X
ಹೋಮ್ ಚಲನಚಿತ್ರಗಳ ಒಳನೋಟ

ಕಿಚ್ಚ ಸುದೀಪ್ ಪೊಲೀಸ್ ಪಾತ್ರಗಳಲ್ಲಿ ಅಭಿನಯಿಸಿರುವ ಸಿನಿಮಾಗಳಿವು: ನಿಮ್ಮಿಷ್ಟದ ಸಿನಿಮಾ ಯಾವುದು?

Author Sowmya Bairappa | Updated: Monday, September 23, 2024, 09:50 AM [IST]

ಚಂದನವನದಲ್ಲಿ ಪೊಲೀಸ್ ಪಾತ್ರಗಳಿಗೆ ಗತ್ತು ತಂದು ಕೊಟ್ಟವರು ಶಂಕರ್‌ನಾಗ್. ಆನಂತರ ವಿಷ್ಣುವರ್ಧನ್, ಅಂಬರೀಶ್, ಸಾಯಿಕುಮಾರ್ ಮುಂತಾದವರು ಖಾಕಿ ತೊಟ್ಟು ಮಿಂಚಿದ್ದರು. ಇಂದಿನ ಸ್ಟಾರ್ ನಟರ ಪೈಕಿ ಪೊಲೀಸ್ ಪಾತ್ರಕ್ಕೆ ಹೇಳಿ ಮಾಡಿಸಿದ ಸ್ಟಾರ್ ನಟ ಅಂದರೆ ಅದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್. ಅದರಲ್ಲೂ ಡೈಲಾಗ್ ಡೆಲಿವರಿಯಲ್ಲಿ ಕಿಚ್ಚನಂತಹ ಪವರ್ ಬೇರೆ ಯಾರಿಗಿಲ್ಲ. ಇಲ್ಲಿ ಸ್ಯಾಂಡಲ್‌ವುಡ್ ಬಾದ್‌ಷಾ ಪೊಲೀಸ್ ಪಾತ್ರಗಳಲ್ಲಿ ಅಭಿನಯಿಸಿರುವ ಸಿನಿಮಾಗಳ ಪಟ್ಟಿಯನ್ನು ನೀಡಲಾಗಿದೆ..


cover image
ತಿರುಪತಿ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮೊದಲ ಬಾರಿಗೆ ಖಾಕಿ ತೊಟ್ಟಿದ್ದು ತಿರುಪತಿ ಸಿನಿಮಾದಲ್ಲಿ. ಶಿವಮಣಿ ನಿರ್ದೇಶನದ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾದ ತಿರುಪತಿ (ಸುದೀಪ್) ಕ್ರಿಮಿನಲ್ ಆಗಿರುವ ತನ್ನ ತಂದೆ ಮೈಕಲ್ (ಚರಣ್ ರಾಜ್) ದ್ವೇಷಿಸುತ್ತಿರುತ್ತಾನೆ. ಆದರೆ, ಆತನನ್ನು ನೋಡಿರುವುದಿಲ್ಲ.  ಈ ಮಧ್ಯೆ ತನ್ನ ತಾಯಿಗೆ (ಸುಧಾರಾಣಿ) ಕಿರುಕುಳ ನೀಡಲು ಬಂದ ಮೈಕಲ್‌ ಬಾಸ್‌ನನ್ನು ತಿರುಪತಿ ಕೊಲ್ಲುತ್ತಾನೆ. ಇದರಿಂದ ಕುಪಿತಗೊಂಡ ಮೈಕಲ್ ಪೊಲೀಸ್ ಅಧಿಕಾರಿ ತಿರುಪತಿಯ ಮೇಲೆ ಸೇಡು ತೀರಿಸಿಕೊಳ್ಳಲು ಬಯಸುತ್ತಿರುತ್ತಾನೆ. ಕೊನೆಯಲ್ಲಿ ತನ್ನ ತಾಯಿಯ ಸಹಾಯದಿಂದ ಆತನನ್ನು ಹಿಡಿಯುತ್ತಾನೆ. ಈ ಸಂದರ್ಭದಲ್ಲಿ ಆತನೇ ತನ್ನ ತಂದೆ ಎಂಬ ಸತ್ಯ ರಿವೀಲ್ ಆಗುತ್ತದೆ. 


ಹುಬ್ಬಳ್ಳಿ

2006ರಲ್ಲಿ ತೆರೆಕಂಡ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಮತ್ತೊಂದು ಸಿನಿಮಾ 'ಹುಬ್ಬಳ್ಳಿ'. ಓಂ ಪ್ರಕಾಶ್ ರಾವ್ ನಿರ್ದೇಶನದಲ್ಲಿ ಮೂಡಿಬಂದ `ಹುಬ್ಬಳ್ಳಿ' ಚಿತ್ರದಲ್ಲಿ ಸುದೀಪ್ 'ಎಸಿಪಿ ಅಜಯ್ ಕುಮಾರ್ ಸರನಾಯಕ್' ಪಾತ್ರದಲ್ಲಿ ನಟಿಸಿದ್ದರು. ರಕ್ಷಿತಾ ನಾಯಕಿಯಾಗಿ ನಟಿಸಿದ್ದರು. 


ವೀರ ಮದಕರಿ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ದ್ವಿಪಾತ್ರದಲ್ಲಿ ನಟಿಸಿದ್ದ 'ವೀರ ಮದಕರಿ'  ಚಿತ್ರಮಂದಿರಗಳಲ್ಲಿ ಶತದಿನೋತ್ಸವ ಪೂರೈಸಿತ್ತು. ಸುದೀಪ್ ಅವರೇ ನಿರ್ದೇಶಿಸಿ, ನಟಿಸಿದ್ದ ಈ ಸಿನಿಮಾದ ತೆಲುಗಿನ ವಿಕ್ರಮಾರ್ಕುಡು ರಿಮೇಕ್. ಚಿತ್ರದಲ್ಲಿ ಸುದೀಪ್ 'ಮದಕರಿ ಮತ್ತು ಮುತ್ತತ್ತಿ ಸತ್ಯರಾಜು' ಎಂಬ ಎರಡು ಪಾತ್ರ ಮಾಡಿದ್ದರು. ಒಂದರಲ್ಲಿ  ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದರು. ಒನ್ನೊಂದರಲ್ಲಿ ಕಳ್ಳನ ಪಾತ್ರ ಮಾಡಿದ್ದರು.  ಬಾಕ್ಸಾಫೀಸ್‌ನಲ್ಲೂ ಸಿನಿಮಾ ಸಖತ್ ಸದ್ದು ಮಾಡಿತ್ತು.  


ಕೆಂಪೇಗೌಡ

ತಮಿಳಿನ `ಸಿಂಗಂ' ಚಿತ್ರದ ರಿಮೇಕ್ ಆದ 'ಕೆಂಪೇಗೌಡ' ಸಿನಿಮಾದಲ್ಲಿ ಸುದೀಪ್ ಖಡಕ್ ಪೋಲಿಸ್ ಅಧಿಕಾರಿಯಾಗಿ ಮಿಂಚಿದ್ದರು. ಜೊತೆಗೆ ಈ ಸಿನಿಮಾವನ್ನು ತಾವೇ ನಿರ್ದೇಶನ ಮಾಡಿದ್ದರು. 8 ಕೋಟಿ ಬಜಟ್‌ನಲ್ಲಿ ನಿರ್ಮಿಸಿದ್ದ ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ಸುಮಾರು 38 ಕೋಟಿ ಗಳಿಸಿ ಅದ್ಭುತ ಯಶಸ್ಸು ಕಂಡಿತ್ತು. ಈ ಚಿತ್ರದ ಮೂಲಕ ರವಿಶಂಕರ್ ಎಂಬ ನಟಭಯಂಕರ ಖಳನಾಯಕ ಕನ್ನಡಕ್ಕೆ ದೊರೆತರು. 


ವರದನಾಯಕ

2007ರಲ್ಲಿ ರಿಲೀಸ್ ಆದ ತೆಲುಗಿನ `ಲಕ್ಷಂ' ಚಿತ್ರದ ರಿಮೇಕ್ ವರದನಾಯಕ. ಈ ಸಿನಿಮಾವನ್ನು ಕನ್ನಡದಲ್ಲಿ ಸಾಯಿಕುಮಾರ್ ಸಹೋದರ ಪಿ ಅಯ್ಯಪ್ಪ ಶರ್ಮಾ ನಿರ್ದೇಶಿಸಿದರು. ಈ ಚಿತ್ರದಲ್ಲಿ ಸುದೀಪ್ ಪೊಲೀಸ್ ಅಧಿಕಾರಿ ವರದನಾಯಕನ ಪಾತ್ರದಲ್ಲಿ ನಟಿಸಿದ್ದರೆ, ಚಿರಂಜೀವಿ ಸರ್ಜಾ ಸುದೀಪ್ ತಮ್ಮನ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಕನ್ನಡದಲ್ಲಿ ಕೂಡ ಒಳ್ಳೆಯ ಪ್ರತಿಕ್ರಿಯೆ ಪಡೆದಿತ್ತು. 


ಕಬ್ಜ

ರಿಯಲ್ ಸ್ಟಾರ್ ಉಪೇಂದ್ರ ನಟನೆಯ 'ಕಬ್ಜ' ಸಿನಿಮಾದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಭಾರ್ಗವ್ ಭಕ್ಷಿ ಎಂಬ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ. ಕಬ್ಜದಲ್ಲಿ ಏರ್‌ಪೋರ್ಸ್ ಅಕಾಡೆಮಿ ಅಧಿಕಾರಿ ಅರ್ಕೇಶ್ವರ ಅಂಡರ್‌ವರ್ಲ್ಡ್ ಡಾನ್ ಆಗುವ ಕಥೆಯಿದೆ. ಆತನ ಎದುರಾಳಿ ಭಾರ್ಗವ್ ಭಕ್ಷಿ ಪಾತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮಿಂಚಿದ್ದರು. ಚಿತ್ರದಲ್ಲಿ 'ಇತಿಹಾಸ ಯಾವಾಗಲೂ ಉರುಳಿರುವ ತಲೆಗಳಿಗಿಂತ, ಕತ್ತರಿಸುವ ಕೈಗಳನ್ನೇ ಕೊಂಡಾಡುವುದು...ಅಂತ ಕೈಯಿಂದ ಸೃಷ್ಟಿಯಾಗಿರುವ ಚರಿತ್ರೆನೇ ಕಬ್ಜ'.  'ಒಂದು ಸಾಮ್ರಾಜ್ಯ ಕಟ್ಟೋದು ಕತ್ತಿಯಿಂದ ಅಲ್ಲ, ಅದನ್ನು ಹಿಡಿಯುವ ಬಲವಾದ ಕೈಯಿಂದ' ಎನ್ನುವ ಕಿಚ್ಚನ ಖಡಕ್ ಡೈಲಾಗ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು. 


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+