X
ಹೋಮ್ ಚಲನಚಿತ್ರಗಳ ಒಳನೋಟ

ಬಿಗ್‌ಬಾಸ್‌ ಟ್ರೋಫಿ ಗೆಲ್ಲದಿದ್ದರೂ ತಮ್ಮ ವ್ಯಕ್ತಿತ್ವದಿಂದಲೇ ಪ್ರೇಕ್ಷಕರ ಮನಗೆದ್ದ ಸ್ಪರ್ಧಿಗಳಿವರು!

Author Sowmya Bairappa | Updated: Sunday, January 26, 2025, 11:12 AM [IST]

ಬಿಗ್‌ಬಾಸ್ ಅಂದರೆ ವ್ಯಕ್ತಿತ್ವಗಳ ನಡುವಿನ ಆಟ. ಇದರಲ್ಲಿ ಭಾಗವಹಿಸುವ ಸ್ಪರ್ಧಿಗಳು 100 ದಿನ ಉಳಿದು ಟ್ರೋಫಿ ಗೆಲ್ಲುವುದಕ್ಕಿಂತ, ತಮ್ಮ ವ್ಯಕ್ತಿತ್ವದಿಂದಲೇ ವೀಕ್ಷಕರ ಮನಗೆಲ್ಲುವುದು ಅಷ್ಟೇ ಮುಖ್ಯವಾಗಿರುತ್ತದೆ. ಆದರೆ, ಇತ್ತೀಚಿನ ಸೀಸನ್‌ಗಳಲ್ಲಿ ಸ್ಪರ್ಧಿಗಳ ನಡುವಿನ ಜಗಳ, ವಾದ-ವಿವಾದ, ತಳ್ಳಾಟ, ನೂಕಾಟ ಹೆಚ್ಚಾಗಿವೆ. ದೈಹಿಕವಾಗಿ ಹಲ್ಲೆ ನಡೆಸಿ, ಬಿಗ್‌ಬಾಸ್‌ನಿಂದ ಹೊರಬಂದ ಸ್ಪರ್ಧಿಗಳು ಇದ್ದಾರೆ. ಸದ್ಯ ಬಿಗ್‌ಬಾಸ್ ಕನ್ನಡ ಸೀಸನ್ 11 ಮುಕ್ತಾಯದ ಹಂತಕ್ಕೆ ಬಂದು ತಲುಪಿದ್ದು, ಈ ಬಾರಿ ಯಾರು ಟ್ರೋಫಿ ಎತ್ತಿಹಿಡಿಯಲಿದ್ದಾರೆಂಬ ಕುತೂಹಲ ಎಲ್ಲರಲ್ಲಿದೆ. ಇಲ್ಲಿ ದೊಡ್ಮನೆಯಲ್ಲಿ ಯಾವುದೇ ಕಿರಿಕ್ ಮಾಡದೇ ತಮ್ಮ ವ್ಯಕ್ತಿತ್ವದಿಂದಲೇ ಪ್ರೇಕ್ಷಕರ ಮನಗೆದ್ದ ಸ್ಪರ್ಧಿಗಳ ಪಟ್ಟಿಯನ್ನು ನೀಡಲಾಗಿದೆ.


cover image
ಸೃಜನ್ ಲೋಕೇಶ್
1

ಸದ್ಯ ನಿರೂಪಕರಾಗಿ ಹಾಗೂ ತೀರ್ಪುಗಾರರಾಗಿ ಕಿರುತೆರೆಯಲ್ಲಿ ಛಾಫು ಮೂಡಿಸುತ್ತಿರುವ ಸೃಜನ್ ಲೋಕೇಶ್, ಎಷ್ಟೆಲ್ಲಾ ಕಾಮಿಡಿ ಮಾಡುತ್ತಾರೆ ಅಂತ ಕನ್ನಡ ಜನತೆಗೆ ಬಹಳ ಚೆನ್ನಾಗಿ ಗೊತ್ತು.ಚಬಿಗ್‌ಬಾಸ್ ಕನ್ನಡ ಸೀಸನ್ ಒಂದರಲ್ಲಿ ಭಾಗವಹಿಸಿದ್ದ ಸೃಜನ್, ಎಲ್ಲಾ ಸ್ಪರ್ಧಿಗಳ ಜೊತೆ ತುಂಬಾ ಚೆನ್ನಾಗಿ ಬೆರೆಯುತ್ತಿದ್ದರು. ಜೊತೆಗೆ ಎಲ್ಲಾ ಟಾಸ್ಕ್‌ಗಳಲ್ಲೂ ಸಿಕ್ಕಾಪಟ್ಟೆ ಆಕ್ಷಿವ್ ಆಗಿರುತ್ತಿದ್ದರು. ಆಗಾಗ ಕಾಮಿಡಿ ಮಾಡುತ್ತಾ ಉಳಿದ ಸ್ಪರ್ಧಿಗಳನ್ನು ನಗಿಸುತ್ತಿದ್ದರು. ಇವರಿಗೇನೇ ಟ್ರೋಫಿ ಸಿಗಬೇಕು ಎಂಬುದು ಹಲವರ ಒತ್ತಾಯ ಕೂಡ ಆಗಿತ್ತು.  

ಅರುಣ್ ಸಾಗರ್
2

ಬಿಗ್‌ಬಾಸ್ ಸೀಸನ್ ಒಂದರಲ್ಲಿ ಭಾಗವಹಿಸಿದ್ದ ಬಹುಮುಖ ಪ್ರತಿಭೆ ಅರುಣ್ ಸಾಗರ್ ದೊಡ್ಮನೆಯಲ್ಲಿ ಎಲ್ಲಾ ಸ್ಪರ್ಧಿಗಳ ನಗೆಗಡಲಿನಲ್ಲಿ ತೇಲಿಸುತ್ತಿದ್ದರು. ಒಂದು ನಿಮಿಷವೂ ಸುಮ್ಮನೆ ಕೂರದ ಇವರು, ಸಖತ್ ಆಕ್ಟಿವ್ ಆಗಿರುತ್ತಿದ್ದರು. ಬಿಗ್‌ಬಾಸ್ ಮನೆಯಲ್ಲಿ ಅವರ ಕ್ರಿಯೇಟಿವಿಟಿ ನೋಡಿದ್ದ ಹಲವರು, ಅವರಿಗೆ ಟ್ರೋಫಿ ಸಿಗಬೇಕಿತ್ತು ಎಂದುಕೊಂಡಿದ್ದರು. 

ದೀಪಿಕಾ ದಾಸ್
3

ನಾಗಿಣಿ ಸೀರಿಯಲ್ ಮೂಲಕ ಕಿರುತೆರೆ ವೀಕ್ಷಕರ ಮನಗೆದ್ದಿದ್ದ ದೀಪಿಕಾ ದಾಸ್, ಬಿಗ್‌ಬಾಸ್ ಸೀಸನ್ 7ರಲ್ಲಿ ಭಾಗವಹಿಸಿದ್ದರು. ದೊಡ್ಮನೆಯಲ್ಲಿ ಅಗತ್ಯಕ್ಕೆ ತಕ್ಕಂತೆ ಮಾತನಾಡುತ್ತಿದ್ದ ಇವರು, ಯಾರ ಬಗ್ಗೆಯೂ ಸುಖಾಸುಮ್ಮನೆ ಕಾಮೆಂಟ್ ಮಾಡುತ್ತಿರಲಿಲ್ಲ. ಅಡುಗೆಯೇ ಇರಲಿ, ಡ್ಯಾನ್ಸ್ ಇರಲಿ ಹಾಗೂ ಟಾಸ್ಕ್ ಯಾವುದೇ ಇರಲಿ ಎಲ್ಲದಕ್ಕೂ ಸೈ ಎನಿಸಿಕೊಂಡಿದ್ದರು. ಜೊತೆಗೆ ಯಾವುದೇ ವಿವಾದ ಮಾಡಿಕೊಳ್ಳುತ್ತಿರಲಿಲ್ಲ. 


ವೈಷ್ಣವಿ ಗೌಡ
4

ಬಿಗ್‌ಬಾಸ್‌ ಕನ್ನಡ ಸೀಸನ್ 8ರಲ್ಲಿ ಭಾಗವಹಿಸಿದ್ದ ವೈಷ್ಣವಿ ಗೌಡ ಕೂಡ ತಮ್ಮ ಸ್ವಭಾದಿಂದ ವೀಕ್ಷಕರ ಮನಗೆದ್ದಿದ್ದರು. ವೈಷ್ಣವಿ ತಾಳ್ಮೆಗೆ ಪ್ರೇಕ್ಷಕರು ಫಿದಾ ಆಗಿದ್ದರು. ಯಾರಿಗಾದರೂ ಇಷ್ಟೆಲ್ಲಾ ತಾಳ್ಮೆ ಇರೋಕೆ ಸಾಧ್ಯನಾ? ಅನ್ನುವಷ್ಟರಮಟ್ಟಿಗಿದ್ದರು. ಯಾವ ವಿಚಾರಕ್ಕೂ ಅಷ್ಟಾಗಿ ಪ್ರತಿಕ್ರಿಯಿಸದ ವೈಷ್ಣವಿ, ಒಮ್ಮೆ ಮಾತ್ರ ಪ್ರಶಾಂತ್ ಸಂಬರಗಿ ಮೇಲೆ ಕೋಪಕೊಂಡಿದ್ದರು. ಟಾಸ್ಕ್‌ವೊಂದರಕ್ಕೆ ಪ್ರಶಾಂತ್ ನೂಕಿದ್ದಕ್ಕೆ ಸಿಟ್ಟಾಗಿ ಏರುಧ್ವನಿಯಲ್ಲಿ ಮಾತನಾಡಿದ್ದರು. ಅದು ಬಿಟ್ಟರೆ ಎಂದಿಗೂ ಜಗಳವಾಡಿರಲಿಲ್ಲ. 

ವಿಜಯ್ ರಾಘವೇಂದ್ರ
5

ಬಿಗ್‌ಬಾಸ್ ಕನ್ನಡ ಸೀಸನ್ ಒಂದರಲ್ಲಿ ಭಾಗವಹಿಸಿದ್ದ ಹಸನ್ಮುಖಿ ವಿಜಯ್ ರಾಘವೇಂದ್ರ ತಮ್ಮ ಸ್ವಭಾದಿಂದ ವೀಕ್ಷಕರ ಮನಗೆದ್ದಿದ್ದರು. ದೊಡ್ಮನೆಯ ಎಲ್ಲಾ ಟಾಸ್ಕ್‌ಗಳಲ್ಲಿಯೂ ಸಕ್ರಿಯವಾಗಿದ್ದ ಇವರು, ಎಂದೂ ಕೂಡ ಅತಿಯಾಗಿ ಮಾತನಾಡಿರಲಿಲ್ಲ. ಜೊತೆಗೆ ಯಾರ ಬಗ್ಗೆಯೂ ಕಾಮೆಂಟ್ ಮಾಡ್ತಿರಲಿಲ್ಲ. ಇವರು ಕೋಪ ಮಾಡಿಕೊಂಡಿದ್ದು ಬಹಳ ಕಡಿಮೆ. ಸೌಮ್ಯ ಸ್ವಭಾವದಿಂದಲೇ ಪ್ರೇಕ್ಷಕರ ಮನೆಗೆದ್ದಿದ್ದ ವಿಜಯ್ ರಾಘವೇಂದ್ರ, ಆ ಸೀಸನ್‌ನ ವಿನ್ನರ್ ಕೂಡ ಆಗಿದ್ದರು.  


ಹನುಮಂತ ಲಮಾಣಿ
6

ಬಿಗ್‌ಬಾಸ್‌ ಕನ್ನಡ ಸೀಸನ್ 11ಕ್ಕೆ ವೈಲ್ಡ್‌ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿಕೊಟ್ಟ ಹನುಮಂತ ಲಮಾಣಿ, ತಮ್ಮ ವ್ಯಕ್ತಿತ್ವದಿಂದಲೇ ಕರ್ನಾಟಕ ಜನತೆಯ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾತೆ. ದೊಡ್ಮನೆಯಲ್ಲಿ ಯಾವುದೇ ರೀತಿಯ ಜಗಳವಾಡದೇ, ತಮ್ಮ ಮುಗ್ಧ ಸ್ವಭಾದಿಂದಾಗಿ ವೀಕ್ಷಕರಿಗೆ ಇಷ್ಟವಾಗಿದ್ದಾರೆ. ಯಾವುದೇ ಗುಂಪುಗಾರಿಕೆ ಮಾಡದೇ ಇದ್ದುದ್ದನ್ನು ಇದ್ದಹಾಗೆ ನೇರವಾಗಿ ಹೇಳುವ ಅವರ ವ್ಯಕ್ತಿತ್ವ ಜನರಿಗೆ ಇಷ್ಟವಾಗಿದೆ. ಹನುಮಂತು ಈ ಬಾರಿಯ ಬಿಗ್‌ಬಾಸ್ ಟ್ರೋಫಿ ಗೆದ್ದರೂ ಗೆಲ್ಲಬಹುದು. 

ಧರ್ಮ ಕೀರ್ತಿರಾಜ್
7

ಬಿಗ್‌ಬಾಸ್‌ ಕನ್ನಡ ಸೀಸನ್ 11ರಲ್ಲಿದ್ದ ಎಲ್ಲಾ ಸ್ಪರ್ಧಿಗಳ ಪೈಕಿ ಧರ್ಮ ಕೀರ್ತಿರಾಜ್ ಬಹಳ ವಿಭಿನ್ನವಾಗಿದ್ದರು. ಬಿಗ್‌ಬಾಸ್‌ ಮನೆಯಲ್ಲಿ ಯಾವುಧೇ ಜಗಳಗಳನ್ನು ಮಾಡದೇ, ಅನವಶ್ಯಕ ವಿವಾದಗಳನ್ನು ಸೃಷ್ಟಿಸದೇ, ತಮ್ಮ ಸೌಮ್ಯ ಸ್ವಭಾವದಿಂದಲೇ ಪ್ರೇಕ್ಷಕರಿಗೆ ಇಷ್ಟವಾಗಿದ್ದರು. ಧರ್ಮ ಅವರ ಮೃದು ಸ್ವಭಾವದ ಸ್ವತಃ ಸ್ಪರ್ಧಿಗಳೇ ಹೇಳಿದ್ದಾರೆ. 50ಕ್ಕೂ ಹೆಚ್ಚು ದಿನ ದೊಡ್ಮನೆಯಲ್ಲಿದ್ದ ಧರ್ಮ, ಟ್ರೋಫಿ ಗೆಲ್ಲದಿದ್ದರೂ ಜನರ ಮನಗೆದ್ದಿದ್ದಾರೆ.


ಧನರಾಜ್ ಆಚಾರ್
8

ಕರಾವಳಿ ಪ್ರತಿಭೆ ಧನರಾಜ್ ಆಚಾರ್ ಬಿಗ್‌ಬಾಸ್‌ ಕನ್ನಡ ಸೀಸನ್ 11ರ ಫಿನಾಲೆ ತಲುಪಬಹುದು ಎಂದು ಹಲವರು ಊಹಿಸಿದ್ದರು. ಆದರೆ, ಫಿನಾಲೆ ಹಂತದಲ್ಲೇ ಅವರು ಎಲಿಮಿನೇಟ್ ಆದರು. ಧನರಾಜ್ ದೊಡ್ಮನೆಯಲ್ಲಿ ಪ್ರಾಮಾಣಿಕ ಅಂತಲೇ ಫೇಮಸ್ ಆಗಿದ್ದರು. ಕಾಮಿಡಿ ಆಗಿರಲಿ, ಎಂಟರ್‌ಟೇನ್ಮೆಂಟ್ ಆಗಿರಲಿ, ಆಟವೇ ಆಗಿರಲಿ ಎಲ್ಲದರಲ್ಲೂ ಧನರಾಜ್ ಮುಂದಿದ್ದರು. ಅವರ ಸ್ವಭಾವ ಕೂಡ ಜನರಿಗೆ ಸಿಕ್ಕಾಪಟ್ಟೆ ಇಷ್ಟವಾಗಿತ್ತು. 


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+