X
ಹೋಮ್ ಚಲನಚಿತ್ರಗಳ ಒಳನೋಟ

ಚಿಕ್ಕವಯಸ್ಸಿನಲ್ಲೇ ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದವರನ್ನು ಕಳೆದುಕೊಂಡು ಒಂಟಿಯಾದ ಸೆಲೆಬ್ರಿಟಿಗಳಿವರು!

Author Sowmya Bairappa | Updated: Sunday, February 23, 2025, 10:08 AM [IST]

ಜೀವನ ಯಾವಾಗಲೂ ಒಂದೇ ರೀತಿ ಇರುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ. ಕೆಲವೊಮ್ಮೆ ನಾವು ಊಹಿಸಲಾರದ ಘಟನೆಗಳು ನಡೆದುಹೋಗುತ್ತವೆ. ಹೀಗೆ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಎತ್ತರಕ್ಕೆ ಬೆಳೆದಿರುವ ಹಲವು ನಟಿಯರು ತಮ್ಮ ವೈಯಕ್ತಿಕ ಬದುಕಿನಲ್ಲಿ ಅಷ್ಟೇ ಕಷ್ಟ ಎದುರಿಸಿದ್ದಾರೆ. ತಮ್ಮ ಬೆನ್ನೆಲುಬಾಗಿದ್ದವರನ್ನು ಕಳೆದುಕೊಂಡು ಸಾಕಷ್ಟು ನೋವು ಅನುಭವಿಸಿದ್ದಾರೆ. ಇಲ್ಲಿ ಚಿಕ್ಕವಯಸ್ಸಿನಲ್ಲೇ ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದವರನ್ನು ಕಳೆದುಕೊಂಡ ದುಃಖ ಪಡುತ್ತಿರುವ ಸೆಲೆಬ್ರಿಟಿಗಳ ಪಟ್ಟಿಯನ್ನು ನೀಡಲಾಗಿದೆ.


cover image
ಮೇಘನಾ ರಾಜ್
1

ಚೆಂದನವನದ ಹಿರಿಯ ನಟ ಸುಂದರ ರಾಜ್ ಹಾಗೂ ನಟಿ ಪ್ರೇಮಿಳಾ ಅವರ ಏಕೈಕ ಪುತ್ರಿಯಾದ ಮೇಘನಾ ರಾಜ್, 2018ರ ಮೇ ತಿಂಗಳಿನಲ್ಲಿ ಸ್ಯಾಂಡಲ್‌ವುಡ್ ನಟ ಚಿರಂಜೀವಿ ಸರ್ಜಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ, ಚಿರಂಜೀವಿ ಸರ್ಜಾ 2020ರ ಜೂನ್ 7ರಂದು ಹೃದಯಾಘಾತದಿಂದ ತಮ್ಮ 39ನೇ ವಯಸ್ಸಿನಲ್ಲಿ ವಿಧಿವಶರಾದರು. ಈ ಸಂದರ್ಭದಲ್ಲಿ ಮೇಘನಾ ತುಂಬು ಗರ್ಭಿಣಿಯಾಗಿದ್ದರು.

ಅರುಂಧತಿ ನಾಗ್
2

ಕನ್ನಡ ಚಿತ್ರರಂಗದ ದಂತಕಥೆ ಶಂಕರ್ ನಾಗ್ ಹಾಗೂ ಆರುಂಧತಿ ರಂಗಭೂಮಿಯ ಮೂಲಕ ಪರಿಚಯವಾದರು. ಆಗ ಅರುಂಧತಿ ಅವರಿಗೆ ಕೇವಲ 17 ವರ್ಷ. ಮುಂದೆ ಆರು ವರ್ಷಗಳ ನಂತರ 1980ರಲ್ಲಿ ಇವರಿಬ್ಬರು ವಿವಾಹವಾಗುತ್ತಾರೆ. ಆದರೆ, ಶಂಕರ್‌ನಾಗ್ 1990ರ ಸೆಪ್ಟಂಬರ್ 30ರ ಬೆಳಗ್ಗೆ ಜೋಕುಮಾರಸ್ವಾಮಿ ಚಿತ್ರದ ಶೂಟಿಂಗ್‌ಗಾಗಿ ಪತ್ನಿ ಮತ್ತು ಮಗಳು ಕಾವ್ಯ ಜೊತೆ ಕಾರಿನಲ್ಲಿ ಹೋಗುವಾಗ ದಾವಣಗೆರೆ ಹೊರವಲಯದ ಬಳಿ ಅಪಘಾತಕ್ಕೀಡಾಗಿ ನಿಧನರಾದರು. ಆಗಿನ್ನು ಶಂಕರ್‌ನಾಗ್ ಅವರಿಗೆ 35 ವರ್ಷ.

ಅಶ್ವಿನಿ ಪುನೀತ್ ರಾಜಕುಮಾರ್
3

ನಗುಮೊಗದ ಒಡೆಯ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕೇವಲ ಮನೋರಂಜನೆ ಮಾತ್ರವಲ್ಲ, ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡುವ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಸಿನಿಮಾಗಳ ಹೊರತಾಗಿಯೂ ನಿಜಜೀವನದಲ್ಲೂ ಹಲವು ಸಮಾಜಮುಖಿ ಕೆಲಸ ಮಾಡಿದ್ದರು. ಪುನೀತ್ 1999ರ ಡಿಸೆಂಬರ್ 1ರಂದು ಆಶ್ವಿನಿ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಪುತ್ರಿಯರಿದ್ದಾರೆ. ಆದರೆ, 2021ರ ಅಕ್ಟೋಬರ್ 29ರಂದು ಅಪ್ಪು ಹೃದಯಾಘಾತದಿಂದ ನಿಧನರಾದರು. ಅವರ ಹಠಾತ್ ಅಗಲಿಕೆಯಿಂದ ಕರುನಾಡಿಗೆ ಬರಸಿಡಿಲು ಬಂಡಿದಂತಾಗಿತ್ತು.

ವಿಜಯ್ ರಾಘವೇಂದ್ರ
4

ಸ್ಯಾಂಡಲ್‌ವುಡ್ ನಟ ವಿಜಯ್ ರಾಘವೇಂದ್ರ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಮ್ ಮಗಳಾದ ಸ್ಪಂದನಾ 2007ರ ಆಗಸ್ಟ್ 26ರಂದು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಮದುವೆ ಬಳಿಕವೂ ಈ ಜೊಡಿ ಪ್ರೇಮಿಗಳಂತೆಯೇ ಇದ್ದರು. ಆದರೆ, ೨೦೨೩ರಲ್ಲಿ ಪ್ರವಾಸಕ್ಕೆಂದು ಬ್ಯಾಂಕಾಕ್‌ಗೆ ತೆರಳಿದ್ದ ಸ್ಪಂದನಾ ಅಲ್ಲಿಯೇ ಹೃದಯಾಘಾತದಿಂದ ನಿಧನರಾಗಿದ್ದರು. ಈ ದಂಪತಿಗೆ ಶೌರ್ಯ ಎಂಬ ಮಗನಿದ್ದಾನೆ.

ಮೀನಾ
5

ರವಿಚಂದ್ರನ್ ಅಭಿನಯದ ಪುಟ್ನಂಜ, ಸುದೀಪ್ ಅಭಿನಯದ ಸ್ವಾತಿ ಮುತ್ತು, ಮೈ ಆಟೋಗ್ರಾಫ್, ವಿಷ್ಣುವರ್ಧನ್ ಅಭಿನಯದ ಸಿಂಹಾದ್ರಿಯ ಸಿಂಹ ಸಿನಿಮಾ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಬಹುಭಾಷಾ ನಟಿ ಮೀನಾ ಕೂಡ ಚಿಕ್ಕವಯಸ್ಸಿನಲ್ಲಿಯೇ ಪತಿಯನ್ನು ಕಳೆದುಕೊಂಡರು. ಮೀನಾ 2009ರಲ್ಲಿ ವಿದ್ಯಾಸಾಗರ್ ಎಂಬುವವರನ್ನು ವಿವಾಹವಾಗಿದ್ದರು. ಆದರೆ, 2022ರ ಜೂನ್‌ ತಿಂಗಳಲ್ಲಿ ವಿದ್ಯಾಸಾಗರ್ ಕೊರೋನಾ ಸೋಂಕಿನಿಂದ ಮೃತಪಟ್ಟರು.

ಮಾಲಾಶ್ರೀ
6

ಬಾಲನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಮಾಲಾಶ್ರೀ, ಸುಮಾರು 34 ಚಿತ್ರಗಳಲ್ಲಿ ಬಾಲನಟಿಯಾಗಿಯೇ ಅಭಿನಯಿಸಿ ಹೆಸರು ಮಾಡಿದ್ದಾರೆ. ನಂತರ ನಂಜುಂಡಿ ಕಲ್ಯಾಣ ಚಿತ್ರದ ಮೂಲಕ ನಾಯಕಿಯಾಗಿ ಪದಾರ್ಪಣೆ ಮಾಡಿದ ಅವರು, ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸುವ ಮೂಲಕ ಕನಸಿನ ರಾಣಿ ಎಂಬ ಬಿರುದು ಪಡೆದರು. ಮಾಲಾಶ್ರೀ 1997ರಲ್ಲಿ ನಿರ್ಮಾಪಕ ರಾಮು ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಮುದ್ದಾದ ಮಕ್ಕಿಳಿದ್ದಾರೆ. ಆದರೆ, 2021ರ ಏಪ್ರಿಲ್ 26ರಂದು ರಾಮು ಅವರು ಕೊರೊನಾ ವೈರಸ್‌ನಿಂದ ಕೊನೆಯುಸಿರೆಳೆದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+