X
ಹೋಮ್ ಚಲನಚಿತ್ರಗಳ ಒಳನೋಟ

ಶ್ವೇತಾ ಪ್ರಸಾದ್ ಟು ಸುದರ್ಶನ್ ರಂಗಪ್ರಸಾದ್: ಕಿರುತೆರೆ ಎಂಟ್ರಿಕೊಡುವ ಮುನ್ನ ಬೇರೆ ಉದ್ಯೋಗದಲ್ಲಿದ್ದ ನಟ-ನಟಿಯರಿವರು!

Author Sowmya Bairappa | Published: Tuesday, February 20, 2024, 05:04 PM [IST]

ಕೆಲವರಿಗೆ ಬಾಲ್ಯದಿಂದಲೇ ನಟರಾಗಬೇಕು, ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಮಿಂಚಬೇಕು ಅಂತ ಆಸೆ ಇರುತ್ತೆ. ಆದರೆ, ಅವಕಾಶಗಳ ಕೊರತೆಯೋ ಅಥವಾ ಕಾರಾಣಾಂತರಗಳಿಂದ ತಮ್ಮ ಕನಸು ಮರೆತು ಉದ್ಯೋಗದತ್ತ ಮುಖ ಮಾಡಿರುತ್ತಾರೆ. ಸ್ಪಲ್ಪ ಸಮಯ ಉದ್ಯೋಗ ಮಾಡಿ ನಂತರ ನಟನೆಗೆ ಎಂಟ್ರಿ ಕೊಡುವವರು ಇದ್ದಾರೆ. ಇಲ್ಲಿ ಕನ್ನಡ ಕಿರುತೆರೆ ಫೇಮಸ್ ನಟರು ಕಿರುತೆರೆಗೆ ಬರುವ ಮುನ್ನ ಯಾವ ಉದ್ಯೋಗ ಮಾಡುತ್ತಿದ್ದರು ಎಂಬ ಮಾಹಿತಿ ನೀಡಲಾಗಿದೆ.


cover image
ಶಶಿರಾಜ್‌

ನಟ ಶಶಿರಾಜ್‌ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸತ್ಯ' ಸೀರಿಯಲ್‌ನಲ್ಲಿ 'ಬಾಲಾ' ಎಂಬ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಇವರು ಕನ್ನಡ ಕಿರುತೆರೆಗೆ ಕಾಲಿಡುವ ಮುನ್ನ ಇನ್ಫೋಸಿಸ್ ಕಂಪನಿಯಲ್ಲಿ ಹೆಚ್‌ಆರ್ ಆಪರೇಷನ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಬಾಲ್ಯದಿಂದಲೂ ನಟನೆ ಬಗ್ಗೆ ಸಾಕಷ್ಟು ಆಸಕ್ತಿ ಹೊಂದಿದ್ದ ಇವರು, ಕೆಲ ನಾಟಕಗಳನ್ನು ಮಾಡಿದ್ದರು. ಸತ್ಯ ಧಾರಾವಾಹಿಯಲ್ಲಿ ಬ್ಯುಸಿಯಾದ ಮೇಲೆ ಅವರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದರು. 

 

ರಚನಾ ದಶರಥ್

ನಟಿ ರಚನಾ ದಶರತ್ ಕನ್ನಡ ಕಿರುತೆರೆ ಹಾಗೂ ಚಿತ್ರರಂಗ ಎರಡರಲ್ಲೂ ಗುರುತಿಸಿಕೊಂಡಿದ್ದಾರೆ. ಮೂಲತಃ ನೇಪಾಳಿ ಕುಟುಂಬಕ್ಕೆ ಸೇರಿದವರಾದ ರಚನಾ, ಕನ್ನಡವನ್ನೇ ತನ್ನ ಮಾತೃಭಾಷೆಯೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಎಂಬಿಎ ಇನ್ ಎಚ್‌ಆರ್ ವ್ಯಾಸಂಗ ಮಾಡಿರುವ ಇವರು, ನಟನೆಗೆ ಎಂಟ್ರಿ ಕೊಡುವ ಮುನ್ನ ಅವರು ಎಂಎನ್‌ಸಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ನಂತರ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟು, ಮುಂದೆಗೆ ನಟನೆಗೆ ಎಂಟ್ರಿಕೊಟ್ಟರು. 

ಲೋಕೇಶ್ ಬಸವಟ್ಟಿ

ಸಾಕಷ್ಟು ಸಿನಿಮಾ ಹಾಗೂ ಸೀರಿಯಲ್‌ಗಳಲ್ಲಿ ಮಿಂಚಿರುವ ನಟ ಲೋಕೇಶ್ ಬಸವಟ್ಟಿ, ಐಟಿಐ ಓದಿಕೊಂಡಿದ್ದಾರೆ. ಇವರು ನಟನೆ ಆರಂಭಿಸುವ ಮುನ್ನ ಎಲ್ & ಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. 

ಶ್ವೇತಾ ಪ್ರಸಾದ್

ಶ್ವೇತಾ ಪ್ರಸಾದ್ ಜೀ ಕನ್ನಡದಲ್ಲಿ ಪ್ರಸಾರವಾದ `ಶ್ರೀರಸ್ತು ಶುಭಮಸ್ತು' ಧಾರಾವಾಹಿ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಪರಿಚಿತರಾದರು. ಮೂಲತಃ ಶಿವಮೊಗ್ಗದವರಾದ ಇವರು ಆರ್.ವಿ.ಇಂಜಿನಿಯರಿಂಗ್ ಕಾಲೇಜಿನಲ್ಲಿ ಆರ್ಕಿಟೆಕ್ಚೆರ್ ವಿಭಾಗದಲ್ಲಿ ಪದವಿ ಪಡೆದಿದ್ದರು. ನಂತರ ಆರ್ಕಿಟೆಕ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಒಂದು ದಿನ ಪೇಸ್‌ಬುಕ್‌ನಲ್ಲಿ ಇವರ ಫೋಟೋ ನೋಡಿದ ನಿರ್ಮಾಪಕಿ ಶೃತಿ ನಾಯ್ಡು ತಮ್ಮ ಮುಂದಿನ ಸೀರಿಯಲ್‌ನಲ್ಲಿ ನಟಿಸಲು ಆಫರ್ ನೀಡಿದರೂ, ಮೊದಮೊದಲು ನಿರಾಕರಿಸಿದರೂ ಪತಿಯ ಪ್ರೋತ್ಸಾಹದಿಂದ ನಟಿಸಿಲು ಒಪ್ಪಿಕೊಂಡರು. 

 

ದಿಲೀಪ್ ಶೆಟ್ಟಿ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ನೀನಾದೆ ನಾ' ಧಾರಾವಾಹಿಯಲ್ಲಿ ನಟಿಸುತ್ತಿರುವ ನಟ ದಿಲೀಪ್ ಶೆಟ್ಟಿ, ನಟನೆಗೆ ಬರುವ ಮುನ್ನ ಎಂಎನ್‌ಸಿ ಕಂಪನಿಯೊಂದರಲ್ಲಿ ಅಕೌಂಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.  

 

ಸುದರ್ಶನ್ ರಂಗಪ್ರಸಾದ್

ನಟ ಸುದರ್ಶನ್ ರಂಗಪ್ರಸಾದ್, ನಟನೆಗೆ ಬರುವ ಮುನ್ನ ಐಟಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ವಾರದ ಐದು ದಿನಗಳ ಕಾಲ ಟೆಕ್ಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸುದರ್ಶನ್‌ಗೆ ಬರೀ ಒಂದೇ ಕೆಲಸಕ್ಕೆ ಸ್ಟಿಕ್ ಆನ್ ಆಗಿರಲು ಮನಸ್ಸಿರಲಿಲ್ಲ. ಅದೇ ಕಾರಣದಿಂದ ವಾರಾಂತ್ಯದಲ್ಲಿ ಸ್ಟ್ಯಾಂಡಪ್ ಕಾಮಿಡಿ ಮಾಡುತ್ತಿದ್ದರು. ಕಳೆದ 6-7 ವರ್ಷದಿಂದ ಸ್ಟ್ಯಾಂಡಪ್ ಕಾಮಿಡಿ ಅನ್ನು ಮಾಡುತ್ತಿದ್ದ ಸುದರ್ಶನ್ ರಂಗಪ್ರಸಾದ್ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಭಾಗ್ಯಲಕ್ಷ್ಮೀ' ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟರು.

ಕಾರ್ತಿಕ್ ಜಯರಾಂ

ನಟ ಕಾರ್ತಿಕ್ ಜಯರಾಂ ನಟನೆಗೆ ಬರುವ ಮುನ್ನ ದುಬೈನಲ್ಲಿ ಸ್ಟ್ರಕ್ಚರಲ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸರಾವಾದ 'ಅಶ್ವಿನಿ' ನಕ್ಷತ್ರ ಧಾರವಾಹಿ ಮೂಲಕ ಸೂಪರ್ ಸ್ಟಾರ್ ಜೆಕೆಯಾಗಿ ಎಲ್ಲರಿಗೂ ಪರಿಚಿತಗೊಂಡರು. ಇವರು ಹಲವು ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+