X
ಹೋಮ್ ಚಲನಚಿತ್ರಗಳ ಒಳನೋಟ

ಬಾಲಿವುಡ್ ಸಿನಿಮಾಗಳನ್ನು ತಿರಸ್ಕರಿಸಿದ 8 ಸೌತ್ ಸ್ಟಾರ್ ನಟ-ನಟಿಯರ ಪಟ್ಟಿ ಇಲ್ಲಿದೆ.

Author Sowmya Bairappa | Published: Friday, June 9, 2023, 03:09 PM [IST]

ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಸಿನಿಮಾಗಳಿಗಿಂತ ಸೌತ್ ಸಿನಿಮಾಗಳೇ ಹೆಚ್ಚು ಸದ್ದು ಮಾಡುತ್ತಿವೆ. ದಕ್ಷಿಣ ಭಾರತದ ಸಿನಿಮಾಗಳ ಮುಂದೆ ಬಾಲಿವುಡ್ ಚಿತ್ರಗಳು ಮಕಾಡೇ ಮಲಗಿವೆ. ಒಂದು ಸಿನಿಮಾ ಬ್ಲಾಕ್‌ಬಸ್ಟರ್ ಆಗುತ್ತಿದ್ದಂತೆ ಈ ಚಿತ್ರದ ನಟ-ನಟಿಯರಿಗೂ ಬೇಡಿಕೆ ಹೆಚ್ಚಾಗುತ್ತದೆ. ಅವರ ಭಾಷೆಯಲ್ಲದೇ ಬೇರೆ ಚಿತ್ರರಂಗದಿಂದಲೂ ಸಾಕಷ್ಟು ಆಫರ್‌ಗಳು ಬರುತ್ತಿವೆ. ಹೀಗೆ, ಬಾಲಿವುಡ್ ಸಿನಿಮಾಗಳನ್ನು ತಿರಸ್ಕರಿಸಿದ ದಕ್ಷಿಣ ಭಾರತದ ಸ್ಟಾರ್ ನಟರ ಪಟ್ಟಿ ಇಲ್ಲಿದೆ.


cover image
ಪುನೀತ್ ರಾಜ್ ಕುಮಾರ್

ಹಿಂದಿಯ 'ಭಜರಂಗಿ ಭಾಯಿಜಾನ್' ಸಿನಿಮಾಗಾಗಿ ಮೊದಲು ಕನ್ನಡದ ನಟ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರನ್ನು ಕೇಳಲಾಗಿತ್ತು. ಆದರೆ, ಕಾರಣಾಂತರಗಳಿಂದ ಅವರು ಸಿನಿಮಾ ಮಾಡಲಾಗಲಿಲ್ಲ ಎಂದಿದ್ದರು. ಬಳಿಕ ಸಲ್ಮಾನ್‌ ಖಾನ್ ಈ ಚಿತ್ರದಲ್ಲಿ ನಟಿಸಿದ್ದರು. ಭಜರಂಗಿ ಭಾಯಿಜಾನ್ ಸಿನಿಮಾವನ್ನು ಕನ್ನಡ ಖ್ಯಾತ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ನಿರ್ಮಿಸಿದ್ದರು. ಈ ವಿಷಯ ಹಲವರಿಗೆ ತಿಳಿದಿಲ್ಲ. ಈ ಹಿಂದೆ  'ಭಜರಂಗಿ ಭಾಯಿಜಾನ್'  ಸಿನಿಮಾದ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ರಾಕ್‌ಲೈನ್ ವೆಂಕಟೇಶ್, ಆರಂಭದಲ್ಲಿ ಸಲ್ಮಾನ್ ಖಾನ್‌ ಪಾತ್ರವನ್ನು ನಿರ್ವಹಿಸಲು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರಿಗೆ ಕೇಳಲಾಗಿತ್ತು. ಆದರೆ, ಅವರು ಈ ಸಿನಿಮಾ ಮಾಡಲಿಲ್ಲ ಎಂದಿದ್ದರು. 

ಯಶ್

ಯಶ್ ಸಿನಿಜೀವನದ ಕಳಸಪ್ರಾಯ ಚಿತ್ರ ಕೆಜಿಎಫ್. ಈ ಸಿನಿಮಾ ಬಳಿಕ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದು, ಎಲ್ಲಾ ಚಿತ್ರರಂಗದಿಂದಲೂ ಅವರಿಗೆ ಬೇಡಿಕೆ ಹೆಚ್ಚಾಗಿದೆ. ಮೂಲಗಳ ಪ್ರಕಾರ  ೨೦೧೯ರಲ್ಲಿ ಬಿಡುಗಡೆಯಾದ ಲಾಲ್ ಕಪ್ತಾನ್ ಸಿನಿಮಾಗಾಗಿ ಯಶ್ ಅವರನ್ನು ಕೇಳಲಾಗಿತ್ತು. ಆದರೆ, ಯಶ್ ಈ ಸಿನಿಮಾ ಒಪ್ಪಿಕೊಳ್ಳಲಿಲ್ಲ. ಬಳಿಕ ಸೈಫ್ ಅಲಿ ಖಾನ್ ಆ ಪಾತ್ರ ನಿರ್ವಹಿಸಿದ್ದರು. 

 

ದರ್ಶನ್

ಸಲ್ಮಾನ್ ಖಾನ್ ನಟನೆಯ ದಬಾಂಗ್ 3 ಚಿತ್ರದಲ್ಲಿ ಖಳನಾಯಕನ ಪಾತ್ರಕ್ಕೆ ಮೊದಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಕೇಳಲಾಗಿತ್ತು. ಆದರೆ, ದರ್ಶನ್ ಈ ಸಿನಿಮಾದಲ್ಲಿ ನಟಿಸಲು ನಿರಾಕರಿಸಿದರು. ಬಳಿಕ ಕಿಚ್ಚ ಸುದೀಪ್ ಮುಖ್ಯ ಖಳನಾಯಕ ಬಾಲಿ ಸಿಂಗ್ ಪಾತ್ರದಲ್ಲಿ ನಟಿಸಿದರು. ಈ ಚಿತ್ರದ ಕನ್ನಡ ಡಬ್ ವರ್ಷನ್‌ಗಳಲ್ಲಿ ಸುದೀಪ್ ಮತ್ತು ಸಲ್ಮಾನ್ ಖಾನ್ ಧ್ವನಿ ನೀಡಿದ್ದರು.

 

ಫಾಹದ್ ಫಾಸಿಲ್

ಮಲಯಾಳಂ ನಟ ಫಾಹದ್ ಫಾಸಿಲ್ ಉತ್ತಮ ಕಂಟೆಂಟ್ ಸಿನಿಮಾಗಳಿಗೆ ಹೆಸರಾಗಿದ್ದಾರೆ. ಬಾಲಿವುಡ್ ನಿರ್ದೇಶಕ ವಿಶಾಲ್ ಭಾರಾಧ್ವಾಜ್ ತಮ್ಮ ಸಿನಿಮಾವೊಂದಕ್ಕೆ ಫಾಹದ್ ಫಾಸಿಲ್ ಅವರಿಗೆ ಆಫರ್ ನೀಡಿದ್ದರು ಎಂದು ಈ ಹಿಂದೆ ಸುದ್ದಿಯಾಗಿತ್ತು. ಆದರೆ, ಕಾರಣಾಂತರಗಳಿಂದ ಆ ಸಿನಿಮಾ ಮಾಡಲೇ ಇಲ್ಲ. 

 

ಅನುಷ್ಕಾ ಶೆಟ್ಟಿ

ಎಸ್.ಎಸ್.ರಾಜಮೌಳಿ ನಿರ್ದೇಶನದ ಬಾಹುಬಲಿ ಸಿನಿಮಾ ಬ್ಲಾಕ್‌ಬಸ್ಟರ್ ಬಳಿಕ ನಟಿ ಅನುಷ್ಕಾ ಶೆಟ್ಟಿಗೆ ಸಾಲು-ಸಾಲು ಆಫರ್‌ಗಳು ಬಂದಿದ್ದವು. ಹಲವು ಬಾಲಿವುಡ್ ಸಿನಿಮಾ ಆಫರ್‌ಗಳು ಬಂದಿದ್ದವು. ನಿರ್ದೇಶಕ ರೋಹಿತ್ ಶೆಟ್ಟಿ ಅವರು 2011ರಲ್ಲಿ ಸಿಂಗಂ ಸಿನಿಮಾಗಾಗಿ ಅನುಷ್ಕಾ ಶೆಟ್ಟಿಯವರಿಗೆ ಆಫರ್ ನೀಡಿದ್ದರು. ಆದರೆ, ಅನುಷ್ಕಾ ಈ ಚಿತ್ರ ಒಪ್ಪಿಕೊಳ್ಳಲಿಲ್ಲ. ಬಳಿಕ ಕಾಜಲ್ ಅಗರ್‌ವಾಲ್ ಆ ಪಾತ್ರ ನಿರ್ವಹಿಸಿದ್ದರು. 

ಮಹೇಶ್ ಬಾಬು

ಬಾಲನಟನಾಗಿ ಟಾಲಿವುಡ್ ಚಿತ್ರರಂಗಕ್ಕೆ ಕಾಲಿಟ್ಟ ಮಹೇಶ್ ಬಾಬು ಇಂದು ಸ್ಟಾರ್ ನಟನಾಗಿ ಗುರುತಿಸಿಕೊಂಡಿದ್ದಾರೆ. ಇವರಿಗೆ ಅನಿಮಲ್, ಘಜಿನಿ ಹಾಗೂ ಕರಣ್ ಜೋಹರ್ ಅವರ ಸಿನಿಮಾಗಲ್ಲಿ ನಟಿಸಲು ಆಫರ್ ಬಂದಿತ್ತು. ಆದರೆ, ಮಹೇಶ್ ಬಾಬು ಈ ಸಿನಿಮಾಗಳಲ್ಲಿ ನಟಿಸಲು ಒಪ್ಪಿಕೊಳ್ಳಲಿಲ್ಲ. ಅವರು ಟಾಲಿವುಡ್ ಬಿಟ್ಟು ಬೇರೆ ಭಾಷೆಯ ಸಿನಿಮಾಗಳಲ್ಲಿ ನಟಿಸದಿರಲು ನಿರ್ಧರಿಸಿದ್ದಾರೆ.

ನಯನತಾರ

ಮೂಲಗಳ ಪ್ರಕಾರ, ರೋಹಿತ್ ಶೆಟ್ಟಿ ನಿರ್ದೇಶನದ ಚನೈ ಎಕ್ಸ್‌ಪ್ರೆಸ್ ಸಿನಿಮಾದಲ್ಲಿ ಅತಿಥಿ ಪಾತ್ರವೊಂದಕ್ಕೆ ತಮಿಳು ನಟಿ ನಯನಾತಾರ ಅವರನ್ನು ಕೇಳಲಾಗಿತ್ತು. ಶಾರುಖ್ ಜೊತೆ ಒನ್ ಟು ತ್ರಿ ಫರ್ ಹಾಡಿನಲ್ಲಿ ನಟಿಸಲು ಆಫರ್ ನೀಡಲಾಗಿತ್ತು.  ಆದರೆ, ನಯನಾತಾರ ಈ ಆಫರ್ ತಿರಸ್ಕರಿಸಿದ್ದರು. ಬಳಿಕ ಪ್ರಿಯಾಮಣಿ ಆ ಹಾಡಿನಲ್ಲಿ ಕಾಣಿಸಿಕೊಂಡಿದ್ದರು. 

ಅಲ್ಲು ಅರ್ಜುನ್

ಪುನೀತ್ ರಾಜ್‌ಕುಮಾರ್ ಬಳಿಕ 'ಭಜರಂಗಿ ಭಾಯಿಜಾನ್' ಸಿನಿಮಾಗಾಗಿ ಅಲ್ಲು ಅರ್ಜುನ್ ಅವರನ್ನು ಕೇಳಲಾಗಿತ್ತು. ಅಲ್ಲು ಕೂಡ ಈ ಸಿನಿಮಾ ರಿಜೆಕ್ಟ್ ಮಾಡಿದ್ದರು. ಮೂಲಗಳ ಪ್ರಕಾರ, ರಣವೀರ್ ಸಿಂಗ್ ನಟನೆಯ ೮೩ ಚಿತ್ರದಲ್ಲಿ ನಟಿಸಲು ಅಲ್ಲು ಅರ್ಜುನ್‌ಗೆ ಆಫರ್ ಬಂದಿತ್ತಂತೆ. ಹಲವು ಬಾಲಿವುಡ್‌ ಸಿನಿಮಾ ಆಫರ್‌ಗಳು ಬಂದಿರುವುದಾಗಿ ಅಲ್ಲು ಅರ್ಜುನ್ ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ್ದರು. 

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+