X
ಹೋಮ್ ಚಲನಚಿತ್ರಗಳ ಒಳನೋಟ

ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್ ಹೀರೋಗಳಾಗಿ ಮಿಂಚಿದ್ದ ಈ ನಟರು ಈಗ ಸಿನಿಮಾಗಳಿಂದ ದೂರ-ದೂರ!

Author Sowmya Bairappa | Updated: Thursday, January 23, 2025, 09:36 AM [IST]

ಹೊಸ ನೀರು ಬಂದ ಮೇಲೆ ಹಳೆ ನೀರು ಹರಿಯಬೇಕು ಗಾದೆ ಮಾತಿನಂತೆ ಒಂದು ಕಾಲದಲ್ಲಿ ಸಿನಿಮಾರಂಗದಲ್ಲಿ ಸ್ಟಾರ್ ಹೀರೋ-ಹೀರೋಯಿನ್ ಮಿಂಚಿದವರು, ಹೊಸಬರು ಬಂದ ಮೇಲೆ ಬೇಡಿಕೆ ಕಳೆದುಕೊಳ್ಳುತ್ತಾ ಹೋಗುತ್ತಾರೆ. ಈ ಮಾತು ಕನ್ನಡ ಸಿನಿಮಾರಂಗಕ್ಕೂ ಅನ್ವಯವಾಗುತ್ತದೆ. ಯಾಕೆಂದರೆ, ಚಂದನವನದಲ್ಲೂ ಒಂದು ಕಾಲದಲ್ಲಿ ಸ್ಟಾರ್ ನಟರಾಗಿ ಮಿಂಚಿದ್ದ ಕೆಲವರು ಈಗ ಬಣ್ಣದ ಲೋಕದಿಂದ ದೂರವಾಗಿದ್ದಾರೆ. ಪೋಷಕ ಪಾತ್ರಗಳಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಅಂತಹ ನಟರ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.


cover image
ವಿನೋದ್ ರಾಜ್
1

ಕನ್ನಡ ಸಿನಿಮಾರಂಗದಲ್ಲಿ ತಮ್ಮ ಅದ್ಭುತ ಡ್ಯಾನ್ಸ್ ಶೈಲಿಯ ಮೂಲಕವೇ ಸಿನಿರಸಿಕರ ಮನಗೆದ್ದ ವಿನೋದ್ ರಾಜ್, ಈಗ ಸಿನಿಮಾರಂಗದಿಂದ ಬಹಳ ದೂರ ಉಳಿದಿದ್ದಾರೆ. ಡ್ಯಾನ್ಸ್ ರಾಜ ಡ್ಯಾನ್ಸ್ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟ ವಿನೋದ್, ತಮ್ಮ ಡ್ಯಾನ್ಸಿಂಗ್ ಸ್ಟೈಲ್‌ನಿಂದ ಸ್ಟಾರ್ ಪಟ್ಟಕ್ಕೇರಿದರು. ನಂತರ ಕೃಷ್ಣ ನೀ ಕುಣಿದಾಗ, ನಂಜುಂಡ, ಸ್ನೇಹಲೋಕ, ಮಹಾಭಾರತ, ವಂದೇ ಮಾತರಂ, ಓಂ ಶಕ್ತಿ, ಗಿಳಿ ಬೇಟೆ, ಕನ್ನಡದ ಕಂದ ಹೀಗೆ 26ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ಕನ್ನಡಿಗರ ಮನಗೆದ್ದಿದ್ದರು.  ಆ ದಿನಗಳಲ್ಲಿ ಕಾಲೇಜ್ ಹೀರೋ, ಸ್ಟಾರ್ ನಟನಾಗಿ ಮಿಂಚಿದ್ದ ವಿನೋದ್ ರಾಜ್‌, 2009ರಲ್ಲಿ ತೆರೆಕಂಡ ಯಾರದು ಚಿತ್ರದ ಬಳಿಕ ನಟನೆಗೆ ವಿದಾಯ ಹೇಳಿದ್ದಾರೆ. ಅವರು ಸಿನಿಮಾರಂಗದಿಂದ ಕಂಪ್ಲೀಟ್ ದೂರ ಉಳಿದಿರುವುದು ಫ್ಯಾನ್ಸ್‌ಗೆ ಭೇಸರ ತರಿಸಿದೆ. ಮುಂದಿನ ದಿನಗಳಲ್ಲಿ ಅವರು ಸಿನಿಮಾಗಳಲ್ಲಿ ಕಾಣಿಸಿಕಕೊಳ್ಳಲಿದ್ದಾರಾ? ಇಲ್ಲವಾ? ಎಂಬುದನ್ನು ಕಾದು ನೋಡಬೇಕು. 


ರಾಮ್ ಕುಮಾರ್
2

ತಮ್ಮ ಹ್ಯಾಂಡ್ಸಮ್ ಲುಕ್‌ನಿಂದಲೇ ಸಿನಿಪ್ರಿಯರ ಮನಗೆದ್ದಿದ್ದ ರಾಮ್‌ಕುಮಾರ್, ಕನ್ನಡದ ಖ್ಯಾತ ನಿರ್ಮಾಪಕ ಶೃಂಗಾರ ನಾಗರಾಜ್ ಅವರ ಮುದ್ದಿನ ಮಗ. 1990ರಲ್ಲಿ ತೆರೆಕಂಡ 'ಆವೇಶ'ಸ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟಿದ್ದ ರಾಮ್‌ಕುಮಾರ್, 1993ರಲ್ಲಿ ಬಿಡುಗಡೆಯಾದ ಗೆಜ್ಜೆನಾದ ಚಿತ್ರದದಿಂದ ಕನ್ನಡಿಗರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾದರು. ಅಲ್ಲಿಂದ ಮುಂದೆ ತವರಿನ ತೊಟ್ಟಿಲು, ಸ್ನೇಹಲೋಕ, ಹಬ್ಬ, ಆಂಟಿ ಪ್ರೀತ್ಸೆ, ನವಶಕ್ತಿ ವೈಭವ, ಪಾಂಡವರು ಹೀಗೆ ಹಲವು ಸಿನಿಮಾ ಮೂಲಕ ಸ್ಟಾರ್ ನಟನಾಗಿ ಮಿಂಚಿದರು. ಡಾ.ರಾಜ್‌ಕುಮಾರ್ ಪುತ್ರಿ ಪೂರ್ಣಿಮಾ ಅವರನ್ನು ಮದುವೆಯಾದ ಅವರು, 2006ರಲ್ಲಿ ಪಾಂಡವರು ಸಿನಿಮಾ ನಿರ್ಮಿಸಿ, ನಟಿಸಿದರು. ಇದಾದ ಬಳಿಕ ಚಿತ್ರರಂಗದಿಂದ ದೂರ ಉಳಿದಿದ್ದಾರೆ.


ಕುಮಾರ್ ಬಂಗಾರಪ್ಪ
3

ಪ್ರಸ್ತುತ ರಾಜಕೀಯದಲ್ಲಿ ಸಕ್ರಿಯವಾಗಿರುವ ಕುಮಾರ್ ಬಂಗಾರಪ್ಪ ಒಂದು ಕಾಲದಲ್ಲಿ ಸಿನಿಮಾರಂಗದಲ್ಲಿ ಮಿಂಚಿದ್ದವರು. ಇವರು ತೆಲುಗು ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ನಂತರ ಶರವೇಗದ ಸರದಾರ ಎಂಬ ಸಿನಿಮಾ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದ ಅವರು, ಅಶ್ವಮೇಧ, ತೇಜ, ಪುರುಷೋತ್ತಮ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದರು. ಇವರು ಚಿತ್ರರಂಗದಲ್ಲಿ ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ರಾಜಕೀಯಕ್ಕೆ ಎಂಟ್ರಿಕೊಡುವ ಪರಿಸ್ಥಿತಿ ಆರಂಭವಾಯಿತು. ಹೀಗಾಗಿ, ರಾಜಕೀಯದಲ್ಲೇ ಮುಂದುವರೆದರು. 


ಚೇತನ್ ಕುಮಾರ್
4

ನಟ ಚೇತನ್ ಕುಮಾರ್ ಅಮೆರಿಕಾದಲ್ಲಿ ಉನ್ನತ ಶಿಕ್ಷಣ ಮುಗಿಸಿಕೊಂಡು ಬಂದು ಬೆಂಗಳೂರಿನಲ್ಲಿ ನಟನಾ ಜರ್ನಿ ಆರಂಭಿಸಿದರು.  2005ರಲ್ಲಿ ಕೆ.ಎಂ.ಚೈತನ್ಯ ನಿರ್ದೇಶನದ, ಬೆಂಗಳೂರು ಭೂಗತಲೋಕದ ಕಥೆಯನ್ನಾಧರಿಸಿದ 'ಆ ದಿನಗಳು' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಇವರು, ಈ ಚಿತ್ರದ ಅಭಿನಯಕ್ಕೆ ಉದಯ ಟಿವಿಯ ಪ್ರಶಸ್ತಿ ಕೂಡ ಪಡೆದರು. ನಂತರ ಮೈನಾ, ಬಿರುಗಾಳಿ, ಸೂರ್ಯಕಾಂತಿ, ಅತಿರಥ ಸಿನಿಮಾಗಳಲ್ಲಿ ಅಭಿನಯಿಸಿದರು. ನಟರಲ್ಲದೆ ಸಮಾಜ ಸೇವಕರಾಗಿಯೂ ಗುರುತಿಸಿಕೊಂಡಿದ್ದ ಚೇತನ್ ಕುಮಾರ್, ಸದ್ಯ ಸಿನಿಮಾರಂಗದಿಂದವ ದೂರ ಉಳಿದಿದ್ದಾರೆ. 


ಅಭಿಜಿತ್
5

80ರ ದಶಕದಲ್ಲಿ ನಾಯಕ ನಟನಾಗಿ ಹಾಗೂ ಖಳನಟನಾಗಿ ಮಿಂಚಿದವರು ಅಭಿಜಿತ್. 1990ರಲ್ಲಿ ತೆರೆಕಂಡ ಕಾಲೇಜ್ ಹೀರೋ ಹಾಗೂ ಚೈತ್ರದ ಪ್ರೇಮಾಂಜಲಿ ಚಿತ್ರಗಳಲ್ಲಿ ಖಳನಾಯಕನಾಗಿ ನಟಿಸಿದರು. ಆನಂತರ 1993ರಲ್ಲಿ ತೆರೆಕಂಡ 'ರಂಜಿತಾ' ಸಿನಿಮಾದಿಂದ ಹೀರೋ ಆಗಿ ಯಶಸ್ಸು ಕಂಡರು. ನಂತರ ವಿಷ್ಣುವರ್ಧನ್, ಜಗ್ಗೇಶ್ ಸೇರಿದಂತೆ ಹಲವರ ಜೊತೆ ನಟಿಸಿದ ಅವರು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. 2005ರಲ್ಲಿ ನರಸಿಂಹ ನಾಯಕ ಸಿನಿಮಾ ನಿರ್ಮಿಸಿ, ನಟಿಸಿದರು. ಇದಾದ ಬಳಿಕ ಕಳೆದ 15 ವರ್ಷಗಳಿಂದ ಬೆಳ್ಳಿತೆರೆಯಿಂದ ದೂರ ಸರಿದಿರುವ ಅಭಿಜಿತ್, ಸದ್ಯ ಕನ್ನಡ ಕಿರುತೆರೆಯಲ್ಲಿ ಸಕ್ರಿಯವಾಗಿದ್ದಾರೆ.  


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+