗ್ಗೆ ಜೋಡಿ ನಂ 1 ಕಾರ್ಯಕ್ರಮದಲ್ಲಿ ಹೇಳಿಕೊಂಡು ನಟ ಚಿದಾನಂದ್ ಕಣ್ಣೀರು ಹಾಕಿದ್ದರು. 


ರವಿಚಂದ್ರನ್

ಸ್ಯಾಂಡಲ್‌ವುಡ್‌ನಲ್ಲಿ ಹೊಸ ಕ್ರೇಜ್ ಹುಟ್ಟು ಹಾಕಿದವರು, ಸಿನಿಮಾನೇ ಉಸಿರು ಅಂತ ನಂಬಿರುವವರು ಕ್ರೇಜಿ ಸ್ಟಾರ್ ರವಿಚಂದ್ರನ್. ಇವರು  ನಟನಾಗಿ ಮಾತ್ರವಲ್ಲದೇ , ನಿರ್ಮಾಪಕ, ನಿರ್ದೇಶಕ, ಸಂಗೀತಗಾರರಾಗಿದ್ದಾರೆ. ಇವರ ತಂದೆ ವೀರಸ್ವಾಮಿ ಖ್ಯಾತ ನಿರ್ಮಾಪಕ ಹಾಗೂ ಫೈನಾನ್ಸ್ ಮಾಡುತ್ತಿದ್ದರು. ತಂದೆ ಸ್ಥಾಪಿಸಿದ ಈಶ್ವರಿ ಸಂಸ್ಥೆ ಮೂಲಕ ರವಿಚಂದ್ರನ್ ಹಲವು ಚಿತ್ರಗಳನ್ನು ನಿರ್ಮಿಸಿದ್ದಾರೆ. ಜೊತೆಗೆ ಸಿನಿಮಾ ನಿರ್ಮಾಣದಿಂದ ಸಾಕಷ್ಟು ಹಣ ಕಳೆದುಕೊಂಡಿದ್ದಾರೆ. ಈ ಹಿಂದೆ ರವಿಚಂದ್ರನ್ ಅವರು ಬೆಂಗಳೂರಿನ ರಾಜಾಜಿನಗರದಲ್ಲಿರುವ ಮನೆ ಮಾರಿ, ಹೊಸಕೆರೆಹಳ್ಳಿಯಲ್ಲಿರುವ ಮನೆಗೆ ಶಿಫ್ಟ್ ಆಗಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಕ್ರೇಜಿ ಸ್ಟಾರ್, ನಾನು ಸಾಲ ಮಾಡಿದೆ, ದುಡ್ಡು ಕಳೆದುಕೊಂಡೆ ಅಂತಾರೆ'. ನಾನು ಹಣ ಕಳೆದುಕೊಂಡಿದ್ದು ನನ್ನನ್ನು ಪ್ರೀತಿಸುವ ಜನರಿಗಾಗಿ, ಮತ್ತೆ ನಾನು ಗೆಲ್ಲುತ್ತೇನೆ ಎಂದಿದ್ದರು. ಮಗಳ ಮದುವೆಗೂ ರವಿಚಂದ್ರನ್ ಸಾಲ ಮಾಡಿದ್ದರು. ಇದನ್ನು ಅವರೇ ಹೇಳಿಕೊಂಡಿದ್ದರು. 

ರಕ್ಷಕ್ ಬುಲೆಟ್

ಕನ್ನಡ ಚಿತ್ರರಂಗದ ಜನಪ್ರಿಯ ಹಾಸ್ಯನಟ ಬುಲೆಟ್ ಪ್ರಕಾಶ್ ಕೆಲ ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಐಷಾರಾಮಿ ಮನೆ ಕಟ್ಟಿಸಿದ್ದರು. ಮನೆಗೆ 'ಶ್ರೀವಾರಿ ಲಕ್ಷ್ಮೀದೇವಿ ಕೃಪೆ' ಅಂತ ಹೆಸರಿಟ್ಟಿದ್ದರು. ಮೂರು ಅಂತಸ್ತಿನ ಮನೆ ಇದಾಗಿತ್ತು. ಬುಲೆಟ್ ಪ್ರಕಾಶ್ ನಿಧನದ ಬಳಿಕ ಕುಟುಂಬಸ್ಥರಿಗೆ ಅವರ ನೆನಪು ತೀವ್ರವಾಗಿ ಕಾಡಿತ್ತಂತೆ. ಹೀಗಾಗಿ, ಆ ಮನೆಯನ್ನು ಮಾರಿ ರಕ್ಷಕ್ ಬುಲೆಟ್ ಅಕ್ಕನ ಮದುವೆ ಮಾಡಿದ್ದಾರಂತೆ. ಜೊತೆಗೆ ಆ ದುಡ್ಡಿನಲ್ಲಿ ಅಪಾರ್ಟ್‌ಮೆಂಟ್‌ನಲ್ಲಿ ಹೊಸ ಮನೆ ಖರೀದಿ ಮಾಡಿದ್ದಾರಂತೆ. ರಕ್ಷಕ್ 'ಬಿಗ್‌ಬಾಸ್ ಕನ್ನಡ ಸೀಸನ್ 10'ರಲ್ಲಿ ಸ್ಪರ್ಧಿಸಿದ್ದರು. ಸದ್ಯ ಆರ್‌ ೦೧ ಎಂಬ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. 


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+