X
ಹೋಮ್ ಚಲನಚಿತ್ರಗಳ ಒಳನೋಟ

ಕೋಟಿ-ಕೋಟಿ ಮೌಲ್ಯದ ಫಾರ್ಮ್‌ಹೌಸ್ ಹೊಂದಿರುವ ಸ್ಯಾಂಡಲ್‌ವುಡ್ ನಟರಿವರು!

Author Sowmya Bairappa | Updated: Tuesday, November 12, 2024, 03:58 PM [IST]

ಶ್ರೀಮಂತರು ತಮಗೆ ಬಿಡುವು ಸಿಕ್ಕಾಗ ನಗರದ ಜಂಜಾಟ ಬಿಟ್ಟು ಪ್ರಕೃತಿ ಮಡಿಲಲ್ಲಿ ಕಾಲ ಕಳೆಯಲು ಫಾರ್ಮ್‌ಹೌಸ್ ನಿರ್ಮಿಸಿಕೊಳ್ಳುವುದು ಸಾಮಾನ್ಯ. ಅದೇ ರೀತಿನ ಕನ್ನಡದ ಹಲವು ನಟರು ವಿಶಾಲವಾದ ಫಾರ್ಮ್‌ಹೌಸ್‌ಗಳನ್ನು ಹೊಂದಿದ್ದು, ಬಿಡುವು ಸಿಕ್ಕಾಗೆಲ್ಲಾ ತಮ್ಮ ಫ್ಯಾಮಿಲಿಯೊಂದಿಗೆ ಭೇಟಿ ನೀಡುತ್ತಾರೆ. ಜೊತೆಗೆ ಅಲ್ಲಿ ವಿವಿಧ ಬಗೆಯ ಗಿಡ-ಮರಗಳನ್ನು ಬೆಳಸಿದ್ದಾರೆ. ಇಲ್ಲಿ ಸ್ಯಾಂಡಲ್‌ವುಡ್ ನಟರ ಫಾರ್ಮ್‌ಹೌಸ್‌ಗಳು ಎಲ್ಲಿವೆ? ಎಷ್ಟು ಎಕರೆ ಹೊಂದಿವೆ? ಎಂಬ ಮಾಹಿತಿಯನ್ನು ನೀಡಲಾಗಿದೆ.


cover image
ಶಿವ ರಾಜ್‌ಕುಮಾರ್

ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಅವರು ಇತ್ತೀಚೆಗಷ್ಟೇ ಕನಕಪುರದಲ್ಲಿರುವ ತಮ್ಮ ಕೃಷಿ ಭೂಮಿಯಲ್ಲಿ ಮನೆಯೊಂದನ್ನು ನಿರ್ಮಿಸಿ, ಗೃಹಪ್ರವೇಶ ಮಾಡಿದ್ದಾರೆ. 10 ಸಾವಿರ ಚದರ ವಿಸೀರ್ಣದಲ್ಲಿ ಈ ಮನೆ ನಿರ್ಮಾಣವಾಗಿದ್ದು, ದೀಪಾವಳಿ ಸಂದರ್ಭ ಗೃಹಪ್ರವೇಶ ಮಾಡಿದ್ದಾರೆ. ಇಲ್ಲಿ ಶಿವಣ್ಣ ದಂಪತಿ ಹೆಸರಿನಲ್ಲಿ ಐದೂವರೆ ಎಕರೆ ಜಮೀನಿದೆ.  ಈ ಜಾಗದ ಬೆಲೆ ಮೂರು ಕೋಟಿ ಅಂತ ಗೀತಾ ಶಿವರಾಜ್‌ಕುಮಾರ್ ಈ ಹಿಂದೆ ಅಫಿಡವಿಟ್‌ನಲ್ಲಿ ತಿಳಿಸಿದ್ದರು.

ದರ್ಶನ್

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಶಾಸ್ತ್ರೀ' ಸಿನಿಮಾದಿಂದ ಬಂದ ಹಣದಿಂದ ಮೈಸೂರಿನ ಟೀ ನರಸೀಪುರ ರಸ್ತೆಯಲ್ಲಿ ಐದಾರು ಎಕರೆ ಜಮೀನು ಖರೀದಿಸಿದ್ದರು. ಇಲ್ಲಿ ಕುದರೆ, ಹಸು ಸೇರಿದಂತೆ ಸಾಕಷ್ಟು ಪ್ರಾಣಿ-ಪಕ್ಷಿಗಳನ್ನು ಸಾಕಿದ್ದಾರೆ. ಅಂದು 45 ಲಕ್ಷ ರೂಪಾಯಿಗೆ ಖರೀದಿಸಿದ ಈ ಜಾಗ ಇಂದು ಕೋಟಿ-ಕೋಟಿ ಬೆಲೆ ಬಾಳುತ್ತದೆ ಅಂತ ಸ್ವತಃ ದರ್ಶನ್ ಅವರೇ ಸಂದರ್ಶನವೊಂದರಲ್ಲಿ ಹೇಳಿದ್ದರು. ದರ್ಶನ್ ಬಿಡುವಿನ ಸಂದರ್ಭದಲ್ಲಿ ಸ್ನೇಹಿತರೊಂದಿಗೆ ಇಲ್ಲಿ ಕಾಲ ಕಳೆಯುತ್ತಾರೆ.  

ಉಪೇಂದ್ರ

ನಟ ರಿಯಲ್ ಸ್ಟಾರ್ ಉಪೇಂದ್ರ ಅವರು ಬೆಂಗಳೂರು ಹೊರವಲಯದ ಬೈಲಾಲು ಗ್ರಾಮದಲ್ಲಿ 17 ಎಕರೆ ಜಮೀನು ಖರೀದಿಸಿ, ಅಲ್ಲಿ ರೆಸಾರ್ಟ್ ನಿರ್ಮಾಣ ಮಾಡಿದ್ದಾರೆ. ರುಪ್ಪಿಸ್ ರೆಸಾರ್ಟ್‌ನಲ್ಲಿ ಹಲವು ಸಿನಿಮಾ-ಸೀರಿಯಲ್‌ಗಳ ಚಿತ್ರೀಕರಣ ಕೂಡ ನಡೆಯುತ್ತದೆ. ಇದರ ಜೊತೆಗೆ ಬೆಂಗಳೂರು-ಮೈಸೂರು ರಸ್ತೆಯಲ್ಲಿರುವ ದೊಡ್ಡ ಆಲದ ಮರದ ಬಳಿ ಫಾರ್ಮ್‌ಹೌಸ್ ಹೊಂದಿದ್ದಾರೆ. ಇದರ ಸುತ್ತ ನಾಲ್ಕು ಎಕರೆ ಭೂಮಿ ಗಿಡ-ಮರಗಳಿಂದ ತುಂಬಿದೆ.

ಪುನೀತ್ ರಾಜ್‌ಕುಮಾರ್

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಬಹಳ ವರ್ಷಗಳ ಹಿಂದೆ ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ ಮಂಚನಾಯಕನಹಳ್ಳಿ ಬಳಿ ಸುಮಾರು 16 ಎಕರೆ ಜಮೀನು ಖರೀದಿ ಮಾಡಿದ್ದರು. ಅಲ್ಲಿ ಫಾರ್ಮ್‌ಹೌಸ್ ನಿರ್ಮಾಣ ಮಾಡಬೇಕೆಂಬುದು ಅವರ ಕನಸಾಗಿತ್ತು. ಬೆಂಗಳೂರು-ಮೈಸೂರು ಹೆದ್ದಾರಿ ನಿರ್ಮಾಣಕ್ಕಾಗಿ ಆ ಜಾಗದಲ್ಲಿ ಕೊಂಚ ಹೋಗಿತ್ತು. ಇದಾದ ಬಳಿಕವೂ ಅಪ್ಪು ಫಾರ್ಮ್‌ಹೌಸ್ ನಿರ್ಮಿಸಬೇಕು ಎಂದುಕೊಂಡಿದ್ದರು. ಆದರೆ, ಆ ಆಸೆ ನೆರವೇರಲೇ ಇಲ್ಲ ಎನ್ನಲಾಗುತ್ತೆ.

ಧ್ರುವ ಸರ್ಜಾ

ಆಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ ಅವರು ಕನಕಪುರ ರಸ್ತೆಯ ನೆಲಗುಳಿ ಗ್ರಾಮದಲ್ಲಿ ಫಾರ್ಮ್‌ಹೌಸ್ ಹೊಂದಿದ್ದಾರೆ. ತಮ್ಮ ಫಾರ್ಮ್‌ಹೌಸ್‌ಗೆ ಬೃಂದಾವನ ಅಂತ ಹೆಸರಿಟ್ಟಿರುವ ಧ್ರುವಾ, ತಮ್ಮ ಸಹೋದರ ಚಿರಂಜೀವಿ ಅವರ ಅಂತ್ಯಕ್ರಿಯೇ ಅಲ್ಲಿಯೇ ನೆರವೇರಿಸಿ ಸ್ಮಾರಕ ಕೂಡ  ಕಟ್ಟಿಸಿದ್ದಾರೆ. ಬಿಡುವಿನ ಸಮಯದಲ್ಲಿ ಇಲ್ಲಿಯೇ ಕಾಲ ಕಳೆಯುತ್ತಾರೆ.

ಕಿಶೋರ್

ನಟ ಕಿಶೋರ್ ಅವರು ಕನಕಪುರ ಬಳಿಯ ಕರಿಯಪ್ಪನ ದೊಡ್ಡಿ ಗ್ರಾಮದಲ್ಲಿ ಕೃಷಿಭೂಮಿ ಹೊಂದಿದ್ದಾರೆ. ಕಿಶೋರ್ ಕೃಷಿಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದು, ಬಹುತೇಕ ಸಮಯ ಕೃಷಿಯಲ್ಲೇ ತೊಡಗಿಕೊಳ್ಳುತ್ತಾರೆ. ಒಂದಲ್ಲೊಂದು ರೂಪದಲ್ಲಿ ನಾವೆಲ್ಲ ಕೃಷಿ ಬದುಕಿನಿಂದ ಬಂದವರು. ಭೂಮಿಯ ಬೆಲೆಯೇನು ಅನ್ನೋದು ನಮಗೆಲ್ಲ ಗೊತ್ತಿದೆ. ಭವಿಷ್ಯಕ್ಕೆ ನಾವೇನಾದ್ರೂ ಇಲ್ಲಿ ಬಿಟ್ಟು ಹೋಗಲು ಸಾಧ್ಯವಿದ್ದರೆ ಅದು ಕೃಷಿ ಮೂಲಕ ಎನ್ನುವುದು ನನ್ನ ನಂಬಿಕೆ. ಹಾಗಾಗಿ ನನಗೆ ಮಣ್ಣು ಮತ್ತು ಬಣ್ಣದ ನಡುವೆ ಮಣ್ಣು ಮುಖ್ಯ ಎನಿಸಿತು. ಹಾಗಾಗಿ ಆದು ನನ್ನ ಆದ್ಯತೆ ಆಗಿದೆ ಎಂದು ನಟ ಕಿಶೋರ್‌ ಹೇಳುತ್ತಾರೆ. ಕಿಶೋರ್ ಎಷ್ಟೇ ದೊಡ್ಡ ನಟರಾದರೂ ಸಾಮಾನ್ಯರ ಹಾಗೆ ಬದುಕುತ್ತಾರೆ. ಅವರು ಈವರೆಗೆ ಸಾಕಷ್ಟು ಕಾಡನ್ನು ಬೆಳೆಸಿದ್ದಾರೆ. ಅವರ ತೋಟಕ್ಕೆ ಕರಿಕಾಡು ಎಂದು ಹೆಸರಿಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+