X
ಹೋಮ್ ಚಲನಚಿತ್ರಗಳ ಒಳನೋಟ

ಬಿಗ್‌ಬಾಸ್‌ನಲ್ಲಿ ಜಗದೀಶ್ ಮೇಲೆ ದೈಹಿಕ ಹಲ್ಲೆ ಮಾಡಿದ ರಂಜಿತ್ ಯಾರು ಗೊತ್ತಾ?

Author Sowmya Bairappa | Updated: Friday, October 18, 2024, 01:01 PM [IST]

ಬಿಗ್‌ಬಾಸ್ ಕನ್ನಡ ಸೀಸನ್ 11 ಆರಂಭವಾಗಿ ಕೇವಲ ಎರಡು ವಾರಗಳು ಕಳೆದಿವೆ. ಎರಡೇ ವಾರಕ್ಕೆ ಸ್ಪರ್ಧಿಗಳ ನಡುವೆ ಜಗಳ, ವಾದ-ವಿವಾದ, ತಳ್ಳಾಟ, ನೂಕಾಟ ಹೆಚ್ಚಾಗಿದೆ. ಸದ್ಯ ಇಡೀ ಮನೆ ಒಂದು, ಜಗದೀಶ್ ಅವರೇ ಒಂದು ಅನ್ನೋ ತರಹ ಆಗಿದೆ. ಬಿಗ್‌ಬಾಸ್‌ ಮನೆಯ ಪ್ರತಿಯೊಬ್ಬ ಸದಸ್ಯರು ಲಾಯರ್ ಜಗದೀಶ್ ವಿರುದ್ಧ ತಿರುಗಿ ಬಿದ್ದಿದ್ದು, ರಂಜಿತ್ ಅವರು ಜಗದೀಶ್ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಇಲ್ಲಿ ಬಿಗ್‌ಬಾಸ್ ಸ್ಪರ್ಧಿ ರಂಜಿತ್ ಯಾರು? ಅವರ ಹಿನ್ನೆಲೆಯೇನು ಎಂಬ ಮಾಹಿತಿಯನ್ನು ನೀಡಲಾಗಿದೆ.


cover image
ರಂಜಿತ್ ಯಾರು?

ಕನ್ನಡ ಕಿರುತೆರೆಯಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದ ಧಾರಾವಾಹಿ 'ಶನಿ'. ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿದ್ದ ಈ ಸೀರಿಯಲ್‌ನಲ್ಲಿ ರಂಜಿತ್ ಕುಮಾರ್ 'ಸೂರ್ಯ ದೇವನ' ಪಾತ್ರ ನಿರ್ವಹಿಸುವ ಮೂಲಕ ರಂಜಿತ್ ಜನಪ್ರಿಯತೆ ಗಳಿಸಿದರು. ಈ ಧಾರಾವಾಹಿ ಪ್ರಸಾರ ಆಗುವಾಗ ಸಾಕಷ್ಟು ಜನ ಮನ್ನಣೆಯನ್ನು ಪಡೆದಿತ್ತು. ಈ ಪಾತ್ರಕ್ಕಾಗಿ ರಂಜಿತ್ ದಿನನಿತ್ಯ 22 ಕೆಜಿ ಕಾಸ್ಟ್ಯೂಮ್ ಧರಿಸುತ್ತಿದ್ದರಂತೆ. ಸಂಭಾವನೆ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗಿದ್ದರಿಂದ ಅರ್ಧದಲ್ಲೇ ಈ ಧಾರಾವಾಹಿಯಿಂದ ಹೊರಬಂದಿದ್ದರು. 


ಮೊದಲ ಕೆಲಸ

ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ 17ನೇ ಸ್ಪರ್ಧಿಯಾಗಿ ಭಾಗವಹಿಸಿರುವ ರಂಜಿತ್ ಕುಮಾರ್ ಬಣ್ಣದ ಲೋಕಕ್ಕೆ ಎಂಟ್ರಿಕೊಡುವ ಮುನ್ನ ಏರ್‌ಲೈನ್ಸ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಬಳಿಕ ನಟನೆ ಮೇಲಿನ ಒಲವಿನಿಂದ ಕಿರುತೆರೆಗೆ ಎಂಟ್ರಿಕೊಟ್ಟರು. ತ್ರಿವಿಕ್ರಮ್ ನಾಯಕನಾಗಿ ನಟಿಸಿದ್ದ 'ಪದ್ಮಾವತಿ' ಧಾರಾವಾಹಿಯಲ್ಲೂ ರಂಜಿತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.  ಇದಲ್ಲದೇ, ಅಮೃತವರ್ಷಿಣಿ, ಮೀರಾ ಮಾಧವ, ಅವನು ಮತ್ತೆ ಶ್ರಾವಣಿ, ಚಿಟ್ಟೆ ಹೆಜ್ಜೆ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.  

ಸಿನಿಮಾಗಳು

ನಿಖಿಲ್ ಕುಮಾರಸ್ವಾಮಿ ಅಭಿನಯದ ಸೀತಾರಾಮ ಕಲ್ಯಾಣ, ಭರಾಟೆ, ಶಿವಾರ್ಜುನ, ಜೇಮ್ಸ್ ಸಿನಿಮಾಗಳಲ್ಲಿಯೂ ರಂಜಿತ್ ಕುಮಾರ್ ಅಭಿನಯಿಸಿದ್ದಾರೆ. ಸಿನಿಮಾಗಳಲ್ಲೂ ಹೆಚ್ಚು ವಿಲ್ ಪಾತ್ರಗಳಿಗೆಯೇ ಬಣ್ಣ ಹಚ್ಚಿದ್ದಾರೆ. ರಂಜಿತ್ ಕುಮಾರ್ ಸಿನಿಮಾ, ಧಾರಾವಾಹಿ ಜೊತೆ ಜೊತೆಗೆ ಕ್ರಿಕೆಟ್ ಪಂದ್ಯಾವಳಿಗಳಲ್ಲೂ ಸಕ್ರಿಯರಾಗಿದ್ದಾರೆ. ಸೆಲೆಬ್ರಿಟಿ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ರಂಜಿತ್ ಕಾಣಿಸಿಕೊಂಡಿದ್ದರು. ಕಿಚ್ಚ ಸುದೀಪ್ ಜೊತೆ ಕೂಡ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದಾರೆ. 

ತಾಯಿಯ ಆಸೆ

ನನ್ನ ತಾಯಿಗೆ ಒಂದು ಆಸೆಯಿತ್ತು. ಪ್ರತೀ ಸೀಸನ್ ನೊಡುವಾಗ ನೀನ್ಯಾಕೆ ಬಿಗ್‌ಬಾಸ್‌ಗೆ ಒಳಗೆ ಹೋಗಲ್ಲ ಅಂತ ಕೇಳ್ತಿದ್ದರು. ಅಮ್ಮ ಹೋದಮೇಲೆ ಅವರ ಆಸೆ ಪೂರೈಸುತ್ತಿದ್ದೇನೆ. ಸಿಕ್ಕ ಅವಕಾಶವನ್ನು, ಒಳ್ಳೆ ಶೋನ ನಾನು ಸದುಪಯೋಗಪಡಿಸಿಕೊಳ್ಳಬೇಕು. ಬಿಗ್‌ಬಾಸ್ ರಿಯಾಲಿಟಿ ಶೋನಿಂದ ನನ್ನ ಕೆರಿಯರ್ ಇನ್ನೊಂದು ಲೆವೆಲ್‌ಗೆ ಹೋಗಬಹುದು ಅಂತ ಹೇಳಿದ್ದರು. 

ಬೇಕಂತಲೇ ಜಗದೀಶ್‌ನ  ತಳ್ಳಿದ ರಂಜಿತ್

ಕಳೆದ ಸಂಚಿಕೆಯಲ್ಲಿ ಬಿಗ್‌ಬಾಸ್ ಸ್ಪರ್ಧಿಗಳ ನಡುವೆ ತಳ್ಳಾಟ-ನೂಕಾಟ ನಡೆದಿದೆ. ಇಂದಿನ ಸಂಚಿಕೆಯಲ್ಲಿ ಜಗದೀಶ್ & ರಂಜಿತ್ ನಿಜವಾಗಿಯೂ ಮನೆಯಿಂದ ಹೊರಹೋದ್ದಾರಾ? ಇಲ್ಲವಾ? ಎಂಬುದು ತಿಳಿಯಲಿದೆ. ಹೀಗಾಗಿ ಇಂದಿನ ಎಪಿಸೋಡ್‌ಗೆ ವೀಕ್ಷಕರು ಕಾತರದಿಂಧ ಕಾಯ್ತಿದ್ದಾರೆ. ಹಿಂದಿನ ಸಂಚಿಕೆಯಲ್ಲಿ ಉಗ್ರಂ ಮಂಜು ಹಾಗೂ ಜಗದೀಶ್ ಜಗಳವಾಡ್ತಿದ್ದಾರೆ. ಆಗ ಹಿಂದೆಯಿದ್ದ ರಂಜಿತ್ ಬೇಕಂತಲೇ ಜಗದೀಶ್‌ಗೆ ಬಂದು ಗುದ್ದಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. 


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+