X
ಹೋಮ್ ಚಲನಚಿತ್ರಗಳ ಒಳನೋಟ

2024ರಲ್ಲಿ ಮುಕ್ತಾಯಗೊಂಡ ಕನ್ನಡದ ಟಾಪ್ 10 ಸೀರಿಯಲ್‌ಗಳ ಪಟ್ಟಿ ಇಲ್ಲಿದೆ.

Author Sowmya Bairappa | Published: Monday, December 16, 2024, 02:39 PM [IST]

ಕನ್ನಡ ಕಿರುತೆರೆಯಲ್ಲಿ ಸದ್ಯ ಭಿನ್ನ-ವಿಭಿನ್ನ ಕಥೆಯುಳ್ಳ ಧಾರಾವಾಹಿಗಳು ಪ್ರಸಾರವಾಗುತ್ತಿವೆ. ಹಿಂದೆಲ್ಲಾ ಒಂದು ಸೀರಿಯಲ್ ಆರಂಭವಾದರೆ, ನಾಲ್ಕೈದು ವರ್ಷಗಳ ಕಾಲ ಪ್ರಸಾರವಾಗುತ್ತಿತ್ತು. ಈಗ ಹಾಗಲ್ಲ, ಹೊಸ ಧಾರಾವಾಹಿಗಳು ಕೂಡ ಬಹುಬೇಗ ಮುಕ್ತಾಯಗೊಳ್ಳುತ್ತಿವೆ. ಅದಕ್ಕೆ ಕಾರಣ ಏನೆಂಬುದು ಯಾರಿಗೂ ಗೊತ್ತಿಲ್ಲ. ಕೆಲ ಧಾರಾವಾಹಿಗಳು ಟಿಆರ್‌ಪಿ ಇಲ್ಲದೇ ಮುಕ್ತಾಯಗೊಂಡರೆ, ಇನ್ನು ಕೆಲವು ರಿಯಾಲಿಟಿ ಶೋ ಕಾರಣದಿಂದ ಅಂತ್ಯಗೊಳ್ಳುತ್ತವೆ. ಇಲ್ಲಿ 2024ರಲ್ಲಿ ಮುಕ್ತಾಯಗೊಂಡ ಕನ್ನಡದ ಟಾಪ್ ಸೀರಿಯಲ್‌ಗಳ ಪಟ್ಟಿಯನ್ನು ನೀಡಲಾಗಿದೆ.


cover image
ಪಾರು

ಕಳೆದ ಆರು ವರ್ಷಗಳಿಂದ ಕನ್ನಡ ಕಿರುತೆರೆ ವೀಕ್ಷಕರಿಗೆ ಭರಪೂರ ಮನೋರಂಜನೆ ನೀಡಿದ್ದ 'ಪಾರು' ಸೀರಿಯಲ್ 2024ರ ಮಾರ್ಚ್‌ ತಿಂಗಳಲ್ಲಿ ಮುಕ್ತಾಯಗೊಂಡಿತ್ತು.  2018ರಲ್ಲಿ ಆರಂಭವಾಗಿದ್ದ ಈ ಧಾರಾವಾಹಿ, ಉತ್ತಮ ಕಥೆ, ಚಿತ್ರಕಥೆ, ಟ್ವಿಸ್ಟ್ ಹಾಗೂ ಪಾತ್ರಧಾರಿಗಳ ಮೂಲಕ ಸಿಕ್ಕಾಪಟ್ಟೆ ಗಮನ ಸೆಳೆದಿತ್ತು. ಮೋಕ್ಷಿತಾ ಪೈ 'ಪಾರು' ಪಾತ್ರದಲ್ಲಿ ನಟಿಸಿದ್ದ ಈ ಧಾರಾವಾಹಿಯಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಟಿ ವಿನಯ ಪ್ರಸಾದ್ 'ಅಖಿಲಾಂಡೇಶ್ವರಿ' ಎಂಬ ಮಾತ್ರದ ಮೂಲಕ ಮೋಡಿ ಮಾಡಿದ್ದರು. ಉಳಿದಂತೆ ಶರತ್ ಪದ್ಮನಾಭ್, ಸಿದ್ದು ಮೂಲಿಮನಿ, ಪವಿತ್ರಾ ನಾಯ್ಕ್, ನಾಗೇಂದ್ರ ಶಾ, ನಾಗೇಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಗೀತಾ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಮನೋರಂಜನೆ ನೀಡುತ್ತಿದ್ದ 'ಗೀತಾ' ಧಾರಾವಾಹಿ ಮಾರ್ಚ್ ಕೂಡ ತಿಂಗಳಲ್ಲಿ ಮುಕ್ತಾಯಗೊಂಡಿದೆ. 2020ರಲ್ಲಿ ಆರಂಭವಾಗಿದ್ದ ಈ ಸೀರಿಯಲ್ 1107 ಸಂಚಿಕೆಗಳನ್ನು ಪೂರೈಸಿತ್ತು. ಗೀತಾ ಧಾರಾವಾಹಿಯಲ್ಲಿ ಭವ್ಯಾ ಗೌಡ ಹಾಗೂ ಧನುಷ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಆರಂಭದಲ್ಲಿ ಹೂ ಮಾರುವ ಹುಡುಗಿ ಗೀತಾ ಮತ್ತು ಮಂತ್ರಿಯೊಬ್ಬರ ಸೊಕ್ಕಿನ ಮಗ ವಿಜಯ್ ಪರಸ್ಪರ ದ್ವೇಷ, ಗಲಾಟೆ, ಜಗಳದಿಂದಲೇ ಆರಂಭವಾಗಿ, ಬಳಿಕ ವಿಜಯ್ ಬದಲಾಗುವ ಕಥೆಯಿತ್ತು. ಜೊತೆಗೆ ಆರಂಭದಿಂದಲೂ ಹಲವು ಟ್ವಿಸ್ಟ್‌ಗಳನ್ನು ಹೊತ್ತು ತಂದಿತ್ತು.

ಗಟ್ಟಿಮೇಳ

ಜೀ ಕನ್ನಡ ವಾಹಿಯಲ್ಲಿ ಪ್ರಸಾರವಾದ ಮತ್ತೊಂದು ಜನಪ್ರಿಯ ಧಾರಾವಾಹಿ ಗಟ್ಟಿಮೇಳ. ಈ ಸೀರಿಯಲ್‌ನಲ್ಲಿನ ವೇದಾಂತ್ ಹಾಗೂ ಅಮೂಲ್ಯ ಪಾತ್ರಗಳು ಸಿಕ್ಕಾಪಟ್ಟೆ ಫೇಮಸ್ ಆಗಿದ್ದವು.  ಕನ್ನಡ ಕಿರುತೆರೆಯಲ್ಲಿ ದೀರ್ಘಾವಧಿಯಿಂದ ಪ್ರಸಾರವಾಗುತ್ತಿದ್ದ ಸೀರಿಯಲ್‌ಗಳಲ್ಲಿ ಒಂದಾಗಿದ್ದ 'ಗಟ್ಟಿಮೇಳ' 2024ರ ಜನವರಿ ತಿಂಗಳಲ್ಲಿ ಮುಕ್ತಾಯಗೊಂಡಿತು.

ಹಿಟ್ಲರ್ ಕಲ್ಯಾಣ

ಎಡವಟ್ಟು ರಾಣಿ ಲೀಲಾ ಹಾಗೂ ಬ್ಯುಸಿನೆಸ್ ಮ್ಯಾನ್ ಎಜೆ ಮದುವೆ ಕಥೆಯಿಂದ ಆರಂಭವಾಗಿದ್ದ 'ಹಿಟ್ಲರ್ ಕಲ್ಯಾಣ' ಧಾರಾವಾಹಿ ಕೂಡ ಕೆಲ ತಿಂಗಳ ಹಿಂದೆ ಮುಕ್ತಾಯಗೊಂಡಿದೆ. ಸುಮಾರು ಎರಡೂವರೆ ವರ್ಷಗಳಿಂದ ಪ್ರಸಾರವಾಗುತ್ತಿದ್ದ ಈ ಸೀರಿಯಲ್ ಕಥೆ ಮತ್ತು ಪಾತ್ರಗಳಿಂದ ಅಪಾರ ಜನಪ್ರಿಯತೆ ಪಡೆದುಕೊಂಡಿತ್ತು. ನಟ ದಿಲೀಪ್ ರಾಜ್ ಹಾಗೂ ಮಲೈಕಾ ವಸುಪಾಲ್ ಮುಖ್ಯ ಭೂಮಿಕೆಯಲ್ಲಿ  ಹಿಟ್ಲರ್ ಕಲ್ಯಾಣ 694 ಸಂಚಿಕೆ ಪೂರೈಸಿತ್ತು. ಆದರೆ, 2024ರ ಮಾರ್ಚ್ 14ರಂದು ತರಾತುರಿಯಲ್ಲಿ ಮುಕ್ತಾಯಗೊಳಿಸಲಾಗಿತ್ತು. ಪ್ರೇಕ್ಷಕರಿಗೆ ಕ್ಲೈಮ್ಯಾಕ್ಸ್‌ ಬಗ್ಗೆ ಅಸಮಾಧಾನವಿತ್ತು.   

ಬೃಂದಾವನ

2023ರ ಅಕ್ಟೋಬರ್ 23ರಂದು ಬಹು ತಾರಾಗಣವಿರುವ 'ಬೃಂದಾವನ' ಎಂಬ ಧಾರಾವಾಹಿ ಆರಂಭವಾಗಿತ್ತು. ಕನ್ನಡ ಕಿರುತೆರೆಗೆ ಹಲವು ಸೂಪರ್ ಹಿಟ್ ಧಾರಾವಾಹಿಗಳನ್ನು ತಂದ ರಾಮ್‌ ಜಿ ನಿರ್ದೇಶನದ ಬೃಂದಾವನ 2024ರ ಮೇ 24ರಂದು ಅಂತಿಮ ಸಂಚಿಕೆ ಪ್ರಸಾರ ಕಂಡಿತು. ಅಮೂಲ್ಯ ಭಾರಧ್ವಾಜ್ ಹಾಗೂ ವರುಣ್ ಆರಾಧ್ಯ ಮುಖ್ಯಭೂಮಿಕೆಯಲ್ಲಿದ್ದ ಈ ಸಿರಿಯಲ್ 167 ಸಂಚಿಕೆಗಳನ್ನು ಪೂರೈಸಿತ್ತು. ಒಂದು ವರ್ಷದೊಳಗೆ ಈ ಧಾರಾವಾಹಿ ಮುಕ್ತಾಯವಾಗಲು ಟೆಕ್ನಿಕಲ್ ಸಮಸ್ಯೆಗಳಿವೆ ಎಂದು ನಿರ್ದೇಶಕರು ಹೇಳಿದ್ದರು.


ಅಂತರಪಟ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಅಂತರಪಟ' ಸೀರಿಯಲ್ ಬಿಗ್‌ಬಾಸ್ ಸೀಸನ್ ೧೧ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಮುಕ್ತಾಯಗೊಂಡಿತ್ತು. 2023ರ ಏಪ್ರಿಲ್ ತಿಂಗಳಲ್ಲಿ ಆರಂಭವಾಗಿದ್ದ ಈ ಸೀರಿಯಲ್‌ನಲ್ಲಿ ತನ್ವಿ ಬಾಲರಾಜ್, ಚಂದನ್ ಗೌಡ, ಮಂಜು ಪಾವಗಡ, ಎಸ್ ನಾರಾಯಣ್, ಜ್ಯೋತಿ ಕಿರಣ್ ಮುಂತಾದವರು ನಟಿಸಿದ್ದರು.

ಚುಕ್ಕಿತಾರೆ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸರಾ ಕಂಡಿದ್ದ ತಂದೆ-ಮಗಳ ಬಾಂಧವ್ಯದ ಕಥೆ ಹೊಂದಿದ್ದ 'ಚುಕ್ಕಿತಾರೆ' ಪ್ರೇಕ್ಷಕರ ಮನಗೆದ್ದಿತ್ತು. ಈ ಧಾರಾವಾಹಿಯಲ್ಲಿ ಸೂಪರ್ ಹಿಟ್ ಹಾಡುಗಳ ಮೂಲಕ ಗಮನ ಸೆಳೆದಿದ್ದ ಗಾಯಕ ನವೀನ್ ಸಜ್ಜು ಅಪ್ಪನಾಗಿ ನಟಿಸಿದ್ರೆ, ಮಗಳ ಪಾತ್ರದಲ್ಲಿ ನಮ್ಮಮ್ಮ ಸೂಪರ್ ಸ್ಟಾರ್ ಖ್ಯಾತಿಯ ಮಹಿತಾ ಕಾಣಿಸಿಕೊಂಡಿದ್ದರು. ಉಳಿದಂತೆ ವಿಶಾಲ್ ಹೆಗಡೆ, ಪುಟಾಣಿ ಸ್ಫೂರ್ತಿಮ, ಜಯಶ್ರೀ ರಾಜ್, ದಿವ್ಯಶ್ರೀ ಗ್ರಾಮ ಮುಂತಾದವರು ನಟಿಸಿದ್ದರು. 2024ರ ಮಾರ್ಚ್‌ ತಿಂಗಳಲ್ಲಿ ಆರಂಭಗೊಂಡಿದ್ದ ಈ ಸೀರಿಯಲ್ ಕೆಲವೇ ದಿನಗಳಲ್ಲೇ ಮುಕ್ತಾಯಗೊಂಡಿತ್ತು.

ಸತ್ಯ

ಬಿಗ್‌ಬಾಸ್ ಕನ್ನಡ ಸೀಸನ್ 11ರ ಖ್ಯಾತಿಯ ಗೌತಮಿ ಜಾದವ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದ 'ಸತ್ಯ' ಧಾರಾವಾಹಿ ಕೂಡ 2024ರ ಆಗಸ್ಟ್ ತಿಂಗಳಲ್ಲಿ ಮುಕ್ತಾಯಗೊಂಡಿದೆ. 2020ರ ಡಿಸೆಂಬರ್ ತಿಂಗಳಲ್ಲಿ ಆರಂಭವಾದ ಈ ಧಾರಾವಾಹಿ, ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಈ ಸೀರಿಯಲ್‌ನಲ್ಲಿ  ಸಾಗರ್ ಬಿಳಿ ಗೌಡ, ಪ್ರಿಯಾಂಕಾ ಶಿವಣ್ಣ, ಗಿರಿಜಾ ಲೋಕೇಶ್ ಮುಂತಾದವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಭೂಮಿಗೆ ಬಂದ ಭಗವಂತ

2023ರ ಮಾರ್ಚ್ 20ರಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ಭೂಮಿಗೆ ಬಂದ ಭಗವಂತ' ಎಂಬ ವಿಭಿನ್ನ ಕಥೆಯುಳ್ಳ ಧಾರಾವಾಹಿ ಕೂಡ ಪ್ರೇಕ್ಷಕರ ಮೆಚ್ಚುಗೆ ಗಳಿಸಿತ್ತು. ಈ ಧಾರಾವಾಹಿಯಲ್ಲಿ ನಟ ನವೀನ್ ಕೃಷ್ಣ, ರಾಧಾಕಲ್ಯಾಣ ಸೀರಿಯಲ್ ಖ್ಯಾತಿಯ ಕೃತಿಕಾ ರವೀಂದ್ರ ನಾಯಕ-ನಾಯಕಿಯಾಗಿ ಕಾಣಿಸಿಕೊಂಡರೆ, ಕಾರ್ತಿಕ್ ಸಾಮಗ್ ದೇವರ ಪಾತ್ರ ನಿರ್ವಹಿಸಿದ್ದರು. ಉಳಿದಂತೆ ಹಿರಿಯ ನಟ ಉಮೇಶ್, ಅಂಕಿತಾ ಜಯರಾಮ್, ಡ್ರಾಮಾ ಜೂನಿಯರ್ಸ್ ಖ್ಯಾತಿಯ ಅನುರಾಗ್, ಎಂ.ಎನ್.ಸುರೇಶ್, ಪವನ್, ಗೌತಮಿ  ಸೇರಿದಂತೆ ಅನೇಕರು ತಾರಾಗಣದಲ್ಲಿದ್ದರು. ಭಗವಂತ ಮತ್ತು ಮನುಷ್ಯನ ಸಂಬಂಧದ ಕಥೆ ಹೊಂದಿದ್ದ ಈ ಸೀರಿಯಲ್  2024ರ ಆಗಸ್ಟ್ ತಿಂಗಳಲ್ಲಿ ಮುಕ್ತಾಯಗೊಂಡಿತ್ತು.

ಕೆಂಡಸಂಪಿಗೆ

2022ರ ಆಗಸ್ಟ್ ತಿಂಗಳಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಆರಂಭವಾಗಿದ್ದ 'ಕೆಂಡಸಂಪಿಗೆ' ಧಾರಾವಾಹಿ 2024ರ ಸೆಪ್ಟಂಬರ್ ತಿಂಗಳಲ್ಲಿ ಮುಕ್ತಾಯಗೊಂಡಿತ್ತು. ತೀರ್ಥಂಕರ್ ಪ್ರಸಾದ್ ಅಗಿ ಆಕಾಶ್, ಸುಮನಾಳಾಗಿ ಮಧುಮಿತಾ, ಕೇಶವ್ ಪ್ರಸಾದ್ ಆಗಿ ದೊಡ್ಡಣ್ಣ, ಸಾಧನಾ ಆಗಿ ಅಮೃತಾ ರಾಮಮೂರ್ತಿ ಕಾಣಿಸಿಕೊಂಡಿದ್ದರು.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+